AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನ ಕಣ್ಣಿಗೆ ಐ ಡ್ರಾಪ್​ ಬದಲು ಅಂಟು ಹಾಕಿದ ಅಪ್ಪ; ಬಾಲಕನ ದೃಷ್ಟಿ ಉಳಿಸಿಕೊಟ್ಟ ವೈದ್ಯರು

ಇಂಥದ್ದೊಂದು ಅವಘಡ ಸೃಷ್ಟಿಸಿದ ತಂದೆಯ ಹೆಸರು ಕೆವಿನ್​ ಡೇ. ಇವರ ಪುತ್ರ ರುಪೆರ್ಟ್​. ಈತ ಕಣ್ಣಿಗೆ ಸಂಬಂಧಪಟ್ಟಂತೆ ತೊಂದರೆಗೆ ಒಳಗಾಗಿದ್ದ. ರುಪೆರ್ಟ್ ಕಣ್ಣು ತುಂಬ ತುರಿಕೆ ಬರುತ್ತಿತ್ತು.

ಮಗನ ಕಣ್ಣಿಗೆ ಐ ಡ್ರಾಪ್​ ಬದಲು ಅಂಟು ಹಾಕಿದ ಅಪ್ಪ; ಬಾಲಕನ ದೃಷ್ಟಿ ಉಳಿಸಿಕೊಟ್ಟ ವೈದ್ಯರು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Nov 03, 2021 | 11:24 AM

Share

ಇಲ್ಲೊಬ್ಬ ತಂದೆ ಮಾಡಿದ ಅವಾಂತರದಿಂದ 9 ವರ್ಷದ ಮಗ ಪರಿತಪಿಸುವಂತಾಗಿದೆ. ಆ ಅಪ್ಪ ತನ್ನ ಪುತ್ರನ ಕಣ್ಣಿಗೆ ವೈದ್ಯರು ಕೊಟ್ಟ ಕಣ್ಣಿನ ಡ್ರಾಪ್​ ಬಿಡುವ ಬದಲು ಅಕಸ್ಮಾತ್​ ಆಗಿ ಅಂಟೊಂದನ್ನು ಹಾಕಿದ್ದಾರೆ. ಯಾವಾಗ ಮಗನಿಗೆ ಕಣ್ಣು ತೆಗೆಯಲು ಬರಲಿಲ್ಲವೋ ಆಗಲೇ ಆ ತಂದೆಗೆ ತಮ್ಮ ಪ್ರಮಾದದ ಅರಿವಾಗಿದೆ. ಕೂಡಲೇ ಪುತ್ರನನ್ನು ಆಸ್ಪತ್ರೆಗೆ ಸೇರಿಸಿದರೂ ನಾಲ್ಕು ದಿನಗಳ ನಂತರವಷ್ಟೇ ಕಣ್ಣು ತೆರೆಯಲು ಸಾಧ್ಯವಾಗಿದೆ. ಅದೃಷ್ಟವಶಾತ್​ ಆ ಬಾಲಕನ ಕಣ್ಣುಗಳ ದೃಷ್ಟಿಗೇ ಏನೂ ತೊಂದರೆಯಾಗಿಲ್ಲ.

ಇಂಥದ್ದೊಂದು ಅವಘಡ ಸೃಷ್ಟಿಸಿದ ತಂದೆಯ ಹೆಸರು ಕೆವಿನ್​ ಡೇ. ಇವರ ಪುತ್ರ ರುಪೆರ್ಟ್​. ಈತ ಕಣ್ಣಿಗೆ ಸಂಬಂಧಪಟ್ಟಂತೆ ತೊಂದರೆಗೆ ಒಳಗಾಗಿದ್ದ. ರುಪೆರ್ಟ್ ಕಣ್ಣು ತುಂಬ ತುರಿಕೆ ಬರುತ್ತಿತ್ತು. ಆಗ ಕೆವಿನ್​ ತನ್ನ ಪುತ್ರನನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ, ಟೆಸ್ಟ್​ ಮಾಡಿಸಿದ್ದರು. ಅದಾದ ಮೇಲೆ ಡಾಕ್ಟರ್ಸ್​ ಕೆಲವು ರೀತಿಯ ಡ್ರಾಪ್ಸ್​ಗಳನ್ನು ಬರೆದುಕೊಟ್ಟಿದ್ದರು. ಪ್ರತಿದಿನ ರುಪೆರ್ಟ್ ಕಣ್ಣಿಗೆ ಡ್ರಾಪ್ಸ್​​ ಬಿಡಬೇಕಿತ್ತು. ಆದರೆ ಕೆವಿನ್​ ಹೀಗೆ ಒಂದು ದಿನ ಕಣ್ತಪ್ಪಿನಿಂದ, ಲೇಬಲ್​ ಸರಿಯಾಗಿ ಗಮನಿಸದೆ ಐ ಡ್ರಾಪ್​ ಬದಲು ಅಂಟನ್ನು ತನ್ನ ಮಗನ ಕಣ್ಣಿಗೆ ಹಾಕಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆವಿನ್​ ಡೇ, ನಾನು ಅಂಟನ್ನು ಹಾಕಿದ ಮೇಲೆ ಗೊತ್ತಾಯಿತು ಅದು ಕಣ್ಣಿನ ಡ್ರಾಪ್ ಆಗಿರಲಿಲ್ಲ ಎಂದು. ಕೂಡಲೇ 999ಕ್ಕೆ ಫೋನ್​ ಮಾಡಿದೆ. ಅವರು ಪ್ರಾಥಮಿಕ ಚಿಕಿತ್ಸೆಯ ಬಗ್ಗೆ ಸಲಹೆ ನೀಡಿದರು ಮತ್ತು ಆಂಬುಲೆನ್ಸ್​ ಕಳಿಸುತ್ತಿದ್ದೇವೆ ಎಂದು ಹೇಳಿದರು. ಪುಣ್ಯಕ್ಕೆ ಏರ್​ ಆಂಬುಲೆನ್ಸ್ ಕಳಿಸಿದ್ದರು. ಇದರಲ್ಲಿ ಬಂದ ವೈದ್ಯಕೀಯ ತಂಡ ರುಪೆರ್ಟ್​ ಕಣ್ಣಿನ್ನು ತೊಳೆದು, ನೋವು ನಿವಾರಕ ನೀಡಿ, ಹ್ಯಾರೋಗೇಟ್​ ಆಸ್ಪತ್ರೆಗೆ ಕರೆದೊಯ್ದರು. ಆದರೆ ನನಗಂತೂ ತೀವ್ರ ಭಯವಾಗುತ್ತಿತ್ತು. ನಾನು ನನ್ನ ಮಗನ ಕಣ್ಣು ಹಾಳು ಮಾಡಿದೆ. ಅವನ ಜೀವನ ಹಾಳು ಮಾಡಿದೆ ಎಂದು ಪಶ್ಚಾತ್ತಾಪ ಪಡುತ್ತಿದ್ದೆ. ರುಪೆರ್ಟ್​​ನನ್ನು ಕೆಲವೇ ಹೊತ್ತುಗಳ ಕಾಲ ಆಸ್ಪತ್ರೆಯಲ್ಲಿ ಇಟ್ಟುಕೊಂಡು ಚಿಕಿತ್ಸೆ ನೀಡಲಾಯಿತು. ಆದರೆ ಮನೆಗೆ ಬಂದರೂ ಸರಿಯಾಗಿ ಕಣ್ಣು ತೆರೆಯಲು ಆಗುತ್ತಿರಲಿಲ್ಲ. ನಾಲ್ಕು ದಿನಗಳ ನಂತರವಷ್ಟೇ ಅವನು ಪೂರ್ತಿಯಾಗಿ ಕಣ್ಣು ತೆರೆದು, ಸರಿಯಾಗಿ ನೋಡಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೊವಿಡ್‌ ಲಸಿಕೆ ನೀಡಿಕೆ ಕಡಿಮೆಯಿರುವ 11 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಮೋದಿ ಪರಿಶೀಲನಾ ಸಭೆ

KBC 13: ₹ 50 ಲಕ್ಷ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ?

Follow Us
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ