AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನ ಕಣ್ಣಿಗೆ ಐ ಡ್ರಾಪ್​ ಬದಲು ಅಂಟು ಹಾಕಿದ ಅಪ್ಪ; ಬಾಲಕನ ದೃಷ್ಟಿ ಉಳಿಸಿಕೊಟ್ಟ ವೈದ್ಯರು

ಇಂಥದ್ದೊಂದು ಅವಘಡ ಸೃಷ್ಟಿಸಿದ ತಂದೆಯ ಹೆಸರು ಕೆವಿನ್​ ಡೇ. ಇವರ ಪುತ್ರ ರುಪೆರ್ಟ್​. ಈತ ಕಣ್ಣಿಗೆ ಸಂಬಂಧಪಟ್ಟಂತೆ ತೊಂದರೆಗೆ ಒಳಗಾಗಿದ್ದ. ರುಪೆರ್ಟ್ ಕಣ್ಣು ತುಂಬ ತುರಿಕೆ ಬರುತ್ತಿತ್ತು.

ಮಗನ ಕಣ್ಣಿಗೆ ಐ ಡ್ರಾಪ್​ ಬದಲು ಅಂಟು ಹಾಕಿದ ಅಪ್ಪ; ಬಾಲಕನ ದೃಷ್ಟಿ ಉಳಿಸಿಕೊಟ್ಟ ವೈದ್ಯರು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Nov 03, 2021 | 11:24 AM

Share

ಇಲ್ಲೊಬ್ಬ ತಂದೆ ಮಾಡಿದ ಅವಾಂತರದಿಂದ 9 ವರ್ಷದ ಮಗ ಪರಿತಪಿಸುವಂತಾಗಿದೆ. ಆ ಅಪ್ಪ ತನ್ನ ಪುತ್ರನ ಕಣ್ಣಿಗೆ ವೈದ್ಯರು ಕೊಟ್ಟ ಕಣ್ಣಿನ ಡ್ರಾಪ್​ ಬಿಡುವ ಬದಲು ಅಕಸ್ಮಾತ್​ ಆಗಿ ಅಂಟೊಂದನ್ನು ಹಾಕಿದ್ದಾರೆ. ಯಾವಾಗ ಮಗನಿಗೆ ಕಣ್ಣು ತೆಗೆಯಲು ಬರಲಿಲ್ಲವೋ ಆಗಲೇ ಆ ತಂದೆಗೆ ತಮ್ಮ ಪ್ರಮಾದದ ಅರಿವಾಗಿದೆ. ಕೂಡಲೇ ಪುತ್ರನನ್ನು ಆಸ್ಪತ್ರೆಗೆ ಸೇರಿಸಿದರೂ ನಾಲ್ಕು ದಿನಗಳ ನಂತರವಷ್ಟೇ ಕಣ್ಣು ತೆರೆಯಲು ಸಾಧ್ಯವಾಗಿದೆ. ಅದೃಷ್ಟವಶಾತ್​ ಆ ಬಾಲಕನ ಕಣ್ಣುಗಳ ದೃಷ್ಟಿಗೇ ಏನೂ ತೊಂದರೆಯಾಗಿಲ್ಲ.

ಇಂಥದ್ದೊಂದು ಅವಘಡ ಸೃಷ್ಟಿಸಿದ ತಂದೆಯ ಹೆಸರು ಕೆವಿನ್​ ಡೇ. ಇವರ ಪುತ್ರ ರುಪೆರ್ಟ್​. ಈತ ಕಣ್ಣಿಗೆ ಸಂಬಂಧಪಟ್ಟಂತೆ ತೊಂದರೆಗೆ ಒಳಗಾಗಿದ್ದ. ರುಪೆರ್ಟ್ ಕಣ್ಣು ತುಂಬ ತುರಿಕೆ ಬರುತ್ತಿತ್ತು. ಆಗ ಕೆವಿನ್​ ತನ್ನ ಪುತ್ರನನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ, ಟೆಸ್ಟ್​ ಮಾಡಿಸಿದ್ದರು. ಅದಾದ ಮೇಲೆ ಡಾಕ್ಟರ್ಸ್​ ಕೆಲವು ರೀತಿಯ ಡ್ರಾಪ್ಸ್​ಗಳನ್ನು ಬರೆದುಕೊಟ್ಟಿದ್ದರು. ಪ್ರತಿದಿನ ರುಪೆರ್ಟ್ ಕಣ್ಣಿಗೆ ಡ್ರಾಪ್ಸ್​​ ಬಿಡಬೇಕಿತ್ತು. ಆದರೆ ಕೆವಿನ್​ ಹೀಗೆ ಒಂದು ದಿನ ಕಣ್ತಪ್ಪಿನಿಂದ, ಲೇಬಲ್​ ಸರಿಯಾಗಿ ಗಮನಿಸದೆ ಐ ಡ್ರಾಪ್​ ಬದಲು ಅಂಟನ್ನು ತನ್ನ ಮಗನ ಕಣ್ಣಿಗೆ ಹಾಕಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆವಿನ್​ ಡೇ, ನಾನು ಅಂಟನ್ನು ಹಾಕಿದ ಮೇಲೆ ಗೊತ್ತಾಯಿತು ಅದು ಕಣ್ಣಿನ ಡ್ರಾಪ್ ಆಗಿರಲಿಲ್ಲ ಎಂದು. ಕೂಡಲೇ 999ಕ್ಕೆ ಫೋನ್​ ಮಾಡಿದೆ. ಅವರು ಪ್ರಾಥಮಿಕ ಚಿಕಿತ್ಸೆಯ ಬಗ್ಗೆ ಸಲಹೆ ನೀಡಿದರು ಮತ್ತು ಆಂಬುಲೆನ್ಸ್​ ಕಳಿಸುತ್ತಿದ್ದೇವೆ ಎಂದು ಹೇಳಿದರು. ಪುಣ್ಯಕ್ಕೆ ಏರ್​ ಆಂಬುಲೆನ್ಸ್ ಕಳಿಸಿದ್ದರು. ಇದರಲ್ಲಿ ಬಂದ ವೈದ್ಯಕೀಯ ತಂಡ ರುಪೆರ್ಟ್​ ಕಣ್ಣಿನ್ನು ತೊಳೆದು, ನೋವು ನಿವಾರಕ ನೀಡಿ, ಹ್ಯಾರೋಗೇಟ್​ ಆಸ್ಪತ್ರೆಗೆ ಕರೆದೊಯ್ದರು. ಆದರೆ ನನಗಂತೂ ತೀವ್ರ ಭಯವಾಗುತ್ತಿತ್ತು. ನಾನು ನನ್ನ ಮಗನ ಕಣ್ಣು ಹಾಳು ಮಾಡಿದೆ. ಅವನ ಜೀವನ ಹಾಳು ಮಾಡಿದೆ ಎಂದು ಪಶ್ಚಾತ್ತಾಪ ಪಡುತ್ತಿದ್ದೆ. ರುಪೆರ್ಟ್​​ನನ್ನು ಕೆಲವೇ ಹೊತ್ತುಗಳ ಕಾಲ ಆಸ್ಪತ್ರೆಯಲ್ಲಿ ಇಟ್ಟುಕೊಂಡು ಚಿಕಿತ್ಸೆ ನೀಡಲಾಯಿತು. ಆದರೆ ಮನೆಗೆ ಬಂದರೂ ಸರಿಯಾಗಿ ಕಣ್ಣು ತೆರೆಯಲು ಆಗುತ್ತಿರಲಿಲ್ಲ. ನಾಲ್ಕು ದಿನಗಳ ನಂತರವಷ್ಟೇ ಅವನು ಪೂರ್ತಿಯಾಗಿ ಕಣ್ಣು ತೆರೆದು, ಸರಿಯಾಗಿ ನೋಡಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೊವಿಡ್‌ ಲಸಿಕೆ ನೀಡಿಕೆ ಕಡಿಮೆಯಿರುವ 11 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಮೋದಿ ಪರಿಶೀಲನಾ ಸಭೆ

KBC 13: ₹ 50 ಲಕ್ಷ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ?

Follow Us
ಮಾಜಿ ಸಚಿವ ವಿನಯ್ ಕುಲಕರ್ಣಿ ಮತ್ತೆ ಶಾಸಕ ಸ್ಥಾನ ಸಿಗುತ್ತಾ?
ಮಾಜಿ ಸಚಿವ ವಿನಯ್ ಕುಲಕರ್ಣಿ ಮತ್ತೆ ಶಾಸಕ ಸ್ಥಾನ ಸಿಗುತ್ತಾ?
ವಿನಯ್ ಕುಲಕರ್ಣಿಗೆ ಜಾಮೀನು: ಸುಪ್ರೀಂ ಮೊರೆ ಹೋಗುತ್ತೇವೆಂದ ಹೋರಾಟಗಾರ
ವಿನಯ್ ಕುಲಕರ್ಣಿಗೆ ಜಾಮೀನು: ಸುಪ್ರೀಂ ಮೊರೆ ಹೋಗುತ್ತೇವೆಂದ ಹೋರಾಟಗಾರ
ಕಾವೇರಿ ಜಲ ವಿವಾದ: ಮಂಡ್ಯದ ಕೆಆರ್​​ಎಸ್​​ ಬಳಿ ಬಿಜೆಪಿಗರ ಪ್ರತಿಭಟನೆ
ಕಾವೇರಿ ಜಲ ವಿವಾದ: ಮಂಡ್ಯದ ಕೆಆರ್​​ಎಸ್​​ ಬಳಿ ಬಿಜೆಪಿಗರ ಪ್ರತಿಭಟನೆ
ಕಾವೇರಿ ನೀರು ಹಂಚಿಕೆ ವಿವಾದ: CWMA ನಿರ್ಧಾರಕ್ಕೆ ಕುಮಾರಸ್ವಾಮಿ ಆಕ್ರೋಶ
ಕಾವೇರಿ ನೀರು ಹಂಚಿಕೆ ವಿವಾದ: CWMA ನಿರ್ಧಾರಕ್ಕೆ ಕುಮಾರಸ್ವಾಮಿ ಆಕ್ರೋಶ
ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡೋ ಆರೋಪಕ್ಕೆ ಏನಂದ್ರು ಸಚಿವ?
ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡೋ ಆರೋಪಕ್ಕೆ ಏನಂದ್ರು ಸಚಿವ?
ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡ ಪೋಲಿಸ್ ಎಸ್ಐ ಮಗಳ ಭಾವುಕ ನುಡಿ
ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡ ಪೋಲಿಸ್ ಎಸ್ಐ ಮಗಳ ಭಾವುಕ ನುಡಿ
ವಿನಯ್ ಕುಲಕರ್ಣಿಗೆ ಜಾಮೀನು: ವಕೀಲ ಸುನೀಲ್ ಹೇಳಿದ್ದೇನು ನೋಡಿ
ವಿನಯ್ ಕುಲಕರ್ಣಿಗೆ ಜಾಮೀನು: ವಕೀಲ ಸುನೀಲ್ ಹೇಳಿದ್ದೇನು ನೋಡಿ
ಚಾಮರಾಜನಗರದಲ್ಲಿ ವಿಜಯ್ ಅಭಿನಯದ 'ಜನನಾಯಗನ್' ಸಿನಿಮಾ ಎತ್ತಂಗಡಿ!
ಚಾಮರಾಜನಗರದಲ್ಲಿ ವಿಜಯ್ ಅಭಿನಯದ 'ಜನನಾಯಗನ್' ಸಿನಿಮಾ ಎತ್ತಂಗಡಿ!
ಮೂರನೇ ಆಷಾಢ ಶುಕ್ರವಾರ: ಚಾಮುಂಡೇಶ್ವರಿ ದೇಗುಲಕ್ಕೆ ವಿಶೇಷ ಅಲಂಕಾರ
ಮೂರನೇ ಆಷಾಢ ಶುಕ್ರವಾರ: ಚಾಮುಂಡೇಶ್ವರಿ ದೇಗುಲಕ್ಕೆ ವಿಶೇಷ ಅಲಂಕಾರ
ಚಾಮುಂಡಿಬೆಟ್ಟದಲ್ಲಿ ಯಡಿಯೂರಪ್ಪ ಕುಟುಂಬದಿಂದ ವಿಶೇಷ ಪೂಜೆ
ಚಾಮುಂಡಿಬೆಟ್ಟದಲ್ಲಿ ಯಡಿಯೂರಪ್ಪ ಕುಟುಂಬದಿಂದ ವಿಶೇಷ ಪೂಜೆ