AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮಹಿಳೆ ಹೊಟ್ಟೆಯಿಂದ ದರದರನೆ ಹೊರಗೆಳೆದರು 4 ಅಡಿ ಉದ್ದದ ಹಾವನ್ನು!

ಸಾಮಾನ್ಯವಾಗಿ ಹಾವುಗಳು ನಿರ್ಜನ ಪ್ರದೇಶ ಮತ್ತು ಹಿತಕರವಾದ ವಾತಾವರಣವಿರುವ ಸ್ಥಳಗಳಲ್ಲೇ ಅವಿತುಕೊಳ್ಳೋದು. ಕೆಲವೊಮ್ಮೆ ಮಳೆಗಾಲದಲ್ಲಿ ರಕ್ಷಣೆಗಾಗಿ ಉರಗಗಳು ಮನೆಯೊಳಗೆ ಸೇರುವುದನ್ನೂ ಸಹ ನೋಡಿದ್ದೇವೆ. ಆದ್ರೆ, ನೋಡೋಕೆ ಒಳ್ಳೇ ಬಿಲದ ಹಾಗೇ ಇದೇ ಅಂತಾ ಬಾಯಿಬಿಟ್ಟುಕೊಂಡು ಗೊರಕೆ ಹೊಡಿಯುತ್ತಿದ್ದ ಮಹಿಳೆಯೊಬ್ಬಳ ಹೊಟ್ಟೆಯೊಳಕ್ಕೆ ಬಾಯಿಯ ಮೂಲಕ ಹಾವು  ಹೊಕ್ಕಿರುವ ಘಟನೆ ರಷ್ಯಾದ ಡಾಗೇಸ್ತಾನ್​ ಪ್ರಾಂತ್ಯದಲ್ಲಿ ಬೆಳಕಿಗೆ ಬಂದಿದೆ. ಹೌದು, ಇದು ನಂಬಲು ಕೊಂಚ ಕಷ್ಟವಾದರೂ ನೀವು ನಂಬಲೇ ಬೇಕಾದ ಸ್ಟೋರಿ. ಅಂದ ಹಾಗೆ, ಚೆನ್ನಾಗಿ ಗೊರಕೆ ಹೊಡೆದು ಮಾರನೇ ದಿನ […]

Video: ಮಹಿಳೆ ಹೊಟ್ಟೆಯಿಂದ ದರದರನೆ ಹೊರಗೆಳೆದರು 4 ಅಡಿ ಉದ್ದದ ಹಾವನ್ನು!
KUSHAL V
| Updated By: ಸಾಧು ಶ್ರೀನಾಥ್​|

Updated on:Sep 02, 2020 | 7:43 AM

Share

ಸಾಮಾನ್ಯವಾಗಿ ಹಾವುಗಳು ನಿರ್ಜನ ಪ್ರದೇಶ ಮತ್ತು ಹಿತಕರವಾದ ವಾತಾವರಣವಿರುವ ಸ್ಥಳಗಳಲ್ಲೇ ಅವಿತುಕೊಳ್ಳೋದು. ಕೆಲವೊಮ್ಮೆ ಮಳೆಗಾಲದಲ್ಲಿ ರಕ್ಷಣೆಗಾಗಿ ಉರಗಗಳು ಮನೆಯೊಳಗೆ ಸೇರುವುದನ್ನೂ ಸಹ ನೋಡಿದ್ದೇವೆ.

ಆದ್ರೆ, ನೋಡೋಕೆ ಒಳ್ಳೇ ಬಿಲದ ಹಾಗೇ ಇದೇ ಅಂತಾ ಬಾಯಿಬಿಟ್ಟುಕೊಂಡು ಗೊರಕೆ ಹೊಡಿಯುತ್ತಿದ್ದ ಮಹಿಳೆಯೊಬ್ಬಳ ಹೊಟ್ಟೆಯೊಳಕ್ಕೆ ಬಾಯಿಯ ಮೂಲಕ ಹಾವು  ಹೊಕ್ಕಿರುವ ಘಟನೆ ರಷ್ಯಾದ ಡಾಗೇಸ್ತಾನ್​ ಪ್ರಾಂತ್ಯದಲ್ಲಿ ಬೆಳಕಿಗೆ ಬಂದಿದೆ. ಹೌದು, ಇದು ನಂಬಲು ಕೊಂಚ ಕಷ್ಟವಾದರೂ ನೀವು ನಂಬಲೇ ಬೇಕಾದ ಸ್ಟೋರಿ.

ಅಂದ ಹಾಗೆ, ಚೆನ್ನಾಗಿ ಗೊರಕೆ ಹೊಡೆದು ಮಾರನೇ ದಿನ ಎದ್ದ ಮಹಿಳೆಗೆ ತೀವ್ರ ಅನಾರೋಗ್ಯ ಉಂಟಾಗಿದೆ. ಕೂಡಲೇ ಆಕೆಯನ್ನ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ತಪಾಸಣೆ ನಡೆಸಿದ ವೇಳೆ ಮಹಿಳೆಯ ದೇಹದಲ್ಲಿ ಹಾವಿರುವುದು ಪತ್ತೆಯಾಗಿದೆ. ಅದು ಬರೋಬ್ಬರಿ 4 ಅಡಿ ಉದ್ದ ಹಾವು.

ಶಾಕ್​ ಆದ ವೈದ್ಯರು ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಯ ಬಾಯಿಯಿಂದ ಹಾವನ್ನು ಹೊರಗೆಳೆದಿದ್ದಾರೆ. ಕುತೂಹಲದ ಸಂಗತಿಯೆಂದ್ರೆ ಆ ಹಾವು ಮಹಿಳೆಯ ಹೊಟ್ಟೆಯಲ್ಲಿ ಜೀವಂತವಾಗಿತ್ತು!  ಹಾವನ್ನು ಮಹಿಳೆಯ ಬಾಯಿಯಿಂದ ಹೊರತೆಗೆಯುತ್ತಿರೊ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ನೀವೂ ನೋಡಿ..

Published On - 4:38 pm, Tue, 1 September 20

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..