ಸ್ವಾತಂತ್ರ್ಯ ಹೋರಾಟ ಮತ್ತೆ ಆರಂಭವಾಗಿದೆ: ಅಧಿಕಾರ ಕಳೆದುಕೊಂಡ ನಂತರ ಇಮ್ರಾನ್ ಖಾನ್​​ ಮೊದಲ ಪ್ರತಿಕ್ರಿಯೆ

ಪಾಕಿಸ್ತಾನವು 1947 ರಲ್ಲಿ ಸ್ವತಂತ್ರ ರಾಜ್ಯವಾಯಿತು. ಆದರೆ ಆಡಳಿತ ಬದಲಾವಣೆಯ ವಿದೇಶಿ ಪಿತೂರಿಯ ವಿರುದ್ಧ ಸ್ವಾತಂತ್ರ್ಯ ಹೋರಾಟವು ಇಂದು ಮತ್ತೆ ಪ್ರಾರಂಭವಾಗುತ್ತದೆ. ದೇಶದ ಜನರು ಯಾವಾಗಲೂ ತಮ್ಮ ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಾರೆ.

ಸ್ವಾತಂತ್ರ್ಯ ಹೋರಾಟ ಮತ್ತೆ ಆರಂಭವಾಗಿದೆ: ಅಧಿಕಾರ ಕಳೆದುಕೊಂಡ ನಂತರ ಇಮ್ರಾನ್ ಖಾನ್​​ ಮೊದಲ ಪ್ರತಿಕ್ರಿಯೆ
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್
Edited By: ರಶ್ಮಿ ಕಲ್ಲಕಟ್ಟ

Updated on: Apr 10, 2022 | 9:25 PM

ದೆಹಲಿ: ತಮ್ಮ ವಿರುದ್ಧದ  ಅವಿಶ್ವಾಸ ಮತದಲ್ಲಿ ಹೀನಾಯ ಸೋಲಿನ ಬಳಿಕ ಪಾಕಿಸ್ತಾನದ  (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಭಾನುವಾರ ತಮ್ಮ ‘ವಿದೇಶಿ ಸಂಚು’ ಹೇಳಿಕೆಯನ್ನು ಪುನರುಚ್ಚರಿಸಿದ್ದು, “ಸ್ವಾತಂತ್ರ್ಯ ಹೋರಾಟ ಇಂದಿನಿಂದ ಪ್ರಾರಂಭವಾಗುತ್ತದೆ” ಎಂದು ಹೇಳಿದ್ದಾರೆ. ಏತನ್ಮಧ್ಯೆ, ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಾರ್ಟಿ (PTI) ನಾಳೆ ನ್ಯಾಷನಲ್ ಅಸೆಂಬ್ಲಿಗೆ ರಾಜೀನಾಮೆ ನೀಡಲು ನಿರ್ಧರಿಸಿದೆ. “ಪಾಕಿಸ್ತಾನವು 1947 ರಲ್ಲಿ ಸ್ವತಂತ್ರ ರಾಜ್ಯವಾಯಿತು. ಆದರೆ ಆಡಳಿತ ಬದಲಾವಣೆಯ ವಿದೇಶಿ ಪಿತೂರಿಯ ವಿರುದ್ಧ ಸ್ವಾತಂತ್ರ್ಯ ಹೋರಾಟವು ಇಂದು ಮತ್ತೆ ಪ್ರಾರಂಭವಾಗುತ್ತದೆ. ದೇಶದ ಜನರು ಯಾವಾಗಲೂ ತಮ್ಮ ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಾರೆ ಎಂದು ಖಾನ್ ಟ್ವೀಟ್ ಮಾಡಿದ್ದಾರೆ. ಮಾಜಿ ಪ್ರಧಾನಿ ಇಂದು ಬನಿ ಗಾಲಾದಲ್ಲಿ ನಡೆದ ಪಿಟಿಐನ ಕೇಂದ್ರೀಯ ಕಾರ್ಯಕಾರಿ ಸಮಿತಿಯ (CEC) ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದು ಭವಿಷ್ಯದ ಕ್ರಮದ ಕುರಿತು ಚರ್ಚಿಸಿದರು. ಪಿಎಂಎಲ್-ಎನ್ ಅಧ್ಯಕ್ಷ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿಯಾಗಿ ನಾಮನಿರ್ದೇಶನ ಮಾಡುವ ಬಗ್ಗೆ ಪಕ್ಷದ ತೀರ್ಮಾನ ತಿಳಿಸದಿದ್ದರೆ ನಾಳೆ (ಸೋಮವಾರ) ತಮ್ಮ ಪಕ್ಷವು ರಾಷ್ಟ್ರೀಯ ಅಸೆಂಬ್ಲಿಗೆ ರಾಜೀನಾಮೆ ನೀಡಲಿದೆ ಎಂದು ಹಿರಿಯ ಪಿಟಿಐ ನಾಯಕ ಮತ್ತು ಮಾಜಿ ಮಾಹಿತಿ ಸಚಿವ ಫವಾದ್ ಚೌಧರಿ ಘೋಷಿಸಿದ್ದಾರೆ ಎಂದು ಪಾಕಿಸ್ತಾನದ ಸುದ್ದಿ ಮಾಧ್ಯಮ ವರದಿ ಮಾಡಿದೆ. ಮೂರು ಬಾರಿ ಪ್ರಧಾನಿಯಾಗಿದ್ದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ 70 ವರ್ಷದ ಕಿರಿಯ ಸಹೋದರ ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಅವರನ್ನು ಸೋಮವಾರ ನಿಗದಿಯಾಗಿರುವ ಪ್ರಧಾನಿ ಚುನಾವಣೆಗೆ ಜಂಟಿ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲಾಗಿದೆ.

ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ವಿಶೇಷ ನ್ಯಾಯಾಲಯವು ಅದೇ ದಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಷರೀಫ್ ಮತ್ತು ಅವರ ಮಗ ಹಮ್ಜಾ ಅವರನ್ನು ದೋಷಾರೋಪಣೆ ಮಾಡುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.


“ಈ ಕಳ್ಳರು ಮತ್ತು ದರೋಡೆಕೋರರೊಂದಿಗೆ ನಾವು ಅಸೆಂಬ್ಲಿಯಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದು ನಿರ್ಧರಿಸಲಾಗಿದೆ. ಎಲ್ಲರೂ ಒಮ್ಮತದ ಒಮ್ಮತದಿಂದ ನಾವು ನ್ಯಾಷನಲ್ ಅಸೆಂಬ್ಲಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಲಿದ್ದೇವೆ. ಎಲ್ಲ ಸದಸ್ಯರು ರಾಜೀನಾಮೆ ನೀಡುತ್ತಾರೆ ಎಂದು ಚೌಧರಿ ಹೇಳಿರುವುದಾಗಿ ಪಾಕಿಸ್ತಾನದ ಪತ್ರಿಕೆ ಡಾನ್ ವರದಿ ಮಾಡಿದೆ.

ವಿರೋಧ ಪಕ್ಷವನ್ನು “ದರೋಡೆಕೋರರು,ಮತ್ತು ಲೂಟಿಕೋರರ” ಪಕ್ಷ ಎಂದು ಕರೆದ ಮಾಜಿ ಆಂತರಿಕ ಸಚಿವ ಶೇಖ್ ರಶೀದ್ ಅವರು ಅವರೊಂದಿಗೆ ವಿಧಾನಸಭೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಇಂದು ರಾತ್ರಿ 9 ಗಂಟೆಗೆ ಸಭೆ ನಡೆಯಲಿದ್ದು, ರಾತ್ರಿ 9:30ಕ್ಕೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತೇನೆ ಎಂದರು.

ಜಂಟಿ ವಿರೋಧ ಪಕ್ಷವು ನಿನ್ನೆ ರಾತ್ರಿ ನಡೆದ ನಾಟಕೀಯ ಮತದಾನದಲ್ಲಿ 342 ಸದಸ್ಯರ ಅಸೆಂಬ್ಲಿಯಲ್ಲಿ 174 ಸದಸ್ಯರ ಬೆಂಬಲವನ್ನು ಪಡೆದುಕೊಂಡಿತು ಮತ್ತು ಪಿಎಂ ಖಾನ್ ಅವರನ್ನು ಪದಚ್ಯುತಗೊಳಿಸಿತು. ಇಮ್ರಾನ್ ಖಾನ್ ಅವರು ದೇಶದ ಇತಿಹಾಸದಲ್ಲಿ ಅವಿಶ್ವಾಸ ಮತದಿಂದ ಪದಚ್ಯುತಿಗೊಂಡ ಮೊದಲ ಪ್ರಧಾನಿಯಾಗಿದ್ದಾರೆ.

ಪ್ರಧಾನಿ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಅಸಂವಿಧಾನಿಕ ಎಂದು ವಜಾಗೊಳಿಸಿದ ಉಪಸಭಾಪತಿಗಳ ತೀರ್ಪನ್ನು ಪ್ರಶ್ನಿಸಿ ಪಿಟಿಐ ನೇತೃತ್ವದ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಆದಾಗ್ಯೂ, ನ್ಯಾಯಾಲಯದ ಅಧಿಕಾರಿಗಳು ರಂಜಾನ್‌ನ ಆರಂಭದಲ್ಲಿ ಮುಚ್ಚುವುದರಿಂದ ಅದನ್ನು ರಸೀದಿಯಲ್ಲಿ ಪ್ರಕ್ರಿಯೆಗೊಳಿಸದ ಕಾರಣ ಅರ್ಜಿಯನ್ನು ಇನ್ನೂ ಸಲ್ಲಿಸಲಾಗಿಲ್ಲ. ಸೋಮವಾರ ಸಲ್ಲಿಸುವ ಸಾಧ್ಯತೆ ಇದೆ.

ಇದನ್ನೂ ಓದಿ:ವಿಶ್ವಾಸಮತ ಯಾಚನೆಗೂ ಮುನ್ನವೇ ಅಧಿಕೃತ ನಿವಾಸ ಖಾಲಿ ಮಾಡಿದ್ದರು ಇಮ್ರಾನ್ ಖಾನ್: ಪಾಕ್ ನಾಯಕನ ಟ್ವೀಟ್

Web contact

TV9 Kannada

Read More
Follow Us