AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಜಾದ ಸಂಪೂರ್ಣ ಮುತ್ತಿಗೆಗೆ ಇಸ್ರೇಲ್ ಆದೇಶ: ವಿದ್ಯುತ್, ಆಹಾರ, ನೀರು, ಇಂಧನ ಕಡಿತ

2007 ರಲ್ಲಿ ಹಮಾಸ್ ಪ್ರತಿಸ್ಪರ್ಧಿ ಪ್ಯಾಲೆಸ್ತೀನ್ ಪಡೆಗಳಿಂದ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಇಸ್ರೇಲ್ ಮತ್ತು ಈಜಿಪ್ಟ್ ಗಾಜಾದ ಮೇಲೆ ವಿವಿಧ ಹಂತದ ದಿಗ್ಬಂಧನವನ್ನು ವಿಧಿಸಿವೆ. ನಾವು ಸಮುದಾಯಗಳ ನಿಯಂತ್ರಣದಲ್ಲಿದ್ದೇವೆ ಎಂದು ಸೇನಾ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ.ಆದಾಗ್ಯೂ, ಈ ಪ್ರದೇಶದಲ್ಲಿ ಇನ್ನೂ "ಭಯೋತ್ಪಾದಕರು" ಇರಬಹುದು ಎಂದು ಅವರು ಹೇಳಿದರು.

ಗಾಜಾದ ಸಂಪೂರ್ಣ ಮುತ್ತಿಗೆಗೆ ಇಸ್ರೇಲ್ ಆದೇಶ: ವಿದ್ಯುತ್, ಆಹಾರ, ನೀರು, ಇಂಧನ ಕಡಿತ
ಬೆಂಜಮಿನ್ ನೆತನ್ಯಾಹು
Follow us
ರಶ್ಮಿ ಕಲ್ಲಕಟ್ಟ
|

Updated on: Oct 09, 2023 | 9:07 PM

ಟೆಲ್ ಅವಿವ್ ಅಕ್ಟೋಬರ್ 09: ಇಸ್ರೇಲ್ (Israel) ಹಮಾಸ್ (Hamas)ನಿಯಂತ್ರಿತ ಗಾಜಾ ಪಟ್ಟಿಯ ವಿರುದ್ಧದ ಕ್ರಮಗಳನ್ನು ಆಹಾರ ಮತ್ತು ಇಂಧನವನ್ನು ಪ್ರವೇಶಿಸುವ ನಿಷೇಧ ಸೇರಿದಂತೆ “ಸಂಪೂರ್ಣ ದಿಗ್ಬಂಧನ” ಕ್ಕೆ ಹೆಚ್ಚಿಸಿದೆ ಎಂದು ದೇಶದ ರಕ್ಷಣಾ ಸಚಿವ ಯೋವ್ ಗ್ಯಾಲಂಟ್  (Yoav Gallant) ಹೇಳಿದ್ದಾರೆ. ಇದು ಕೆಟ್ಟ ಜನರ ವಿರುದ್ಧದ ಯುದ್ಧದ ಭಾಗವಾಗಿದೆ. ಹಮಾಸ್ ಹಠಾತ್ ದಾಳಿಯನ್ನು ಪ್ರಾರಂಭಿಸಿದ ಎರಡು ದಿನಗಳ ನಂತರ, ಇಸ್ರೇಲ್ ಸೈನ್ಯವು ಗಾಜಾ ಬಳಿಯ ತನ್ನ ದಕ್ಷಿಣ ಪ್ರದೇಶದಲ್ಲಿ “ಸಮುದಾಯಗಳ ನಿಯಂತ್ರಣ”ದಲ್ಲಿದೆ ಎಂದು ಘೋಷಿಸಿದ ನಂತರ ಈ ನಿರ್ಧಾರ ಬಂದಿದೆ.

2007 ರಲ್ಲಿ ಹಮಾಸ್ ಪ್ರತಿಸ್ಪರ್ಧಿ ಪ್ಯಾಲೆಸ್ತೀನ್ ಪಡೆಗಳಿಂದ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಇಸ್ರೇಲ್ ಮತ್ತು ಈಜಿಪ್ಟ್ ಗಾಜಾದ ಮೇಲೆ ವಿವಿಧ ಹಂತದ ದಿಗ್ಬಂಧನವನ್ನು ವಿಧಿಸಿವೆ. ನಾವು ಸಮುದಾಯಗಳ ನಿಯಂತ್ರಣದಲ್ಲಿದ್ದೇವೆ ಎಂದು ಸೇನಾ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ.ಆದಾಗ್ಯೂ, ಈ ಪ್ರದೇಶದಲ್ಲಿ ಇನ್ನೂ “ಭಯೋತ್ಪಾದಕರು” ಇರಬಹುದು ಎಂದು ಅವರು ಹೇಳಿದರು.

ಟೆಲ್ ಅವಿವ್ ಔಪಚಾರಿಕವಾಗಿ ಯುದ್ಧವನ್ನು ಘೋಷಿಸಿದ ನಂತರ ಹಮಾಸ್‌ನಿಂದ ನಾಲ್ಕು ಸೈಟ್‌ಗಳ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ವಿಶೇಷ ಪಡೆಗಳನ್ನು ಕರೆತಂದಿದೆ ಎಂದು ಇಸ್ರೇಲ್ ಹೇಳಿದ ನಂತರ ಮತ್ತು ಪ್ರತೀಕಾರಕ್ಕೆ “ಮಹತ್ವದ ಮಿಲಿಟರಿ ಕ್ರಮಗಳಿಗೆ” ಹಸಿರು ನಿಶಾನೆ ತೋರಿದ ನಂತರ ಇದು ಬರುತ್ತದೆ. ಎರಡೂ ಕಡೆಗಳಲ್ಲಿ 1,100 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು ಸಾವಿರಾರು ಜನರು ಗಾಯಗೊಂಡಿದ್ದಾರೆ. ಹಲವಾರು ಸ್ಥಳಗಳಲ್ಲಿ ಹೋರಾಟ ಮುಂದುವರೆದಿದೆ.

ಇಸ್ರೇಲ್‌ನ ಮುಖ್ಯ ಸೇನಾ ವಕ್ತಾರರು, ಪ್ರತ್ಯೇಕ ಘರ್ಷಣೆಗಳು ಮುಂದುವರಿದಾಗ ಪಡೆಗಳು ಅತಿಕ್ರಮಿಸಿದ ಸಮುದಾಯಗಳ ನಿಯಂತ್ರಣವನ್ನು ಪುನಃ ಸ್ಥಾಪಿಸಿವೆ ಎಂದು ಹೇಳಿದ್ದಾರೆ. ನಾವು ಈಗ ಎಲ್ಲಾ ಸಮುದಾಯಗಳಲ್ಲಿ ಹುಡುಕಾಟ ನಡೆಸುತ್ತಿದ್ದೇವೆ ಮತ್ತು ಪ್ರದೇಶವನ್ನು ತೆರವುಗೊಳಿಸುತ್ತಿದ್ದೇವೆ ಎಂದು ಮುಖ್ಯ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದರು.

ಇದಕ್ಕೂ ಮೊದಲು, ಇನ್ನೊಬ್ಬ ವಕ್ತಾರರಾದ ಲೆಫ್ಟಿನೆಂಟ್ ಕೊಲೊನೆಟ್ ರಿಚರ್ಡ್ ಹೆಕ್ಟ್, “ರಕ್ಷಣಾತ್ಮಕ, ಭದ್ರತೆ ವಿಷಯಗಳನ್ನು ಮರಳಿ ಪಡೆಯಲು ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ” ಎಂದು ಒಪ್ಪಿಕೊಂಡರು. ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ಇದುವರೆಗೆ ತನ್ನ ಅತಿ ಹೆಚ್ಚು ಬಾಂಬ್ ದಾಳಿಗೆ ಪ್ರತಿಕ್ರಿಯಿಸಿದೆ, ಇಲ್ಲಿ ಸುಮಾರು 500 ಜನರು ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: Israel-Hamas War: ಹಮಾಸ್ ಭಯೋತ್ಪಾದಕರ ದಾಳಿ: ಇಸ್ರೇಲ್​ನಲ್ಲಿ ಸಿಲುಕಿದ ಹಾಸನದ 20 ಮಂದಿ

ಏತನ್ಮಧ್ಯೆ, ಹಮಾಸ್ ವಕ್ತಾರ ಅಬ್ದೆಲ್-ಲತೀಫ್ ಅಲ್-ಕನೌವಾ , ಗುಂಪಿನ ಹೋರಾಟಗಾರರು ಗಾಜಾದ ಹೊರಗೆ ಯುದ್ಧವನ್ನು ಮುಂದುವರೆಸಿದ್ದು, ಹೆಚ್ಚಿನ ಇಸ್ರೇಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಇಸ್ರೇಲ್ ವಶದಲ್ಲಿರುವ ಎಲ್ಲಾ ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಗುಂಪು ಹೊಂದಿದೆ ಎಂದು ಹೇಳಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

‘ಹಮಾಸ್‌ಗೆ ನಮ್ಮ ಪ್ರತಿಕ್ರಿಯೆ ಮಧ್ಯಪ್ರಾಚ್ಯವನ್ನು ಬದಲಾಯಿಸುತ್ತದೆ’

ಗಾಜಾ ಪಟ್ಟಿಯಿಂದ ಹಮಾಸ್‌ನ ಅಭೂತಪೂರ್ವ ದಾಳಿಗೆ ಇಸ್ರೇಲ್‌ನ ಪ್ರತಿಕ್ರಿಯೆಯು “ಮಧ್ಯಪ್ರಾಚ್ಯವನ್ನು ಬದಲಾಯಿಸುತ್ತದೆ” ಎಂದು ದೇಶದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶನಿವಾರ ಪ್ರಾರಂಭವಾದ ದಾಳಿಯಿಂದ ಹಾನಿಗೊಳಗಾದ ದಕ್ಷಿಣ ಗಡಿ ಪಟ್ಟಣಗಳ ಮೇಯರ್‌ಗಳೊಂದಿಗೆ ಮಾತನಾಡುತ್ತಾ ಹೇಳಿದರು. ಬೆಂಜಮಿನ್ ನೆತನ್ಯಾಹು ಅವರು ಗಾಜಾ ನಾಗರಿಕರಿಗೆ ಎಲ್ಲಾ ಹಮಾಸ್ ಸೈಟ್‌ಗಳಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದಾರೆ.

ಇರಾನ್ ಮತ್ತು ಹೆಜ್ಬುಲ್ಲಾ ಹಮಾಸ್ ದಾಳಿಯನ್ನು ಹೊಗಳಿದ್ದರಿಂದ ಮಧ್ಯಪ್ರಾಚ್ಯ ಉದ್ವಿಗ್ನತೆ ಹೆಚ್ಚಾಗಿದೆ. ಆದಾಗ್ಯೂ ಟೆಹ್ರಾನ್ ಯಾವುದೇ ಪಾತ್ರವನ್ನು ತಿರಸ್ಕರಿಸಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
ಮೋದಿ ನೇತೃತ್ವದ ಭಾರತದಲ್ಲಿ ಎಲ್ಲರೂ ಸಮಾನರು, ಸುರಕ್ಷಿತರು: ಕೇಂದ್ರ ಸಚಿವೆ
ಮೋದಿ ನೇತೃತ್ವದ ಭಾರತದಲ್ಲಿ ಎಲ್ಲರೂ ಸಮಾನರು, ಸುರಕ್ಷಿತರು: ಕೇಂದ್ರ ಸಚಿವೆ