AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Israel – Palestine: ಇಸ್ರೇಲ್ – ಪ್ಯಾಲೆಸ್ಟೀನಿಯನ್ ಉಗ್ರರ ನಡುವೆ ಹಿಂಸಾಚಾರ, 15 ವರ್ಷದ ಬಾಲಕ ಸೇರಿ 3 ಜನ ಸಾವು

ಇಸ್ರೇಲಿ ಪಡೆಗಳು ಮತ್ತು ಪ್ಯಾಲೆಸ್ಟೀನಿಯಾ ಉಗ್ರಗಾಮಿಗಳ ನಡುವೆ ಜೆನಿನ್ ನಗರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಸ್ರೇಲಿ ಹೆಲಿಕಾಪ್ಟರ್ ಗನ್‌ಶಿಪ್‌ಗಳು ಸೋಮವಾರ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಹೊಡೆದುರುಳಿಸಿದೆ.

Israel - Palestine: ಇಸ್ರೇಲ್ - ಪ್ಯಾಲೆಸ್ಟೀನಿಯನ್ ಉಗ್ರರ ನಡುವೆ ಹಿಂಸಾಚಾರ, 15 ವರ್ಷದ ಬಾಲಕ ಸೇರಿ 3 ಜನ ಸಾವು
ಇಸ್ರೇಲ್ - ಪ್ಯಾಲೆಸ್ಟೀನಿಯಾ ನಡುವೆ ಹಿಂಸಾಚಾರ
ಅಕ್ಷಯ್​ ಪಲ್ಲಮಜಲು​​
|

Updated on:Jun 19, 2023 | 3:25 PM

Share

ಜೆರುಸಲೇಂ: ಇಸ್ರೇಲಿ ಪಡೆಗಳು ಮತ್ತು ಪ್ಯಾಲೆಸ್ಟೀನಿಯನ್ (Israel – Palestine) ಉಗ್ರಗಾಮಿಗಳ ನಡುವೆ ಜೆನಿನ್ ನಗರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಸ್ರೇಲಿ ಹೆಲಿಕಾಪ್ಟರ್ ಗನ್‌ಶಿಪ್‌ಗಳು ಸೋಮವಾರ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಹೊಡೆದುರುಳಿಸಿದೆ, 15 ವರ್ಷದ ಬಾಲಕ ಸೇರಿದಂತೆ ಮೂವರು ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಂಸಾಚಾರದಲ್ಲಿ ಈ ಪ್ರದೇಶದಲ್ಲಿ ಇಸ್ರೇಲಿ ವಾಯುಶಕ್ತಿಯ ಅಪರೂಪದ ಬಳಕೆಯನ್ನು ಗುರುತಿಸಿದೆ. ಘರ್ಷಣೆಯ ಸಮಯದಲ್ಲಿ, ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳು ಇಸ್ರೇಲಿ ಮಿಲಿಟರಿ ವಾಹನದ ಪಕ್ಕದಲ್ಲಿ ಬಾಂಬ್ ಸ್ಫೋಟಿಸಿದ್ದಾರೆ. ಇದರಿಂದ 29 ಪ್ಯಾಲೆಸ್ಟೀನಿಯಾದವರು ಗಾಯಗೊಂಡಿದ್ದಾರೆ, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಹಲವಾರು ಇಸ್ರೇಲಿ ಸೈನಿಕರು ಗಾಯಗೊಂಡಿದ್ದಾರೆ ಎಂದು ಇಸ್ರೇಲಿ ಮಾಧ್ಯಮಗಳು ತಿಳಿಸಿವೆ. ವೆಸ್ಟ್ ಬ್ಯಾಂಕ್​​ನ್ನು ಕೂಡ ಧ್ವಂಸಗೊಳಿಸಿದೆ, ಈ ಹಿಂಸಾಚಾರ ಒಂದು ವರ್ಷದ ಹಿಂದೆ ಉಲ್ಬಣಗೊಂಡಿತ್ತು. ಜೆನಿನ್‌ನಲ್ಲಿ ನಡೆದ ದಾಳಿಯ ಸಮಯದಲ್ಲಿ ಸೇನಾ ಪಡೆಗಳು ಗುಂಡಿನ ದಾಳಿಗೆ ಒಳಗಾದವು ಮತ್ತು ಪ್ಯಾಲೇಸ್ಟಿನಿಯನ್ ಬಂದೂಕುಧಾರಿಗಳ ಮೇಲೆ ಗುಂಡು ಹಾರಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಇಸ್ರೇಲಿ ಮಾಧ್ಯಮದ ಪ್ರಕಾರ ಅನೇಕ ಇಸ್ರೇಲಿ ಸೈನಿಕರು ಹೋರಾಟದಲ್ಲಿ ಗಾಯಗೊಂಡಿದ್ದಾರೆ ಆದರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ರಕ್ಷಣಾ ಇಲಾಖೆ ನೀಡಿಲ್ಲ ಎಂದು ವರದಿ ಮಾಡಿದೆ.

ಭದ್ರತಾ ಪಡೆಗಳು ನಗರದಿಂದ ನಿರ್ಗಮಿಸುತ್ತಿದ್ದಂತೆ, ಸೇನಾ ವಾಹನಗಳನ್ನು ಸ್ಫೋಟಕ ಸಾಧನದಿಂದ ಹೊಡೆದು ಹಾನಿಗೊಳಿಸಲಾಗಿದೆ ಎಂದು ಸೈನ್ಯವು ಹೇಳಿದೆ. ಜೆನಿನ್‌ನಿಂದ ಕೆಲವೊಂದು ದೃಢೀಕರಿಸಲಾದ ವೀಡಿಯೊ ದೃಶ್ಯಾವಳಿಗಳನ್ನು ಸೆರೆಹಿಡಿಯಲಾಗಿದೆ.  ಇಸ್ರೇಲಿ ಶಸ್ತ್ರಸಜ್ಜಿತ ವಾಹನಗಳ ಮೇಲೆ ದಾಳಿ ಮಾಡಲಾದ, ಸೇನಾ ಕಾರ್ಯಾಚರಣೆಯ ಸಮಯದಲ್ಲಿ ಇಸ್ರೇಲಿ ಮಿಲಿಟರಿ ಹೆಲಿಕಾಪ್ಟರ್ ರಾಕೆಟ್​​​ಗಳನ್ನು ಉಡಾಯಿಸುತ್ತಿರುವುದನ್ನು ಕೂಡ ಈ ವೀಡಿಯೊದಲ್ಲಿ ತೋರಿಸಲಾಗಿದೆ. ಇದೀಗ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಸ್ರೇಲಿ ಸೇನೆಯು ಆಕ್ರಮಿತ ಪಶ್ಚಿಮ ದಂಡೆಯಲ್ಲಿ ತನ್ನ ಕಾರ್ಯಾಚರಣೆಗಳನ್ನು ನಡೆಸುವಾಗ ಅಪರೂಪದ ವಿಮಾನವನ್ನು ಬಳಸಲಾಗಿದೆ. 2000 ದಶಕದ ಆರಂಭದಲ್ಲಿ ಪ್ಯಾಲೇಸ್ಟಿನಿಯನ್ ದಂಗೆಯ ನಂತರ ಭೂಪ್ರದೇಶದಲ್ಲಿ ಆಕ್ರಮಣಕಾರಿ ಹೆಲಿಕಾಪ್ಟರ್‌ನ ಮೊದಲ ಬಳಕೆಯಾಗಿದೆ ಎಂದು ಇಸ್ರೇಲಿ ಮಾಧ್ಯಮ ವರದಿ ಮಾಡಿದೆ. ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯವು ಕೊಲ್ಲಲ್ಪಟ್ಟವರನ್ನು ಖಲೀದ್ ಅಸಸಾ, 21, ಕಸ್ಸಾಮ್ ಅಬು ಸರಿಯಾ, 29, ಮತ್ತು 15 ವರ್ಷದ ಅಹ್ಮದ್ ಸಕರ್ ಎಂದು ಗುರುತಿಸಿದೆ ಮತ್ತು ಶೂಟೌಟ್‌ನಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Israel Attack: ಉಗ್ರರಿಂದ ರಾಕೆಟ್ ದಾಳಿ; ಇಸ್ರೇಲ್ ತೀವ್ರ ಪ್ರತಿದಾಳಿ

ಪ್ಯಾಲೆಸ್ಟೀನಿಯಾದ ಹಿರಿಯ ಅಧಿಕಾರಿ ಹುಸೇನ್ ಅಲ್-ಶೇಖ್, ಇಸ್ರೇಲ್ ಪ್ಯಾಲೇಸ್ಟಿನಿಯನ್ ಜನರ ವಿರುದ್ಧ “ಉಗ್ರ ಮತ್ತು ಮುಕ್ತ ಯುದ್ಧ” ನಡೆಸುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ತುರ್ತು ಸಭೆಯಲ್ಲಿ ಅಧ್ಯಕ್ಷ ಮಹಮೂದ್ ಅಬ್ಬಾಸ್ ಮಹತ್ವದ ನಿರ್ಧಾರಗಳನ್ನುತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಇಸ್ರೇಲ್ ಮತ್ತು ಪ್ಯಾಲೆಸ್ಟೀನಿಯದಲ್ಲಿ ಹಲವು ತಿಂಗಳನಿಂದ ಹಿಂಸಾಚಾರ ನಡೆಯುತ್ತಿದೆ. ಈ ಹಿಂಸಾಚಾರಕ್ಕೆ ಮುಖ್ಯವಾಗಿ ಪಶ್ಚಿಮ ದಂಡೆಯಲ್ಲಿ ಕೇಂದ್ರೀಕೃತವಾಗಿದೆ, ಈ ವರ್ಷ ಸುಮಾರು 120 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ. ಜೆನಿನ್ ನಗರವು ಪ್ಯಾಲೇಸ್ಟಿನಿಯನ್ ಉಗ್ರಗಾಮಿತ್ವದ ಕೇಂದ್ರವಾಗಿದೆ ಎಂದು ಇಸ್ರೇಲ್​ ಹೇಳಿದೆ.

ಇಸ್ರೇಲ್ 1967ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಪೂರ್ವ ಜೆರುಸಲೆಮ್ ಮತ್ತು ಗಾಜಾದೊಂದಿಗೆ ಪಶ್ಚಿಮ ದಂಡೆಯನ್ನು ವಶಪಡಿಸಿಕೊಂಡಿತು. ಹೀಗಾಗಿ ತಮ್ಮ ಪ್ರದೇಶವನ್ನು ಪಡೆದುಕೊಳ್ಳಲು ಪ್ಯಾಲೆಸ್ಟೀನಿಯಾದವರು ಈ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಸತ್ತವರಲ್ಲಿ ಹೆಚ್ಚಿನವರು ಉಗ್ರಗಾಮಿಗಳು ಎಂದು ಇಸ್ರೇಲ್ ಹೇಳಿದೆ, ಆದರೆ ಅವರ ದಾಳಿಯಿಂದ ತಪ್ಪಿಸಲು ಕಲ್ಲು ತೂರಾಟ ಮಾಡಿದ ಸಮಯದಲ್ಲಿ ಯುವಕರು ಮತ್ತು ಘರ್ಷಣೆಯಲ್ಲಿ ಭಾಗಿಯಾಗದ ಇತರರು ಸಹ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಇಸ್ರೇಲಿಗಳ ವಿರುದ್ಧ ಪ್ಯಾಲೇಸ್ಟಿನಿಯನ್ ದಾಳಿಗಯಿಂದ ಈ ವರ್ಷ 20 ಜನರು ಸಾವನ್ನಪ್ಪಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:15 pm, Mon, 19 June 23

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್