AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೇಕಾಫ್ ಆಗಿ ಕೆಲವೇ ನಿಮಿಷದಲ್ಲಿ ಜಪಾನೀಸ್ ಯುದ್ಧ ವಿಮಾನ ಕಣ್ಮರೆ; ಮುಂದುವರಿದ ಶೋಧ ಕಾರ್ಯ

ಜಪಾನ್ ಸಮುದ್ರದ ಮಧ್ಯ ಇಶಿಕಾವಾ ಪ್ರದೇಶದ ಕೊಮಾಟ್ಸು ವಾಯುನೆಲೆಯಿಂದ 5 ಕಿ.ಮೀ. ದೂರದಲ್ಲಿ ವಿಮಾನವು ಕಣ್ಮರೆಯಾಯಿತು. ಈ ಯುದ್ಧ ವಿಮಾನವನ್ನು ಇಬ್ಬರು ಸಿಬ್ಬಂದಿಗೆ ವಿನ್ಯಾಸಗೊಳಿಸಲಾಗಿತ್ತು.

ಟೇಕಾಫ್ ಆಗಿ ಕೆಲವೇ ನಿಮಿಷದಲ್ಲಿ ಜಪಾನೀಸ್ ಯುದ್ಧ ವಿಮಾನ ಕಣ್ಮರೆ; ಮುಂದುವರಿದ ಶೋಧ ಕಾರ್ಯ
ಫೈಟರ್ ಜೆಟ್ (ಫೈಲ್ ಫೋಟೋ)
TV9 Web
| Updated By: ಸುಷ್ಮಾ ಚಕ್ರೆ|

Updated on:Jan 31, 2022 | 8:17 PM

Share

ಟೋಕಿಯೋ: ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ರಡಾರ್‌ನಿಂದ (Radar) ಜಪಾನ್​ನ ಯುದ್ಧ ವಿಮಾನವೊಂದು (Fighter Jet) ಕಣ್ಮರೆಯಾಗಿದೆ. ನಾಪತ್ತೆಯಾದ ಯುದ್ಧ ವಿಮಾನಕ್ಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಜಪಾನ್‌ನ ಮಿಲಿಟರಿ ತಿಳಿಸಿದೆ. ಟೇಕ್-ಆಫ್ ಆದ ನಂತರ ಕೊಮಾಟ್ಸು ಕಂಟ್ರೋಲ್ ಟವರ್‌ನ ಡೇಟಾದಿಂದ F15 ಜೆಟ್‌ನ ಟ್ರ್ಯಾಕ್ ಕಣ್ಮರೆಯಾಯಿತು ಎಂದು ಜಪಾನ್ ಏರ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ನ ವಕ್ತಾರರು ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿ ಸಂಸ್ಥೆ AFPಗೆ ಮಾಹಿತಿ ನೀಡಿರುವ ಅವರು, ಜಪಾನ್ ಸಮುದ್ರದ ಮಧ್ಯ ಇಶಿಕಾವಾ ಪ್ರದೇಶದ ಕೊಮಾಟ್ಸು ವಾಯುನೆಲೆಯಿಂದ 5 ಕಿ.ಮೀ. ದೂರದಲ್ಲಿ ವಿಮಾನವು ಕಣ್ಮರೆಯಾಯಿತು ಎಂದಿದ್ದಾರೆ. ಈ ಯುದ್ಧ ವಿಮಾನವನ್ನು ಇಬ್ಬರು ಸಿಬ್ಬಂದಿಗೆ ವಿನ್ಯಾಸಗೊಳಿಸಲಾಗಿತ್ತು. ಆದರೆ, ಎಷ್ಟು ಜನರು ವಿಮಾನದಲ್ಲಿದ್ದರು ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ವಕ್ತಾರರು ಹೇಳಿದ್ದಾರೆ.

ಜಪಾನ್ ಸಾಂದರ್ಭಿಕವಾಗಿ ತನ್ನ ವಾಯುಪಡೆಯನ್ನು ಒಳಗೊಂಡ ಅಪಘಾತಗಳನ್ನು ಕಂಡಿದೆ. 2019ರಲ್ಲಿ ಪೈಲಟ್ ಪ್ರಾದೇಶಿಕ ದಿಗ್ಭ್ರಮೆಯನ್ನು ಅನುಭವಿಸಿದ ನಂತರ F-35A ಸ್ಟೆಲ್ತ್ ಜೆಟ್ ಸಮುದ್ರಕ್ಕೆ ಅಪ್ಪಳಿಸಿತ್ತು.

ಇದನ್ನೂ ಓದಿ: ಲಖನೌ ವಾಯುನೆಲೆ ಬಳಿ ಮಿರಾಜ್ ಯುದ್ಧ ವಿಮಾನದ ಟೈರ್ ಕಳವು, ಎಫ್‌ಐಆರ್ ದಾಖಲು

National Defence: ಸುಖೋಯ್ ಯುದ್ಧ ವಿಮಾನ: ಭಾರತೀಯ ವಾಯುಪಡೆಯ ಸುದೀರ್ಘ ಭರವಸೆ

Published On - 8:15 pm, Mon, 31 January 22

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ