ವೀಡಿಯೊ ವೀಕ್ಷಿಸಿ: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಮಹಿಳೆಯ ಬಾಯಿಂದ ಹೊರಬಿತ್ತು ಉದ್ದನೆಯ ಜೀವಂತ ಹಾವು!

ಅಂತಹ ವೀಡಿಯೊ ಒಂದು ನೆಟಿಜನ್‌ಗಳನ್ನು ಹೆಚ್ಚು ಆಕರ್ಚಷಿಸುತ್ತಿದೆ. ಅದೇ ವೇಳೆ ಆತಂಕವೂ ಆಗಿದೆ.ಆ ವಿಡಿಯೋ ನೋಡಿ ಬೆಚ್ಚಿಬಿದ್ದಿದ್ದಾರೆ. ಆ ಭಯಂಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ವೈದ್ಯರ ತಂಡ ಒಬ್ಬ ಮಹಿಳೆಯ ಬಾಯಿಯಿಂದ ಉದ್ದನೆಯ ಹಾವನ್ನು ಸರಸರನೆ ಎಳೆದುಹಾಕಿದ್ದಾರೆ. ಇನ್ನೂ ಗಾಬರಿಪಡುವಂತಹ ಸಂಗತಿಯೆಂದರೆ ಆ ಹಾವು ಜೀವಂತವಾಗಿತ್ತು!

ವೀಡಿಯೊ ವೀಕ್ಷಿಸಿ: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಮಹಿಳೆಯ ಬಾಯಿಂದ ಹೊರಬಿತ್ತು ಉದ್ದನೆಯ ಜೀವಂತ ಹಾವು!
ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಮಹಿಳೆಯ ಬಾಯಿಂದ ಹೊರಬಿತ್ತು ಜೀವಂತ ಹಾವು!
ಸಾಧು ಶ್ರೀನಾಥ್​

Updated on: Oct 09, 2023 | 3:46 PM

ಚಿತ್ರ ವಿಚಿತ್ರ ಘಟನಾವಳಿಗಳು ಇಂಟರ್‌ನೆಟ್ ಬಳಕೆಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗುತ್ತಿರುತ್ತವೆ. ಎಲ್ಲರಿಗೂ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಇನ್ಸ್ಟಾಗ್ರಾಮ್, ಫೇಸ್ಬುಕ್, ಟ್ವಿಟ್ಟರ್, ಯೂ ಟ್ಯೂಬ್ನಂತಹ ಯಾವುದೋ ಒಂದು ಸ್ಥಳ ನಿಗದಿಯಾಗಿರುತ್ತದೆ. ಇನ್ನು ಅದರ ಮೂಲಕ ಅವರು ವೇಗವಾಗಿ ಫೇಮಸ್ ಆಗಬೇಕೆಂದು ಪ್ರಯತ್ನಿಸುತ್ತಾರೆ. ಅಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾಮ್‌ನಲ್ಲಿ ಹಲವಾರು ರೀತಿಯ ವಿಚಿತ್ರ ಘಟನೆಗಳು, ಸಚಿತ್ರ ಫೋಟೋ ಸುದ್ದಿಗಳು, ರೀಲ್​​ಗಳಾಗಿ ಅಪ್‌ಲೋಡ್ ಆಗುತ್ತವೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಾಣಿ, ಪಕ್ಷಿಗಳೊಂದಿಗೆ ಮನುಷ್ಯರು ಮಾಡುವ ಚಿತ್ರವಿಚಿತ್ರ ಕೆಲಸಗಳಿಗೆ ಸಂಬಂಧಿಸಿದಂತೆ ಹಲವಾರು ರೀತಿಯ ವೀಡಿಯೊಗಳು ವೈರಲ್ ಆಗುತ್ತವೆ.

ಅಂತಹ ವೀಡಿಯೊ ಒಂದು ನೆಟಿಜನ್‌ಗಳನ್ನು ಹೆಚ್ಚು ಆಕರ್ಚಷಿಸುತ್ತಿದೆ. ಅದೇ ವೇಳೆ ಆತಂಕವೂ ಆಗಿದೆ.ಆ ವಿಡಿಯೋ ನೋಡಿ ಬೆಚ್ಚಿಬಿದ್ದಿದ್ದಾರೆ. ಆ ಭಯಂಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ವೈದ್ಯರ ತಂಡ ಒಬ್ಬ ಮಹಿಳೆಯ ಬಾಯಿಯಿಂದ ಉದ್ದನೆಯ ಹಾವನ್ನು ಸರಸರನೆ ಎಳೆದುಹಾಕಿದ್ದಾರೆ. ಇನ್ನೂ ಗಾಬರಿಪಡುವಂತಹ ಸಂಗತಿಯೆಂದರೆ ಆ ಹಾವು ಜೀವಂತವಾಗಿತ್ತು!

ಮಹಿಳೆಯ ಹೊಟ್ಟೆಯೊಳಕ್ಕೆ ಆ ಹಾವು ಹೇಗೆ ಪ್ರವೇಶಿಸಿತು ಎಂಬದು ಇಲ್ಲಿ ಆಶ್ಚರ್ಯವನ್ನುಂಟು ಮಾಡುವ ಅಂಶ. ಅಂತರ್ಜಾಲದಲ್ಲಿ ಬಹಳಷ್ಟು ಜನರು ಇದು ಹೇಗೆ ಸಾಧ್ಯ ಎಂದು ಕೇಳುತ್ತಿದ್ದಾರೆ. ವೈರಲ್ ವೀಡಿಯೋದಲ್ಲಿ ಮಹಿಳೆಯ ಬಾಯಿಯಿಂದ ಡಾಕ್ಟರ್ ಸುಮಾರು ಒಂದು ಮೀಟರ್ ಉದ್ದ ಇರುವ ಹಾವನ್ನು ತೆಗೆಯುವುದು ಗೋಚರವಾಗುತ್ತದೆ.

ಇದನ್ನೂ ಓದಿ:  ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ದಂಪತಿ ಭೇಟಿ -ನಾಗಪ್ರತಿಷ್ಠೆ, ತುಲಾಭಾರ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us