AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿ ಜತೆ ಫೋನ್​​ನಲ್ಲಿ ಮಾತನಾಡುತ್ತಿರುವಾಗಲೇ ದಾಳಿ, ಇಸ್ರೇಲ್​​ನಲ್ಲಿ ಕೇರಳ ಮೂಲದ ಮಹಿಳೆಗೆ ಗಂಭೀರ ಗಾಯ

ಇಸ್ರೇಲ್​​ ಮೇಲೆ ಪ್ಯಾಲೆಸ್ತೀನ್ ಭಯೋತ್ಪಾದಕರು ದಾಳಿ ಮುಂದುವರಿದಿದ್ದು, ಇದೀಗ ಇಸ್ರೇಲ್​​ನಲ್ಲಿರುವ ಕೇರಳ ಮೂಲದ ನರ್ಸ್​ ಒಬ್ಬರ ಮೇಲೆ ದಾಳಿ ನಡೆದಿದ್ದು, ಅವರಿಗೆ ಗಂಭೀರ ಗಾಯಗಳಲಾಗಿವೆ ಎಂದು ಹೇಳಲಾಗಿದೆ. ಇವರು ತನ್ನ ಪತಿಯೊಂದಿಗೆ ವಿಡಿಯೋ ಕಾಲ್​​ನಲ್ಲಿ ಮಾತನಾಡುತ್ತಿರುವಾಗಲೇ ಈ ದಾಳಿ ನಡೆದಿದೆ. ಗಾಯಗೊಂಡಿರುವ ನರ್ಸ್​​ನ್ನು ಶೀಜಾ ಆನಂದ್ (41) ಎಂದು ಗುರುತಿಸಲಾಗಿದೆ.

ಪತಿ ಜತೆ ಫೋನ್​​ನಲ್ಲಿ ಮಾತನಾಡುತ್ತಿರುವಾಗಲೇ ದಾಳಿ, ಇಸ್ರೇಲ್​​ನಲ್ಲಿ ಕೇರಳ ಮೂಲದ ಮಹಿಳೆಗೆ ಗಂಭೀರ ಗಾಯ
ಶೀಜಾ ಆನಂದ್
ಅಕ್ಷಯ್​ ಪಲ್ಲಮಜಲು​​
|

Updated on: Oct 09, 2023 | 3:18 PM

Share

ಇಸ್ರೇಲ್ (Israel) ಮೇಲೆ ಪ್ಯಾಲೆಸ್ತೀನ್ (Palestine​​) ಭಯೋತ್ಪಾದಕರು ದಾಳಿ ಮುಂದುವರಿದಿದ್ದು, ಇದೀಗ ಇಸ್ರೇಲ್​​ನಲ್ಲಿರುವ ಕೇರಳ ಮೂಲದ ನರ್ಸ್​ ಒಬ್ಬರ ಮೇಲೆ ದಾಳಿ ನಡೆದಿದ್ದು, ಅವರಿಗೆ ಗಂಭೀರ ಗಾಯಗಳಲಾಗಿವೆ ಎಂದು ಹೇಳಲಾಗಿದೆ. ಇವರು ತನ್ನ ಪತಿಯೊಂದಿಗೆ ವಿಡಿಯೋ ಕಾಲ್​​ನಲ್ಲಿ ಮಾತನಾಡುತ್ತಿರುವಾಗಲೇ ಈ ದಾಳಿ ನಡೆದಿದೆ. ಗಾಯಗೊಂಡಿರುವ ನರ್ಸ್​​ನ್ನು ಶೀಜಾ ಆನಂದ್ (41) ಎಂದು ಗುರುತಿಸಲಾಗಿದೆ. ಸುಮಾರು ಏಳು ವರ್ಷಗಳಿಂದ ಇಸ್ರೇಲ್​ನಲ್ಲಿ ನರ್ಸ್​​ ವೃತ್ತಿಯನ್ನು ಶೀಜಾ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಶೀಜಾ ಆನಂದ್ ಅವರು ಶನಿವಾರದಂದು ಇಸ್ರೇಲ್​​ ಮೇಲೆ ದಾಳಿ ನಡೆದಾಗ ತನ್ನ ಕುಟುಂಬಕ್ಕೆ ಫೋನ್​​ ಮಾಡಿದ್ದಾರೆ. ನಾನು ಇಲ್ಲಿ ಸುರಕ್ಷಿತವಾಗಿದ್ದೇನೆ ಎಂದು ಹೇಳಿದ್ದಾರೆ. ನಂತರ ತನ್ನ ಪತಿಗೆ ಫೋನ್​​ ಮಾಡಿದಾಗ ಒಂದು ದೊಡ್ಡ ಶಬ್ದ ಕೇಳಿ, ಕರೆ ಕಟ್​​ ಆಗುತ್ತದೆ ಎಂದು ಆಕೆಯ ಪತಿ ಹೇಳಿದ್ದಾರೆ.

ಈ ಘಟನೆಯ 3-4 ಗಂಟೆಯ ನಂತರ ಇಸ್ರೇಲ್​​ನಿಂದ ಒಂದು ಫೋನ್ ಬರುತ್ತದೆ. ನಿಮ್ಮ ಪತ್ನಿ ಭಯೋತ್ಪಾದಕರ ದಾಳಿಯಿಂದ ಗಾಯಗೊಂಡಿದ್ದಾರೆ. ಈಗಾಗಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೇರೆ ಕಡೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ.

ಶೀಜಾ ಆನಂದ್ ಅವರ ಪತಿ ಮತ್ತು ಮಕ್ಕಳು ಭಾರತದಲ್ಲಿದ್ದಾರೆ. ಅವರ ಪತಿ ಪುಣೆಯಲ್ಲಿ ಕೆಲಸದಲ್ಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಇಸ್ರೇಲ್​​ನ ಬೆತ್ಲೆಹೆಮ್‌ನ ಹೋಟೆಲ್‌ನಲ್ಲಿ 200ಕ್ಕೂ ಹೆಚ್ಚು ಜನರ ಸಿಲುಕಿಕೊಂಡಿದ್ದಾರೆ ಎಂದು ವರದಿ ಹೇಳಿದೆ. ಈಗಾಗಲೇ ಅವರನ್ನು ಸುರಕ್ಷಿತವಾಗಿ ಇರಿಸಲಾಗಿದೆ ಎಂದು ಹೇಳಿದ್ದಾರೆ.

ಇದರ ಜತೆಗೆ ಪ್ಯಾಲೆಸ್ತೀನ್‌ನ ಹೋಟೆಲ್‌ನಲ್ಲಿ ಕೊಚ್ಚಿಯ 45 ಜನ ಸಿಲುಕಿಕೊಂಡಿದ್ದಾರೆ. ಈಗಾಗಲೇ ಅವರನ್ನು ಭಾರತಕ್ಕೆ ಕರೆದುಕೊಂಡು ಬರುವ ಕೆಲಸವನ್ನು ಮಾಡಲಾಗುತ್ತದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿದೆ. ಇಸ್ರೇಲ್​ನಲ್ಲಿರುವ ಭಾರತದ ರಾಯಭಾರಿ ಜತೆಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತುಕತೆ ನಡೆಸಿದ್ದು, ಇಸ್ರೇಲ್​​ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಯಾವುದೇ ದೇಶದ ಯಹೂದಿ ಇಸ್ರೇಲ್​ನ ಪೌರತ್ವ ಪಡೆಯಬಹುದೇ?

ಇಸ್ರೇಲ್​ನಲ್ಲಿ ಅನೇಕ ಕಡೆಯಿಂದ ದಾಳಿಗಳು ನಡೆಸುತ್ತದೆ. ಈಗಾಗಲೇ ಪ್ಯಾಲೆಸ್ತೀನ್ ಹಮಾಸ್ ಭಯೋತ್ಪಾದಕರು ಇಸ್ರೇಲ್​ ಮೇಲೆ 5,000 ರಾಕೆಟ್​​ಗಳ ದಾಳಿ ಮಾಡಿದ್ದಾರೆ. ಮೂರು ದಿನದ ಈ ಯುದ್ಧದಲ್ಲಿ 1,100 ಜನ ಸಾವನ್ನಪ್ಪಿದ್ದಾರೆ. ಇಸ್ರೇಲ್‌ನಲ್ಲಿ 44 ಸೈನಿಕರು ಸೇರಿದಂತೆ 700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಗಾಜಾ ಪಟ್ಟಿಯಲ್ಲಿರುವ ಹಮಾಸ್‌ನ ಅಡಗುತಾಣಗಳನ್ನು ನಾಶಪಡಿಸಲು ಇಸ್ರೇಲ್ ಶನಿವಾರ ಪ್ರತಿದಾಳಿ ಆರಂಭಿಸಿದೆ. ದಕ್ಷಿಣ ಇಸ್ರೇಲ್‌ನಲ್ಲಿ ಕೆಲವು ಹಮಾಸ್ ನುಸುಳುಕೋರರು ಇಸ್ರೇಲಿ ಮಿಲಿಟರಿಯೊಂದಿಗೆ ಗುಂಡಿನ ಚಕಮಕಿ ನಡೆಸಿದ್ದಾರೆ. ಈ ಸಮಯದಲ್ಲಿ ಪ್ರತಿದಾಳಿಯಾಗಿ ಇಸ್ರೇಲ್​​ ಕೂಡ ದಾಳಿ ನಡೆಸಿದೆ. ಇನ್ನು ಇಸ್ರೇಲ್​​ನಲ್ಲಿ 18 ಸಾವಿರ ಭಾರತೀಯರು ವಾಸವಾಗಿದ್ದಾರೆ. ಈ ಯುದ್ಧದಲ್ಲಿ ಭಾರತೀಯರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಲಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿರ್ಮಾಣವಾಗುತ್ತಿರುವ ಹಿಂದೂ ದೇವಾಲಯದ ಗೋಡೆ ಕೆಡವಿದ ಮುಸ್ಲಿಂ ಮಹಿಳೆಯರು
ನಿರ್ಮಾಣವಾಗುತ್ತಿರುವ ಹಿಂದೂ ದೇವಾಲಯದ ಗೋಡೆ ಕೆಡವಿದ ಮುಸ್ಲಿಂ ಮಹಿಳೆಯರು
ಕಲಾಕಾರ ಈ ಕಮಲಾಕರ: ಜ್ಯೋತಿಷಿಯ ನವರಂಗಿ ಆಟದ ಸ್ಪೋಟಕ ಆಡಿಯೋ ಇಲ್ಲಿದೆ
ಕಲಾಕಾರ ಈ ಕಮಲಾಕರ: ಜ್ಯೋತಿಷಿಯ ನವರಂಗಿ ಆಟದ ಸ್ಪೋಟಕ ಆಡಿಯೋ ಇಲ್ಲಿದೆ
ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ
ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ
ಸಿದ್ಧಾರೂಢರ ದರ್ಶನ ಪಡೆದು ಧ್ಯಾನ ಮಾಡಿದ ಸೋನು ನಿಗಮ್​​
ಸಿದ್ಧಾರೂಢರ ದರ್ಶನ ಪಡೆದು ಧ್ಯಾನ ಮಾಡಿದ ಸೋನು ನಿಗಮ್​​
ನಾಯಕ ಎಂದರೆ ಕೇವಲ ಚುನಾವಣೆಗಳಲ್ಲಿ ಸ್ಪರ್ಧಿಸುವುದಲ್ಲ: ಮೋದಿ
ನಾಯಕ ಎಂದರೆ ಕೇವಲ ಚುನಾವಣೆಗಳಲ್ಲಿ ಸ್ಪರ್ಧಿಸುವುದಲ್ಲ: ಮೋದಿ
ಮೆಟ್ರೋ ದರ ಏರಿಕೆ ವಿರುದ್ಧ ಪ್ರತಿಭಟಿಸಿದ ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ
ಮೆಟ್ರೋ ದರ ಏರಿಕೆ ವಿರುದ್ಧ ಪ್ರತಿಭಟಿಸಿದ ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ
೨೫ ಪಂದ್ಯಗಳ ಬಳಿಕ ಸೋತ ಅಫ್ಘಾನಿಸ್ತಾನ್!
೨೫ ಪಂದ್ಯಗಳ ಬಳಿಕ ಸೋತ ಅಫ್ಘಾನಿಸ್ತಾನ್!
ಟಿಎಂಸಿ ಗೂಂಡಾಗಳಿಗೇ ಹೆದರಿಲ್ಲ ಇಲ್ಯಾವ ಲೆಕ್ಕ: ತೇಜಸ್ವಿ ಸೂರ್ಯ ಆಕ್ರೋಶ
ಟಿಎಂಸಿ ಗೂಂಡಾಗಳಿಗೇ ಹೆದರಿಲ್ಲ ಇಲ್ಯಾವ ಲೆಕ್ಕ: ತೇಜಸ್ವಿ ಸೂರ್ಯ ಆಕ್ರೋಶ
ಕಾಂಗ್ರೆಸ್ ಸರ್ಕಾರ ಖಾಲಿ ಸರ್ಕಾರ ಎಂದು ಬರೆದಿರುವ ಟ್ರಂಕ್ ಹಿಡಿದ ತೇಜಸ್ವಿ !
ಕಾಂಗ್ರೆಸ್ ಸರ್ಕಾರ ಖಾಲಿ ಸರ್ಕಾರ ಎಂದು ಬರೆದಿರುವ ಟ್ರಂಕ್ ಹಿಡಿದ ತೇಜಸ್ವಿ !
ತಮಿಳುನಾಡಲ್ಲಿ ಕರ್ನಾಟಕ ಧ್ವಜ ಎತ್ತಿ ಹಿಡಿದ ಬಗ್ಗೆ ಸುದೀಪ್ ಮಾತು
ತಮಿಳುನಾಡಲ್ಲಿ ಕರ್ನಾಟಕ ಧ್ವಜ ಎತ್ತಿ ಹಿಡಿದ ಬಗ್ಗೆ ಸುದೀಪ್ ಮಾತು