AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿಗೆ ಸುಳ್ಳು ಹೇಳಿ ಥೈಲ್ಯಾಂಡ್​​ಗೆ ಹೋದ ಗಂಡನ ಕಳ್ಳಾಟ ಬಯಲಾಗಿದ್ದೇ ರೋಚಕ!

ಮಲೇಷಿಯಾದ ವ್ಯಕ್ತಿ ತನ್ನ ಗರ್ಭಿಣಿ ಪತ್ನಿಗೆ ತಾನು ಕೆಲಸದ ಪ್ರವಾಸಕ್ಕಾಗಿ ಥೈಲ್ಯಾಂಡ್​​ಗೆ ತೆರಳುತ್ತಿದ್ದೇನೆ ಎಂದು ಸುಳ್ಳು ಹೇಳಿದ್ದ. ಅದನ್ನು ನಂಬಿದ ಹೆಂಡತಿ ಆತನನ್ನು ಥೈಲ್ಯಾಂಡ್​​ಗೆ ಕಳುಹಿಸಿಕೊಟ್ಟಿದ್ದಳು. ಆದರೆ, ಥೈಲ್ಯಾಂಡ್​​ನಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದರಿಂದ ಭಯಗೊಂಡು ಗಂಡನಿಗೆ ಫೋನ್ ಮಾಡಿದಾಗ ಆತ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದರಿಂದ ಆಕೆ ಪ್ರವಾಹದಿಂದ ತನ್ನ ಗಂಡನನ್ನು ರಕ್ಷಿಸಲು ಗೆಳೆಯನಿಗೆ ಫೋನ್ ಮಾಡಿದಳು. ಆಗ ಬಯಲಾಯಿತು ಗಂಡನ ರಹಸ್ಯ.

ಹೆಂಡತಿಗೆ ಸುಳ್ಳು ಹೇಳಿ ಥೈಲ್ಯಾಂಡ್​​ಗೆ ಹೋದ ಗಂಡನ ಕಳ್ಳಾಟ ಬಯಲಾಗಿದ್ದೇ ರೋಚಕ!
Representative Image
ಸುಷ್ಮಾ ಚಕ್ರೆ
|

Updated on:Dec 11, 2025 | 8:59 PM

Share

ನವದೆಹಲಿ, ಡಿಸೆಂಬರ್ 11: ಕೆಲವೊಮ್ಮೆ ನಮ್ಮ ಅದೃಷ್ಟ ಎಷ್ಟು ಕೈಕೊಟ್ಟಿರುತ್ತದೆ ಎಂದರೆ ‘ಪಾಪಿ ಸಮುದ್ರಕ್ಕಿಳಿದರೂ ಮೊಣಕಾಲುದ್ದ ನೀರು’ ಅಂತಾರಲ್ಲ ಹಾಗೆ. ಮಲೇಷ್ಯಾದ ವ್ಯಕ್ತಿಯೊಬ್ಬನ ಹೆಂಡತಿ ಗರ್ಭಿಣಿಯಾಗಿದ್ದಳು. ಆತ ಥೈಲ್ಯಾಂಡ್​​ಗೆ ಹೋಗಿಬರಲು ಪ್ಲಾನ್ ಮಾಡಿದ್ದ. ಆಗ ಹೆಂಡತಿ ನಾನು ಕೂಡ ಬರುತ್ತೇನೆ ಎಂದಳು. ಆದರೆ, ಆಕೆ ಗರ್ಭಿಣಿಯಾದ್ದರಿಂದ ವಿಮಾನ ಸಂಚಾರ ಮಾಡುವುದು ಬೇಡವೆಂದ ಗಂಡ ತಾನು ಆಫೀಸ್ ಕೆಲಸದ ಮೇಲೆ ಥೈಲ್ಯಾಂಡ್​​ಗೆ (Thailand) ಹೋಗುತ್ತಿದ್ದೇನೆ ಎಂದು ಆಕೆಗೆ ಹೇಳಿದ್ದ. ತನ್ನಿಂದ ಗಂಡನ ಕೆಲಸಕ್ಕೆ ತೊಂದರೆಯಾಗುವುದು ಬೇಡವೆಂದು ಆಕೆ ಆತನೊಬ್ಬನನ್ನೇ ಥೈಲ್ಯಾಂಡ್​​ಗೆ ಕಳಿಸಿದ್ದಳು.

ಆದರೆ, ಆತ ಥೈಲ್ಯಾಂಡ್​​ಗೆ ತನ್ನ ಪ್ರೇಯಸಿ ಜೊತೆ ಮಜಾ ಮಾಡಲು ಹೋಗಿದ್ದ. ಹೆಂಡತಿಗೆ ಸುಳ್ಳು ಹೇಳಿ ಹೋಗಿದ್ದ ಆತ ಈ ವಿಷಯ ಆಕೆಗೆ ಗೊತ್ತಾಗಲು ಚಾನ್ಸೇ ಇಲ್ಲ ಎಂದುಕೊಂಡಿದ್ದ. ಆದರೆ, ಎಲ್ಲವೂ ನಾವಂದುಕೊಂಡ ಹಾಗೇ ಆಗುವುದಿಲ್ಲವಲ್ಲ. ಲವರ್ ಜೊತೆ 4 ದಿನಗಳಿಂದ ಥೈಲ್ಯಾಂಡ್​ನ ರೆಸಾರ್ಟ್​​ನಲ್ಲಿ ಜಾಲಿ ಮೂಡಲ್ಲಿದ್ದ ಆತನ ಹಣೆಬರಹ ಕೆಟ್ಟಿತ್ತು. ಥೈಲ್ಯಾಂಡ್​​ನಲ್ಲಿ ಪ್ರವಾಹ ಶುರುವಾಯಿತು.

ಇದನ್ನೂ ಓದಿ: Video: ಹಿಮಾಲಯ ಟ್ರೆಕ್ಕಿಂಗ್ ವೇಳೆ ಪ್ರವಾಸಿಗರಿಗೆ ಸ್ವಚ್ಛತೆಯ ಪಾಠ ಮಾಡಿದ ರಷ್ಯನ್ ಮಹಿಳೆ

ಇತ್ತ ಆತನ ಹೆಂಡತಿ ಥೈಲ್ಯಾಂಡ್​​​ನಲ್ಲಿ ಪ್ರವಾಹ ಉಂಟಾಗಿದ್ದರಿಂದ ತನ್ನ ಗಂಡ ಸುರಕ್ಷಿತವಾಗಿ ವಾಪಾಸ್ ಬರಲಿ ಎಂದು ಪ್ರಾರ್ಥಿಸುತ್ತಾ ಟಿವಿ ಆನ್ ಮಾಡಿದಳು. ಅದರಲ್ಲಿ ಪ್ರವಾಹಪೀಡಿತರ ರಕ್ಷಣಾ ಕಾರ್ಯಾಚರಣೆಯ ವಿಡಿಯೋಗಳು ಬರುತ್ತಿದ್ದವು. ಇದರಿಂದ ಆಕೆಯ ಆತಂಕ ಇನ್ನಷ್ಟು ಹೆಚ್ಚಾಯಿತು. ಥೈಲ್ಯಾಂಡ್​​ನಲ್ಲಿದ್ದ ತನ್ನ ಗೆಳೆಯನೊಬ್ಬನಿಗೆ ಫೋನ್ ಮಾಡಿ ಥೈಲ್ಯಾಂಡ್‌ನ ಹ್ಯಾಟ್ ಯಾಯ್‌ನಲ್ಲಿನ ಹೋಟೆಲ್​​ನಲ್ಲಿ ಉಳಿದುಕೊಂಡಿದ್ದ ಆಕೆಯ ಗಂಡನನ್ನು ರಕ್ಷಣೆ ಮಾಡುವಂತೆ ಆಕೆ ಮನವಿ ಮಾಡಿದಳು.

ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿ ಸಾವನ್ನಪ್ಪಿದ ಪಾಕಿಸ್ತಾನದ ಖ್ಯಾತ ಕಂಟೆಂಟ್​ ಕ್ರಿಯೆಟರ್

ಆಕೆಯ ಆನ್‌ಲೈನ್ ಸ್ನೇಹಿತ ಆಕೆಯ ಗಂಡನ ರಕ್ಷಣಾ ಪ್ರಯತ್ನಕ್ಕೆ ವ್ಯವಸ್ಥೆ ಮಾಡಿದಾಗ ಅಸಲಿ ಸಂಗತಿ ಬಹಿರಂಗವಾಯಿತು. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಆ ವ್ಯಕ್ತಿ ಕೆಲಸಕ್ಕಾಗಿ ಹ್ಯಾಟ್ ಯಾಯ್‌ನಲ್ಲಿ ಇದ್ದೇನೆ ಎಂದು ಹೆಂಡತಿಗೆ ತಿಳಿಸಿದ್ದ. ತನ್ನ ಗಂಡನೂ ಪ್ರವಾಹದಲ್ಲಿ ಸಿಲುಕಿದ್ದಾನೆ ಅದರಿಂದಲೇ ಆತ ಫೋನಿಗೂ ಸಿಗುತ್ತಿಲ್ಲ ಎಂದು ಆತಂಕಿತಳಾದ ಆಕೆ ತನ್ನ ಗೆಳೆಯನಿಗೆ ಫೋನ್ ಮಾಡಿ ಆ ರೆಸಾರ್ಟ್​​ನ ವಿಳಾಸ ಹೇಳಿ ತನ್ನ ಗಂಡನಿಗೆ ಸಹಾಯ ಮಾಡಲು ಮನವಿ ಮಾಡಿದಳು. ಆಗ ಆತ ಆಫೀಸ್ ಸಹೋದ್ಯೋಗಿ ಜೊತೆ 4 ದಿನಗಳಿಂದ ಅದೇ ಹೋಟೆಲ್​​ನಲ್ಲಿ ವಾಸವಾಗಿದ್ದ. ಇಬ್ಬರೂ ಒಂದೇ ರೂಂನಲ್ಲಿದ್ದರು ಎಂಬುದು ಆತನ ಹೆಂಡತಿಗೆ ಗೊತ್ತಾಗಿದೆ. ಥೈಲ್ಯಾಂಡ್​​ನಲ್ಲಿ ಉಂಟಾದ ಪ್ರವಾಹ ಆಕೆಯ ಗಂಡನ ಅಸಲಿ ಮುಖವನ್ನು ಬಹಿರಂಗ ಮಾಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:58 pm, Thu, 11 December 25

Follow Us
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ