AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mexico Ram Mandir: ಅಯೋಧ್ಯೆಗೂ ಮುನ್ನ ಮೆಕ್ಸಿಕೋದಲ್ಲಿ ನಡೆಯಿತು ಮೊದಲ ರಾಮ ಮಂದಿರದ ಪ್ರಾಣ ಪ್ರತಿಷ್ಠೆ

ಮೆಕ್ಸಿಕೋ(Mexico)ದಲ್ಲಿ ದೇಶದ ಮೊದಲ ರಾಮ ಮಂದಿರ(Ram Mandir)ವನ್ನು ನಿರ್ಮಿಸಲಾಗಿದ್ದು, ಅಯೋಧ್ಯೆಗೂ ಮುನ್ನ ರಾಮನ ಪ್ರತಿಷ್ಠಾಪನೆ ಕಾರ್ಯಕ್ರಮಗಳು ನೆರವೇರಿವೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಪ್ರಪಂಚದಾದ್ಯಂತ ಹಲವು ದೇಶಗಳು ಕೂಡ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮೇರಿಕ, ಮೆಕ್ಸಿಕೋ, ಕೆನಡಾ ಮತ್ತು ಆಸ್ಟ್ರೇಲಿಯಾದ ದೇವಾಲಯಗಳಲ್ಲಿಯೂ ಸುಂದರಕಾಂಡ, ರಾಮಚರಿತಮಾನಗಳನ್ನು ಪಠಿಸಲಾಗುತ್ತಿದೆ.

Mexico Ram Mandir: ಅಯೋಧ್ಯೆಗೂ ಮುನ್ನ ಮೆಕ್ಸಿಕೋದಲ್ಲಿ ನಡೆಯಿತು ಮೊದಲ ರಾಮ ಮಂದಿರದ ಪ್ರಾಣ ಪ್ರತಿಷ್ಠೆ
ರಾಮ ಮಂದಿರImage Credit source: Amarujala.com
ನಯನಾ ರಾಜೀವ್
|

Updated on: Jan 22, 2024 | 11:03 AM

Share

ಮೆಕ್ಸಿಕೋ(Mexico)ದಲ್ಲಿ ದೇಶದ ಮೊದಲ ರಾಮ ಮಂದಿರ(Ram Mandir)ವನ್ನು ನಿರ್ಮಿಸಲಾಗಿದ್ದು, ಅಯೋಧ್ಯೆಗೂ ಮುನ್ನ ರಾಮನ ಪ್ರತಿಷ್ಠಾಪನೆ ಕಾರ್ಯಕ್ರಮಗಳು ನೆರವೇರಿವೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಪ್ರಪಂಚದಾದ್ಯಂತ ಹಲವು ದೇಶಗಳು ಕೂಡ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮೇರಿಕ, ಮೆಕ್ಸಿಕೋ, ಕೆನಡಾ ಮತ್ತು ಆಸ್ಟ್ರೇಲಿಯಾದ ದೇವಾಲಯಗಳಲ್ಲಿಯೂ ಸುಂದರಕಾಂಡ, ರಾಮಚರಿತಮಾನಗಳನ್ನು ಪಠಿಸಲಾಗುತ್ತಿದೆ.

ಮೆಕ್ಸಿಕೋದಲ್ಲಿ ನಿರ್ಮಿಸಲಾದ ದೇವಾಲಯದಲ್ಲಿ ಭಾರತದಿಂದ ತಂದ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.ಈ ಅವಧಿಯಲ್ಲಿ ಅನಿವಾಸಿ ಭಾರತೀಯರಿಂದ ಭಜನೆ, ಕೀರ್ತನೆ ಮತ್ತು ಶಾಸ್ತ್ರೀಯ ಸಂಗೀತವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸಮುದಾಯ ಹಾಗೂ ಮೆಕ್ಸಿಕೋ ನಾಗರಿಕರು ಭಾಗವಹಿಸಿದ್ದರು.

ಮೆಕ್ಸಿಕೋದಲ್ಲಿನ ಭಾರತೀಯ ರಾಯಭಾರ ಕಚೇರಿಯು ಮೆಕ್ಸಿಕೋದಲ್ಲಿ ಮೊದಲ ರಾಮ ಮಂದಿರ ಎಂದು ಪೋಸ್ಟ್ ಅನ್ನು ಹಂಚಿಕೊಂಡಿದೆ.

ಮತ್ತಷ್ಟು ಓದಿ: Ram Mandir Inauguration: ಜನವರಿ 22ನ್ನು ಅಯೋಧ್ಯೆ ರಾಮ ಮಂದಿರ ದಿನವನ್ನಾಗಿ ಘೋಷಿಸಿದ ಕೆನಡಾ

ಈ ನಡುವೆ ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ದೇವಸ್ಥಾನದ ಆವರಣದಲ್ಲಿ ಸೇರಿದ್ದರು. ಅಯೋಧ್ಯೆಯ ಬೀದಿಗಳಲ್ಲಿ ಜೈ ಶ್ರೀರಾಮ್ ಘೋಷಣೆಗಳು ಜೋರಾಗಿ ಮೊಳಗುತ್ತಿವೆ.

ಅಯೋಧ್ಯೆಯ ಅನೇಕ ಸ್ಥಳಗಳಲ್ಲಿ ಸುಂದರಕಾಂಡ ಮತ್ತು ರಾಮಚರಿತಮಾನಗಳನ್ನು ಪಠಿಸಲಾಗುತ್ತಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ‘ಮಂಗಲಧ್ವನಿ’ ಸಂಗೀತ ಕಾರ್ಯಕ್ರಮದೊಂದಿಗೆ ಪ್ರಾಣ ಪ್ರತಿಷ್ಠಾ ಸಮಾರಂಭ ಆರಂಭವಾಗಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭಾನುವಾರ ಪ್ರಕಟಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ