AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟನ್​ನಲ್ಲಿ ತೆರೆಮರೆಯಲ್ಲಿ ಜನರೊಂದಿಗೆ ಬೆರೆತು ಹೋಗಿದ್ದಾರೆ ರಷ್ಯಾದ 1,000 ಗೂಢಚಾರರು

ಕೆಲವರಂತೂ ಸರ್ಕಾರದ ಉನ್ನತ ಹಂತದ ಅಧಿಕಾರ ಕೇಂದ್ರಗಳಿಗೂ ನುಸುಳಿ, ಕೆಲಸ ಸಂಪಾದಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ‘ದಿ ಮಿರರ್’ ದಿನಪತ್ರಿಕೆ ವರದಿ ಮಾಡಿದೆ.

ಬ್ರಿಟನ್​ನಲ್ಲಿ ತೆರೆಮರೆಯಲ್ಲಿ ಜನರೊಂದಿಗೆ ಬೆರೆತು ಹೋಗಿದ್ದಾರೆ ರಷ್ಯಾದ 1,000 ಗೂಢಚಾರರು
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Nov 14, 2022 | 3:30 PM

Share

ಬ್ರಿಟನ್​ನಲ್ಲಿ ರಷ್ಯಾದ ಸುಮಾರು 1,000 ಗೂಢಚಾರರು ತೆರೆಮರೆಯಲ್ಲಿ ಜನಜೀವನದೊಂದಿಗೆ ಬೆರೆತುಹೋಗಿದ್ದಾರೆ. ಸಾಮಾನ್ಯ ಜನರಂತೆ ಹತ್ತುಹಲವು ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ. ಕೆಲವರಂತೂ ಸರ್ಕಾರದ ಉನ್ನತ ಹಂತದ ಅಧಿಕಾರ ಕೇಂದ್ರಗಳಿಗೂ ನುಸುಳಿ, ಕೆಲಸ ಸಂಪಾದಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ‘ದಿ ಮಿರರ್’ ದಿನಪತ್ರಿಕೆ ವರದಿ ಮಾಡಿದೆ. ಜನಜೀವನದ ಎಲ್ಲ ಆಯಾಮಗಳಲ್ಲಿ ಬೆರೆತುಕೊಳ್ಳುವಂಥ ಒಂದು ವಿಶಿಷ್ಟ ಗೂಢಚರ್ಯೆಯ ಜಾಲವನ್ನು ರಷ್ಯಾ ನಿರ್ಮಿಸಿದೆ. ವಿಶಾಲವಾಗಿ ಮತ್ತು ಆಳವಾಗಿ ಬೇರು ಬಿಟ್ಟಿರುವ ಈ ಜಾಲದ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದು ಯಾರೂ ಅಂದುಕೊಳ್ಳುವಂತಿಲ್ಲ. ವಿದ್ಯಾರ್ಥಿ ಸಂಘಗಳು, ವಿದ್ಯಾರ್ಥಿಗಳು, ಕಾರ್ಮಿಕ ಸಂಘಟನೆಗಳು, ನಿಯಮಿತವಾಗಿ ಪ್ರತಿಭಟನೆ ನಡೆಸುವ ಗುಂಪುಗಳು, ನಾಗರಿಕ ಸೇವೆ ಹಾಗೂ ಪೊಲೀಸ್ ಇಲಾಖೆಯಲ್ಲಿಯೂ ರಷ್ಯಾದ ಗೂಢಚಾರರು ನುಸುಳಿಕೊಂಡಿದ್ದಾರೆ ಎಂದು ವರದಿಯು ತಿಳಿಸಿದೆ.

ಬ್ರಿಟನ್​ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೂಢಚಾರರ ಸಂಖ್ಯೆ ಕಡಿಮೆಯಾಗಿದೆ. ಆದರೆ ಬ್ರಿಟನ್ ಆಡಳಿತಕ್ಕೆ ಗುರುತು ಪತ್ತೆಯಾಗದಂತೆ ಕೆಲಸ ಮಾಡುತ್ತಿರುವ ಅಪರಿಚಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಬ್ರಿಟನ್​ನ ಅಣುಶಕ್ತಿ ಕೇಂದ್ರಗಳು, ಸೇನೆ, ವಾಯುಪಡೆ, ನೌಕಾನೆಲೆಗಳು, ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿಗಳು ಇರು ಸ್ಕಾಟ್​ಲೆಂಡ್​ನ ಫಾಸ್​ಲೇನ್​ನಲ್ಲಿಯೂ ರಷ್ಯಾದ ಏಜೆಂಟ್​ಗಳು ಮಾಹಿತಿ ಕಲೆ ಹಾಕಿದ್ದಾರೆ ಎಂದು ವರದಿಯು ತಿಳಿಸಿದರು.

ಇವರೆಲ್ಲರೂ ಗೂಢಚರ್ಯೆಯಲ್ಲಿ ಅತ್ಯುತ್ತಮ ತರಬೇತಿ ಪಡೆದುಕೊಂಡಿದ್ದಾರೆ. ಜನರೊಂದಿಗೆ ಬೆರೆಯುವುದು, ಎಂಥವರನ್ನೂ ಮಾತಿಗೆ ಎಳೆಯುವುದು, ಸಂಘಟನೆಗಳಲ್ಲಿ ನುಸುಳಿಕೊಳ್ಳುವುದು ಮತ್ತು ಸ್ಥಳೀಯವಾಗಿ ಗೂಢಚಾರರನ್ನು ನೇಮಿಸಿಕೊಳ್ಳುವ ಚಾಕಚಕ್ಯತೆ ಇವರಿಗಿದೆ ಎಂದು ವರದಿಯು ತಿಳಿಸಿದೆ. ಉಕ್ರೇನ್​ನಲ್ಲಿ ಸತತ ಹಿನ್ನಡೆ ಅನುಭವಿಸುತ್ತಿರುವ ರಷ್ಯಾ ಸೇನೆಯು ಇದೀಗ ಖೆರ್​ಸೊನ್ ನಗರದಿಂದಲು ಹಿಮ್ಮೆಟ್ಟುತ್ತಿದೆ. ಹಿಮ್ಮೆಟ್ಟುತ್ತಿರುವ ಪ್ರದೇಶಗಳಲ್ಲಿ ರಷ್ಯಾ ಸೈನಿಕರು ನಾಗರಿಕರಿಗೆ ಹಿಂಸೆ ಕೊಡುತ್ತಿದ್ದಾರೆ. ಜನರನ್ನು ಕೊಲ್ಲುತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ದೂರಿದ್ದಾರೆ. ‘ಖೆರ್​ಸೊನ್ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ 400 ನಾಗರಿಕರ ಶವಗಳು ಪತ್ತೆಯಾಗಿವೆ’ ಎಂದು ಝೆಲೆನ್​ಸ್ಕಿ ಹೇಳಿದ್ದರು.

ರಷ್ಯಾ ಇನ್ನೂ ಎಷ್ಟು ದಿನ ಈ ಆಕ್ರಮಣವನ್ನು ಮುಂದುವರಿಸಲು ಸಾಧ್ಯ ಎನ್ನುವ ಬಗ್ಗೆ ಗೊಂದಲಗಳಿವೆ ಎಂದು ಅಮೆರಿಕ ಸೇನೆ ವಿಶ್ಲೇಷಿಸಿದೆ. ರಷ್ಯಾ ಸೇನೆಯು ಉಕ್ರೇನ್​ನ ಪ್ರಮುಖ ನಗರ ಖೆರ್​ಸೋನ್​ನಿಂದ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ನ 9ರಂದು ಘೋಷಿಸಿತ್ತು. ಇದು ಉಕ್ರೇನ್ ಯುದ್ಧದಲ್ಲಿ ರಷ್ಯಾಕ್ಕೆ ಆದ ದೊಡ್ಡ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗಿತ್ತು. ಉಕ್ರೇನ್​ ಪಡೆಗಳು ಖಾರ್ಕಿವ್ ಉತ್ತರ ಪ್ರಾಂತ್ಯದಲ್ಲಿ ಮುನ್ನಡೆ ಸಾಧಿಸಿದ ಬಳಿಕ ನಡೆದ ಅತಿಪ್ರಮುಖ ಸೇನಾ ಬೆಳವಣಿಗೆ ಇದು ಎಂದು ವಿಶ್ಲೇಷಿಸಲಾಗಿತ್ತು.

ಕಳೆದ ಸೆಪ್ಟೆಂಬರ್​ನಲ್ಲಿ ರಷ್ಯಾ ಪಡೆಗಳು ಖೆರ್​ಸೊನ್ ನಗರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದವು. ಈ ಪ್ರದೇಶದಿಂದ ರಷ್ಯಾ ಸಂಪೂರ್ಣವಾಗಿ ಸೇನೆ ಹಿಂಪಡೆದರೆ ಸಾವಿರಾರು ಕಿಲೋಮೀಟರ್​ ವಿಸ್ತೀರ್ಣದ ಪ್ರದೇಶದಿಂದ ರಷ್ಯಾ ಹಿಂದೆ ಸರಿದಂತೆ ಅಗುತ್ತದೆ. ಇದು ಉಕ್ರೇನ್ ಯುದ್ಧದಲ್ಲಿ ನಡೆದ ಪ್ರಮುಖ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: Russia Ukraine War: ಉಕ್ರೇನ್​ನಲ್ಲಿ 1 ಲಕ್ಷಕ್ಕೂ ಹೆಚ್ಚು ರಷ್ಯಾ ಯೋಧರ ಸಾವು; ಅಮೆರಿಕ ಸೇನಾಧಿಕಾರಿ ಅಂದಾಜು

Published On - 3:30 pm, Mon, 14 November 22

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!