AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವಿನ್ನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಅಮೆರಿಕದಲ್ಲಿ ಭಯೋತ್ಪಾದನೆ, ಪಾಕಿಸ್ತಾನದ ವಿರುದ್ಧ ಶಶಿ ತರೂರ್ ವಾಗ್ದಾಳಿ

ಗಡಿಯಾಚೆಗಿನ ಭಯೋತ್ಪಾದನೆ(Terrorism)ಯ ಕುರಿತು ಜಾಗತಿಕ ಮಟ್ಟದಲ್ಲಿ ಭಾರತದ ದೃಷ್ಟಿಕೋನವನ್ನು ಮಂಡಿಸಲು ಸರ್ವಪಕ್ಷ ನಿಯೋಗವು ವಿಶ್ವ ಪ್ರವಾಸ ಮಾಡುತ್ತಿದೆ. ಶಶಿ ತರೂರ್ ನೇತೃತ್ವದ ನಿಯೋಗವು ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಜನರಿಂದ ಸಹಕಾರವನ್ನು ಕೋರಿತು. ಈ ಸಂದರ್ಭದಲ್ಲಿ, ನಮ್ಮ ಮೇಲೆ ದಾಳಿ ನಡೆದರೆ ನಾವು ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ನೀಡಲು ಈ ಭಾರತೀಯ ನಿಯೋಗ ಬಂದಿದೆ ಎಂದು ತರೂರ್ ಹೇಳಿದರು.

ನಾವಿನ್ನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಅಮೆರಿಕದಲ್ಲಿ ಭಯೋತ್ಪಾದನೆ, ಪಾಕಿಸ್ತಾನದ ವಿರುದ್ಧ ಶಶಿ ತರೂರ್ ವಾಗ್ದಾಳಿ
ಶಶಿ ತರೂರ್Image Credit source: PTI
ನಯನಾ ರಾಜೀವ್
|

Updated on: May 25, 2025 | 8:00 AM

Share

ವಾಷಿಂಗ್ಟನ್, ಮೇ 25: ಗಡಿಯಾಚೆಗಿನ ಭಯೋತ್ಪಾದನೆ(Terrorism)ಯ ಕುರಿತು ಜಾಗತಿಕ ಮಟ್ಟದಲ್ಲಿ ಭಾರತದ ದೃಷ್ಟಿಕೋನವನ್ನು ಮಂಡಿಸಲು ಸರ್ವಪಕ್ಷ ನಿಯೋಗವು ವಿಶ್ವ ಪ್ರವಾಸ ಮಾಡುತ್ತಿದೆ. ಶಶಿ ತರೂರ್ ನೇತೃತ್ವದ ನಿಯೋಗವು ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಜನರಿಂದ ಸಹಕಾರವನ್ನು ಕೋರಿತು. ಈ ಸಂದರ್ಭದಲ್ಲಿ, ನಮ್ಮ ಮೇಲೆ ದಾಳಿ ನಡೆದರೆ ನಾವು ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ನೀಡಲು ಈ ಭಾರತೀಯ ನಿಯೋಗ ಬಂದಿದೆ ಎಂದು ತರೂರ್ ಹೇಳಿದರು.

ಹೆಚ್ಚುತ್ತಿರುವ ಭಯೋತ್ಪಾದನೆಯ ಬೆದರಿಕೆಯ ವಿರುದ್ಧ ಒಗ್ಗಟ್ಟು ಮತ್ತು ಬಲದಿಂದ ನಿಲ್ಲುವಂತೆ ಅಮೆರಿಕ ಕಾಂಗ್ರೆಸ್ ಸಂಸದ ಶಶಿ ತರೂರ್ ಜಾಗತಿಕ ಸಮುದಾಯಕ್ಕೆ ಕರೆ ನೀಡಿದರು. ನಮಗೆ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಯಾವುದೇ ಆಸಕ್ತಿ ಇಲ್ಲ. ನಮ್ಮ ಆರ್ಥಿಕತೆಯನ್ನು ಬೆಳೆಸಲು ಮತ್ತು ನಮ್ಮ ಜನರನ್ನು 21 ನೇ ಶತಮಾನದ ಜಗತ್ತಿಗೆ ತರಲು ನಾವು ಏಕಾಂಗಿಯಾಗಿರಲು ಬಯಸುತ್ತೇವೆ.

ಇದನ್ನೂ ಓದಿ
Image
Video: ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ವಿಡಿಯೋ ಇಲ್ಲಿದೆ
Image
ಪಹಲ್ಗಾಮ್ ಉಗ್ರ ದಾಳಿ, ಎಕೆ-47 ಹಿಡಿದ ಶಂಕಿತ ಉಗ್ರನ ಫೋಟೋ ಬಹಿರಂಗ
Image
ಪ್ಯಾಂಟ್​ ಬಿಚ್ಚಿ, ಐಡಿ ಪರಿಶೀಲಿಸಿ ಹಿಂದೂಗಳನ್ನು ಗುರಿಯಾಗಿಸಿ ಉಗ್ರರ ದಾಳಿ
Image
ಪಹಲ್ಗಾಮ್ ಉಗ್ರ ದಾಳಿಯ ಮಾಸ್ಟರ್​ಮೈಂಡ್ ಸೈಫುಲ್ಲಾ ಖಾಲಿದ್ ಯಾರು?

ಅವರು ಭಾರತದ ನಿಯಂತ್ರಣದಲ್ಲಿರುವ ಪ್ರದೇಶವನ್ನು ಬಯಸುತ್ತಾರೆ ಮತ್ತು ಅವರು ಅದನ್ನು ಯಾವುದೇ ಬೆಲೆ ತೆತ್ತಾದರೂ ಪಡೆಯಲು ಬಯಸುತ್ತಾರೆ. ಅವರು ಅದನ್ನು ಸಾಂಪ್ರದಾಯಿಕ ವಿಧಾನಗಳ ಮೂಲಕ ಪಡೆಯಲು ಸಾಧ್ಯವಾಗದಿದ್ದರೆ, ಅವರು ಅದನ್ನು ಭಯೋತ್ಪಾದನೆಯ ಮೂಲಕ ಪಡೆಯಲು ಬಯಸುತ್ತಾರೆ ಮತ್ತು ಇದು ಸ್ವೀಕಾರಾರ್ಹವಲ್ಲ ಎಂದು ಕಾಂಗ್ರೆಸ್ ಸಂಸದ ತರೂರ್ ಹೇಳಿದರು.

ಮತ್ತಷ್ಟು ಓದಿ: ಮಾಸ್ಕೋ: ಭಾರತದ ಸಂಸದರ ನಿಯೋಗ ಏರ್​ಪೋರ್ಟ್​ನಲ್ಲಿ ಇಳಿಯುವ ವೇಳೆ ಡ್ರೋನ್ ದಾಳಿ

ಶಶಿ ತರೂರ್ ನೇತೃತ್ವದ ನಿಯೋಗವು ದಕ್ಷಿಣ ಅಮೆರಿಕಾದ ದೇಶಗಳಾದ ಗಯಾನಾ, ಪನಾಮ, ಬ್ರೆಜಿಲ್ ಮತ್ತು ಕೊಲಂಬಿಯಾಕ್ಕೂ ಭೇಟಿ ನೀಡಲಿದೆ. ಭಯೋತ್ಪಾದನೆಯ ಪಿಡುಗಿನ ವಿರುದ್ಧ ಎಲ್ಲರೂ ಒಟ್ಟಾಗಿ ನಿಲ್ಲುವುದು ಎಷ್ಟು ಮುಖ್ಯ ಎಂಬುದನ್ನು ಜಗತ್ತಿಗೆ ವಿವರಿಸಲು ಬಯಸಿದ್ದೇವೆ. 9/11 ರ ನಂತರ ಅಮೆರಿಕ ತನ್ನ ದೃಢಸಂಕಲ್ಪ ತೋರಿಸಿದಂತೆಯೇ, ನಮ್ಮ ದೇಶವೂ ಏಪ್ರಿಲ್ 22 ರಂದು ನಮ್ಮ ಮೇಲೆ ದಾಳಿ ಮಾಡಿದ ದುಷ್ಟ ಶಕ್ತಿಗಳ ವಿರುದ್ಧ ನಿಂತಿದೆ ಎಂದು ತರೂರ್ ಹೇಳಿದರು.

ಈ ಭಯೋತ್ಪಾದಕ ದಾಳಿಯನ್ನು ನಡೆಸಿದವರು ಮತ್ತು ಅವರಿಗೆ ಹಣಕಾಸು ಒದಗಿಸಿದವರು, ತರಬೇತಿ ನೀಡಿದವರು, ಸಿದ್ಧತೆ ನಡೆಸಿದವರು ಮತ್ತು ಹಿಂದೆ ನಿಂತವರು ಪಾಠ ಕಲಿತಿದ್ದಾರೆ ಎಂದು ನಾವು ಭಾವಿಸುತ್ತೇವೆ. ಇದು ಮತ್ತೆ ಸಂಭವಿಸಿದರೆ, ನಾವು ಮೌನವಾಗಿರುವುದಿಲ್ಲ.

ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸರ್ವಪಕ್ಷ ನಿಯೋಗದಲ್ಲಿ ಶಾಂಭವಿ ಚೌಧರಿ (ಲೋಕಜನಶಕ್ತಿ ಪಕ್ಷ-ರಾಮ್ ವಿಲಾಸ್ ಪಾಸ್ವಾನ್), ಸರ್ಫರಾಜ್ ಅಹ್ಮದ್ (ಜಾರ್ಖಂಡ್ ಮುಕ್ತಿ ಮೋರ್ಚಾ), ಜಿಎಂ ಹರೀಶ್ ಬಲಯಾಗಿ (ತೆಲುಗು ದೇಶಂ ಪಕ್ಷ), ಶಶಾಂಕ್ ಮಣಿ ತ್ರಿಪಾಠಿ, ಬಿಜೆಪಿಯಿಂದ ತೇಜಸ್ವಿ ಸೂರ್ಯ, ಭುವನೇಶ್ವರ್, ಭುಬನಲ್ಸ್‌ವಾರ್ (ಶಿವಸೇನೆ) ಮತ್ತು US ನಲ್ಲಿನ ಮಾಜಿ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಇದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ