AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

750 ಕಿ.ಮೀ ವಾಯುಪ್ರದೇಶ ಮುಚ್ಚಿದ ಪಾಕ್: ಫತಾಹ್ ಸರಣಿಯ ಹೊಸ ಕ್ಷಿಪಣಿ ಪರೀಕ್ಷೆಗೆ ಸಜ್ಜಾಯಿತೇ ಪಾಕಿಸ್ತಾನ

ಪಾಕಿಸ್ತಾನ 750 ಕಿ.ಮೀ ವಾಯುಪ್ರದೇಶವನ್ನು ಮುಚ್ಚಿರುವುದು ಫತಾಹ್ ಸರಣಿಯ ಹೊಸ ದೀರ್ಘ-ಶ್ರೇಣಿಯ ಕ್ಷಿಪಣಿ ಪರೀಕ್ಷೆಗೆ ಸಜ್ಜಾಗಿರುವ ಬಲವಾದ ಸಂಕೇತವಾಗಿದೆ. ಅಮೆರಿಕ ರಾಯಭಾರಿಯ ಕಾಶ್ಮೀರ ಕುರಿತ ಹೇಳಿಕೆ ಪಾಕ್‌ಗೆ ಆಕ್ರೋಶ ತಂದಿದೆ. ಇದರ ಬೆನ್ನಲ್ಲೇ ಈ ನಿರ್ಬಂಧ ಜಾಗತಿಕ ಮಟ್ಟದಲ್ಲಿ ಸೇನಾ ಶಕ್ತಿ ಪ್ರದರ್ಶಿಸುವ ತಂತ್ರ ಎಂದು ವಿಶ್ಲೇಷಿಸಲಾಗಿದೆ. ಭಾರತೀಯ ಸೇನೆ ಪಾಕ್ ಗಡಿ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸಿದೆ.

750 ಕಿ.ಮೀ ವಾಯುಪ್ರದೇಶ ಮುಚ್ಚಿದ ಪಾಕ್: ಫತಾಹ್ ಸರಣಿಯ ಹೊಸ ಕ್ಷಿಪಣಿ ಪರೀಕ್ಷೆಗೆ ಸಜ್ಜಾಯಿತೇ ಪಾಕಿಸ್ತಾನ
ಫತಾಹ್
ನಯನಾ ರಾಜೀವ್
|

Updated on: Aug 20, 2026 | 10:19 AM

Share

ಇಸ್ಲಾಮಾಬಾದ್, ಆಗಸ್ಟ್ 20: ವಾಯುಪ್ರದೇಶ ಮುಚ್ಚಲು ಪಾಕಿಸ್ತಾನ(Pakistan) ಯಾವುದೇ ಅಧಿಕೃತ ಕಾರಣ ನೀಡಿಲ್ಲವಾದರೂ, ಇಷ್ಟು ವಿಶಾಲ ವ್ಯಾಪ್ತಿಯ ನಿರ್ಬಂಧವು ದೇಶವು ತನ್ನ ಮುಂದುವರಿದ ‘ಫತಾಹ್’ (Fatah) ಸರಣಿಯ ದೀರ್ಘ-ಶ್ರೇಣಿಯ ಕ್ಷಿಪಣಿ ಅಥವಾ ಗೈಡೆಡ್ ರಾಕೆಟ್ ವ್ಯವಸ್ಥೆಯನ್ನು ಪರೀಕ್ಷಿಸಲು ಸಜ್ಜಾಗಿದೆ ಎಂಬ ಬಲವಾದ ಅನುಮಾನಗಳಿಗೆ ಕಾರಣವಾಗಿದೆ.

750 ಕಿ.ಮೀ ವಾಯುಪ್ರದೇಶ ನಿರ್ಬಂಧವೇಕೆ ಮುಖ್ಯ? ಸಾಮಾನ್ಯವಾಗಿ ಸಣ್ಣ ಮಿಲಿಟರಿ ತಾಲೀಮುಗಳಿಗೆ ಇಷ್ಟು ದೊಡ್ಡ ಪ್ರಮಾಣದ ವಾಯುಪ್ರದೇಶವನ್ನು ಮುಚ್ಚುವುದಿಲ್ಲ. 750ಕಿ.ಮೀ ನಷ್ಟು ವಿಸ್ತಾರವಾದ ಪ್ರದೇಶವನ್ನು ನಿರ್ಬಂಧಿಸಿರುವುದು ದೀರ್ಘ ಶ್ರೇಣಿಯ ಕ್ಷಿಪಣಿ ಪರೀಕ್ಷೆಯ ಸೂಚನೆಯಾಗಿದೆ.

ಫತಾಹ್ ಸರಣಿಯ ಸಾಮರ್ಥ್ಯ: ಪಾಕಿಸ್ತಾನವು ಈಗಾಗಲೇ ಫತಾಹ್-1 ಮತ್ತು ಫತಾಹ್-2 ಕ್ಷಿಪಣಿ ವ್ಯವಸ್ಥೆಯನ್ನು ಹೊಂದಿದೆ. ಪ್ರಸ್ತುತ ಹೊಸದಾದ ಫತಾಹ್-3 ಅಥವಾ ಫತಾಹ್-4 ಆವೃತ್ತಿಯ ಪರೀಕ್ಷಾರ್ಥ ಉಡಾವಣೆ ನಡೆಯುವ ಸಾಧ್ಯತೆಯಿದೆ ಎಂದು ರಕ್ಷಣಾ ವಿಶ್ಲೇಷಕರು ಅಂದಾಜಿಸಿದ್ದಾರೆ.

ಯುದ್ಧ ವಿಮಾನಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ, ನೆಲದಿಂದಲೇ ನಿಖರವಾಗಿ ಗುರಿ ತಲುಪುವ ಸಾಂಪ್ರದಾಯಿಕ ಕ್ಷಿಪಣಿ ಬಲವನ್ನು ಹೆಚ್ಚಿಸಿಕೊಳ್ಳಲು ಪಾಕ್ ಸೇನೆಯು ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ.

ಮತ್ತಷ್ಟು ಓದಿ: ‘ಆಪರೇಷನ್ ಸಿಂಧೂರ್’ ಡಾಕ್ಯುಮೆಂಟರಿಗೆ ಬೆಚ್ಚಿದ ಪಾಕಿಸ್ತಾನ; ತಡರಾತ್ರಿ 2 ಗಂಟೆಗೆ ಪಾಕ್ ಸೇನೆ ಪ್ರತಿಕ್ರಿಯೆ

ಅಮೆರಿಕ ರಾಯಭಾರಿಯ ಕಾಶ್ಮೀರ ಹೇಳಿಕೆ ಮತ್ತು ಪಾಕ್ ಆಕ್ರೋಶ ಕಾಶ್ಮೀರ ಭಾರತದ ಪ್ರಮುಖ ಭಾಗ: ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಸೆರ್ಗಿಯೊ ಗೋರ್ ಅವರು ಶ್ರೀನಗರಕ್ಕೆ ಭೇಟಿ ನೀಡಿ, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಭೇಟಿಯಾದ ಸಂದರ್ಭದಲ್ಲಿ, “ಕಾಶ್ಮೀರ ಭಾರತದ ಪ್ರಮುಖ ಮತ್ತು ಸುಂದರ ಭಾಗ” ಎಂದು ಹೇಳಿಕೆ ನೀಡಿದ್ದರು.

ಪಾಕಿಸ್ತಾನದಿಂದ ಸಮನ್ಸ್: ಈ ಹೇಳಿಕೆಯಿಂದ ತೀವ್ರ ಕಂಗಾಲಾದ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಇಸ್ಲಾಮಾಬಾದ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಿ ತೀವ್ರ ಪ್ರತಿಭಟನೆ ದಾಖಲಿಸಿದೆ. ಅಮೆರಿಕದ ಈ ರಾಜತಾಂತ್ರಿಕ ಹೇಳಿಕೆಯ ಬೆನ್ನಲ್ಲೇ ಪಾಕಿಸ್ತಾನ ಬೃಹತ್ ವಾಯುಪ್ರದೇಶ ನಿರ್ಬಂಧಿಸಿರುವುದು ಜಾಗತಿಕ ಮಟ್ಟದಲ್ಲಿ ತನ್ನ ಸೇನಾ ಶಕ್ತಿ ಪ್ರದರ್ಶಿಸುವ ತಂತ್ರವೇ ಎಂಬ ಚರ್ಚೆ ಹುಟ್ಟುಹಾಕಿದೆ.

ಫತಾಹ್ ಕ್ಷಿಪಣಿಯ ವಿಶೇಷತೆ: ಪಾಕಿಸ್ತಾನದ ಫತಾಹ್ ವ್ಯವಸ್ಥೆಯು ಬಹು-ಉಡಾವಣಾ ರಾಕೆಟ್ ವ್ಯವಸ್ಥೆಯಾಗಿದ್ದು (MLRS), ಶತ್ರುಪಡೆಯ ರಕ್ಷಣಾ ಕವಚಗಳನ್ನು ತಪ್ಪಿಸಿ ನಿಖರ ಗುರಿಯನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿಕೊಳ್ಳಲಾಗಿದೆ.

ಭಾರತೀಯ ಸೇನೆಯ ಹದ್ದಿನ ಕಣ್ಣು: ಪಾಕಿಸ್ತಾನದ ಗಡಿ ಭಾಗ ಹಾಗೂ ವಾಯುಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಯೊಂದು ಚಲನವಲನಗಳು ಮತ್ತು ಸಂಭಾವ್ಯ ಕ್ಷಿಪಣಿ ಪರೀಕ್ಷೆಗಳ ಮೇಲೆ ಭಾರತೀಯ ವಾಯುಪಡೆ ಹಾಗೂ ಗುಪ್ತಚರ ರೇಡಾರ್‌ಗಳು ತೀವ್ರ ನಿಗಾ ಇರಿಸಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ