ಭಾರತದಲ್ಲಿ ಚುನಾವಣೆ ನಡೆಸಿದ ರೀತಿಯನ್ನು ಶ್ಲಾಘಿಸಿದ ಪಾಕಿಸ್ತಾನದ ನಾಯಕ ಶಿಬ್ಲಿ ಫರಾಝ್

"ಎಷ್ಟು ಸರಾಗವಾಗಿ ಅಧಿಕಾರವನ್ನು ವರ್ಗಾಯಿಸಲಾಯಿತು. ನಾವು ಕೂಡ ಅದೇ ಪರಿಸ್ಥಿತಿಯಲ್ಲಿರಲು ಬಯಸುತ್ತೇವೆ. ಈ ದೇಶವು ನ್ಯಾಯಸಮ್ಮತತೆಗಾಗಿ ಹೋರಾಡುತ್ತಿದೆ. ಇಲ್ಲಿ, ಚುನಾವಣೆಯಲ್ಲಿ ಸೋತವರು ಒಪ್ಪಿಕೊಳ್ಳುವುದಿಲ್ಲ ಮತ್ತು ವಿಜೇತರು ಅವರ ಸ್ವಂತ ಇಚ್ಛೆಯಂತೆ ಚುನಾಯಿತರಾಗುತ್ತಾರೆ. ಈ ರೀತಿಯ ವಿಧಾನವು ನಮ್ಮ ರಾಜಕೀಯ ವ್ಯವಸ್ಥೆಯನ್ನು ಟೊಳ್ಳು ಮಾಡಿದೆ ಎಂದು ಫರಾಝ್ ಹೇಳಿದ್ದಾರೆ.

ಭಾರತದಲ್ಲಿ ಚುನಾವಣೆ ನಡೆಸಿದ ರೀತಿಯನ್ನು ಶ್ಲಾಘಿಸಿದ ಪಾಕಿಸ್ತಾನದ ನಾಯಕ ಶಿಬ್ಲಿ ಫರಾಝ್
ಸೈಯದ್ ಶಿಬ್ಲಿ ಫರಾಝ್
Follow us
|

Updated on: Jun 13, 2024 | 5:29 PM

ಲಾಹೋರ್ ಜೂನ್ 13: ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ಸೈಯದ್ ಶಿಬ್ಲಿ ಫರಾಝ್ (Syed Shibli Faraz) ಅವರು ಇತ್ತೀಚೆಗೆ ಮುಕ್ತಾಯಗೊಂಡ ಸಾರ್ವತ್ರಿಕ ಚುನಾವಣೆಗಳನ್ನು ಮುಕ್ತ ಮತ್ತು ನ್ಯಾಯಯುತ ರೀತಿಯಲ್ಲಿ ನಡೆಸಿದ್ದಕ್ಕಾಗಿ ಭಾರತವನ್ನು ಶ್ಲಾಘಿಸಿದ್ದು, ತಮ್ಮ ದೇಶದಲ್ಲಿಯೂ ಇದೇ ರೀತಿಯ ಪ್ರಕ್ರಿಯೆಯನ್ನು ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ (Pakistan) ಸೆನೆಟ್‌ನಲ್ಲಿ ಮಾತನಾಡಿದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ನಾಯಕ ಫರಾಜ್, ಲೋಕಸಭೆ ಚುನಾವಣೆಗಳಲ್ಲಿ ಅಕ್ರಮ ನಡೆದಿದೆಯೇ ಎಂದು ಭಾರತದಲ್ಲಿ ಒಂದೇ ಒಂದು ಧ್ವನಿಯೂ ಪ್ರಶ್ನಿಸಲಿಲ್ಲ.

“ನಮ್ಮ ಶತ್ರು ದೇಶದ ಉದಾಹರಣೆಯನ್ನು ಉಲ್ಲೇಖಿಸಲು ನಾನು ಬಯಸುವುದಿಲ್ಲ. ಇತ್ತೀಚೆಗೆ, ಅಲ್ಲಿ (ಭಾರತ) ಚುನಾವಣೆಗಳು ನಡೆದವು. 800 ದಶಲಕ್ಷಕ್ಕೂ ಹೆಚ್ಚು ಜನರು ತಮ್ಮ ಮತವನ್ನು ಚಲಾಯಿಸಿದ್ದಾರೆ. ಸಾವಿರಾರು ಮತ್ತು ಲಕ್ಷಗಟ್ಟಲೆ ಮತಗಟ್ಟೆಗಳಿದ್ದು, ಕೆಲವು ಮತಗಟ್ಟೆಗಳನ್ನು ಒಂದು ಸ್ಥಳದಲ್ಲಿ ಕೇವಲ ಒಬ್ಬ ಮತದಾರರಿಗಾಗಿ ಸ್ಥಾಪಿಸಲಾಗಿದೆ. ಇವಿಎಂಗಳ ಸಹಾಯದಿಂದ ಇಡೀ ತಿಂಗಳ ಪ್ರಕ್ರಿಯೆ ನಡೆಸಲಾಯಿತು. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಒಂದೇ ಒಂದು ಧ್ವನಿ ಹೇಳುತ್ತಿದೆಯೇ? ಎಂದು ಸೈಯದ್ ಶಿಬ್ಲಿ ಫರಾಝ್ ಹೇಳಿದ್ದಾರೆ.

 ಫರಾಝ್ ಭಾರತವನ್ನು ಶ್ಲಾಘಿಸುತ್ತಿರುವುದು

“ಎಷ್ಟು ಸರಾಗವಾಗಿ ಅಧಿಕಾರವನ್ನು ವರ್ಗಾಯಿಸಲಾಯಿತು. ನಾವು ಕೂಡ ಅದೇ ಪರಿಸ್ಥಿತಿಯಲ್ಲಿರಲು ಬಯಸುತ್ತೇವೆ. ಈ ದೇಶವು ನ್ಯಾಯಸಮ್ಮತತೆಗಾಗಿ ಹೋರಾಡುತ್ತಿದೆ. ಇಲ್ಲಿ, ಚುನಾವಣೆಯಲ್ಲಿ ಸೋತವರು ಒಪ್ಪಿಕೊಳ್ಳುವುದಿಲ್ಲ ಮತ್ತು ವಿಜೇತರು ಅವರ ಸ್ವಂತ ಇಚ್ಛೆಯಂತೆ ಚುನಾಯಿತರಾಗುತ್ತಾರೆ. ಈ ರೀತಿಯ ವಿಧಾನವು ನಮ್ಮ ರಾಜಕೀಯ ವ್ಯವಸ್ಥೆಯನ್ನು ಟೊಳ್ಳು ಮಾಡಿದೆ ಎಂದು ಫರಾಝ್ ಹೇಳಿದ್ದಾರೆ. 543 ಸ್ಥಾನಗಳಿಗೆ ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆದಿದ್ದು, ಏಪ್ರಿಲ್ 19 ರಿಂದ ಪ್ರಾರಂಭವಾಗಿ ಜೂನ್ 1 ರಂದು ಕೊನೆಯ ಹಂತ ಮತ್ತು ಜೂನ್ 4 ರಂದು ಫಲಿತಾಂಶಗಳನ್ನು ಪ್ರಕಟಿಸಲಾಯಿತು.

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಕೇಂದ್ರದಲ್ಲಿ ಸರ್ಕಾರವನ್ನು ರಚಿಸಿದ್ದು, ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿದ್ದಾರೆ.

ಒಂದು ವಾರದ ಹಿಂದೆ ಪಾಕಿಸ್ತಾನದ ರಾಯಭಾರಿ ಹುಸೇನ್ ಹಕ್ಕಾನಿ ಕೂಡ ಭಾರತದ ಚುನಾವಣೆ ಮತ್ತು ಅದರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಗಳಿದ್ದರು.

“ಭಾರತದ ಪ್ರಜಾಪ್ರಭುತ್ವದ ಪರಿಮಾಣದಿಂದ ಪ್ರಭಾವಿತರಾಗದಿರುವುದು ಕಷ್ಟ. 44-ದಿನಗಳ ಚುನಾವಣಾ ಪ್ರಕ್ರಿಯೆ 900 ಮಿಲಿಯನ್ ಅರ್ಹ ಮತದಾರರು, 640 ಮಿಲಿಯನ್ ಮತದಾನ (ಅವುಗಳಲ್ಲಿ ಅರ್ಧದಷ್ಟು ಮಹಿಳೆಯರು), 67% ಮತದಾನ, 1.1 ಮಿಲಿಯನ್ ಮತಗಟ್ಟೆಗಳು, 5.5 ಮಿಲಿಯನ್ ಎಲೆಕ್ಟ್ರಾನಿಕ್ ಮತಯಂತ್ರಗಳು!” ಎಂದು ಹಕ್ಕಾನಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ದರ್ಶನ್​ ಮಾಡಿದ್ದೇ ಸರಿ ಎನ್ನುವ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಸುಮಲತಾ
ದರ್ಶನ್​ ಮಾಡಿದ್ದೇ ಸರಿ ಎನ್ನುವ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಸುಮಲತಾ
ರಾತ್ರಿ ಆದ್ರೂ ಜನಸಾಗರ ಕಂಡು ಕೈ ಎತ್ತಿ ಮುಗಿದ ರೋಹಿತ್, ಕೊಹ್ಲಿ
ರಾತ್ರಿ ಆದ್ರೂ ಜನಸಾಗರ ಕಂಡು ಕೈ ಎತ್ತಿ ಮುಗಿದ ರೋಹಿತ್, ಕೊಹ್ಲಿ
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಮುಂಬೈನಲ್ಲಿ ಜನಸಾಗರ ಮಧ್ಯೆ ಕಪ್ ಹಿಡಿದು ಕುಣಿದ ಬ್ಯೂ ಬಾಯ್ಸ್: ವಿಡಿಯೋ ನೋಡಿ
ಮುಂಬೈನಲ್ಲಿ ಜನಸಾಗರ ಮಧ್ಯೆ ಕಪ್ ಹಿಡಿದು ಕುಣಿದ ಬ್ಯೂ ಬಾಯ್ಸ್: ವಿಡಿಯೋ ನೋಡಿ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ