Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi in UAE: ಪ್ರಧಾನಿ ಮೋದಿಗಾಗಿ ಸಸ್ಯಾಹಾರ ಭೋಜನಕೂಟ ಆಯೋಜಿಸಿದ ಯುಎಇ ಅಧ್ಯಕ್ಷ ಅಲ್ ನಹ್ಯಾನ್

ಯುಎಇ ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ, "ನೀವು ನನಗೆ ನೀಡಿದ ಗೌರವ, ಸಹೋದರನೊಬ್ಬ ತನ್ನ ಸಹೋದರನನ್ನು ಭೇಟಿ ಮಾಡಿದಂತೆಯೇ. ಇದಕ್ಕಿಂತ ಬಾಂಧವ್ಯಕ್ಕೆ ಇನ್ನೊಂದು ಪುರಾವೆ ಇಲ್ಲ" ಎಂದು ಹೇಳಿದರು

PM Modi in UAE: ಪ್ರಧಾನಿ ಮೋದಿಗಾಗಿ ಸಸ್ಯಾಹಾರ ಭೋಜನಕೂಟ ಆಯೋಜಿಸಿದ ಯುಎಇ ಅಧ್ಯಕ್ಷ ಅಲ್ ನಹ್ಯಾನ್
ಯುಎಇ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Jul 15, 2023 | 8:27 PM

ಅಬುಧಾಬಿ ಜುಲೈ 15: ಪ್ರಧಾನಿ ನರೇಂದ್ರ ಮೋದಿ (Narendra Modi) ಒಂದು ದಿನದ ಭೇಟಿಗಾಗಿ ಅಬುಧಾಬಿ ತಲುಪಿದ್ದು, ಅಲ್ಲಿ ಅವರಿಗೆ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ (Sheikh Mohamed bin Zayed al Nahyan) ಔತಣಕೂಟ ಏರ್ಪಡಿಸಿದ್ದಾರೆ. ಈ ಔತಣಕೂಟದಲ್ಲಿ ಸಸ್ಯಾಹಾರವನ್ನೇ ಬಡಿಸಲಾಗಿದೆ. ಔತಣಕೂಟದ ಮೆನು ಕಾರ್ಡ್‌ನಲ್ಲಿ ಎಲ್ಲಾ ಊಟಗಳು ಸಸ್ಯಾಹಾರಿ ಮತ್ತು ಸಸ್ಯಜನ್ಯ ಎಣ್ಣೆಗಳಿಂದ ತಯಾರಿಸಿದ್ದು. ಯಾವುದೇ ಡೈರಿ ಅಥವಾ ಮೊಟ್ಟೆಯ ಉತ್ಪನ್ನಗಳನ್ನು ಹೊಂದಿರುವುದಿಲ್ಲ ಎಂದು ಬರೆಯಲಾಗಿದೆ.

ಅಧ್ಯಕ್ಷರ ಅರಮನೆಯಾದ ಕಸ್ರ್-ಅಲ್-ವತನ್ ನಲ್ಲಿ ನಡೆದ ಔತಣಕೂಟದಲ್ಲಿ ಮೊದಲಿಗೆ ಗೋಧಿ ಮತ್ತು ಖರ್ಜೂರದ ಜತೆ ಸ್ಥಳೀಯ ಸಾವಯವ ತರಕಾರಿಗಳ ಸಲಾಡ್ ಬಡಿಸಲಾಗಿದೆ. ನಂತರ ಮಸಾಲಾ ಸಾಸ್‌ನೊಂದಿಗೆ ಗ್ರಿಲ್ಡ್ ತರಕಾರಿಗಳನ್ನು ನೀಡಲಾಗಿದೆ. ಇದಾದ ಮೇಲೆ  ಹೂಕೋಸು ಮತ್ತು ಕ್ಯಾರೆಟ್ ತಂದೂರಿಯೊಂದಿಗೆ ಕಪ್ಪು ಉದ್ದಿನ ಬೇಳೆ ಮತ್ತು ಸ್ಥಳೀಯ ಗೋಧಿಯಿಂದ ಮಾಡಿದ ಭಕ್ಷ್ಯ ನೀಡಲಾಗಿದೆ. ಸಿಹಿತಿಂಡಿಗಳಿಗಾಗಿ ವಿವಿಧ ಹಣ್ಣುಗಳನ್ನು ನೀಡಲಾಯಿತು.

Menu

ಮೆನು

ಅಧ್ಯಕ್ಷರ ಭವನಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರಿಗೆ ಭವ್ಯ ಸ್ವಾಗತ ನೀಡಲಾಯಿತು. ಯುಎಇ ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ, “ನೀವು ನನಗೆ ನೀಡಿದ ಗೌರವ, ಸಹೋದರನೊಬ್ಬ ತನ್ನ ಸಹೋದರನನ್ನು ಭೇಟಿ ಮಾಡಿದಂತೆಯೇ. ಇದಕ್ಕಿಂತ ಬಾಂಧವ್ಯಕ್ಕೆ ಇನ್ನೊಂದು ಪುರಾವೆ ಇಲ್ಲ” ಎಂದು ಹೇಳಿದರು. ಯುಎಇಯಲ್ಲಿ ನಡೆಯಲಿರುವ COP-28 ಶೃಂಗಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ ಪ್ರಧಾನಿ, ನಾವು (ಭಾರತ-ಯುಎಇ) ಮೂರು ತಿಂಗಳೊಳಗೆ ಐತಿಹಾಸಿಕ ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ, ಅದು ನಿಮ್ಮ ಸಹಕಾರ ಮತ್ತು ಬದ್ಧತೆಯಿಲ್ಲದೆ ಸಾಧ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: PM Modi UAE Visit: ಅರಬ್ ರಾಷ್ಟ್ರಕ್ಕೆ ಮೋದಿ ಆಗಮನ, ಆತ್ಮೀಯವಾಗಿ ಬರಮಾಡಿಕೊಂಡ ಯುಎಇ ಕ್ರೌನ್ ಪ್ರಿನ್ಸ್

ಭಾರತ-ಯುಎಇ ದ್ವಿಪಕ್ಷೀಯ ವ್ಯಾಪಾರವು 20 ಪ್ರತಿಶತದಷ್ಟು ಬೆಳೆದಿದೆ.ಎರಡೂ ದೇಶಗಳು $ 85 ಬಿಲಿಯನ್  ವ್ಯಾಪಾರವನ್ನು ಸಾಧಿಸಿವೆ.”ನಾವು ಶೀಘ್ರದಲ್ಲೇ $ 100 ಬಿಲಿಯನ್ ಗುರಿಯನ್ನು ಸಾಧಿಸುತ್ತೇವೆ ಎಂದಿದ್ದಾರೆ ಮೋದಿ. ಯುಎಇ ಅಧ್ಯಕ್ಷರನ್ನು ಭೇಟಿ ಮಾಡುವ ಮೊದಲು, ಪ್ರಧಾನಿ ಮೋದಿ ಯುಎನ್ ಹವಾಮಾನ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಸುಲ್ತಾನ್ ಅಲ್ ಜಾಬರ್ ಅವರೊಂದಿಗೆ ಸಭೆ ನಡೆಸಿದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Sat, 15 July 23

ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ಬ್ರೇಕ್​ ಫೇಲ್​ ಆಗಿ ಮರಕ್ಕೆ ಡಿಕ್ಕಿ
ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ಬ್ರೇಕ್​ ಫೇಲ್​ ಆಗಿ ಮರಕ್ಕೆ ಡಿಕ್ಕಿ
ಫೆಲೈನ್ ಪ್ಯಾನ್​ಲ್ಯೂಕೊಪೇನಿಯಾ ವೈರಸ್ ಸೋಂಕು ಬೆಕ್ಕುಗಳಲ್ಲಿ ಸಾಂಕ್ರಾಮಿಕ!
ಫೆಲೈನ್ ಪ್ಯಾನ್​ಲ್ಯೂಕೊಪೇನಿಯಾ ವೈರಸ್ ಸೋಂಕು ಬೆಕ್ಕುಗಳಲ್ಲಿ ಸಾಂಕ್ರಾಮಿಕ!
ದಾವಣಗೆರೆ: ನೋಡ ನೋಡ್ತಿದ್ದಂತೆಯೇ ಸುಟ್ಟು ಕರಕಲಾದ ಕಾರುಗಳು
ದಾವಣಗೆರೆ: ನೋಡ ನೋಡ್ತಿದ್ದಂತೆಯೇ ಸುಟ್ಟು ಕರಕಲಾದ ಕಾರುಗಳು
ಕೋಲಾರ: ಹೆಲ್ಮೆಟ್ ತೆಗೀತಿದ್ದಂತೆ ಬುಸ್ ಎಂದ ನಾಗಪ್ಪ! ಆಮೇಲೇನಾಯ್ತು ನೋಡಿ
ಕೋಲಾರ: ಹೆಲ್ಮೆಟ್ ತೆಗೀತಿದ್ದಂತೆ ಬುಸ್ ಎಂದ ನಾಗಪ್ಪ! ಆಮೇಲೇನಾಯ್ತು ನೋಡಿ
ಧಗ ಧಗನೆ ಹೊತ್ತಿ ಉರಿದ ಸಿಲಿಂಡರ್ ತುಂಬಿದ್ದ ಟ್ರಕ್, ಹಲವು ಬಾರಿ ಸ್ಫೋಟ
ಧಗ ಧಗನೆ ಹೊತ್ತಿ ಉರಿದ ಸಿಲಿಂಡರ್ ತುಂಬಿದ್ದ ಟ್ರಕ್, ಹಲವು ಬಾರಿ ಸ್ಫೋಟ
VIDEO: ರನೌಟ್ ಮಾಡಲು ಕುಲ್ದೀಪ್ ಯಾದವ್​ನ ತಳ್ಳಿದ ರಿಷಭ್ ಪಂತ್
VIDEO: ರನೌಟ್ ಮಾಡಲು ಕುಲ್ದೀಪ್ ಯಾದವ್​ನ ತಳ್ಳಿದ ರಿಷಭ್ ಪಂತ್
VIDEO: ಗೆಲ್ಲುವ ಪಂದ್ಯವನ್ನು 'ಕೈ ಚೆಲ್ಲಿದ' ರಿಷಭ್ ಪಂತ್
VIDEO: ಗೆಲ್ಲುವ ಪಂದ್ಯವನ್ನು 'ಕೈ ಚೆಲ್ಲಿದ' ರಿಷಭ್ ಪಂತ್
Daily Devotional: ಸ್ತ್ರೀಯರಿಗೆ ಎಡಗಣ್ಣು ಅದುರುವುದರ ಹಿಂದಿನ ರಹಸ್ಯ
Daily Devotional: ಸ್ತ್ರೀಯರಿಗೆ ಎಡಗಣ್ಣು ಅದುರುವುದರ ಹಿಂದಿನ ರಹಸ್ಯ