AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೈಜರ್​ ಲಸಿಕೆ ಸ್ವೀಕರಿಸಿದ 48 ಗಂಟೆಯಲ್ಲಿ ಆರೋಗ್ಯ ಕಾರ್ಯಕರ್ತೆ ಸಾವು.. ಕಾರಣಕ್ಕಾಗಿ ಹುಡುಕಾಟ

ಫೈಜರ್​ ಸಂಸ್ಥೆಯ ಲಸಿಕೆ ಸ್ವೀಕರಿಸಿದ ಹಲವರಲ್ಲಿ ಸಮಸ್ಯೆ ತಲೆದೋರಿರುವ ಕುರಿತು ಈ ಹಿಂದೆ ವರದಿಗಳಾಗಿದ್ದವು. ಆದರೆ, ಈ ಪ್ರಕರಣದಲ್ಲಿ ಕೊರೊನಾ ಲಸಿಕೆ ಸ್ವೀಕರಿಸಿದ ನಂತರ ಸೋನಿಯಾ ಆರೋಗ್ಯದಲ್ಲಿ ಏರುಪೇರಾಗಿರುವ ಲಕ್ಷಣಗಳೇನೂ ಕಂಡುಬಂದಿರಲಿಲ್ಲ.

ಫೈಜರ್​ ಲಸಿಕೆ ಸ್ವೀಕರಿಸಿದ 48 ಗಂಟೆಯಲ್ಲಿ ಆರೋಗ್ಯ ಕಾರ್ಯಕರ್ತೆ ಸಾವು.. ಕಾರಣಕ್ಕಾಗಿ ಹುಡುಕಾಟ
ಸಾವಿಗೀಡಾದ ಸೋನಿಯಾ ಅಕೆವೆಡೋ
Skanda
|

Updated on:Jan 05, 2021 | 1:27 PM

Share

ಲಿಸ್ಬನ್​: ಫೈಜರ್​ ಸಂಸ್ಥೆಯ ಕೊವಿಡ್​ ಲಸಿಕೆ ಸ್ವೀಕರಿಸಿದ್ದ ಆರೋಗ್ಯ ಕಾರ್ಯಕರ್ತೆ ಇದ್ದಕ್ಕಿದ್ದಂತೆ ಮೃತಪಟ್ಟಿರುವ ಆಘಾತಕಾರಿ ಘಟನೆ ಪೋರ್ಚುಗಲ್​ನಲ್ಲಿ ನಡೆದಿದೆ. 41 ವರ್ಷ ವಯಸ್ಸಿನ ಆರೋಗ್ಯ ಕಾರ್ಯಕರ್ತೆ, ಸೋನಿಯಾ ಅಕೆವೆಡೋ ಎಂಬಾಕೆ ಲಸಿಕೆ ಸ್ವೀಕರಿಸಿದ 48 ಗಂಟೆಯಲ್ಲಿ ಸಾವಿಗೀಡಾಗಿದ್ದಾಳೆ.

ಫೈಜರ್​ ಸಂಸ್ಥೆಯ ಲಸಿಕೆ ಸ್ವೀಕರಿಸಿದ ಹಲವರಲ್ಲಿ ಸಮಸ್ಯೆ ತಲೆದೋರಿರುವ ಕುರಿತು ಈ ಹಿಂದೆ ವರದಿಗಳಾಗಿದ್ದವು. ಆದರೆ, ಈ ಪ್ರಕರಣದಲ್ಲಿ ಕೊರೊನಾ ಲಸಿಕೆ ಸ್ವೀಕರಿಸಿದ ನಂತರ ಸೋನಿಯಾ ಆರೋಗ್ಯದಲ್ಲಿ ಏರುಪೇರಾಗಿರುವ ಲಕ್ಷಣಗಳೇನೂ ಕಂಡುಬಂದಿರಲಿಲ್ಲ. ಅದಾಗ್ಯೂ ಆಕೆಯ ಸಾವಿಗೆ ಕಾರಣಗಳೇನು? ಲಸಿಕೆಯಿಂದ ಸಾವು ಸಂಭವಿಸಿರಬಹುದೇ? ಎಂಬ ವಿಚಾರಗಳು ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಬಯಲಾಗಬೇಕಿದೆ.

ಸೋನಿಯಾ ಅಕಾಲಿಕ ಸಾವಿನಿಂದ ದಿಗ್ಭ್ರಾಂತರಾಗಿರುವ ಆಕೆಯ ತಂದೆ ಅಬಿಲಿಯೋ ಅಕೆವೆಡೋ, ತನ್ನ ಮಗಳಿಗೆ ಯಾವುದೇ ಸಮಸ್ಯೆಗಳಿರಲಿಲ್ಲ. ಲಸಿಕೆ ಸ್ವೀಕರಿಸಿದ ನಂತರವೂ ಸಮಸ್ಯೆಗಳೇನೂ ಕಂಡುಬಂದಿಲ್ಲ. ಆಕೆ ಯಾವ ಕಾರಣದಿಂದ ಸಾವನ್ನಪ್ಪಿದ್ದಾಳೆ ಎಂದು ನನಗೆ ಗೊತ್ತಾಗುತ್ತಿಲ್ಲ. ಸದ್ಯಕ್ಕೆ ನನಗೆ ನನ್ನ ಮಗಳ ಸಾವು ಹೇಗಾಯಿತು ಎಂದು ಉತ್ತರ ಬೇಕಿದೆ ಎಂದು ಹೇಳಿರುವುದಾಗಿ ಡೈಲಿಮೇಲ್​ ವರದಿ ಮಾಡಿದೆ.

ಊಹೆಗೂ ಮೀರಿ ಅಡ್ಡಪರಿಣಾಮ ಬೀರುತ್ತಿದೆ ಫೈಜರ್ ಕೊರೊನಾ ಲಸಿಕೆ – ಡಾ. ಮಾನ್ಸೆಫ್ ಸ್ಲಾಯ್

Published On - 1:24 pm, Tue, 5 January 21

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್