Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೂಮಿ ಸಮೀಪ ಹಾದು ಹೋಗಿತ್ತು ಅನ್ಯಜೀವಿ! ಖಗೋಳಶಾಸ್ತ್ರಜ್ಞನ ಪುಸ್ತಕದಲ್ಲಿ ಅಚ್ಚರಿಯ ವಿಚಾರ

ವಾಷಿಂಗ್ಟನ್​: ಅನ್ಯಗ್ರಹಗಳಲ್ಲಿ ಜೀವಿಗಳಿವೆಯೇ ಎನ್ನುವ ಬಗ್ಗೆ ಅಧ್ಯಯನ ನಡೆಯುತ್ತಲೇ ಇದೆ. ಆದರೆ, ಈವರೆಗೆ ಅದಕ್ಕೆ ಉತ್ತರ ಸಿಕ್ಕಿಲ್ಲ. ಕೆಲ ವಿಜ್ಞಾನಿಗಳು ಬೇರೆ ಗ್ರಹದಲ್ಲಿ ಜೀವಿಗಳು ಇವೆ ಎಂದರೆ, ಇನ್ನೂ ಕೆಲವರು ಇಲ್ಲ ಎನ್ನುತ್ತಿದ್ದಾರೆ. ಈ ಮಧ್ಯೆ ಹಾರ್ವರ್ಡ್​ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞ ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಖಗೋಳಶಾಸ್ತ್ರಜ್ಞ ಅವಿ ಲೋಯೆಬ್​ ಬರೆದ Extraterrestrial: The First Sign of Intelligent Life Beyond Earth ಪುಸ್ತಕ ಈ ತಿಂಗಳಲ್ಲಿ ಬಿಡುಗಡೆ ಆಗುತ್ತಿದೆ. ಅವರು ಪುಸ್ತಕದಲ್ಲಿ ಬರೆದ ಪ್ರಕಾರ 2017ರಲ್ಲಿ […]

ಭೂಮಿ ಸಮೀಪ ಹಾದು ಹೋಗಿತ್ತು ಅನ್ಯಜೀವಿ! ಖಗೋಳಶಾಸ್ತ್ರಜ್ಞನ ಪುಸ್ತಕದಲ್ಲಿ ಅಚ್ಚರಿಯ ವಿಚಾರ
ಸಾಂದರ್ಭಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​

Updated on: Jan 04, 2021 | 4:42 PM

ವಾಷಿಂಗ್ಟನ್​: ಅನ್ಯಗ್ರಹಗಳಲ್ಲಿ ಜೀವಿಗಳಿವೆಯೇ ಎನ್ನುವ ಬಗ್ಗೆ ಅಧ್ಯಯನ ನಡೆಯುತ್ತಲೇ ಇದೆ. ಆದರೆ, ಈವರೆಗೆ ಅದಕ್ಕೆ ಉತ್ತರ ಸಿಕ್ಕಿಲ್ಲ. ಕೆಲ ವಿಜ್ಞಾನಿಗಳು ಬೇರೆ ಗ್ರಹದಲ್ಲಿ ಜೀವಿಗಳು ಇವೆ ಎಂದರೆ, ಇನ್ನೂ ಕೆಲವರು ಇಲ್ಲ ಎನ್ನುತ್ತಿದ್ದಾರೆ. ಈ ಮಧ್ಯೆ ಹಾರ್ವರ್ಡ್​ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞ ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ.

ಖಗೋಳಶಾಸ್ತ್ರಜ್ಞ ಅವಿ ಲೋಯೆಬ್​ ಬರೆದ Extraterrestrial: The First Sign of Intelligent Life Beyond Earth ಪುಸ್ತಕ ಈ ತಿಂಗಳಲ್ಲಿ ಬಿಡುಗಡೆ ಆಗುತ್ತಿದೆ. ಅವರು ಪುಸ್ತಕದಲ್ಲಿ ಬರೆದ ಪ್ರಕಾರ 2017ರಲ್ಲಿ ಭೂಮಿ ಸಮೀಪ ಯಾವುದೋ ಒಂದು ವಸ್ತು ಹಾದು ಹೋಗಿತ್ತಂತೆ.

ಅದು 2017ರ ಸಮಯ. ಈ ವೇಳೆ ಸೌರ ಮಂಡಲಕ್ಕೆ ಯಾವುದೋ ವಿಚಿತ್ರ ವಸ್ತು ಬಂದು ಹೋಗಿದೆ. ಇದು ತುಂಬಾನೇ ವೇಗವಾಗಿ ಚಲಿಸಿತ್ತು. ಇದು ಯಾವುದೋ ಬೇರೆ ಗ್ರಹದಿಂದಲೇ ಬಂದಿರಬೇಕು ಎಂದು ಅವಿ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ನಮ್ಮ ಭೂಮಿ ಬಳಿ ಹಾದು ಹೋದ ಯಾವುದೋ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಇದನ್ನು ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಒಂದು ಕಲ್ಪನೆ ಮಾಡುವುದಾದರೆ ಅನ್ಯಗ್ರಹ ಜೀವಿಗಳು ಇದನ್ನು ನಿರ್ಮಾಣ ಮಾಡಿರಬಹುದು ಎಂದು ಅವರು ಹೇಳಿದ್ದಾರೆ.

ನಾಸಾ ಭೂಮಿ ಸಮೀಪ ಹಾದು ಹೋದ ವಸ್ತುವಿಗೆ 1I/2017 U1 Oumuamua ಎಂದು ಹೆಸರಿಟ್ಟಿತ್ತು. ಸಿಗಾರ್​ ಆಕೃತಿ ಮಾದರಿಯಲ್ಲಿ ಈ ವಸ್ತು ಇತ್ತು. ನಮ್ಮ ಸೌರ ವ್ಯವಸ್ಥೆಯನ್ನು ಅವರು ಅಧ್ಯಯನ ಮಾಡಲು ಬಂದಿದ್ದ ಶಂಕೆ ಇದೆ ಎಂದು ಊಹಿಸಲಾಗಿದೆ.

ಏಲಿಯನ್​ಗಳಿಂದ ಮನುಷ್ಯರ ಫ್ರೆಂಡ್​ಶಿಪ್: ಇದು ಇಸ್ರೇಲಿ ಬಾಹ್ಯಾಕಾಶ ವಿಜ್ಞಾನಿಯ ಖಚಿತ ನುಡಿ

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್