AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕಾದಲ್ಲಿ ಒಬ್ಬರಿಗೆ ಒಂದೇ ಇಂಜೆಕ್ಷನ್.. ಹೆಚ್ಚು ಜನರಿಗೆ ಲಸಿಕೆ ಹಂಚುವ ‘ದೊಡ್ಡ’ಣ್ಣನ ತಂತ್ರ

ಅಮೆರಿಕಾದಲ್ಲಿ ಒಬ್ಬ ವ್ಯಕ್ತಿಗೆ ಎರಡು ಇಂಜೆಕ್ಷನ್​ ಮಾಡೆರ್ನಾ ಲಸಿಕೆ ನೀಡಬೇಕೆಂದು ನಿರ್ಧರಿಸಲಾಗಿತ್ತು. ಆದರೆ, ಈಗ ಅದರ ಅರ್ಧದಷ್ಟು ಅಂದರೆ ಒಂದು ಇಂಜೆಕ್ಷನ್​ ಮಾತ್ರ ನೀಡುವ ಕುರಿತು ಕೆಲ ತಜ್ಞರು ಸಲಹೆ ವ್ಯಕ್ತಪಡಿಸಿದ್ದಾರೆ.

ಅಮೆರಿಕಾದಲ್ಲಿ ಒಬ್ಬರಿಗೆ ಒಂದೇ ಇಂಜೆಕ್ಷನ್.. ಹೆಚ್ಚು ಜನರಿಗೆ ಲಸಿಕೆ ಹಂಚುವ ‘ದೊಡ್ಡ’ಣ್ಣನ ತಂತ್ರ
ಅಮೆರಿಕಾದಲ್ಲಿ ನಿಗದಿಗಿಂತ ಅರ್ಧಪಟ್ಟು ಕಡಿಮೆ ಲಸಿಕೆ ನೀಡಲು ನಿರ್ಧಾರ
Follow us
Skanda
| Updated By: ಸಾಧು ಶ್ರೀನಾಥ್​

Updated on:Jan 04, 2021 | 3:52 PM

ಇರುವ ಸೌಲಭ್ಯದಲ್ಲೇ ಹೆಚ್ಚು ಜನರನ್ನು ತಲುಪುವ ಸಲುವಾಗಿ ಅಮೆರಿಕಾ ಸರ್ಕಾರ ಪ್ರತಿಯೊಬ್ಬರಿಗೂ ಈಗ ನಿಗದಿಪಡಿಸಿರುವುದರ ಅರ್ಧದಷ್ಟು ಡೋಸ್​ ಕೊರೊನಾ ಲಸಿಕೆ ನೀಡುವ ಸಾಧ್ಯತೆ ಇದೆ. ಈ ಕುರಿತು ಆಪರೇಷನ್​ ವಾರ್ಪ್​ ಸ್ಪೀಡ್​ ವಿಭಾಗದ ಮುಖ್ಯಸ್ಥ ಮೌನ್ಸೆಫ್​ ಸ್ಲಾಯ್​ ಮಾಹಿತಿ ನೀಡಿದ್ದು, ಅರ್ಧ ಡೋಸ್​ ಲಸಿಕೆ ವಿತರಣೆ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಸದ್ಯ ಅಮೆರಿಕಾದಲ್ಲಿ ಒಬ್ಬ ವ್ಯಕ್ತಿಗೆ ಎರಡು ಇಂಜೆಕ್ಷನ್​ ಮಾಡೆರ್ನಾ ಲಸಿಕೆ ನೀಡಬೇಕೆಂದು ನಿರ್ಧರಿಸಲಾಗಿತ್ತು. ಆದರೆ, ಈಗ ಅದರ ಅರ್ಧದಷ್ಟು ಅಂದರೆ ಒಂದು ಇಂಜೆಕ್ಷನ್​ ಮಾತ್ರ ನೀಡುವ ಕುರಿತು ಕೆಲ ತಜ್ಞರು ಸಲಹೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಮೆರಿಕಾದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಅನುಮತಿ ಗಿಟ್ಟಿಸಿಕೊಂಡಿರುವ ಮಾಡೆರ್ನಾ ಸಂಸ್ಥೆ ಮತ್ತು ಅಲ್ಲಿನ ಆಹಾರ ಮತ್ತು ಔಷಧ ನಿಯಂತ್ರಣಾ ಮಂಡಳಿ ಜೊತೆ ಚರ್ಚೆಯೂ ನಡೆಯುತ್ತಿದೆ.

18 ರಿಂದ 55 ವಯೋಮಾನದವರಿಗೆ ಅರ್ಧದಷ್ಟು ಕೊರೊನಾ ಲಸಿಕೆ ಕೊಟ್ಟರೆ ಈಗ ಲಭ್ಯವಿರುವ ಲಸಿಕೆಯನ್ನು ದುಪ್ಪಟ್ಟು ಜನರಿಗೆ ಹಂಚಬಹುದು. ಅರ್ಧದಷ್ಟು ಲಸಿಕೆ ನೀಡಿದರೂ ಅದು ರೋಗ ನಿರೋಧಕ ಶಕ್ತಿ ಅಭಿವೃದ್ಧಿ ಪಡಿಸುವಲ್ಲಿ ಉತ್ತಮ ಪರಿಣಾಮ ಬೀರುತ್ತದೆ. ಹಾಗಾಗಿ, ಯಾವುದೇ ರೀತಿಯ ಸಮಸ್ಯೆ ಆಗಲಾರದು ಎನ್ನುವುದು ಮೌನ್ಸೆಫ್​ ಸ್ಲಾಯ್ ಅವರ ಅಭಿಮತ.

ಅಮೆರಿಕಾ ಸರ್ಕಾರ ಮಾಡೆರ್ನಾ ಲಸಿಕೆಯ ಜೊತೆಜೊತೆಗೆ ಫೈಜರ್​ ಸಂಸ್ಥೆಯ ಕೊರೊನಾ ಲಸಿಕೆಗೂ ಅನುಮತಿ ನೀಡಿದೆ. ಫೈಜರ್​ ಸಂಸ್ಥೆಯೂ ಒಬ್ಬ ವ್ಯಕ್ತಿಗೆ 2 ಡೋಸ್​ ನೀಡಲು ಸೂಚಿಸಿತ್ತು. ಆದರೆ, ಹೆಚ್ಚು ಜನರಿಗೆ ಲಸಿಕೆ ವಿತರಿಸುವ ದೃಷ್ಟಿಯಿಂದ ಈ ನಿಯಮವನ್ನು ಬದಲಾಯಿಸಿ ಅದನ್ನೂ ಅರ್ಧದಷ್ಟು ನೀಡಿದರೆ ಅಚ್ಚರಿಯಿಲ್ಲ.

ಕೊರೊನಾ ಲಸಿಕೆಯೊಂದಿಗೆ ರಾಜಕೀಯ ಬೆರಕೆ.. ಒಬ್ಬೊಬ್ಬರದ್ದೂ ಒಂದೊಂದು ರಾಗ: ಆರೋಗ್ಯ ಸಚಿವರು ಹೇಳಿದ್ದೇನು?

Published On - 3:47 pm, Mon, 4 January 21

‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್