AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಘರ್ಷದಲ್ಲಿ ನಾನು ಸಾವಿಗೀಡಾದೆ ಎಂದು ತೋರಿಸಿ ನನ್ನನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು: ಇಮ್ರಾನ್ ಖಾನ್

ನ್ಯಾಯಾಲಯದ ಸಂಕೀರ್ಣವನ್ನು ಪೊಲೀಸ್ ಸಿಬ್ಬಂದಿ ಸುತ್ತುವರಿಯುವ ದೃಶ್ಯಗಳನ್ನು ಹಂಚಿಕೊಂಡ ಇಮ್ರಾನ್ ಖಾನ್, ಸಂಘರ್ಷವನ್ನುಂಟು ಮಾಡಿ ನನ್ನನ್ನು "ನಿರ್ಮೂಲನೆ" ಮಾಡುವ ಯೋಜನೆಯಾಗಿದೆ ಇದು ಎಂದು ಹೇಳಿದ್ದಾರೆ.

ಸಂಘರ್ಷದಲ್ಲಿ ನಾನು ಸಾವಿಗೀಡಾದೆ ಎಂದು ತೋರಿಸಿ ನನ್ನನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು: ಇಮ್ರಾನ್ ಖಾನ್
ಇಮ್ರಾನ್ ಖಾನ್
ರಶ್ಮಿ ಕಲ್ಲಕಟ್ಟ
|

Updated on:Mar 21, 2023 | 4:49 PM

Share

ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ವಿಡಿಯೊ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಅವಕಾಶ ನೀಡುವಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರು ಮುಖ್ಯ ನ್ಯಾಯಮೂರ್ತಿ ಉಮರ್ ಅಟ್ಟಾ ಬಂಡಿಯಾಲ್ ಅವರನ್ನು ಒತ್ತಾಯಿಸಿದ್ದಾರೆ. ಬಂಡಿಯಾಲ್‌ಗೆ ಬರೆದ ಪತ್ರದಲ್ಲಿ ತಾನು ಖುದ್ದಾಗಿ ಹಾಜರಾದರೆ ಅವರು ನನ್ನನ್ನು ಕೊಲ್ಲಬಹುದು ಎಂದು ಹೇಳಿರುವ ಖಾನ್ ತಮ್ಮ ವಿರುದ್ಧ ದಾಖಲಾದ ಪ್ರಕರಣಗಳನ್ನು ಒಟ್ಟು ಸೇರಿಸಲು ವಿನಂತಿಸಿದ್ದಾರೆ. ಸೋಮವಾರ ದೇಶವನ್ನುದ್ದೇಶಿಸಿ ಮಾತನಾಡಿದ ಖಾನ್ ಶನಿವಾರ ಇಸ್ಲಾಮಾಬಾದ್‌ನ ನ್ಯಾಯಾಲಯ ಸಂಕೀರ್ಣದಲ್ಲಿ ತೋಷಖಾನಾ ಉಡುಗೊರೆ ಪ್ರಕರಣದ ವಿಚಾರಣೆಗೆ ಹಾಜರಾಗಲು ಬಂದಾಗ ತನ್ನನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು. ನನ್ನನ್ನು ಕೊಲ್ಲಲು ಸುಮಾರು 20 ಅಪರಿಚಿತ ಜನರು ಅಲ್ಲಿದ್ದರು ಎಂದು ಖಾನ್ ಹೇಳಿದ್ದಾರೆ.

ನ್ಯಾಯಾಲಯದ ಸಂಕೀರ್ಣವನ್ನು ಪೊಲೀಸ್ ಸಿಬ್ಬಂದಿ ಸುತ್ತುವರಿಯುವ ದೃಶ್ಯಗಳನ್ನು ಹಂಚಿಕೊಂಡ ಇಮ್ರಾನ್ ಖಾನ್, ಸಂಘರ್ಷವನ್ನುಂಟು ಮಾಡಿ ನನ್ನನ್ನು “ನಿರ್ಮೂಲನೆ” ಮಾಡುವ ಯೋಜನೆಯಾಗಿದೆ ಇದು ಎಂದು ಹೇಳಿದ್ದಾರೆ.

ನಾನು ನ್ಯಾಯಾಂಗ ಸಂಕೀರ್ಣದ ಗೇಟ್‌ಗಳನ್ನು ಪ್ರವೇಶಿಸಿದಾಗ ನನಗೆ ಎದುರಾದ ದೃಶ್ಯಗಳು. ‘ಅಜ್ಞಾತ’-ನಮಾಲೂಮ್ ಅಫ್ರಾಡ್-ನೊಂದಿಗೆ ಈ ಶಕ್ತಿಯು ನನ್ನನ್ನು ಜೈಲಿಗೆ ಹಾಕಲು ಅಲ್ಲ, ಆದರೆ ಅಣಕು ಹೋರಾಟವನ್ನು ನಡೆಸುವ ಮೂಲಕ ಮತ್ತು ನನ್ನ ಸಾವು ಅಪಘಾತ ಎಂದು ಬಿಂಬಿಸುವ ಮೂಲಕ ನನ್ನನ್ನು ನಿರ್ಮೂಲನೆ ಮಾಡುವ ಸಂಚು ಇತ್ತು ಎಂಬುದರಲ್ಲಿ ಯಾವುದೇ ಸಂದೇಹ ಬೇಡ. ಆದರೆ ರಕ್ಷಕನಾದ ಅಲ್ಲಾನು ಇತರ ಯೋಜನೆಗಳನ್ನು ಹೊಂದಿದ್ದನು ಎಂದು ಖಾನ್ ಟ್ವೀಟ್ ಮಾಡಿದ್ದಾರೆ.

ಅಲ್ಲಿದ್ದ ವ್ಯಕ್ತಿಗಳು ತಾವು ಹಿಡಿದಿದ್ದ ಹಗ್ಗದಿಂದ ಖಾನ್ ಅವರನ್ನು ಕತ್ತು ಹಿಸುಕಲು ಯೋಜಿಸಿದ್ದಾರೆ ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಆರೋಪಿಸಿದೆ.

ಇದನ್ನೂ ಓದಿ:Donald Trump: ಪೋರ್ನ್ ತಾರೆ ಸ್ಟಾರ್ಮಿ ಡೇನಿಯಲ್ಸ್ ಗೆ ಗೌಪ್ಯವಾಗಿ ಹಣ ನೀಡಿದ ಪ್ರಕರಣ; ಇಂದು ಮಾಜಿ ಯುಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ ಸಾಧ್ಯತೆ!

ಈ “ಅಪರಿಚಿತ ಜನರು” ಹೇಗೆ ಹೆಚ್ಚಿನ ಭದ್ರತಾ ವಲಯವನ್ನು (ನ್ಯಾಯಾಂಗ ಸಂಕೀರ್ಣ) ಪ್ರವೇಶಿಸಲು ಯಶಸ್ವಿಯಾದರು ಎಂಬುದರ ಕುರಿತು ತನಿಖೆ ನಡೆಸುವಂತೆ ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಮುಖ್ಯ ನ್ಯಾಯಾಧೀಶರನ್ನು ವಿನಂತಿಸಿದ್ದಾರೆ. ನಾನು ಹೀಗೆ ಹೊರ ಬಂದರೆ ಅವರು ನನ್ನನ್ನು ಕೊಲ್ಲಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ” ಎಂದು ಖಾನ್ ಹೇಳಿದ್ದಾರೆ.

ಮತ್ತಷ್ಟು  ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:18 pm, Tue, 21 March 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ