Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚ್ಛೇದನದ ಸಮಯದಲ್ಲಿ ರಾಜಕುಮಾರಿ ಡಯಾನಾ ತನ್ನ ಸ್ನೇಹಿತರಿಗೆ ಬರೆದ ಪತ್ರ ₹1 ಕೋಟಿಗೆ ಹರಾಜು

Princess Diana ವೇಲ್ಸ್ ರಾಜಕುಮಾರಿಯ ನಿಕಟ ಸ್ನೇಹಿತರಾದ ಸೂಸಿ ಮತ್ತು ತಾರೆಕ್ ಕಸ್ಸೆಮ್ ಅವರು ಈ ಪತ್ರಗಳನ್ನು 25 ವರ್ಷಗಳಿಗೂ ಹೆಚ್ಚು ಕಾಲ ಇಟ್ಟುಕೊಂಡಿದ್ದರು. ಈ ಪ್ರಮುಖ ದಾಖಲೆಗಳನ್ನು ತಮ್ಮ ಮಕ್ಕಳು ಅಥವಾ ಮೊಮ್ಮಕ್ಕಳಿಗೆ ವಹಿಸಿಕೊಡಲು ಅವರು ಬಯಸಲಿಲ್ಲ, ಆದ್ದರಿಂದ ಅವರು ಪತ್ರಗಳನ್ನು ಮಾರಾಟ ಮಾಡಲು ನಿರ್ಧರಿಸಿದರು

ವಿಚ್ಛೇದನದ ಸಮಯದಲ್ಲಿ ರಾಜಕುಮಾರಿ ಡಯಾನಾ ತನ್ನ ಸ್ನೇಹಿತರಿಗೆ ಬರೆದ ಪತ್ರ ₹1 ಕೋಟಿಗೆ ಹರಾಜು
ರಾಜಕುಮಾರಿ ಡಯಾನಾ
Follow us
ರಶ್ಮಿ ಕಲ್ಲಕಟ್ಟ
|

Updated on: Feb 19, 2023 | 2:35 PM

ಈಗ ಕಿಂಗ್ ಆಗಿರುವ ಚಾರ್ಲ್ಸ್‌ನಿಂದ (King Charles) ವಿಚ್ಛೇದನದ ಸಮಯದಲ್ಲಿ ರಾಜಕುಮಾರಿ ಡಯಾನಾ (Princess Diana) ಇಬ್ಬರು ಆತ್ಮೀಯ ಸ್ನೇಹಿತರಿಗೆ ಬರೆದ ಪತ್ರಗಳನ್ನು 1,41,150 ಪೌಂಡ್‌ಗಳಿಗೆ (1 ಕೋಟಿ ರೂ.) ಹರಾಜು ಮಾಡಲಾಗಿದೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ. ರಾಜಕುಮಾರಿ ಡಯಾನಾ ಅವರ ಆಪ್ತರಾದ ಸೂಸಿ ಮತ್ತು ತಾರೆಕ್‌ಗೆ ಬರೆದ “32 ಅತ್ಯಂತ ವೈಯಕ್ತಿಕ ಪತ್ರಗಳು ಮತ್ತು ಕಾರ್ಡ್‌ಗಳ ಗೌಪ್ಯ ಸಂಗ್ರಹ ಈಗ ಮಾರಾಟವಾಗಿದೆ ಎಂದು ಪ್ರಸ್ತುತ ಪತ್ರಿಕೆ ವರದಿ ಮಾಡಿದೆ. ಕೆಲವು ಪತ್ರಗಳು ಸಾರ್ವಜನಿಕವಾಗಿ ವಿಷಯ ಬಹಿರಂಗವಾದಾಗ ಅವಳು ಅನುಭವಿಸುತ್ತಿದ್ದ ಅಗಾಧವಾದ ನೋವನ್ನು ಹೇಳುತ್ತವೆ.ಆದರೂ ಅವಳ ಪಾತ್ರದ ಶಕ್ತಿ, ಅವಳ ಉದಾರ ಮತ್ತು ಹಾಸ್ಯದ ಮನೋಭಾವ ಇದರಲ್ಲಿ ಎದ್ದು ಕಾಣುತ್ತಿದೆ ಎಂದು ಎಂದು ಹರಾಜು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ವೇಲ್ಸ್ ರಾಜಕುಮಾರಿಯ ನಿಕಟ ಸ್ನೇಹಿತರಾದ ಸೂಸಿ ಮತ್ತು ತಾರೆಕ್ ಕಸ್ಸೆಮ್ ಅವರು ಈ ಪತ್ರಗಳನ್ನು 25 ವರ್ಷಗಳಿಗೂ ಹೆಚ್ಚು ಕಾಲ ಇಟ್ಟುಕೊಂಡಿದ್ದರು. ಈ ಪ್ರಮುಖ ದಾಖಲೆಗಳನ್ನು ತಮ್ಮ ಮಕ್ಕಳು ಅಥವಾ ಮೊಮ್ಮಕ್ಕಳಿಗೆ ವಹಿಸಿಕೊಡಲು ಅವರು ಬಯಸಲಿಲ್ಲ, ಆದ್ದರಿಂದ ಅವರು ಪತ್ರಗಳನ್ನು ಮಾರಾಟ ಮಾಡಲು ನಿರ್ಧರಿಸಿದರು. ರಾಜಕುಮಾರಿ ಡಯಾನಾ ಮತ್ತು ಸೂಸಿಗೆ ಪ್ರಿಯವಾದ ಕೆಲವು ಕಾರ್ಯಗಳಿಗೆ ಈ ಹಣವನ್ನು ವಿನಿಯೋಗಿಸಲು ಅವರು ಬಯಸಿದ್ದಾರೆ.

ರಾಜಕುಮಾರಿ ಡಯಾನಾ ಫೆಬ್ರವರಿ 17, 1996 ರಂದು ಬರೆದ ಪತ್ರವೊಂದರಲ್ಲಿ ಹೀಗೆ ಬರೆದಿದ್ದಾರೆ, “ಈ ವಿಚ್ಛೇದನದ ಮೂಲಕ ನಾನು ಏನನ್ನು ಅನುಭವಿಸುತ್ತೇನೆ ಎಂದು ಒಂದು ವರ್ಷದ ಹಿಂದೆ ನನಗೆ ತಿಳಿದಿದ್ದರೆ ನಾನು ಎಂದಿಗೂ ಒಪ್ಪಿಗೆ ನೀಡುತ್ತಿರಲಿಲ್ಲ. ಇದು ಹತಾಶೆ ಮತ್ತು ಕೆಟ್ಟ ಅನುಭವ.

ಇದನ್ನೂ ಓದಿ:Ancient Fridge: 5000 ವರ್ಷಗಳ ಹಿಂದಿನ ಪುರಾತನ ಹೋಟೆಲಿನ ಅವಶೇಷಗಳು ಪತ್ತೆ

ನನ್ನನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ತನ್ನ ಸ್ನೇಹಿತರೊಂದಿಗೆ ಸಂವಹನ ನಡೆಸುವ ಏಕೈಕ ಮಾರ್ಗವೆಂದರೆ ಪತ್ರಗಳು.ಇಲ್ಲಿ ನನ್ನ ಮಾತುಗಳು ನಿರಂತರವಾಗಿ ರೆಕಾರ್ಡ್ ಆಗಿರುವುದರಿಂದ ವೈಯಕ್ತಿಕ ಸಮಸ್ಯೆಗಳನ್ನು ಚರ್ಚಿಸುವುದು ಕಷ್ಟ ಎಂದು ಪತ್ರದಲ್ಲಿ ಬರೆಯಲಾಗಿದೆ. 1996 ಏಪ್ರಿಲ್ 28ರಂದು ಬರೆದ ಮತ್ತೊಂದು ಪತ್ರದಲ್ಲಿ, ರಾಜಕುಮಾರಿ ಡಯಾನಾ ಕಸ್ಸೆಮ್ಸ್‌ನೊಂದಿಗಿನ ಒಪೆರಾ ಅಧಿವೇಶನವನ್ನು ರದ್ದುಗೊಳಿಸಿದ್ದಕ್ಕಾಗಿ ಕ್ಷಮೆಯಾಚಿಸಿದರು, ತನ್ನ ವಿಚ್ಛೇದನದ ಬಗ್ಗೆ ತನ್ನ ದುಃಖವನ್ನು ಉಲ್ಲೇಖಿಸಿದ ಆಕೆ, “ಕೆಲವೊಮ್ಮೆ ತಲೆ ಎತ್ತಿ ನಿಲ್ಲುವುದು ತುಂಬಾ ಕಷ್ಟ. ಇಂದು ನಾನು ನನ್ನ ಮೊಣಕಾಲು ಊರಿ ಇದಕ್ಕಾಗಿ ಹಂಬಲಿಸುತ್ತೇನೆ. ಸಂಭವನೀಯ ವೆಚ್ಚವು ಅಗಾಧವಾಗಿದ್ದರೂ ನಾನು ವಿಚ್ಛೇದನ ನೀಡುವೆ ಎಂದಿದ್ದಾರೆ.

1996 ಡಿಸೆಂಬರ್ 17ರಲ್ಲಿ ಪತ್ರದಲ್ಲಿ ಸೂಸಿಗೆ ತಾನು “ಕ್ರಿಸ್‌ಮಸ್ ಪ್ರೇಮಿ” ಅಲ್ಲದ ಕಾರಣ ಡಿಸೆಂಬರ್ 24 ರಂದು ಪ್ರಯಾಣಿಸುವುದಾಗಿ ಡಯಾನಾ ಹೇಳಿದ್ದಾರೆ. “ನಾನು ಇಲ್ಲಿಯೇ ಉಳಿದಿದ್ದರೆ ನಾನೇ ಅಗ್ರಸ್ಥಾನದಲ್ಲಿರುತ್ತೇನೆ. 1997 ನಮಗೆಲ್ಲರಿಗೂ ಸುಲಭವಾದ ವರ್ಷವಾಗಲಿದೆ ಎಂದು ನಾನು ಭಾವಿಸುತ್ತೇನೆ.

ಆದಾಗ್ಯೂ, ರಾಜಕುಮಾರಿ ಡಯಾನಾ ಆಗಸ್ಟ್ 31, 1997 ರಂದು ಪ್ಯಾರಿಸ್ ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಭಾರತಕ್ಕೆ ಆಗಮಿಸಿದ ದುಬೈ ಪ್ರಿನ್ಸ್ ಶೇಖ್ ಹಮ್ದಾನ್​ಗೆ ಚಂಡೆ ವಾದ್ಯದ ಸ್ವಾಗತ
ಭಾರತಕ್ಕೆ ಆಗಮಿಸಿದ ದುಬೈ ಪ್ರಿನ್ಸ್ ಶೇಖ್ ಹಮ್ದಾನ್​ಗೆ ಚಂಡೆ ವಾದ್ಯದ ಸ್ವಾಗತ