ಮಗಳ ನೋಡಲೆಂದು ಕೆನಡಾಗೆ ಹೋಗಿ ಪತ್ನಿ ಕೊಂದು, ತನ್ನ ತಾಯಿಗೆ ವಿಡಿಯೋ ಕಳುಹಿಸಿದ ಪಂಜಾಬ್ ವ್ಯಕ್ತಿ

|

Updated on: Mar 19, 2024 | 10:14 AM

ಮಗಳ ನೋಡಲೆಂದು ಕೆನಡಾಗೆ ಹೋದ ಪಂಜಾಬ್​ನ ವ್ಯಕ್ತಿಯೊಬ್ಬ ಪತ್ನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮಗಳ ನೋಡಲೆಂದು ಕೆನಡಾಗೆ ಹೋಗಿ ಪತ್ನಿ ಕೊಂದು, ತನ್ನ ತಾಯಿಗೆ ವಿಡಿಯೋ ಕಳುಹಿಸಿದ ಪಂಜಾಬ್ ವ್ಯಕ್ತಿ
ಪೊಲೀಸ್​
Follow us on

ಮಗಳ ನೋಡಲೆಂದು ಕೆನಡಾಗೆ ಹೋದವನು ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ಮಗಳು ತಂದೆಯನ್ನು ನೋಡಬೇಕೆಂದು ಆತ ಭಾರತದಿಂದ ಕೆನಡಾಗೆ ಹೋಗಿದ್ದ, ಬಳಿಕ ಪತ್ನಿಯನ್ನು ಹತ್ಯೆ ಮಾಡಿ ತನ್ನ ತಾಯಿಗೆ ವಿಡಿಯೋ ಕಳುಹಿಸಿದ್ದಾನೆ. ಮೃತ ಮಹಿಳೆಯನ್ನು ಬಲ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ, ಕೃತ್ಯದ ಬಳಿಕ ಅದನ್ನು ವಿಡಿಯೋ ಮಾಡಿ ಲೂಧಿಯಾನದಲ್ಲಿರುವ ತನ್ನ ತಾಯಿಗೆ ಕಳುಹಿಸಿದ್ದಾನೆ.

ಕೆನಡಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಲೂಧಿಯಾನದ ಪಖೋವಾಲ್ ರಸ್ತೆಯ ನಿವಾಸಿ ಜಗಪ್ರೀತ್ ಸಿಂಗ್ ಅಲಿಯಾಸ್ ರಾಜು ಎಂದು ಗುರುತಿಸಲಾಗಿದೆ. ಮೃತನ ತಂದೆ ಹಿಮ್ಮತ್ ಸಿಂಗ್ ಅವರು ತಮ್ಮ ಮಗಳು ಬಲ್ವಿಂದರ್ ಕೌರ್ (41) 2000 ರಲ್ಲಿ ಲುಧಿಯಾನದ ಪಕ್ಹೋವಲ್ ರಸ್ತೆಯ ನಿವಾಸಿ ಜಗಪ್ರೀತ್ ಸಿಂಗ್ ಅಲಿಯಾಸ್ ರಾಜು ಅವರನ್ನು ವಿವಾಹವಾಗಿದ್ದರು.

ಮದುವೆಯ ಸಮಯದಲ್ಲಿ ಹುಡುಗನ ಮನೆಯವರ ಪ್ರತಿಯೊಂದು ಬೇಡಿಕೆಯನ್ನು ಈಡೇರಿಸಲಾಗಿತ್ತು. ಆದರೂ ಅತ್ತೆ-ಮಾವ ವರದಕ್ಷಿಣೆಗಾಗಿ ಮಗಳಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದರು ಎಂದು ಮೃತರ ಪೋಷಕರು ಹೇಳಿದ್ದಾರೆ.
ತನಗೆ ನಾಲ್ವರು ಹೆಣ್ಣು ಮಕ್ಕಳಿದ್ದು, ಈ ಕಾರಣದಿಂದ ಅಳಿಯನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಬಾಲ್ಯವಿವಾಹವಾಗಿದ್ದ ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ: ಗಂಡ ಅರೆಸ್ಟ್​​

ತಮ್ಮ ಮಗಳಿಗೆ ಹರ್ನೂರ್‌ಪ್ರೀತ್ ಕೌರ್ ಮತ್ತು ಗುರ್ನೂರ್ ಸಿಂಗ್ ಎಂಬ ಇಬ್ಬರು ಮಕ್ಕಳಿದ್ದಾರೆ ಎಂದು ಅವರು ಹೇಳಿದರು. 2020 ರಲ್ಲಿ ಐಇಎಲ್ಟಿಎಸ್ ಮಾಡಿದ ನಂತರ ಹರ್ನೂರ್ಪ್ರೀತ್ ಕೌರ್ ಅವರನ್ನು ಕೆನಡಾದಲ್ಲಿ ಅಧ್ಯಯನ ಮಾಡಲು ಕಳುಹಿಸಲಾಗಿದೆ.

ಜನವರಿ 2022 ರಲ್ಲಿ, ಬಲ್ವಿಂದರ್ ಕೌರ್ ತನ್ನ ಮಗಳನ್ನು ಭೇಟಿಯಾಗಲು ಕೆನಡಾಕ್ಕೆ ಹೋಗಿದ್ದಳು. ಆತನನ್ನು ಕೆನಡಾಕ್ಕೆ ಏಕೆ ಕರೆದಿಲ್ಲ ಎಂದು ಜಗಳವಾಡಿದ್ದ. ಜಗ್‌ಪ್ರೀತ್ ಸಿಂಗ್ ತನ್ನ ಮಗಳಿಗೆ ಪದೇ ಪದೇ ಕರೆ ಮಾಡಿ ಶೀಘ್ರದಲ್ಲೇ ಕೆನಡಾಕ್ಕೆ ಕರೆಸಿಕೊಳ್ಳುವಂತೆ ಒತ್ತಡ ಹೇರುತ್ತಿದ್ದ.

ಆರೋಪಿಗಳು ಒಂದು ವಾರದ ಹಿಂದೆ ಮಾರ್ಚ್ 11 ರಂದು ಕೆನಡಾಗೆ ಹೋಗಿದ್ದ. ನಡಾ ತಲುಪಿದ ಐದು ದಿನಗಳ ನಂತರ ಆತ ತನ್ನ ಪತ್ನಿ ಬಲ್ವಿಂದರ್ ಕೌರ್ ನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ. ಬಳಿಕ ವಿಡಿಯೋವನ್ನು ತನ್ನ ತಾಯಿಗೆ ಕಳುಹಿಸಿದ್ದ, ಆ ವಿಡಿಯೋ ನೋಡಿ ಬೆಚ್ಚಿಬಿದ್ದ ಕುಟುಂಬವು ಪೊಲೀಸರಿಗೆ ಮಾಹಿತಿ ನೀಡಿತ್ತು. ಆದಷ್ಟು ಬೇಗ ಮಗಳ ಮೃತದೇಹವನ್ನು ಭಾರತಕ್ಕೆ ತರಲು ಪಂಜಾಬ್ ಮತ್ತು ಕೇಂದ್ರ ಸರ್ಕಾರ ಸಹಾಯ ಮಾಡುವಂತೆ ಕುಟುಂಬ ಮನವಿ ಮಾಡಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ