ಇರಾನ್​ನ ಅಣು ವಿದ್ಯುತ್ ಸ್ಥಾವರಕ್ಕೆ ಹಾನಿ; ವಿಕಿರಣ ಸೋರಿಕೆಯಿಂದ ಗಲ್ಫ್ ರಾಷ್ಟ್ರಗಳಲ್ಲಿ ಸರ್ವನಾಶ?

Radioactive fallout will end life in gulf countries, warns Iran: ಇರಾನ್​ನ ಬುಶೆಹರ್​ನಲ್ಲಿರುವ ಪರಮಾಣು ವಿದ್ಯುತ್ ಘಟಕದ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಾಲ್ಕು ಬಾರಿ ದಾಳಿ ಮಾಡಿವೆ. ಇದರಿಂದ ಅಲ್ಲಿ ವಿಕಿರಣ ಸೋರಿಕೆಯ ಭೀತಿ ಉಂಟಾಗಿದೆ. ಘಟಕದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಕಾರ್ಮಿಕರನ್ನು ರಷ್ಯಾ ಅಲ್ಲಿಂದ ತೆರವುಗೊಳಿಸುತ್ತಿದೆ. ಈ ವಿಕಿರಣ ಸೋರಿಕೆಯಿಂದ ಗಲ್ಫ್ ರಾಷ್ಟ್ರಗಳಲ್ಲಿ ಸರ್ವನಾಶವಾಗಲಿ ಎಂದು ಇರಾನ್ ಎಚ್ಚರಿಸಿದೆ.

ಇರಾನ್​ನ ಅಣು ವಿದ್ಯುತ್ ಸ್ಥಾವರಕ್ಕೆ ಹಾನಿ; ವಿಕಿರಣ ಸೋರಿಕೆಯಿಂದ ಗಲ್ಫ್ ರಾಷ್ಟ್ರಗಳಲ್ಲಿ ಸರ್ವನಾಶ?
ಬುಶಹರ್​ನ ಪರಮಾಣ ವಿದ್ಯುತ್ ಘಟಕ
Image Credit source: @araghchi/X

Updated on: Apr 05, 2026 | 7:28 PM

ನವದೆಹಲಿ, ಏಪ್ರಿಲ್ 5: ಎರಡನೇ ವಿಶ್ವ ಮಹಾಯುದ್ಧದ ವೇಳೆ ಅಮೆರಿಕ ಜಪಾನ್​ನ ಹಿರೋಶಿಮಾ ಮತ್ತು ನಾಗಸಾಕಿಯಲ್ಲಿ ಹಾಕಿದ ಎರಡು ಅಣು ಬಾಂಬ್​ಗಳು ಅದೆಷ್ಟು ಘನಘೋರ ಪರಿಣಾಮ ಬೀರುತ್ತಿವೆ ಎಂಬುದನ್ನು ಬಹಳ ಸ್ಪಷ್ಟವಾಗಿ ತೋರಿಸಿವೆ. ಚೆರ್ನೋಬಿಲ್ ಅಣು ಸ್ಥಾವರದಲ್ಲಿ ವಿಕಿರಣ ಸೋರಿಕೆಯಾದ ಘೋರ ಘಟನೆ ನಾಲ್ಕು ದಶಕಗಳಾದರೂ ನೆನಪು ಮಾಸಿಲ್ಲ. ಇದೇ ವೇಳೆ, ಇರಾನ್​ನ ಬುಶೆಹರ್​ನಲ್ಲಿರುವ ಪರಮಾಣು ವಿದ್ಯುತ್ ಘಟಕದ (Bushehr Nuclear power plant) ಮೇಲೆ ಅಮೆರಿಕ ಮತ್ತು ಇಸ್ರೇಲ್ ಮಿಸೈಲ್ ದಾಳಿ ಮಾಡಿ ಹಾನಿಗೆಡವಿರುವ ಸುದ್ದಿ ಇದೆ. ಇದರಿಂದ ವಿಕಿರಣ ಸೋರಿಕೆಯಾಗುತ್ತಿರಬಹುದು ಎಂದು ಹೇಳಲಾಗುತ್ತಿದೆ. ಇರಾನ್ ಈ ಸಂಬಂಧ ಗಲ್ಫ್ ರಾಷ್ಟ್ರಗಳನ್ನು ಎಚ್ಚರಿಸಿದೆ. ವಿಕಿರಣದಿಂದ (radioactive) ಇರಾನ್​ಗಿಂತ ಗಲ್ಫ್ ರಾಷ್ಟ್ರಗಳಿಗೆ ಹೆಚ್ಚು ಹಾನಿಯಾಗುತ್ತದೆ ಎಂದು ಹೇಳಿದೆ.

ಬುಶೆಹರ್​ನ ಪರಮಾಣ ವಿದ್ಯುತ್ ಘಟಕದ ಮೇಲೆ ನಾಲ್ಕು ಬಾರಿ ಬಾಂಬ್ ಹಾಕಲಾಗಿದೆ. ಹೊರಬರುವ ರೇಡಿಯೋ ಆ್ಯಕ್ಟಿವ್​ನಿಂದ ಟೆಹರಾನ್​ಗಿಂತ ಗಲ್ಫ್ ರಾಷ್ಟ್ರಗಳ ರಾಜಧಾನಿಗಳಲ್ಲಿ ಜೀವ ಅಂತ್ಯಗೊಳ್ಳುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಸತ್ತರಾ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸುದ್ದಿ; ನಿಜವಾ, ವದಂತಿಯಾ?

ಇರಾನ್​ನ ಬುಶೆಹರ್ ನಗರವು ಗಲ್ಫ್ ರಾಷ್ಟ್ರಗಳಾದ ಕುವೇತ್, ಬಹರೇನ್ ಮತ್ತು ಕತಾರ್​ಗೆ ಬಹಳ ಸಮೀಪ ಇದೆ. ಹೀಗಾಗಿ, ಗಲ್ಫ್ ರಾಷ್ಟ್ರಗಳೂ ಕೂಡ ವಿಕಿರಣದ ದುಷ್ಪರಿಣಾಮ ಎದುರಿಸಬೇಕಾಗಬಹುದು.

ಇದೇ ವೇಳೆ, ಬುಶೆಹರ್ ಸ್ಥಾವರದಲ್ಲಿ ವಿಕಿರಣ ಸೋರಿಕೆಯಾಗುತ್ತಿರಬಹುದು ಎನ್ನುವ ಸುದ್ದಿಗೆ ಇಂಬುಕೊಡುವಂತೆ, ಆ ಘಟಕದಿಂದ ರಷ್ಯನ್ ಎಂಜಿನಿಯರುಗಳು ನಿರ್ಗಮಿಸುತ್ತಿದ್ದಾರೆ. ನೂರು ಮಂದಿ ರಷ್ಯನ್ ಮೂಲದ ಉದ್ಯೋಗಿಗಳು ತೊರೆದು ಹೋಗಿದ್ದಾರೆ. ಒಟ್ಟು ಅಲ್ಲಿ 198 ಮಂದಿ ಕೆಲಸ ಮಾಡುತ್ತಿದ್ದರು. ಎಲ್ಲರನ್ನೂ ಹೊರಸಾಗಿಸಲು ರಷ್ಯಾ ಪ್ರಯತ್ನಿಸುತ್ತಿದೆ. ಈ ಘಟಕವನ್ನು ರಷ್ಯಾ ನಿರ್ಮಿಸಿ, ನಿರ್ವಹಿಸುತ್ತಾ ಬಂದಿದೆ.

ಇದನ್ನೂ ಓದಿ: ಶತ್ರುಗಳ ನೆಲದಲ್ಲಿ ಬಿದ್ದಿದ್ದ ತನ್ನ ಪೈಲಟ್​ನನ್ನು ಅಮೆರಿಕ ರಕ್ಷಿಸಿಕೊಂಡಿದ್ದು ಹೇಗೆ?

ರೇಡಿಯೇಶನ್ ಮಟ್ಟ ಹೆಚ್ಚಿಲ್ಲ: ಅಟಾಮಿಕ್ ಎನರ್ಜಿ ಏಜೆನ್ಸಿ ಸ್ಪಷ್ಟನೆ

ಬುಶಹರ್​ನ ಪರಮಾಣ ವಿದ್ಯುತ್ ಘಟಕ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಯಾವತ್ತೂ ದಾಳಿಯಾಗಬಾರದು ಎಂದು ಅಂತರರಾಷ್ಟ್ರೀಯ ಅಣು ಇಂಧನ ಸಂಸ್ಥೆಯಾದ ಐಎಇಎ ಮುಖ್ಯಸ್ಥ ರಫೇಲ್ ಗ್ರಾಸಿ ಹೇಳಿದ್ದಾರೆ. ಹಾಗೆಯೇ, ಬುಶೆಹರ್​ನ ಘಟಕದಲ್ಲಿ ರೇಡಿಯೇಶನ್ ಮಟ್ಟ ಹೆಚ್ಚಿರುವ ಬಗ್ಗೆ ವರದಿಯಾಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us