AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ರಾಣಿ ಎಲಿಜಬೆತ್ II ಪಾರ್ಥಿವ ಶರೀರವನ್ನಿರಿಸಿದ್ದ ವೇಳೆ ಕುಸಿದು ಬಿದ್ದ ರಾಯಲ್ ಗಾರ್ಡ್

ಸ್ಥಿರತೆ ಇಲ್ಲದಂತೆ ವಾಲಿಕೊಂಡ ಆತ ಥಟ್ಟನೆ ಮುಂದಕ್ಕೆ ಮುಗ್ಗಿರಿಸಿ ಬೀಳುತ್ತಿರುವುದು ವಿಡಿಯೊದಲ್ಲಿದೆ. ಆತ ಬಿದ್ದಾಗ ಆತನಿಗೆ ಸಹಾಯ ಮಾಡಲು ಇಬ್ಬರು ತಕ್ಷಣವೇ ಧಾವಿಸಿದ್ದಾರೆ.

Watch ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ರಾಣಿ ಎಲಿಜಬೆತ್ II ಪಾರ್ಥಿವ ಶರೀರವನ್ನಿರಿಸಿದ್ದ ವೇಳೆ ಕುಸಿದು ಬಿದ್ದ ರಾಯಲ್ ಗಾರ್ಡ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Sep 15, 2022 | 3:52 PM

Share

ರಾಣಿ ಎಲಿಜಬೆತ್ II (Queen Elizabeth II) ಪಾರ್ಥಿವ ಶರೀರವನ್ನು ಬುಧವಾರ ವೆಸ್ಟ್‌ಮಿನಿಸ್ಟರ್ (Westminster Hall) ಹಾಲ್‌ನಲ್ಲಿರಿಸಿದಾಗ ಅಲ್ಲೇ ಸಮೀಪದಲ್ಲಿಯೇ ನಿಂತಿದ್ದ ರಾಯಲ್ ಗಾರ್ಡ್ ಕುಸಿದು ಬಿದ್ದ ಘಟನೆ ನಡೆದಿದೆ. ಕಪ್ಪು ಸಮವಸ್ತ್ರವನ್ನು ಧರಿಸಿರುವ ಗಾರ್ಡ್ ಮೊದಲಿಗೆ ರಾಣಿಯ ಶವಪೆಟ್ಟಿಗೆಯನ್ನು ಇರಿಸಲಾಗಿರುವ ಎತ್ತರದ ವೇದಿಕೆಯಾದ ಕ್ಯಾಟಫಾಲ್ಕ್‌ನಲ್ಲಿ ಮುಗ್ಗಿರಿಸಿ ಬೀಳುತ್ತಿರುವ ವಿಡಿಯೊ ವೈರಲ್ ಆಗಿದೆ. ಸ್ಥಿರತೆ ಇಲ್ಲದಂತೆ ವಾಲಿಕೊಂಡ ಆತ ಥಟ್ಟನೆ ಮುಂದಕ್ಕೆ ಮುಗ್ಗಿರಿಸಿ ಬೀಳುತ್ತಿರುವುದು ವಿಡಿಯೊದಲ್ಲಿದೆ. ಆತ ಬಿದ್ದಾಗ ಆತನಿಗೆ ಸಹಾಯ ಮಾಡಲು ಇಬ್ಬರು ತಕ್ಷಣವೇ ಧಾವಿಸಿದ್ದಾರೆ, ಪೊಲೀಸರು ಮತ್ತು ಇತರರು ಆತನಿಗೆ ಸಹಾಯ ಮಾಡುತ್ತಿದ್ದಂತೆ ಸಮಾರಂಭವನ್ನು ಲೈವ್-ಸ್ಟ್ರೀಮ್ ಮಾಡುತ್ತಿದ್ದ ಬಿಬಿಸಿ ಅದರ ಪ್ರಸಾರವನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಿದೆ.

ಅಂಗರಕ್ಷಕ, ಹೌಸ್‌ಹೋಲ್ಡ್ ಡಿವಿಷನ್ ಅಥವಾ ಲಂಡನ್ ಗೋಪುರದ ಯೋಮನ್ ವಾರ್ಡರ್‌ಗಳ ಸಿಬ್ಬಂದಿ ರಾಣಿಯ ಶವಪೆಟ್ಟಿಗೆಯನ್ನು ರಕ್ಷಿಸಲು ನಿರಂತರವಾಗಿ ಕರ್ತವ್ಯದಲ್ಲಿರುತ್ತಾರೆ.

ಸೋಮವಾರ (ಸೆಪ್ಟೆಂಬರ್ 19) ವೆಸ್ಟ್‌ಮಿನಿಸ್ಟರ್ ಅಬೆಯಲ್ಲಿ ನಡೆಯುವ ಸರ್ಕಾರಿ ಅಂತ್ಯಕ್ರಿಯೆಯ ಮೊದಲು ರಾಣಿ ಪಾರ್ಥಿವ ಶರೀರವನ್ನು ರಾಜಧಾನಿಯ ವೆಸ್ಟ್‌ಮಿನ್‌ಸ್ಟರ್ ಹಾಲ್‌ನಲ್ಲಿ ಇರಿಸಲಾಗಿದೆ. 70 ವರ್ಷಗಳ ಕಾಲ ಅಧಿಕಾರದಲ್ಲಿದ್ದ  ರಾಣಿ ತಮ್ಮ 96 ನೇ ವಯಸ್ಸಿನಲ್ಲಿ ಸೆಪ್ಟೆಂಬರ್ 8 ರಂದು ನಿಧನರಾದರು.

ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ 48 ಗಂಟೆಗಳಿಗೂ ಹೆಚ್ಚು ಕಾಲ ಕಾದ ನಂತರ  ಹತ್ತಾರು ಜನರ ಸಮ್ಮುಖದಲ್ಲಿ ಶವಪೆಟ್ಟಿಗೆಯನ್ನು ಬುಧವಾರ ಅಂತಿಮ ಬಾರಿಗೆ ಬಕಿಂಗ್ಹ್ಯಾಮ್ ಅರಮನೆಯಿಂದ ಹೊರತೆಗೆಯಲಾಯಿತು. ರಾಣಿ ಎಲಿಜಬೆತ್ II ಅವರಿಗೆ ಗುರುವಾರವಿಡೀ ಅಂತಿಮ ವಿದಾಯ ಹೇಳುವ ಅವಕಾಶ ಇಲ್ಲಿನ ಜನರಿಗೆ ನೀಡಲಾಗಿದೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ