AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ರಾಣಿ ಎಲಿಜಬೆತ್ II ಪಾರ್ಥಿವ ಶರೀರವನ್ನಿರಿಸಿದ್ದ ವೇಳೆ ಕುಸಿದು ಬಿದ್ದ ರಾಯಲ್ ಗಾರ್ಡ್

ಸ್ಥಿರತೆ ಇಲ್ಲದಂತೆ ವಾಲಿಕೊಂಡ ಆತ ಥಟ್ಟನೆ ಮುಂದಕ್ಕೆ ಮುಗ್ಗಿರಿಸಿ ಬೀಳುತ್ತಿರುವುದು ವಿಡಿಯೊದಲ್ಲಿದೆ. ಆತ ಬಿದ್ದಾಗ ಆತನಿಗೆ ಸಹಾಯ ಮಾಡಲು ಇಬ್ಬರು ತಕ್ಷಣವೇ ಧಾವಿಸಿದ್ದಾರೆ.

Watch ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ರಾಣಿ ಎಲಿಜಬೆತ್ II ಪಾರ್ಥಿವ ಶರೀರವನ್ನಿರಿಸಿದ್ದ ವೇಳೆ ಕುಸಿದು ಬಿದ್ದ ರಾಯಲ್ ಗಾರ್ಡ್
TV9 Web
| Edited By: |

Updated on: Sep 15, 2022 | 3:52 PM

Share

ರಾಣಿ ಎಲಿಜಬೆತ್ II (Queen Elizabeth II) ಪಾರ್ಥಿವ ಶರೀರವನ್ನು ಬುಧವಾರ ವೆಸ್ಟ್‌ಮಿನಿಸ್ಟರ್ (Westminster Hall) ಹಾಲ್‌ನಲ್ಲಿರಿಸಿದಾಗ ಅಲ್ಲೇ ಸಮೀಪದಲ್ಲಿಯೇ ನಿಂತಿದ್ದ ರಾಯಲ್ ಗಾರ್ಡ್ ಕುಸಿದು ಬಿದ್ದ ಘಟನೆ ನಡೆದಿದೆ. ಕಪ್ಪು ಸಮವಸ್ತ್ರವನ್ನು ಧರಿಸಿರುವ ಗಾರ್ಡ್ ಮೊದಲಿಗೆ ರಾಣಿಯ ಶವಪೆಟ್ಟಿಗೆಯನ್ನು ಇರಿಸಲಾಗಿರುವ ಎತ್ತರದ ವೇದಿಕೆಯಾದ ಕ್ಯಾಟಫಾಲ್ಕ್‌ನಲ್ಲಿ ಮುಗ್ಗಿರಿಸಿ ಬೀಳುತ್ತಿರುವ ವಿಡಿಯೊ ವೈರಲ್ ಆಗಿದೆ. ಸ್ಥಿರತೆ ಇಲ್ಲದಂತೆ ವಾಲಿಕೊಂಡ ಆತ ಥಟ್ಟನೆ ಮುಂದಕ್ಕೆ ಮುಗ್ಗಿರಿಸಿ ಬೀಳುತ್ತಿರುವುದು ವಿಡಿಯೊದಲ್ಲಿದೆ. ಆತ ಬಿದ್ದಾಗ ಆತನಿಗೆ ಸಹಾಯ ಮಾಡಲು ಇಬ್ಬರು ತಕ್ಷಣವೇ ಧಾವಿಸಿದ್ದಾರೆ, ಪೊಲೀಸರು ಮತ್ತು ಇತರರು ಆತನಿಗೆ ಸಹಾಯ ಮಾಡುತ್ತಿದ್ದಂತೆ ಸಮಾರಂಭವನ್ನು ಲೈವ್-ಸ್ಟ್ರೀಮ್ ಮಾಡುತ್ತಿದ್ದ ಬಿಬಿಸಿ ಅದರ ಪ್ರಸಾರವನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಿದೆ.

ಅಂಗರಕ್ಷಕ, ಹೌಸ್‌ಹೋಲ್ಡ್ ಡಿವಿಷನ್ ಅಥವಾ ಲಂಡನ್ ಗೋಪುರದ ಯೋಮನ್ ವಾರ್ಡರ್‌ಗಳ ಸಿಬ್ಬಂದಿ ರಾಣಿಯ ಶವಪೆಟ್ಟಿಗೆಯನ್ನು ರಕ್ಷಿಸಲು ನಿರಂತರವಾಗಿ ಕರ್ತವ್ಯದಲ್ಲಿರುತ್ತಾರೆ.

ಸೋಮವಾರ (ಸೆಪ್ಟೆಂಬರ್ 19) ವೆಸ್ಟ್‌ಮಿನಿಸ್ಟರ್ ಅಬೆಯಲ್ಲಿ ನಡೆಯುವ ಸರ್ಕಾರಿ ಅಂತ್ಯಕ್ರಿಯೆಯ ಮೊದಲು ರಾಣಿ ಪಾರ್ಥಿವ ಶರೀರವನ್ನು ರಾಜಧಾನಿಯ ವೆಸ್ಟ್‌ಮಿನ್‌ಸ್ಟರ್ ಹಾಲ್‌ನಲ್ಲಿ ಇರಿಸಲಾಗಿದೆ. 70 ವರ್ಷಗಳ ಕಾಲ ಅಧಿಕಾರದಲ್ಲಿದ್ದ  ರಾಣಿ ತಮ್ಮ 96 ನೇ ವಯಸ್ಸಿನಲ್ಲಿ ಸೆಪ್ಟೆಂಬರ್ 8 ರಂದು ನಿಧನರಾದರು.

ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ 48 ಗಂಟೆಗಳಿಗೂ ಹೆಚ್ಚು ಕಾಲ ಕಾದ ನಂತರ  ಹತ್ತಾರು ಜನರ ಸಮ್ಮುಖದಲ್ಲಿ ಶವಪೆಟ್ಟಿಗೆಯನ್ನು ಬುಧವಾರ ಅಂತಿಮ ಬಾರಿಗೆ ಬಕಿಂಗ್ಹ್ಯಾಮ್ ಅರಮನೆಯಿಂದ ಹೊರತೆಗೆಯಲಾಯಿತು. ರಾಣಿ ಎಲಿಜಬೆತ್ II ಅವರಿಗೆ ಗುರುವಾರವಿಡೀ ಅಂತಿಮ ವಿದಾಯ ಹೇಳುವ ಅವಕಾಶ ಇಲ್ಲಿನ ಜನರಿಗೆ ನೀಡಲಾಗಿದೆ.

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್