AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ರಾಣಿ ಎಲಿಜಬೆತ್ II ಪಾರ್ಥಿವ ಶರೀರವನ್ನಿರಿಸಿದ್ದ ವೇಳೆ ಕುಸಿದು ಬಿದ್ದ ರಾಯಲ್ ಗಾರ್ಡ್

ಸ್ಥಿರತೆ ಇಲ್ಲದಂತೆ ವಾಲಿಕೊಂಡ ಆತ ಥಟ್ಟನೆ ಮುಂದಕ್ಕೆ ಮುಗ್ಗಿರಿಸಿ ಬೀಳುತ್ತಿರುವುದು ವಿಡಿಯೊದಲ್ಲಿದೆ. ಆತ ಬಿದ್ದಾಗ ಆತನಿಗೆ ಸಹಾಯ ಮಾಡಲು ಇಬ್ಬರು ತಕ್ಷಣವೇ ಧಾವಿಸಿದ್ದಾರೆ.

Watch ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ರಾಣಿ ಎಲಿಜಬೆತ್ II ಪಾರ್ಥಿವ ಶರೀರವನ್ನಿರಿಸಿದ್ದ ವೇಳೆ ಕುಸಿದು ಬಿದ್ದ ರಾಯಲ್ ಗಾರ್ಡ್
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Sep 15, 2022 | 3:52 PM

Share

ರಾಣಿ ಎಲಿಜಬೆತ್ II (Queen Elizabeth II) ಪಾರ್ಥಿವ ಶರೀರವನ್ನು ಬುಧವಾರ ವೆಸ್ಟ್‌ಮಿನಿಸ್ಟರ್ (Westminster Hall) ಹಾಲ್‌ನಲ್ಲಿರಿಸಿದಾಗ ಅಲ್ಲೇ ಸಮೀಪದಲ್ಲಿಯೇ ನಿಂತಿದ್ದ ರಾಯಲ್ ಗಾರ್ಡ್ ಕುಸಿದು ಬಿದ್ದ ಘಟನೆ ನಡೆದಿದೆ. ಕಪ್ಪು ಸಮವಸ್ತ್ರವನ್ನು ಧರಿಸಿರುವ ಗಾರ್ಡ್ ಮೊದಲಿಗೆ ರಾಣಿಯ ಶವಪೆಟ್ಟಿಗೆಯನ್ನು ಇರಿಸಲಾಗಿರುವ ಎತ್ತರದ ವೇದಿಕೆಯಾದ ಕ್ಯಾಟಫಾಲ್ಕ್‌ನಲ್ಲಿ ಮುಗ್ಗಿರಿಸಿ ಬೀಳುತ್ತಿರುವ ವಿಡಿಯೊ ವೈರಲ್ ಆಗಿದೆ. ಸ್ಥಿರತೆ ಇಲ್ಲದಂತೆ ವಾಲಿಕೊಂಡ ಆತ ಥಟ್ಟನೆ ಮುಂದಕ್ಕೆ ಮುಗ್ಗಿರಿಸಿ ಬೀಳುತ್ತಿರುವುದು ವಿಡಿಯೊದಲ್ಲಿದೆ. ಆತ ಬಿದ್ದಾಗ ಆತನಿಗೆ ಸಹಾಯ ಮಾಡಲು ಇಬ್ಬರು ತಕ್ಷಣವೇ ಧಾವಿಸಿದ್ದಾರೆ, ಪೊಲೀಸರು ಮತ್ತು ಇತರರು ಆತನಿಗೆ ಸಹಾಯ ಮಾಡುತ್ತಿದ್ದಂತೆ ಸಮಾರಂಭವನ್ನು ಲೈವ್-ಸ್ಟ್ರೀಮ್ ಮಾಡುತ್ತಿದ್ದ ಬಿಬಿಸಿ ಅದರ ಪ್ರಸಾರವನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಿದೆ.

ಅಂಗರಕ್ಷಕ, ಹೌಸ್‌ಹೋಲ್ಡ್ ಡಿವಿಷನ್ ಅಥವಾ ಲಂಡನ್ ಗೋಪುರದ ಯೋಮನ್ ವಾರ್ಡರ್‌ಗಳ ಸಿಬ್ಬಂದಿ ರಾಣಿಯ ಶವಪೆಟ್ಟಿಗೆಯನ್ನು ರಕ್ಷಿಸಲು ನಿರಂತರವಾಗಿ ಕರ್ತವ್ಯದಲ್ಲಿರುತ್ತಾರೆ.

ಸೋಮವಾರ (ಸೆಪ್ಟೆಂಬರ್ 19) ವೆಸ್ಟ್‌ಮಿನಿಸ್ಟರ್ ಅಬೆಯಲ್ಲಿ ನಡೆಯುವ ಸರ್ಕಾರಿ ಅಂತ್ಯಕ್ರಿಯೆಯ ಮೊದಲು ರಾಣಿ ಪಾರ್ಥಿವ ಶರೀರವನ್ನು ರಾಜಧಾನಿಯ ವೆಸ್ಟ್‌ಮಿನ್‌ಸ್ಟರ್ ಹಾಲ್‌ನಲ್ಲಿ ಇರಿಸಲಾಗಿದೆ. 70 ವರ್ಷಗಳ ಕಾಲ ಅಧಿಕಾರದಲ್ಲಿದ್ದ  ರಾಣಿ ತಮ್ಮ 96 ನೇ ವಯಸ್ಸಿನಲ್ಲಿ ಸೆಪ್ಟೆಂಬರ್ 8 ರಂದು ನಿಧನರಾದರು.

ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ 48 ಗಂಟೆಗಳಿಗೂ ಹೆಚ್ಚು ಕಾಲ ಕಾದ ನಂತರ  ಹತ್ತಾರು ಜನರ ಸಮ್ಮುಖದಲ್ಲಿ ಶವಪೆಟ್ಟಿಗೆಯನ್ನು ಬುಧವಾರ ಅಂತಿಮ ಬಾರಿಗೆ ಬಕಿಂಗ್ಹ್ಯಾಮ್ ಅರಮನೆಯಿಂದ ಹೊರತೆಗೆಯಲಾಯಿತು. ರಾಣಿ ಎಲಿಜಬೆತ್ II ಅವರಿಗೆ ಗುರುವಾರವಿಡೀ ಅಂತಿಮ ವಿದಾಯ ಹೇಳುವ ಅವಕಾಶ ಇಲ್ಲಿನ ಜನರಿಗೆ ನೀಡಲಾಗಿದೆ.

Follow Us
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಅಡ್ಡಮತದಾನ ಬಿಜೆಪಿ-ಜೆಡಿಎಸ್ ಮೈತ್ರಿಗೆ ಒಡಕಾಗುತ್ತಾ?
ಅಡ್ಡಮತದಾನ ಬಿಜೆಪಿ-ಜೆಡಿಎಸ್ ಮೈತ್ರಿಗೆ ಒಡಕಾಗುತ್ತಾ?