AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಹುಳುಕು; ಶ್ರೀನಗರದಿಂದ ಶಾರ್ಜಾಕ್ಕೆ ಹೋಗುವ ವಿಮಾನಗಳು ಪಾಕ್​ ವಾಯುಪ್ರದೇಶ ಪ್ರವೇಶಿಸುವಂತಿಲ್ಲ !

ಶ್ರೀನಗರದಿಂದ ಶಾರ್ಜಾಕ್ಕೆ ವಿಮಾನಯಾನಕ್ಕೆ ಇತ್ತೀಚೆಗೆಷ್ಟೇ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ದರು. ಆಗನಿಂದಲೂ ಪಾಕಿಸ್ತಾನ ಕ್ಯಾತೆ ತೆಗೆಯುತ್ತಲೇ ಇದೆ.

ಪಾಕಿಸ್ತಾನದ ಹುಳುಕು; ಶ್ರೀನಗರದಿಂದ ಶಾರ್ಜಾಕ್ಕೆ ಹೋಗುವ ವಿಮಾನಗಳು ಪಾಕ್​ ವಾಯುಪ್ರದೇಶ ಪ್ರವೇಶಿಸುವಂತಿಲ್ಲ !
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Nov 03, 2021 | 12:15 PM

Share

ದೆಹಲಿ: ಜಮ್ಮು-ಕಾಶ್ಮೀರದ ಶ್ರೀನಗರದಿಂದ ಶಾರ್ಜಾ (ಯುನೈಟೆಡ್ ಅರಬ್​ ಎಮಿರೇಟ್ಸ್​)ಕ್ಕೆ ಹೋಗುವ ವಿಮಾನಗಳು  ಇನ್ನು ಮುಂದೆ ಪಾಕಿಸ್ತಾನದ ಭೂಪ್ರದೇಶದ ಮೇಲೆ ಹಾರಬಾರದು ಎಂದು ಆ ದೇಶ ಹೇಳಿದೆ. ಅಂದರೆ ಶ್ರೀನಗರದಿಂದ ಶಾರ್ಜಾಕ್ಕೆ ಪಾಕ್​ ವಾಯುಮಾರ್ಗದ ಮೂಲಕ ತೆರಳುತ್ತಿದ್ದ ವಿಮಾನಗಳು ಇನ್ನು ಮುಂದೆ ಆ ಮಾರ್ಗದಲ್ಲಿ ಹೋಗುವಂತಿಲ್ಲ. ಇದು ಜಮ್ಮು-ಕಾಶ್ಮೀರ ಜನರಿಗೆ ತೀವ್ರ ಸಮಸ್ಯೆಯನ್ನುಂಟು ಮಾಡಿದೆ. 

ಪಾಕಿಸ್ತಾನದ ಈ ಆದೇಶ ಅಂತಾರಾಷ್ಟ್ರೀಯ ವಾಯುಯಾನ ನಿಮಯಗಳ ಉಲ್ಲಂಘನೆಯಾಗಿದೆ. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO)  ನೀಡಿರುವ ವಾಯುಯಾನ ಸ್ವಾತಂತ್ರ್ಯವನ್ನು ಪಾಕಿಸ್ತಾನ ಇದೀಗ ಜಮ್ಮು-ಕಾಶ್ಮೀರ ಜನರಿಂದ ಕಿತ್ತುಕೊಂಡಂತಾಗಿದೆ. ಶಾರ್ಜಾಕ್ಕೆ ಹೋಗುವ ವಿಮಾನಗಳು ಪಾಕಿಸ್ತಾನದ ಭೂಪ್ರದೇಶದ ಮೇಲೆ ಹಾರುವಂತಿಲ್ಲ ಎಂದು ಅಲ್ಲಿನ ಸರ್ಕಾರ ಹೇಳಿದ್ದರಿಂದ ಇನ್ನು ಮುಂದೆ ಶ್ರೀನಗರದಿಂದ ಶಾರ್ಜಾಕ್ಕೆ ಹೋಗುವ ಫ್ಲೈಟ್​​ಗಳು ಉದಯಪುರ, ಅಹ್ಮದಾಬಾದ್​ ಮತ್ತು ಒಮನ್​ ಮೂಲಕ ಹಾರಬೇಕು. ಇದರಿಂದ ಒಂದರಿಂದ-ಒಂದೂವರೆ ತಾಸು ಹೆಚ್ಚಿನ ಪ್ರಯಾಣ ಮಾಡಬೇಕು ಮತ್ತು ಟಿಕೆಟ್​ ಬೆಲೆಯೂ ಹೆಚ್ಚಾಗಿದೆ. ಹೀಗಾಗಿ ಸಹಜವಾಗಿಯೇ ಜನರಿಗೆ ಹೊರೆಯಾಗಿ ಪರಿಣಮಿಸಲಿದೆ.

ಶ್ರೀನಗರದಿಂದ ಶಾರ್ಜಾಕ್ಕೆ ವಿಮಾನಯಾನಕ್ಕೆ ಇತ್ತೀಚೆಗೆಷ್ಟೇ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ದರು. ಆಗನಿಂದಲೂ ಪಾಕಿಸ್ತಾನ ಕ್ಯಾತೆ ತೆಗೆಯುತ್ತಲೇ ಇದೆ. ಈ ವಿಮಾನಗಳು ನಮ್ಮ ಭೂಪ್ರದೇಶದ ಮೇಲ್ಭಾಗದಲ್ಲಿ ಹಾರಾಟ ನಡೆಸಬಾರದು ಎಂದು ಇದೀಗ ಪಾಕಿಸ್ತಾನ ಹೇಳಿದೆ. ಈ ವಿಮಾನ ಹಾರಾಟ ಸಂಬಂಧ ಭಾರತ ಮತ್ತು ದುಬೈ ಸರ್ಕಾರಗಳ ಒಪ್ಪಂದದಿಂದ ಪಾಕಿಸ್ತಾನ ಸಿಟ್ಟಾಗಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಅಲ್ಲದೆ, ಶ್ರೀನಗರದಿಂದ ವಿಮಾನ ಹಾರಾಟ ಶುರುವಾಗುವುದಕ್ಕೂ ಮೊದಲು ನಮ್ಮ ವಾಯುಮಾರ್ಗವನ್ನು ಅವು ಪ್ರವೇಶಿಸಲು ಭಾರತ-ದುಬೈ ಸರ್ಕಾರಗಳು ಪಾಕಿಸ್ತಾನ ಸರ್ಕಾರದ ಅನುಮತಿ ಕೇಳಬೇಕಿತ್ತು ಎಂಬುದು ಆ ದೇಶದ ವಾದ.  ಇದೀಗ ಪಾಕಿಸ್ತಾನ ಸರ್ಕಾರ ತನ್ನ ನಿರ್ಧಾರವನ್ನು ಭಾರತದ ನಾಗರಿಕ ವಿಮಾನ ಯಾನ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಎರಡಕ್ಕೂ ತಿಳಿಸಿದೆ.

ಇದನ್ನೂ ಓದಿ: Puneeth Rajkumar: ನವೆಂಬರ್ 16ಕ್ಕೆ ಅರಮನೆ ಮೈದಾನದಲ್ಲಿ ಪುನೀತ್ ನಮನ ಕಾರ್ಯಕ್ರಮ; ಚಿತ್ರರಂಗದವರಿಗೆ ಮಾತ್ರ ಪ್ರವೇಶ

ಮಗನ ಕಣ್ಣಿಗೆ ಐ ಡ್ರಾಪ್​ ಬದಲು ಅಂಟು ಹಾಕಿದ ಅಪ್ಪ; ಬಾಲಕನ ದೃಷ್ಟಿ ಉಳಿಸಿಕೊಟ್ಟ ವೈದ್ಯರು

Follow Us
ಕಾವೇರಿ ನೀರು ಹಂಚಿಕೆ ವಿವಾದ: CWMA ನಿರ್ಧಾರಕ್ಕೆ ಕುಮಾರಸ್ವಾಮಿ ಆಕ್ರೋಶ
ಕಾವೇರಿ ನೀರು ಹಂಚಿಕೆ ವಿವಾದ: CWMA ನಿರ್ಧಾರಕ್ಕೆ ಕುಮಾರಸ್ವಾಮಿ ಆಕ್ರೋಶ
ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡೋ ಆರೋಪಕ್ಕೆ ಏನಂದ್ರು ಸಚಿವ?
ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡೋ ಆರೋಪಕ್ಕೆ ಏನಂದ್ರು ಸಚಿವ?
ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡ ಪೋಲಿಸ್ ಎಸ್ಐ ಮಗಳ ಭಾವುಕ ನುಡಿ
ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡ ಪೋಲಿಸ್ ಎಸ್ಐ ಮಗಳ ಭಾವುಕ ನುಡಿ
ವಿನಯ್ ಕುಲಕರ್ಣಿಗೆ ಜಾಮೀನು: ವಕೀಲ ಸುನೀಲ್ ಹೇಳಿದ್ದೇನು ನೋಡಿ
ವಿನಯ್ ಕುಲಕರ್ಣಿಗೆ ಜಾಮೀನು: ವಕೀಲ ಸುನೀಲ್ ಹೇಳಿದ್ದೇನು ನೋಡಿ
ಚಾಮರಾಜನಗರದಲ್ಲಿ ವಿಜಯ್ ಅಭಿನಯದ 'ಜನನಾಯಗನ್' ಸಿನಿಮಾ ಎತ್ತಂಗಡಿ!
ಚಾಮರಾಜನಗರದಲ್ಲಿ ವಿಜಯ್ ಅಭಿನಯದ 'ಜನನಾಯಗನ್' ಸಿನಿಮಾ ಎತ್ತಂಗಡಿ!
ಮೂರನೇ ಆಷಾಢ ಶುಕ್ರವಾರ: ಚಾಮುಂಡೇಶ್ವರಿ ದೇಗುಲಕ್ಕೆ ವಿಶೇಷ ಅಲಂಕಾರ
ಮೂರನೇ ಆಷಾಢ ಶುಕ್ರವಾರ: ಚಾಮುಂಡೇಶ್ವರಿ ದೇಗುಲಕ್ಕೆ ವಿಶೇಷ ಅಲಂಕಾರ
ಚಾಮುಂಡಿಬೆಟ್ಟದಲ್ಲಿ ಯಡಿಯೂರಪ್ಪ ಕುಟುಂಬದಿಂದ ವಿಶೇಷ ಪೂಜೆ
ಚಾಮುಂಡಿಬೆಟ್ಟದಲ್ಲಿ ಯಡಿಯೂರಪ್ಪ ಕುಟುಂಬದಿಂದ ವಿಶೇಷ ಪೂಜೆ
ಚಾಮುಂಡಿ ಸನ್ನಿಧಿಯಲ್ಲಿ ದರ್ಶನ್ ಭಾವಚಿತ್ರ ಹಿಡಿದು ಘೋಷಣೆ ಕೂಗಿದ ಅಭಿಮಾನಿ
ಚಾಮುಂಡಿ ಸನ್ನಿಧಿಯಲ್ಲಿ ದರ್ಶನ್ ಭಾವಚಿತ್ರ ಹಿಡಿದು ಘೋಷಣೆ ಕೂಗಿದ ಅಭಿಮಾನಿ
KRS ಜಲಾಶಯದ ಗೇಟ್ ಮುಂದೆ ಉರುಳು ಸೇವೆ ಮಾಡಿದ ಮಹಿಳಾ ಹೋರಾಟಗಾರರು
KRS ಜಲಾಶಯದ ಗೇಟ್ ಮುಂದೆ ಉರುಳು ಸೇವೆ ಮಾಡಿದ ಮಹಿಳಾ ಹೋರಾಟಗಾರರು
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ