AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಬಾಗಿಲಿಗೆ ಸ್ವಸ್ತಿಕ ಚಿಹ್ನೆ ಹಾಕಿ ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ತೆಲುಗು ಕುಟುಂಬ

ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯಕ್ಕೆ ಇತ್ತೀಚೆಗೆ ಸ್ಥಳಾಂತರಗೊಂಡ ತೆಲುಗು ಕುಟುಂಬವೊಂದು ತಮ್ಮ ಮನೆಯ ಮುಖ್ಯ ದ್ವಾರದ ಮೇಲೆ ‘ಸ್ವಸ್ತಿಕ' ಚಿಹ್ನೆಯ ಚಿತ್ರ ಅಳವಡಿಸಿ ಸಂಕಷ್ಟಕ್ಕೆ ಸಿಲುಕಿದೆ.

ಮನೆ ಬಾಗಿಲಿಗೆ ಸ್ವಸ್ತಿಕ ಚಿಹ್ನೆ ಹಾಕಿ ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ತೆಲುಗು ಕುಟುಂಬ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:May 19, 2023 | 6:28 PM

ಜೆದ್ದಾ: ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯಕ್ಕೆ ಇತ್ತೀಚೆಗೆ ಸ್ಥಳಾಂತರಗೊಂಡ ತೆಲುಗು ಕುಟುಂಬವೊಂದು ತಮ್ಮ ಮನೆಯ ಮುಖ್ಯ ದ್ವಾರದ ಮೇಲೆ ‘ಸ್ವಸ್ತಿಕ’ ಚಿಹ್ನೆಯ ಚಿತ್ರ ಅಳವಡಿಸಿ ಸಂಕಷ್ಟಕ್ಕೆ ಸಿಲುಕಿದೆ. ‘ಸ್ವಸ್ತಿಕ’ ಚಿಹ್ನೆಯು ಹಿಂದೂಗಳಿಗೆ ಪವಿತ್ರವಾಗಿದೆ. ಹೊಸ ವಾಹನಗಳು ಮತ್ತು ಮನೆಗಳ ಮೇಲೆ ಚಿಹ್ನೆಯನ್ನು ಮುದ್ರಿಸುವ ಕ್ರಮ ಸಾಮಾನ್ಯವಾಗಿದೆ. ಇದುವೇ ತೆಲುಗು ಕುಟುಂಬದವರಿಗೆ ಮುಳುವಾಗಿದೆ. ಗುಂಟೂರಿನ ಎಂ ಅರವಿಂದ್ ಅವರು ಇತ್ತೀಚೆಗಷ್ಟೇ ಸೌದಿ ಅರೇಬಿಯಾಕ್ಕೆ ಬಂದು ಪೂರ್ವ ಪ್ರಾಂತ್ಯದಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಅವರು, ತಮ್ಮ ಫ್ಲಾಟ್‌ನ ಮುಖ್ಯ ದ್ವಾರದ ಮೇಲೆ ಚಿಹ್ನೆಯನ್ನು ಬಿಡಿಸುವ ಮೂಲಕ ಕುಟುಂಬ ಸಮೇತ ಸೌದಿ ಜೀವನವನ್ನು ಇತ್ತೀಚೆಗೆ ಆರಂಭಿಸಿದ್ದರು.

ಅದೇ ಅಪಾರ್ಟ್​​ಮೆಂಟ್​ನಲ್ಲಿ ವಾಸಿಸುವ ಅರಬ್ ವ್ಯಕ್ತಿ ಈ ಚಿಹ್ನೆಯನ್ನು ಗಮನಿಸಿ, ತಪ್ಪಾಗಿ ಭಾವಿಸಿ ನಾಜಿ ಲಾಂಛನವನ್ನು ಪೋಸ್ಟ್ ಮಾಡಿದ್ದಾರೆ ಎಂದು ನೆರೆಹೊರೆಯವರಿಗೆ ತಿಳಿಸಿದ್ದಾರೆ. ನಾಜಿ ಲಾಂಛನವು ವಾಸ್ತವವಾಗಿ 45 ಡಿಗ್ರಿಳಷ್ಟು ಓರೆಯಾಗಿದೆ ಮತ್ತು ‘ಸ್ವಸ್ತಿಕ’ ಚಿಹ್ನೆಯಿಂದ ಭಿನ್ನವಾಗಿದೆ, ಆದರೆ ಅರಬ್ ವ್ಯಕ್ತಿಗೆ ಸ್ಪಷ್ಟವಾಗಿ ಈ ವ್ಯತ್ಯಾಸ ತಿಳಿದಿರಲಿಲ್ಲ.

ಅವರು ಮೊದಲು ಅರವಿಂದ್ ಅವರ ಕುಟುಂಬಕ್ಕೆ ಚಿಹ್ನೆಯನ್ನು ಅಳಿಸಲು ವಿನಂತಿಸಿದರು. ಆದರೆ, ಅವರೊಗೆ ಮನವರಿಕೆ ಮಾಡಿಕೊಡಲು ಮುಂದಾದ ಅರವಿಂದ್, ಚಿಹ್ನೆಯು ನಾಜಿ ಸಿದ್ಧಾಂತದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಹಿಂದೂ ಸಂಪ್ರದಾಯ ಪ್ರಕಾರ ಮಂಗಳಕರವಾದದ್ದು ಎಂದು ವಿವರಿಸಲು ಪ್ರಯತ್ನಿಸಿದರು. ಆದರೆ, ಅರಬ್ ವ್ಯಕ್ತಿಗೆ ಮನವರಿಕೆಯಾಗಲಿಲ್ಲ ಮತ್ತು ಈ ವಿಷಯವಾಗಿ ಪೊಲೀಸರಿಗೆ ದೂರು ನೀಡಿದರು. ಪರಿಣಾಮವಾಗಿ ಅಲ್ಲಿನ ಪೊಲೀಸರು ಅರವಿಂದ ಅವರನ್ನು ಬಂಧಿಸಿದ್ದಾರೆ.

ಮತ್ತಷ್ಟು ಓದಿ: Indigo Flight: ಇಂಡಿಗೋ ವಿಮಾನದಲ್ಲಿ ಕುಡಿದ ಅಮಲಿನಲ್ಲಿ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ, ಇಬ್ಬರು ಪ್ರಯಾಣಿಕರ ಬಂಧನ

ಅರವಿಂದ್ ಅವರ ಪತ್ನಿ ಲೀಲಾ ಕುಮಾರಿ ಈಗ ಸಹಾಯಕ್ಕಾಗಿ ಭಾರತೀಯ ರಾಯಭಾರ ಕಚೇರಿ ಮತ್ತು ತೆಲುಗು ಸಾಮಾಜಿಕ ಕಾರ್ಯಕರ್ತ ಮುಝಾಮಿಲ್ ಶೇಖ್ ಅವರನ್ನು ಸಂಪರ್ಕಿಸಿದ್ದಾರೆ. ಭಾರತೀಯ ಸಮುದಾಯದ ಪ್ರಮುಖ ಸ್ವಯಂಸೇವಕ ನಾಸ್ ವೊಕ್ಕಮ್ ಕೂಡ ಅರವಿಂದ್ ಅವರ ಬಿಡುಗಡೆಗೆ ಶ್ರಮಿಸುತ್ತಿದ್ದಾರೆ.

‘ಸ್ವಸ್ತಿಕ’ ಚಿಹ್ನೆಯ ಬಗ್ಗೆ ಪರಿಚಯವಿಲ್ಲದ ಜನರು ಅದನ್ನು ನಾಜಿ ಚಿಹ್ನೆಯೊಂದಿಗೆ ತಪ್ಪಾಗಿ ಗ್ರಹಿಸಿದ ಹಲವಾರು ನಿದರ್ಶನಗಳಿವೆ. ಆದರೆ, ಸೌದಿಯಲ್ಲಿ ಇದು ಮೊದಲ ನಿದರ್ಶನವಾಗಿರಬಹುದು ಎಂದು ಭಾವಿಸಲಾಗಿದೆ. ಈ ಚಿಹ್ನೆಯನ್ನು ಬಳಸಿದ್ದಕ್ಕಾಗಿ ಭಾರತೀಯನೊಬ್ಬ ಜೈಲುಪಾಲಾಗುವಂತಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:28 pm, Fri, 19 May 23

ಒಂದು ಟಗರನ್ನಿಟ್ಟುಕೊಂಡಿರುವ ರೌಡಿಯೊಬ್ಬ ಹೊಟ್ಟೆಪಾಡಿಗೆ ಕುರಿ ಕಾಯ್ತೀನಿ ಅಂದ
ಒಂದು ಟಗರನ್ನಿಟ್ಟುಕೊಂಡಿರುವ ರೌಡಿಯೊಬ್ಬ ಹೊಟ್ಟೆಪಾಡಿಗೆ ಕುರಿ ಕಾಯ್ತೀನಿ ಅಂದ
ಹೇಗಿದ್ದಾರೆ ನೋಡಿ ಅರ್ಜುನ್ ಜನ್ಯ ಮಗಳು; ತಂದೆಯನ್ನು ಅಭಿನಂದಿಸಿದ ರಜಿತಾ
ಹೇಗಿದ್ದಾರೆ ನೋಡಿ ಅರ್ಜುನ್ ಜನ್ಯ ಮಗಳು; ತಂದೆಯನ್ನು ಅಭಿನಂದಿಸಿದ ರಜಿತಾ
ಬೆಂಗಳೂರಿನಲ್ಲಿ ಬೆತ್ತಲೆ ಕಳ್ಳನ ಕೈಚಳಕ: ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬೆತ್ತಲೆ ಕಳ್ಳನ ಕೈಚಳಕ: ವಿಡಿಯೋ ನೋಡಿ
ಬಾಳೆಗಿಡ ನೆಲಕಚ್ಚಿದ್ದು ಕಂಡು ಆಘಾತಕ್ಕೊಳಗಾಗಿ ಪ್ರಜ್ಞೆತಪ್ಪಿ ಬಿದ್ದ ರೈತ
ಬಾಳೆಗಿಡ ನೆಲಕಚ್ಚಿದ್ದು ಕಂಡು ಆಘಾತಕ್ಕೊಳಗಾಗಿ ಪ್ರಜ್ಞೆತಪ್ಪಿ ಬಿದ್ದ ರೈತ
ರಾಮನಗರ ಜಿಲ್ಲೆಯ ಹಲವೆಡೆ ಭಾರಿ ಮಳೆ: ಮಾಗಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ರಾಮನಗರ ಜಿಲ್ಲೆಯ ಹಲವೆಡೆ ಭಾರಿ ಮಳೆ: ಮಾಗಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್