AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನಿಸ್ತಾನದಲ್ಲಿ ಜೈಶ್ ಎ ಮೊಹಮದ್ ಮುಖ್ಯಸ್ಥ ಮಸೂದ್ ಅಜರ್​ಗೆ ಆಶ್ರಯ: ಪಾಕಿಸ್ತಾನದ ಆರೋಪ ಅಲ್ಲಗಳೆದ ತಾಲೀಬಾನ್

ಅಫ್ಘಾನ್ ನೆಲದಲ್ಲಿ ಯಾವುದೇ ವಿದೇಶಿ ಶಸ್ತ್ರಧಾರಿ ಗುಂಪುಗಳ ಕಾರ್ಯಾಚರಣೆಗೆ ಅವಕಾಶ ಕೊಡುವುದಿಲ್ಲ ಎಂದು ತಾಲೀಬಾನ್ ಸ್ಪಷ್ಟಪಡಿಸಿದೆ.

ಅಫ್ಘಾನಿಸ್ತಾನದಲ್ಲಿ ಜೈಶ್ ಎ ಮೊಹಮದ್ ಮುಖ್ಯಸ್ಥ ಮಸೂದ್ ಅಜರ್​ಗೆ ಆಶ್ರಯ: ಪಾಕಿಸ್ತಾನದ ಆರೋಪ ಅಲ್ಲಗಳೆದ ತಾಲೀಬಾನ್
ಉಗ್ರ ಮಸೂದ್ ಅಜರ್
TV9 Web
| Edited By: |

Updated on: Sep 14, 2022 | 8:16 PM

Share

ಕಾಬೂಲ್: ಜೈಶ್-ಎ-ಮೊಹಮದ್​ (Jaish-e-Mohammed – JeM) ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್​ ಅಫ್ಘಾನಿಸ್ತಾನದಲ್ಲಿ ಆಶ್ರಯ ಪಡೆದಿದ್ದಾನೆ ಎನ್ನುವ ಪಾಕಿಸ್ತಾನದ ಆರೋಪವನ್ನು ತಾಲೀಬಾನ್ ನಿರಾಕರಿಸಿದೆ. ಅಫ್ಘಾನ್ ನೆಲದಲ್ಲಿ ಯಾವುದೇ ವಿದೇಶಿ ಶಸ್ತ್ರಧಾರಿ ಗುಂಪುಗಳ ಕಾರ್ಯಾಚರಣೆಗೆ ಅವಕಾಶ ಕೊಡುವುದಿಲ್ಲ ಎಂದು ತಾಲೀಬಾನ್ ಸ್ಪಷ್ಟಪಡಿಸಿದೆ.

ಉಗ್ರ ಮಸೂದ್ ಅಜರ್​ನನ್ನು ಹುಡುಕಿ, ಬಂಧಿಸುವಂತೆ ಅಫ್ಘಾನಿಸ್ತಾನಕ್ಕೆ ಮನವಿ ಮಾಡಲಾಗಿದೆ ಎನ್ನುವ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಇಲಾಖೆಯ ಹೇಳಿಕೆಗೆ ಸಂಬಂಧಿಸಿದ ವರದಿಗಳನ್ನು ತಾಲೀಬಾನ್ ನಿರಾಕರಿಸಿದೆ. ಅಫ್ಘಾನಿಸ್ತಾನದ ಕುನಾರ್ ಅಥವಾ ನಂಗಾರ್​ಹರ್ ಪ್ರಾಂತ್ಯದಲ್ಲಿ ಮಸೂದ್ ಅಜರ್ ಆಶ್ರಯ ಪಡೆದಿರಬಹುದು ಎಂದು ಪಾಕಿಸ್ತಾನವು ಶಂಕೆ ವ್ಯಕ್ತಪಡಿಸಿತ್ತು.

ಹಣಕಾಸು ಕ್ರಿಯಾ ಕಾರ್ಯಪಡೆಯ (Financial Action Task Force – FATF) ಸಭೆಗೆ ಸರಿಯಾಗಿ ಒಂದು ತಿಂಗಳು ಮೊದಲು ಈ ಮಹತ್ವದ ಬೆಳವಣಿಗೆ ನಡೆದಿದೆ. ಉಗ್ರಗಾಮಿಗಳಿಗೆ ಹಣಕಾಸು ಒದಗಿಸುವ ಅನುಮಾನವಿರುವ ಬೂದುಪಟ್ಟಿಯಲ್ಲಿ (Grey List) ಪ್ರಸ್ತುತ ಪಾಕಿಸ್ತಾನವು ಇದೆ. ಈ ಪಟ್ಟಿಯಿಂದ ಹೊರಗೆ ಬರಲು ಪಾಕಿಸ್ತಾನವು ಸತತ ಪ್ರಯತ್ನ ನಡೆಸುತ್ತಿದೆ.

‘ಅಫ್ಘಾನಿಸ್ತಾನವು ಯಾವುದೇ ಉಗ್ರಗಾಮಿ ಸಂಘಟನೆಯ ಚಟುವಟಿಕೆಗೆ ಅವಕಾಶ ನೀಡಿಲ್ಲ. ಯಾವುದೇ ಉಗ್ರಗಾಮಿ ಸಂಘಟನೆಯ ನಾಯಕನಿಗೆ ಆಶ್ರಯ ಕೊಟ್ಟಿಲ್ಲ. ಮಾಧ್ಯಮಗಳು ಪ್ರಕಟಿಸುತ್ತಿರುವ ವರದಿಗಳನ್ನು ನಂಬಲು ಆಗುವುದಿಲ್ಲ. ಇಂಥ ಆರೋಪಗಳನ್ನು ಮಾಡುವ ಮೊದಲು ಆಧಾರಗಳನ್ನು ಕೊಡಬೇಕು’ ಎಂದು ಅಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ಹೇಳಿದ್ದಾರೆ.

ಉಗ್ರ ಮಸೂದ್ ಅಜರ್ ಭಾರತ ಸರ್ಕಾರಕ್ಕೂ ಬೇಕಿದ್ದಾನೆ. ಆದರೆ ಈ ಬೆಳವಣಿಗೆಯ ಬಗ್ಗೆ ಭಾರತ ಸರ್ಕಾರವು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಜರ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪಾಕಿಸ್ತಾನವು ಅಫ್ಘಾನಿಸ್ತಾನದ ಮೇಲೆ ತಪ್ಪು ಹೊರಿಸಲು ಪ್ರಯತ್ನಿಸಿದೆ. ಮಸೂದ್ ಅಜರ್​ನನ್ನು ವಿಶ್ವಸಂಸ್ಥೆಯೂ ಭಯೋತ್ಪಾದಕ ಎಂದು ಹೇಳಿದೆ.

ಇಂಡಿಯನ್ ಏರ್​ಲೈನ್ಸ್​ನ ಪ್ರಯಾಣಿಕರ ವಿಮಾನವನ್ನು ಡಿಸೆಂಬರ್ 1999ರಲ್ಲಿ ಕಠ್ಮಂಡುವಿನಿಂದ ಅಪಹರಿಸಿದ್ದ ಉಗ್ರರು ಕಂದಹಾರ್​ಗೆ ಕೊಂಡೊಯ್ದಿದ್ದರು. ಉಗ್ರರ ಬೇಡಿಕೆಯಂತೆ ಉಗ್ರ ಮಸೂದ್ ಅಜರ್​ನನ್ನು ಭಾರತ ಸರ್ಕಾರವು ಬಿಡುಗಡೆ ಮಾಡಿತ್ತು. ನಂತರ ಮಸೂದ್ ಅಜರ್ ಜೈಶ್-ಎ-ಮೊಹಮದ್ ಸ್ಥಾಪಿಸಿ ಭಾರತದ ವಿರುದ್ಧ ಚಟುವಟಿಕೆ ತೀವ್ರಗೊಳಿಸಿದ್ದ.

ಹಣಕಾಸು ಕಾರ್ಯಪಡೆಗೆ (FATF) ಈ ಕುರಿತು ಈ ವರ್ಷದ ಆರಂಭದಲ್ಲಿ ಮಾಹಿತಿ ನೀಡಿದ್ದ ಪಾಕಿಸ್ತಾನ ಸರ್ಕಾರವು ಉಗ್ರ ಮಸೂದ್ ಅಜರ್​ನನ್ನು ಗುರುತಿಸಲು ಅಫ್ಘಾನಿಸ್ತಾನ ಆಡಳಿತದ ನೆರವು ಕೋರಲಾಗಿದೆ ಎಂದು ಹೇಳಿತ್ತು. ಇದಕ್ಕೂ ಮೊದಲು ಭಾರತ ಸರ್ಕಾರದ ಮನವಿಯನ್ನು ಒಪ್ಪಿಕೊಂಡಿದ್ದ ಅಂತರರಾಷ್ಟ್ರೀಯ ಸಮುದಾಯವು ಮಸೂದ್ ಅಜರ್ ಮತ್ತು ಲಷ್ಕರ್-ಎ-ತಯ್ಯಬಾ (LET) ಸಂಘಟನೆಯ ಸಂಸ್ಥಾಪಕ ಹಫೀಸ್ ಸಯೀದ್ ಮತ್ತು ಎಲ್​ಇಟಿ ಉಗ್ರ ಸಜ್ಜಿದ್ ಮಿರ್ ಅವರನ್ನು 30 ಅತಿಮುಖ್ಯ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಲಾಗಿತ್ತು.

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು