AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಯೋಮೆಟ್ರಿಕ್​​ ಡಿವೈಸ್​​ಗಳು ತಾಲಿಬಾನಿಗಳ ವಶಕ್ಕೆ; ಯುಎಸ್​ ಸರ್ಕಾರ, ಸೇನೆಗೆ ಸಹಾಯ ಮಾಡುತ್ತಿದ್ದ ಅಫ್ಘಾನಿಗಳಿಗೆ ಆತಂಕ

ಯುಎಸ್​​ ದಶಕಗಳ ಕಾಲ ಉಗ್ರರ ವಿರುದ್ಧ ನಡೆಸಿದ ಯುದ್ಧದಲ್ಲಿ ಈ ಬಯೋಮೆಟ್ರಿಕ್​ ಸಾಧನಗಳು ಪ್ರಮುಖ ಪಾತ್ರ ವಹಿಸಿದವುಗಳಾಗಿವೆ. 2011ರಲ್ಲಿ ಪಾಕಿಸ್ತಾನದಲ್ಲಿ ರೈಡ್​ ಮಾಡಿದಾಗ, ಒಸಮಾ ಬಿನ್​ ಲಾಡೆನ್​​ನ್ನು ಪತ್ತೆಹಚ್ಚಲೂ ಈ ಡಿವೈಸ್​​ಗಳೇ ಸಹಾಯ ಮಾಡಿದ್ದು.

ಬಯೋಮೆಟ್ರಿಕ್​​ ಡಿವೈಸ್​​ಗಳು ತಾಲಿಬಾನಿಗಳ ವಶಕ್ಕೆ; ಯುಎಸ್​ ಸರ್ಕಾರ, ಸೇನೆಗೆ ಸಹಾಯ ಮಾಡುತ್ತಿದ್ದ ಅಫ್ಘಾನಿಗಳಿಗೆ ಆತಂಕ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Aug 19, 2021 | 12:06 PM

Share

ಇಡೀ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್​ ಉಗ್ರರು ಇದೀಗ ಯುಎಸ್​ ಸೇನೆ ಬಳಸುತ್ತಿದ್ದ ಬಯೋಮೆಟ್ರಿಕ್​ ಡಿವೈಸ್​​( Biometrics Devices)ಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದು ನಿಜಕ್ಕೂ ಆತಂಕ ತರುವ ವಿಚಾರವಾಗಿದೆ. ಯುಎಸ್​ ಸರ್ಕಾರಕ್ಕಾಗಿ ಮತ್ತು ಯುಎಸ್​-ಅಫ್ಘಾನ್​ ಎರಡೂ ಸೇನಾ ಪಡೆಗಳಿಗಾಗಿ ಕೆಲಸ ಮಾಡುತ್ತಿರುವ ಅಫ್ಘಾನ್​ ಪ್ರಜೆಗಳನ್ನು ಗುರುತಿಸಲು ಈ ಬಯೋಮೆಟ್ರಿಕ್​ ಉಪಕರಣಗಳ ಬಳಕೆ ಮಾಡಲಾಗುತ್ತಿತ್ತು. ಇದೀಗ ಈ ಡಿವೈಸ್​ ವಶಪಡಿಸಿಕೊಂಡಿರುವ ತಾಲಿಬಾನ್​ ಇದರಲ್ಲಿರುವ ಮಾಹಿತಿಯನ್ನು ಬಳಸಿಕೊಂಡು ಅಂಥ ಪ್ರಜೆಗಳ ಮೇಲೆ ಪ್ರತೀಕಾರ ತೆಗೆದುಕೊಳ್ಳಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಬಯೋಮೆಟ್ರಿಕ್​ ಡಿವೈಸ್​​ಗಳ ಹೆಸರು HIIDE (Handheld Interagency Identity Detection Equipment). ಕಳೆದವಾರ ತಾಲಿಬಾನ್​ ಉಗ್ರರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​​ನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಕ್ರಮಣ ಮಾಡಿದ ಸಂದರ್ಭದಲ್ಲೇ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈ ಡಿವೈಸ್​​ನಲ್ಲಿ ಯುಎಸ್​ ಸರ್ಕಾರ ಮತ್ತು ಎರಡೂ ಸೇನಾಪಡೆಗಳಿಗಾಗಿ ಕೆಲಸ ಮಾಡುತ್ತಿರುವ ಅಫ್ಘಾನ್​ ಜನರ ಐರಿಸ್​ ಸ್ಕ್ಯಾನ್ (ಕಣ್ಣಿನ ಸ್ಕ್ಯಾನ್​), ಫಿಂಗರ್​ಪ್ರಿಂಟ್ಸ್​ ಮತ್ತು ಅವರ ವೈಯಕ್ತಿಕ ಮಾಹಿತಿಗಳು ಇವೆ. ಹೀಗಾಗಿ ಉಗ್ರರು ಅಂಥವರ ಡೇಟಾಬೇಸ್​​ನ್ನು ಸಲೀಸಲಾಗಿ ಪಡೆಯಬಹುದಾಗಿದೆ.

ಯುಎಸ್​​ ದಶಕಗಳ ಕಾಲ ಉಗ್ರರ ವಿರುದ್ಧ ನಡೆಸಿದ ಯುದ್ಧದಲ್ಲಿ ಈ ಬಯೋಮೆಟ್ರಿಕ್​ ಸಾಧನಗಳು ಪ್ರಮುಖ ಪಾತ್ರ ವಹಿಸಿದವುಗಳಾಗಿವೆ. 2011ರಲ್ಲಿ ಪಾಕಿಸ್ತಾನದಲ್ಲಿ ರೈಡ್​ ಮಾಡಿದಾಗ, ಒಸಮಾ ಬಿನ್​ ಲಾಡೆನ್​​ನ್ನು ಪತ್ತೆಹಚ್ಚಲೂ ಈ ಡಿವೈಸ್​​ಗಳೇ ಸಹಾಯ ಮಾಡಿದ್ದು. ಆದರೆ ಈ ಡಿವೈಸ್​​​ನ್ನು ಅಫ್ಘಾನಿಸ್ತಾನದ ಶೇ.80ರಷ್ಟು ಅಂದರೆ 25 ಮಿಲಿಯನ್​ ಜನರ ಬಯೋಮೆಟ್ರಿಕ್​ ಡಾಟಾ ಸಂಗ್ರಹ ಮಾಡಲು ಬಳಕೆ ಮಾಡಲಾಗುತ್ತಿತ್ತು ಎಂದೂ ವರದಿಯಾಗಿದೆ. ಒಟ್ಟಾರೆ ತಾಲಿಬಾನ್​ ಉಗ್ರರ ವಿರುದ್ಧ ಹೋರಾಟಕ್ಕೆ ಯುಎಸ್​ ಮತ್ತು ಅಫ್ಘಾನ್​ ಸೇನೆಗೆ ಸಹಾಯ ಮಾಡಿದ ಪ್ರತಿಯೊಬ್ಬರ ಮಾಹಿತಿಯೂ ಇದರಲ್ಲಿದ್ದು, ಅದನ್ನೇ ಇಟ್ಟುಕೊಂಡು ಉಗ್ರರು ಮತ್ತಷ್ಟು ಕ್ರೌರ್ಯ ಮೆರೆಯಬಹುದು ಎಂಬ ಆತಂಕ ಶುರುವಾಗಿದೆ.

ಇದನ್ನೂ ಓದಿ: ಕಾಬೂಲ್​ನಿಂದ ಭಾರತಕ್ಕೆ ಮರಳಿದ ಐಟಿಬಿಪಿ ಸ್ನಿಫರ್ ಶ್ವಾನಗಳು

ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣ; ಬಡವ, ಶ್ರೀಮಂತ ಕಾರಣ ಕೊಡುತ್ತಿರುವ ಆರೋಪಿಗಳು

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!