AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟರ್ಕಿ ಭೂಕಂಪ: ಆಸ್ಪತ್ರೆ ಕಟ್ಟಡ ಕಂಪಿಸುತ್ತಿದ್ದರೂ ನವಜಾತ ಶಿಶುಗಳಿರುವ ಇನ್​​ಕ್ಯುಬೇಟರ್ ಕಾಪಾಡಲು ಧಾವಿಸಿದ ದಾದಿಯರು; ಕರ್ತವ್ಯ ನಿಷ್ಠೆಗೆ ಶ್ಲಾಘನೆ

Turkey Earthquake ಟರ್ಕಿಯ ಗಾಜಿಯಾಂಟೆಪ್ ಪ್ರದೇಶದ ಆಸ್ಪತ್ರೆಯ ವಿಡಿಯೊವೊಂದು ಈಗ ವೈರಲ್ ಆಗಿದೆ. ಭೂಕಂಪದಲ್ಲಿ ಅಲ್ಲಿನ ಕಟ್ಟಡಗಳು ಕುಸಿದು ಬೀಳುತ್ತಿರುವಾಗ ಆಸ್ಪತ್ರೆಯ ನಿಯೊ ನಾಟಲ್ ಯುನಿಟ್ ನಲ್ಲಿ ಇನ್​​ಕ್ಯುಬೇಟರ್​​ನಲ್ಲಿರಿಸಿದ ಮಕ್ಕಳನ್ನು ಕಾಪಾಡಲು ನರ್ಸ್​​ಗಳು ಧಾವಿಸುತ್ತಿರುವುದು ವಿಡಿಯೊದಲ್ಲಿದೆ.

ಟರ್ಕಿ ಭೂಕಂಪ: ಆಸ್ಪತ್ರೆ ಕಟ್ಟಡ ಕಂಪಿಸುತ್ತಿದ್ದರೂ ನವಜಾತ ಶಿಶುಗಳಿರುವ ಇನ್​​ಕ್ಯುಬೇಟರ್ ಕಾಪಾಡಲು ಧಾವಿಸಿದ ದಾದಿಯರು; ಕರ್ತವ್ಯ ನಿಷ್ಠೆಗೆ ಶ್ಲಾಘನೆ
ಇನ್​​ಕ್ಯುಬೇಟರ್​​ನಲ್ಲಿರುವ ಶಿಶುಗಳನ್ನು ಕಾಪಾಡಿದ ದಾದಿಯರು
ರಶ್ಮಿ ಕಲ್ಲಕಟ್ಟ
|

Updated on: Feb 13, 2023 | 1:44 PM

Share

ದಶಕದಲ್ಲಿ ಸಂಭವಿಸಿದ ಪ್ರಬಲ ಭೂಕಂಪವು ಟರ್ಕಿ (Turkey) ಮತ್ತು ಸಿರಿಯಾ ( Syria) ಎರಡನ್ನೂ ಬೆಚ್ಚಿಬೀಳಿಸಿದ್ದು ಸಾವಿನ ಸಂಖ್ಯೆ 33,000 ದಾಟಿದೆ. ಆರು ದಿನಗಳ ವಿನಾಶದ ನಂತರವೂ ಅವಶೇಷಗಳ ಒಳಗಿನಿಂದ ಬದುಕುಳಿದವರ ವರದಿಗಳು ಭೂಕಂಪ ಪೀಡಿತ ಪ್ರದೇಶದಿಂದ ಬರುತ್ತಿವೆ.ಟರ್ಕಿಯ ಗಾಜಿಯಾಂಟೆಪ್(Gaziantep) ಪ್ರದೇಶದ ಆಸ್ಪತ್ರೆಯ ವಿಡಿಯೊವೊಂದು ಈಗ ವೈರಲ್ ಆಗಿದೆ. ಭೂಕಂಪದಲ್ಲಿ ಅಲ್ಲಿನ ಕಟ್ಟಡಗಳು ಕುಸಿದು ಬೀಳುತ್ತಿರುವಾಗ ಆಸ್ಪತ್ರೆಯ ನಿಯೊ ನಾಟಲ್ ಯುನಿಟ್ ನಲ್ಲಿ ಇನ್​​ಕ್ಯುಬೇಟರ್​​ನಲ್ಲಿರಿಸಿದ ಮಕ್ಕಳನ್ನು ಕಾಪಾಡಲು ನರ್ಸ್​​ಗಳು ಧಾವಿಸುತ್ತಿರುವುದು ವಿಡಿಯೊದಲ್ಲಿದೆ.

ಗಾಜಿಯಾಂಟೆಪ್ ದೇಶದ ಅತ್ಯಂತ ಕೆಟ್ಟ ಪೀಡಿತ ಸ್ಥಳಗಳಲ್ಲಿ ಒಂದಾಗಿದೆ. ವಿಡಿಯೊ ಕ್ಲಿಪ್ ಆಸ್ಪತ್ರೆಯ ಘಟಕದ ಒಳಗಿನಿಂದ ಸಿಸಿಟಿವಿ ರೆಕಾರ್ಡಿಂಗ್ ಆಗಿದ್ದು ಇದನ್ನು ಮೊದಲು ಟರ್ಕಿಶ್ ಪತ್ರಕರ್ತ ಆಂಡ್ರ್ಯೂ ಹಾಪ್ಕಿನ್ಸ್ ಹಂಚಿಕೊಂಡಿದ್ದಾರೆ. ಟರ್ಕಿ ಭೂಕಂಪದ ರಾತ್ರಿಯ ವಿಡಿಯೊದಲ್ಲಿ ಇಬ್ಬರು ದಾದಿಯರು ಪಲಾಯನ ಮಾಡುವ ಬದಲು ಬೇಬಿ ಇನ್‌ಕ್ಯುಬೇಟರ್‌ಗಳು ಬೀಳುವುದನ್ನು ತಡೆಯಲು ಗಾಜಿಯಾಂಟೆಪ್ ಆಸ್ಪತ್ರೆಯ ನವಜಾತ ಶಿಶುಗಳ ಆರೈಕೆ ಘಟಕಕ್ಕೆ ಧಾವಿಸಿರುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Turkey Earthquake: 34 ಸಾವಿರ ದಾಟಿದ ಸಾವಿನ ಸಂಖ್ಯೆ; ಟರ್ಕಿಯಲ್ಲಿ ಬಿಲ್ಡಿಂಗ್ ಕಾಂಟ್ರಾಕ್ಟರ್ಸ್​ಗೆ ಬಂಧನ ಭೀತಿ

ಆಸ್ಪತ್ರೆಯ ಕಟ್ಟಡದ ನಡುಗುತ್ತಿದ್ದು ಇಬ್ಬರೂ ನರ್ಸ್‌ಗಳು ಇನ್‌ಕ್ಯುಬೇಟರ್‌ಗಳನ್ನು ಹಿಡಿದುಕೊಂಡಿರುವುದು ಕಾಣಿಸುತ್ತದೆ. ಪ್ರಸ್ತುತ ಅಂಕಿಅಂಶಗಳ ಪ್ರಕಾರ, ಶೋಧ ಮತ್ತು ರಕ್ಷಣಾ ತಂಡಗಳು ಅವಶೇಷಗಳಲ್ಲಿ ಹೆಚ್ಚಿನ ಮೃತದೇಹಗಳನ್ನು ಪತ್ತೆ ಮಾಡುತ್ತಿದ್ದು ಸುಮಾರು 33,179 ಜನರು ಸತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ