AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವರು ವಿದೇಶದ ಬಾದಲ್ ನಂಜುಡಸ್ವಾಮಿ! ಮೊಮ್ಮಕ್ಕಳ ಆಟಿಕೆ ಬಳಸಿ ರಸ್ತೆ ಗುಂಡಿ ಬಗ್ಗೆ ಗಮನ ಸೆಳೆದ ಇಂಗ್ಲೆಂಡ್​ನ ವ್ಯಕ್ತಿ

ಇಂಗ್ಲೆಂಡ್​ನ ಎಸೆಕ್ಸ್​​​ನ ಕರಾವಳಿ ಪಟ್ಟಣ ಬ್ರೈಟ್​​ಲಿಂಗ್​ಸೀ ರಸ್ತೆ ಗುಂಡಿಗಳ ಬಗ್ಗೆ 66 ವರ್ಷದ ಆ್ಯಂಡಿ ಕಾನ್ರಾಯ್, ಮೊಮ್ಮಕ್ಕಳ ಆಟಿಕೆ ಬಳಸಿ ವಿಭಿನ್ನವಾಗಿ ಗಮನ ಸೆಳೆಯುವಂತೆ ಮಾಡಿದ್ದಾರೆ.

ಇವರು ವಿದೇಶದ ಬಾದಲ್ ನಂಜುಡಸ್ವಾಮಿ! ಮೊಮ್ಮಕ್ಕಳ ಆಟಿಕೆ ಬಳಸಿ ರಸ್ತೆ ಗುಂಡಿ ಬಗ್ಗೆ ಗಮನ ಸೆಳೆದ ಇಂಗ್ಲೆಂಡ್​ನ ವ್ಯಕ್ತಿ
ರಸ್ತೆ ಗುಂಡಿ ಗಮನ ಸೆಳೆಯಲು ಹೀಗೊಂದು ಯಶಸ್ವಿ ಪ್ರಯತ್ನImage Credit source: Facebook
ಗಣಪತಿ ಶರ್ಮಾ
|

Updated on: Apr 10, 2023 | 7:12 PM

Share

ಮುಖ್ಯಾಂಶಗಳು

  • ಇವರು ವಿದೇಶದ ಬಾದಲ್ ನಂಜುಡಸ್ವಾಮಿ!
  • ರಸ್ತೆ ಗುಂಡಿಗಳ ಬಗ್ಗೆ ಗಮನ ಸೆಳೆಯಲು ಇಂಗ್ಲೆಂಡ್​ನ ಎಸೆಕ್ಸ್​​​ ವ್ಯಕ್ತಿಯ ವಿನೂತನ ಪ್ರಯತ್ನ.
  • ಮೊಮ್ಮಕ್ಕಳ ಆಟಿಕೆಯಿಂದಲೇ ರಸ್ತೆ ಗುಂಡಿ ಮುಚ್ಚುವಂತೆ ಮಾಡಲು ಕಾರಣರಾದ ವ್ಯಕ್ತಿ.

ಲಂಡನ್: ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ರಸ್ತೆ ಗುಂಡಿಗಳ ಬಗ್ಗೆ ಗಮನ ಸೆಳೆಯಲು ಮಾಡಿದ್ದ ವಿಭಿನ್ನ ಪ್ರಯತ್ನಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆಡಳಿತ ವರ್ಗದ ಗಮನ ಸೆಳೆದದ್ದು ಹಳೆಯ ವಿಚಾರ. ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಗಮನ ಸೆಳೆಯಲು ಅವರು ಚಂದ್ರಯಾನ -2 ಯೋಜನೆಯ ಸಂದರ್ಭದಲ್ಲೇ ಗಗನಯಾನಿಯಂತೆ ಪೋಷಾಕು ಧರಿಸಿ ರಸ್ತೆಗಳಲ್ಲಿ ಸಂಚರಿಸಿದ್ದರು. ಇದರ ಚಿತ್ರಗಳು ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದ್ದವು. ಇದೀಗ ಇಂಗ್ಲೆಂಡ್​ನಲ್ಲೊಬ್ಬರು (England) ವ್ಯಕ್ತಿ ಬಾದಲ್ ನಂಜುಂಡಸ್ವಾಮಿ ಅವರಂತೆಯೇ ವಿಭಿನ್ನವಾಗಿ ರಸ್ತೆ ಗುಂಡಿಗಳ ಬಗ್ಗೆ ಗಮನ ಸೆಳೆದಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.

ಇಂಗ್ಲೆಂಡ್​ನ ಎಸೆಕ್ಸ್​​​ನ ಕರಾವಳಿ ಪಟ್ಟಣ ಬ್ರೈಟ್​​ಲಿಂಗ್​ಸೀ ರಸ್ತೆ ಗುಂಡಿಗಳ ಬಗ್ಗೆ 66 ವರ್ಷದ ಆ್ಯಂಡಿ ಕಾನ್ರಾಯ್, ಮೊಮ್ಮಕ್ಕಳ ಆಟಿಕೆ ಬಳಸಿ ವಿಭಿನ್ನವಾಗಿ ಗಮನ ಸೆಳೆಯುವಂತೆ ಮಾಡಿದ್ದಾರೆ. ರಸ್ತೆ ಗುಂಡಿಗಳ ಮಧ್ಯದಲ್ಲಿ, ಸಮೀಪದಲ್ಲಿ ಆಟಿಕೆಗಳನ್ನು ಇರಿಸಿ ಅವುಗಳ ಫೋಟೊ ಕ್ಲಿಕ್ಕಿಸಿದ್ದಾರೆ. ನಂತರ ಅವುಗಳನ್ನು ಬ್ರೈಟ್​​ಲಿಂಗ್​ಸೀ ಎಂಬ ಫೇಸ್​​ಬುಕ್​ ಪುಟದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಹೀಗೆ ಮಾಡಿದ್ದರಿಂದ ರಸ್ತೆ ಗುಂಡಿಗಳು ಸರಿಯಾಗಬಹುದೇ ಎಂಬುದು ನನಗೆ ತಿಳಿದಿಲ್ಲ. ಆದರೆ ನಾವು ಚೆನ್ನಾಗಿ ನಗಬಹುದು. ಜನರು ಅವುಗಳನ್ನು ಆಸ್ವಾದಿಸಬಹುದು ಎಂದು ಕಾನ್ರಾಯ್ ತಿಳಿಸಿರುವುದಾಗಿ ‘ಬಿಬಿಸಿ’ ವರದಿ ಮಾಡಿದೆ.

ಇದನ್ನೂ ಓದಿ: Covid 19: ತಾಯಿಯ ಗರ್ಭದಲ್ಲಿರುವಾಗಲೇ ಎರಡು ಶಿಶುಗಳಿಗೆ ತಗುಲಿದ ಕೊರೊನಾ ಸೋಂಕು, ಮೆದುಳಿಗೆ ಹಾನಿ ಕಾನ್ರಾಯ್ ಅವರ ಸೃಜನಶೀಲ ಪೋಸ್ಟ್‌ಗಳು ಎಸ್ಸೆಕ್ಸ್ ಕೌಂಟಿ ಕೌನ್ಸಿಲ್‌ನ ಗಮನ ಸೆಳೆದಿವ. ಪರಿಣಾಮವಾಗಿ ಆಡಳಿತವು ವಿಷಯದ ಗಂಭೀರತೆಯನ್ನು ಅರಿತು ಗುಂಡಿಗಳನ್ನು ಸರಿಪಡಿಸಲು ಕ್ರಮ ಕೈಗೊಂಡಿದೆ. ಎಸ್ಸೆಕ್ಸ್ ಕೌಂಟಿ ಕೌನ್ಸಿಲ್‌ನ ಎಂಜಿನಿಯರ್‌ಗಳ ತಂಡವು ಎಲ್ಲಾ ರಸ್ತೆಗಳನ್ನು ಸರಿಪಡಿಸಲು ರಾತ್ರಿಯಿಡೀ ಕೆಲಸ ಮಾಡಿದೆ ಎಂದು ಎಸ್ಸೆಕ್ಸ್ ಹೆದ್ದಾರಿ ನಿರ್ವಹಣಾ ವಿಭಾಗದ ಕಾರ್ಯಾಚರಣೆಯ ಉಸ್ತುವಾರಿ ಫಿಲ್ ಮೆಕ್ಯಾವಿಟಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. ಜತೆಗೆ ಆ್ಯಂಡಿ ಕಾನ್ರಾಯ್ ಪ್ರಯತ್ನವನ್ನು ಫಿಲ್ ಮೆಕ್ಯಾವಿಟಿ ಶ್ಲಾಘಿಸಿರುವುದಾಗಿಯೂ ತಿಳಿಸಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ