ದೀಪಾವಳಿಯ ದೀಪಗಳು ಕತ್ತಲೆಯನ್ನು ಓಡಿಸಿ ನಿರೀಕ್ಷೆಯ ಬೆಳಕನ್ನು ಮೂಡಿಸಲಿ: ಜಾನ್ಸನ್ | UK PM wishes British Hindus Jains and Sikhs on Deepavali

ಯುನೈಟಿಡ್ ಕಿಂಗ್​ಡಮ್ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್, ಬ್ರಿಟಿಷ್ ಹಿಂದೂಗಳು, ಸಿಕ್ಖರು ಮತ್ತು ಜೈನರಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಅವರು, ಕೊವಿಡ್-19 ಪ್ಯಾಂಡಿಮಿಕ್​ನ ಸಂಕಷ್ಟದ ಸಮಯದಲ್ಲಿ ಭಾರತೀಯ ಮೂಲದ ಬ್ರಿಟನ್​ಗಳು ಜನರಿಗೆ ಮಾಡಿರುವ ಸಹಾಯವನ್ನು ಮನಸಾರೆ ಕೊಂಡಾಡಿದ್ದಾರೆ. ‘ಈ ಪಿಡುಗನ್ನು ನಾವು ಮಟ್ಟಹಾಕುತ್ತೇವೆ’ ಎಂದು ಅವರು ಅದೇ ವಿಡಿಯೊದಲ್ಲಿ ಹೇಳಿದ್ದಾರೆ. ‘‘ನಮಸ್ತೆ ಮತ್ತು ಹ್ಯಾಪಿ ದೀಪಾವಳಿ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಕಾಮನೆಗಳು. ಈ ಸುಂದರವಾದ, ಸಂತಸಮಯ ದೀಪಾವಳಿ ಹಬ್ಬದ ಪ್ರಯುಕ್ತ, […]

ದೀಪಾವಳಿಯ ದೀಪಗಳು ಕತ್ತಲೆಯನ್ನು ಓಡಿಸಿ ನಿರೀಕ್ಷೆಯ ಬೆಳಕನ್ನು ಮೂಡಿಸಲಿ: ಜಾನ್ಸನ್ | UK PM wishes British Hindus Jains and Sikhs on Deepavali

Updated on: Nov 14, 2020 | 7:48 PM

ಯುನೈಟಿಡ್ ಕಿಂಗ್​ಡಮ್ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್, ಬ್ರಿಟಿಷ್ ಹಿಂದೂಗಳು, ಸಿಕ್ಖರು ಮತ್ತು ಜೈನರಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಅವರು, ಕೊವಿಡ್-19 ಪ್ಯಾಂಡಿಮಿಕ್​ನ ಸಂಕಷ್ಟದ ಸಮಯದಲ್ಲಿ ಭಾರತೀಯ ಮೂಲದ ಬ್ರಿಟನ್​ಗಳು ಜನರಿಗೆ ಮಾಡಿರುವ ಸಹಾಯವನ್ನು ಮನಸಾರೆ ಕೊಂಡಾಡಿದ್ದಾರೆ. ‘ಈ ಪಿಡುಗನ್ನು ನಾವು ಮಟ್ಟಹಾಕುತ್ತೇವೆ’ ಎಂದು ಅವರು ಅದೇ ವಿಡಿಯೊದಲ್ಲಿ ಹೇಳಿದ್ದಾರೆ.

‘‘ನಮಸ್ತೆ ಮತ್ತು ಹ್ಯಾಪಿ ದೀಪಾವಳಿ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಕಾಮನೆಗಳು. ಈ ಸುಂದರವಾದ, ಸಂತಸಮಯ ದೀಪಾವಳಿ ಹಬ್ಬದ ಪ್ರಯುಕ್ತ, ಲಕ್ಷಾಂತರ ದೀಪಗಳನ್ನು ಇಲ್ಲಿ ಮತ್ತೆ ಬೆಳಗಿಸಲಾಗಿದೆ. ಈ ವರ್ಷದ ಆಚರಣೆ ಭಿನ್ನವಾಗಿದೆ ಅಂತ ನನಗೆ ಗೊತ್ತಿದೆ. ದೇಶದಾದ್ಯಂತ ಜನರು ಮಾಡುತ್ತಿರುವ ತ್ಯಾಗಗಳ ಬಗ್ಗೆ ನನಗೆ ಗೊತ್ತಿದೆ. ಎಲ್ಲರ ಬದುಕು ನಿಂತಂತಾಗಿಬಿಟ್ಟಿದೆ. ನಿಮ್ಮ ಕೆಲಸಗಳು, ವ್ಯಾಪಾರದ ಮೇಲೆ ಭಾರಿ ಪರಿಣಾಮ ಬಿದ್ದಿರುವ ಸಂಗತಿಯನ್ನೂ ನಾನು ಬಲ್ಲೆ. ಆದರೆ ಈ ಮಹಾಮಾರಿ ಅಟ್ಟಹಾಸಗೈಯುತ್ತಿರುವ ಸಮಯದಲ್ಲಿ, ಬ್ರಿಟಿಷ್ ಹಿಂದೂಗಳು, ಸಿಕ್ಖರು ಮತ್ತು ಜೈನ್ ಸಮುದಾಯದವರು ತಮ್ಮ ಶಕ್ತಿ ಮೀರಿ ಜನರಿಗೆ ಸಹಾಯ ಮಾಡುತ್ತಿರುವುದನ್ನು ಕಂಡು ನನ್ನ ಹೃದಯ ತುಂಬಿಬಂದಿದೆ ಮತ್ತು ಅವರೆಡೆಗಿರುವ ಆದರ ಇನ್ನೂ ಹೆಚ್ಚಾಗಿದೆ. ಈ ದೀಪಾವಳಿ ಹಬ್ಬದಂದು ಬೆಳಗಿಸಲಾಗುವ ಲಕ್ಷಾಂತರ ದೀಪಗಳು ವಿಶ್ವದಾದ್ಯಂತ ಕತ್ತಲೆಯನ್ನು ಹೊಡೆದೋಡಿಸಿ, ಉಜ್ವಲ ಭವಿಷ್ಯದ ಬೆಳಕಿನ ಕಿರಣಗಳನ್ನು ಮೂಡಿಸುತ್ತವೆ ಎಂಬ ನಂಬಿಕೆ ನನ್ನಲ್ಲಿದೆ,’’ ಎಂದು ಜಾನ್ಸನ್ ಟ್ವೀಟ್ ಮಾಡಿದ್ದಾರೆ.

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More
Follow Us