AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟನ್ ಪ್ರಧಾನಿ ರೇಸ್​​​​ನಲ್ಲಿ ಲಿಜ್ ಟ್ರಸ್​​ ವಿರುದ್ಧ ನೇರ ಹಣಾಹಣಿ, ರಿಷಿ ಸುನಕ್ ಹೇಳಿದ್ದೇನು?

ಬೋರಿಸ್ ಜಾನ್ಸನ್ ಅಧಿಕಾರದಿಂದ ಕೆಳಗಿಳಿದ ನಂತರ ಪ್ರಧಾನಿ ಆಕಾಂಕ್ಷಿಗಳಾದ ಲಿಜ್ ಟ್ರಸ್ ಮತ್ತು ರಿಷಿ ಸುನಕ್ ನಡುವೆ ನೇರ ಹಣಾಹಣಿ ನಡೆಯಲಿದೆ. ಸೆಪ್ಟೆಂಬರ್ 5ಕ್ಕೆ ಮುಂಚೆ ಪ್ರಧಾನಿ ಘೋಷಣೆ ನಡೆಯಲಿ

ಬ್ರಿಟನ್ ಪ್ರಧಾನಿ ರೇಸ್​​​​ನಲ್ಲಿ ಲಿಜ್ ಟ್ರಸ್​​ ವಿರುದ್ಧ ನೇರ ಹಣಾಹಣಿ, ರಿಷಿ ಸುನಕ್ ಹೇಳಿದ್ದೇನು?
ರಿಷಿ ಸುನಕ್- ಲಿಜ್ ಟ್ರಸ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 29, 2022 | 2:21 PM

ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಬ್ರಿಟನ್ ಪ್ರಧಾನಿ ಹುದ್ದೆಗೇರಲು(UK prime minister) ಸ್ಪರ್ಧಿಸುತ್ತಿರುವ ರಿಷಿ ಸುನಕ್ (Rishi Sunak) ಪ್ರಧಾನಿ ಚುನಾವಣೆಯಲ್ಲಿ ತಾನು ದುರ್ಬಲ ಎಂದು ಒಪ್ಪಿಕೊಂಡಿದ್ದು, ಪ್ರತಿಯೊಂದು ಮತ ಗಿಟ್ಟಿಸಲು ಹೋರಾಡುವುದಾಗಿ ಹೇಳಿದ್ದಾರೆ. ಮಾಜಿ ಹಣಕಾಸು ಸಚಿವರಾಗಿದ್ದ ರಿಷಿ, ಹಣದುಬ್ಬರ ನಿಯಂತ್ರಣಕ್ಕೆ ಬರುವವರೆಗೆ ವೈಯಕ್ತಿಕ ತೆರಿಗೆ ಕಡಿತ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಕನ್ಸರ್ವೇಟಿವ್ ಪಕ್ಷದ ಸದಸ್ಯರೊಂದಿಗೆ ಮೊದಲ ಬಾರಿ ಅಧಿಕೃತ ಸಭೆ ನಡೆಸಿದ್ದ ರಿಷಿ ಇದು ನನ್ನ ಜೀವನವನ್ನು ಸುಲಭಗೊಳಿಸದಿದ್ದರೂ ಸಹ, ಇದು ಪ್ರಾಮಾಣಿಕ ಕೆಲಸವಾಗಿದೆ ಎಂದು ಹೇಳಿದ್ದಾರೆ. ಇತ್ತ ರಿಷಿ ಅವರ ಪ್ರತಿಸ್ಪರ್ಧಿ, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ (Liz Truss) ತಾನು ಅಧಿಕಾರಕ್ಕೇರಿದರೆ ತೆರಿಗೆ ಕಡಿತ ಮಾಡುವುದಾಗಿ ಹೇಳಿದ್ದಾರೆ. ಈಶಾನ್ಯ ಇಂಗ್ಲೆಂಡ್​​ನಲ್ಲಿ ಗುರುವಾರ ರಾತ್ರಿ ಲಿಜ್ ಅವರಿಗೆ ಅದ್ದೂರಿ ಸ್ವಾಗತ ನೀಡಲಾಗಿತ್ತು. ಬ್ರಿಟನ್​​ನ ತೆರಿಗೆ ವ್ಯವಸ್ಥೆಯು ತುಂಬಾ ಗೊಂದಲಮಯವಾಗಿದ್ದು, ಕುಟುಂಬಗಳಿಗೆ ಇದನ್ನು ಸುಗಮವಾಗಿಸಲು ಸಂಪೂರ್ಣವಾಗಿ ಅದನ್ನು ಪುನರವಲೋಕನ ಮಾಡಬೇಕಿದೆ ಎಂದಿದ್ದಾರೆ. ರಕ್ಷಣಾ ಕಾರ್ಯದರ್ಶಿ  ಬೆಲ್ ವಾಲೇಸೇ ಕೂಡಾ ಟ್ರಸ್ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ರಿಷಿ ಸುನಕ್ ಹೇಳಿದ್ದೇನು?

ಬೋರಿಸ್ ಜಾನ್ಸನ್ ಅಧಿಕಾರದಿಂದ ಕೆಳಗಿಳಿದ ನಂತರ ಪ್ರಧಾನಿ ಆಕಾಂಕ್ಷಿಗಳಾದ ಲಿಜ್ ಟ್ರಸ್ ಮತ್ತು ರಿಷಿ ಸುನಕ್ ನಡುವೆ ನೇರ ಹಣಾಹಣಿ ನಡೆಯಲಿದೆ. ಸೆಪ್ಟೆಂಬರ್ 5ಕ್ಕೆ ಮುಂಚೆ ಪ್ರಧಾನಿ ಘೋಷಣೆ ನಡೆಯಲಿದೆ. ಪ್ರಧಾನಿ ಹುದ್ದೆಯ ರೇಸ್​​ನಲ್ಲಿ ನಾನು ಹಿಂದೆ ಇದ್ದೇನೆ ಎಂಬುದು ಗೊತ್ತಿದೆ. ನಾನು ನಿಮ್ಮೆಲ್ಲರಲ್ಲಿ ಬೆಂಬಲ ಬೇಡುತ್ತಿದ್ದೇನೆ. ಪ್ರತಿಯೊಂದು ಮತ ಗಿಟ್ಟಿಸಿಕೊಳ್ಳಲು ನಾನು ಹೋರಾಡುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ರಿಷಿ ಸುನಕ್ ಹೇಳಿದ್ದಾರೆ. ಟ್ರಸ್ ಅವರ ವಿರುದ್ಧ ಪರೋಕ್ಷ ದಾಳಿ ನಡೆಸಿದ ಸುನಕ್, ತೆರಿಗೆ ವಿನಾಯಿತಿಯಿಂದ ಸರ್ಕಾರಕ್ಕೆ ಆಗುವ ಆದಾಯ ಕೊರತೆಯನ್ನು ಹೇಗೆ ತುಂಬ ಬಲ್ಲಿರಿ? ಅದನ್ನು ವಿವರಿಸದೆ ಇಂಥಾ ಘೋಷಣೆ ಮಾಡುವುದು ಬೇಜವಾಬ್ದಾರಿತನ ಎಂದು ಕೇಳಿದ್ದಾರೆ.

ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ