Ukraine War: ರಷ್ಯಾದಿಂದ ಕದನ ವಿರಾಮ ಉಲ್ಲಂಘನೆ; ಮರಿಪೊಲ್​ನಲ್ಲಿ ಮತ್ತೆ ಗುಂಡಿನ ದಾಳಿ

| Updated By: ಸುಷ್ಮಾ ಚಕ್ರೆ

Updated on: Mar 05, 2022 | 8:50 PM

Russia- Ukraine War: ರಷ್ಯಾದ ಸೇನಾಪಡೆ ಕದನ ವಿರಾಮವನ್ನು ಘೋಷಿಸಿದ್ದರೂ ಮರಿಪೋಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದ ಮೇಲೆ ಗುಂಡಿನ ದಾಳಿಯನ್ನು ಮುಂದುವರೆಸಿದೆ.

Ukraine War: ರಷ್ಯಾದಿಂದ ಕದನ ವಿರಾಮ ಉಲ್ಲಂಘನೆ; ಮರಿಪೊಲ್​ನಲ್ಲಿ ಮತ್ತೆ ಗುಂಡಿನ ದಾಳಿ
ಉಕ್ರೇನ್​ನಲ್ಲಿ ಯುದ್ಧ
Follow us on

ಕೀವ್: ಉಕ್ರೇನ್ ಮೇಲೆ ನಡೆಸುತ್ತಿದ್ದ ಯುದ್ಧಕ್ಕೆ ಇಂದು ತಾತ್ಕಾಲಿಕ ಕದನ ವಿರಾಮಕ್ಕೆ ರಷ್ಯಾ (Russia) ಒಪ್ಪಿಗೆ ನೀಡಿದ ಕೆಲವೇ ಗಂಟೆಗಳಲ್ಲಿ ರಷ್ಯಾದ ಪಡೆಗಳು ಮತ್ತೆ ಉಕ್ರೇನ್​ನ ಹಲವು ನಗರಗಳಲ್ಲಿ ಶೆಲ್ ದಾಳಿ ನಡೆಸತೊಡಗಿವೆ. ಇದರಿಂದಾಗಿ ಯುದ್ಧದಿಂದ ತೀವ್ರ ಹಾನಿಗೊಳಗಾಗಿದ್ದ ಉಕ್ರೇನ್‌ನ ಬಂದರು ನಗರವಾದ ಮರಿಪೋಲ್‌ನಿಂದ ನಾಗರಿಕರ ಸ್ಥಳಾಂತರಿಸುವಿಕೆಯನ್ನು ಮತ್ತೆ ಸ್ಥಗಿತಗೊಳಿಸಲಾಯಿತು. “ರಷ್ಯಾದ ಸೇನಾಪಡೆ ಕದನ ವಿರಾಮವನ್ನು ಘೋಷಿಸಿದ್ದರೂ ಮರಿಪೋಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದ ಮೇಲೆ ಗುಂಡಿನ ದಾಳಿಯನ್ನು ಮುಂದುವರೆಸಿದೆ” ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಕಚೇರಿಯ ಉಪ ಮುಖ್ಯಸ್ಥ ಕೈರಿಲೊ ಟಿಮೊಶೆಂಕೊ ಹೇಳಿದ್ದಾರೆ.

ರಷ್ಯಾದ ರಕ್ಷಣಾ ಸಚಿವಾಲಯವು ಈ ಹಿಂದೆ ಉಕ್ರೇನಿಯನ್ ಪಡೆಗಳೊಂದಿಗೆ ಆಯಕಟ್ಟಿನ ಬಂದರು ಮತ್ತು ವೊಲ್ನೋವಾಖಾದ ಪೂರ್ವ ನಗರಕ್ಕೆ ಮರಿಪೋಲ್‌ಗೆ ಸ್ಥಳಾಂತರಿಸುವ ಮಾರ್ಗಗಳನ್ನು ಒಪ್ಪಿಕೊಂಡಿದೆ ಎಂದು ಹೇಳಿದೆ. ಆದರೂ ಎಷ್ಟು ಸಮಯದವರೆಗೆ ಮಾರ್ಗಗಳು ತೆರೆದಿರುತ್ತವೆ ಎಂಬುದನ್ನು ಹೇಳಿಕೆಯು ಸ್ಪಷ್ಟಪಡಿಸಿಲ್ಲ.

ರಷ್ಯಾ ಕದನ ವಿರಾಮಕ್ಕೆ ಬದ್ಧವಾಗಿಲ್ಲ ಮತ್ತು ಮರಿಪೋಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳೆರಡರಲ್ಲೂ ಶೆಲ್ ದಾಳಿಯನ್ನು ಮುಂದುವರೆಸಿದೆ. ಭದ್ರತಾ ಕಾರಣಗಳಿಗಾಗಿ ಆ ಭಾಗದಲ್ಲಿರುವ ನಾಗರಿಕರ ಸ್ಥಳಾಂತರಿಸುವಿಕೆಯನ್ನು ಮುಂದೂಡಲಾಗಿದೆ. ವರದಿಗಳ ಪ್ರಕಾರ, ವೊಲ್ನೋವಾಖಾದಲ್ಲಿ ರಷ್ಯಾ ಒಪ್ಪಂದವನ್ನು ಉಲ್ಲಂಘಿಸಿದೆ. “ಕದನ ವಿರಾಮದ ಬಳಿಕವೂ ಗುಂಡು ಹಾರಿಸುವುದನ್ನು ನಿಲ್ಲಿಸಲು ನಾವು ರಷ್ಯಾದ ಕಡೆಯಿಂದ ಮನವಿ ಮಾಡುತ್ತೇವೆ” ಎಂದು ಉಪ ಪ್ರಧಾನ ಮಂತ್ರಿ ಐರಿನಾ ವೆರೆಶ್ಚುಕ್ ಹೇಳಿದ್ದಾರೆ.

4,50,000 ಜನಸಂಖ್ಯೆಯ ಮರಿಪೊಲ್ ನಗರ ರಷ್ಯಾ ತೆಕ್ಕೆಗೆ ಬಂದಿದೆ. ಈ ಕದನ ವಿರಾಮ ಘೋಷಣೆಯು ಈ ಗೆಲುವಿನ ಘೋಷಣೆ ಎಂದೇ ಹೇಳಲಾಗುತ್ತಿದೆ. ಇದು ಉಕ್ರೇನ್ ವಿರುದ್ಧದ ಸಮರದಲ್ಲಿ ರಷ್ಯಾ ಗಳಿಸಿದ ದೊಡ್ಡ ಗೆಲುವು ಎಂದೇ ವ್ಯಾಖ್ಯಾನಿಸಲಾಗಿದೆ. ಉಕ್ರೇನ್​ಗೆ ಇರುವ ಸಾಗರ ಸಂಪರ್ಕವನ್ನು ರಷ್ಯಾ ಇನ್ನು ಮುಂದೆ ಪರಿಣಾಮಕಾರಿಯಾಗಿ ನಿಯಂತ್ರಿಸಿ, ಅಲ್ಲಿನ ಆಡಳಿತವನ್ನು ತನಗೆ ಬೇಕಾದಂತೆ ಮಣಿಸಲು ಈ ಗೆಲುವು ಅನುವು ಮಾಡಿಕೊಟ್ಟಿದೆ. ಮರಿಪೋಲ್ ನಗರಕ್ಕೆ ಹಲವು ದಿನಗಳಿಂದ ನೀರು, ಆಹಾರ ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಚಳಿಯನ್ನು ತಡೆಯಲು ಬೇಕಿದ್ದ ಹೀಟಿಂಗ್ ಉಪಕರಣಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಸಾರ್ವಜನಿಕ ಸಾರಿಗೆಯೂ ರಷ್ಯಾ ಸೇನೆಯ ಕೆಂಗಣ್ಣಿಗೆ ಗುರಿಯಾಗಿದ್ದವು. ಜನರು ಅಲ್ಲಿ ಬದುಕಲು ಸಾಧ್ಯವೇ ಇಲ್ಲದ ವಾತಾವರಣ ನಿರ್ಮಿಸಿದ ನಂತರ ಸುರಕ್ಷಿತ ಕಾರಿಡಾರ್ ಘೋಷಿಸಿ, ಅವರಿಗೆ ಹೊರಗೆ ಹೋಗಲು ಅವಕಾಶ ನೀಡಲಾಗಿತ್ತು.

ಕದನ ವಿರಾಮ ಘೋಷಣೆಯ ಮೂಲಕ ರಷ್ಯಾ ಅತ್ಯಂತ ಜಾಣ ರಾಜತಾಂತ್ರಿಕ ನಡೆಯಿಟ್ಟಿತ್ತು. ರಷ್ಯಾ ಪಡೆಗಳು ಹಲವು ದಿನಗಳಿಂದ ಬಂದರು ನಗರಿ ಮರಿಪೊಲ್​ಗೆ ದಿಗ್ಬಂಧನ ಹಾಕಿ, ಉಸಿರುಗಟ್ಟಿಸಿದ್ದವು. ಅಲ್ಲಿನ ನಾಗರಿಕರಿಗೆ ಹೊರಗೆ ಹೋದರೆ ಸಾಕು ಎನ್ನುವಂತೆ ಆಗಿತ್ತು. ಇದೀಗ ತನ್ನ ಪಟ್ಟು ಬಿಗಿಗೊಳಿಸಿರುವ ರಷ್ಯಾ, ಆಯಕಟ್ಟಿನ ಸ್ಥಳಗಳನ್ನು ವಶಪಡಿಸಿಕೊಂಡ ನಂತರ ಏಕಪಕ್ಷೀಯವಾಗಿ ಕದನ ವಿರಾಮ ಘೋಷಿಸಿ, ನಾಗರಿಕರು ಹೊರಗೆ ನಡೆಯಲು ಸುರಕ್ಷಿತ ಕಾರಿಡಾರ್ ಕಲ್ಪಿಸಿಕೊಡುವ ಭರವಸೆ ನೀಡಿತ್ತು. ಆದರೆ, ಇದೀಗ ಮತ್ತೆ ಮರಿಪೋಲ್​ನಲ್ಲಿ ಗುಂಡಿನ ದಾಳಿ ನಡೆಸಲಾಗುತ್ತಿದೆ.

ಇದನ್ನೂ ಓದಿ: Russia-Ukraine War: ರಷ್ಯಾ ವಶಕ್ಕೆ ಸಿಲುಕಿ ನರಕವಾಗಿದ್ದ ಉಕ್ರೇನ್​ನ ಬಂದರು ನಗರಿ ಮರಿಪೊಲ್ ಜನರೀಗ ಕೊಂಚ ನಿರಾಳ

Russia- Ukraine War: ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಸಿದ್ಧ ಎಂದ ರಷ್ಯಾ

Published On - 8:50 pm, Sat, 5 March 22