AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಪ್ರಿಲ್​ 10ನ್ನು ಮಹತ್ವದ ದಿನವೆಂದು ಆಚರಿಸಲು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷರಿಂದ ಕರೆ; ಇಮ್ರಾನ್​ ಖಾನ್​ ಹುದ್ದೆ ಕಳೆದುಕೊಂಡಿದ್ದಕ್ಕೆ ಭರ್ಜರಿ ಖುಷಿ

ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಬಿಲಾವಾಲ್​  ಜರ್ದಾರಿ, ಏಪ್ರಿಲ್​ 10ರಂದು ಪಾಕಿಸ್ತಾನದಲ್ಲಿ ಏನೆಲ್ಲ ಮಹತ್ವದ ಘಟನೆಗಳು ನಡೆದವು ಎಂಬುದನ್ನು ನೆನಪಿಸಿಕೊಂಡರು. 1973ರ ಏಪ್ರಿಲ್​ 10ರಂದು ಪಾಕಿಸ್ತಾನದಲ್ಲಿ ಸಂವಿಧಾನ ಜಾರಿಬಂತು ಎಂದೂ ಹೇಳಿದರು.

ಏಪ್ರಿಲ್​ 10ನ್ನು ಮಹತ್ವದ ದಿನವೆಂದು ಆಚರಿಸಲು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷರಿಂದ ಕರೆ; ಇಮ್ರಾನ್​ ಖಾನ್​ ಹುದ್ದೆ ಕಳೆದುಕೊಂಡಿದ್ದಕ್ಕೆ ಭರ್ಜರಿ ಖುಷಿ
ಪಿಪಿಪಿ ಪಕ್ಷದ ಅಧ್ಯಕ್ಷ
TV9 Web
| Updated By: Lakshmi Hegde|

Updated on: Apr 10, 2022 | 8:32 AM

Share

ಇಮ್ರಾನ್ ಖಾನ್​ ಪಾಕಿಸ್ತಾನದ ಪ್ರಧಾನಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಅವರು ಸಂಸತ್ತಿನಲ್ಲಿ ವಿಶ್ವಾಸಮತ ಸಾಬೀತು ಪಡಿಸಲು ವಿಫಲರಾದರು. ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆದಾಗಿನಿಂದಲೂ ಅದರಿಂದ ಪಾರಾಗಲು ಇಮ್ರಾನ್ ಖಾನ್ ವಿವಿಧ ಪ್ರಯತ್ನಗಳನ್ನು ಮಾಡಿದ್ದರು. ಆದರೆ ಅದ್ಯಾವುದೂ ಕೆಲಸ ಮಾಡಲಿಲ್ಲ. ನಿನ್ನೆ ರಾತ್ರಿ ಇಮ್ರಾನ್​ ಖಾನ್​ ಬಹುಮತ ಸಾಬೀತುಪಡಿಸಬೇಕಿತ್ತು. ಆದರೆ ಅದು ಸಾಧ್ಯವಾಗದೆ ಅವರೀಗ ಪ್ರಧಾನಿ ಹುದ್ದೆ ತ್ಯಜಿಸಿದ್ದಾರೆ. ಹಾಗೇ, ಇಮ್ರಾನ್​ ಖಾನ್​ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದನ್ನು ಪಾಕಿಸ್ತಾನ​ ಪೀಪಲ್ಸ್​ ಪಾರ್ಟಿ (PPP) ಅಧ್ಯಕ್ಷ ಬಿಲಾವಾಲ್​​ ಬುಟ್ಟೋ ಜರ್ದಾರಿ ಸ್ವಾಗತಿಸಿದ್ದಾರೆ. ಪಾಕಿಸ್ತಾನದ ಇತಿಹಾಸದಲ್ಲಿಯೇ 2022ರ ಏಪ್ರಿಲ್​ 10 ಅತ್ಯಂತ ಮಹತ್ವದ ದಿನವಾಗಿದ್ದು, ರಾಷ್ಟ್ರೀಯ ಸಂಸತ್ತಿನ ಪ್ರತಿಯೊಬ್ಬ ಸದಸ್ಯನೂ ಈ ದಿನವನ್ನು ವಿಶೇಷವೆಂದು ಆಚರಣೆ ಮಾಡಬೇಕು ಎಂದು ಕರೆಕೊಟ್ಟಿದ್ದಾರೆ.

ಇಮ್ರಾನ್ ಖಾನ್​ ವಿರುದ್ಧ ಮಂಡನೆಯಾಗಿದ್ದ ಅವಿಶ್ವಾಸ ನಿರ್ಣಯವನ್ನು ಅಲ್ಲಿನ ಡೆಪ್ಯೂಟಿ ಸ್ಪೀಕರ್​ ಆಗಿದ್ದ ಖಾಸಿಂ ಸೂರಿ ವಜಾಗೊಳಿಸಿದ್ದರು. ಹೀಗಾಗಿ ಬೀಸುವ ದೊಣ್ಣೆಯಿಂದ ಇಮ್ರಾನ್ ಖಾನ್​ ಪಾರಾಗಿದ್ದೇನೆ ಎಂದೇ ಭಾವಿಸಿದ್ದರು. ಆದರೆ ಸುಪ್ರೀಂಕೋರ್ಟ್​ ಶಾಕ್​ ಕೊಟ್ಟಿತ್ತು. ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ್ದು ಉಪಸಭಾಪತಿಯ ತಪ್ಪು ನಿರ್ಧಾರ. ಏಪ್ರಿಲ್​ 9ರಂದು ಇಮ್ರಾನ್ ಖಾನ್​ ಬಹುಮತ ಸಾಬೀತುಪಡಿಸಬೇಕು ಎಂದು ತೀರ್ಪು ನೀಡಿತ್ತು. ಆದರೆ ನಿನ್ನೆ ಬೆಳಗ್ಗೆಯಿಂದಲೂ ಹೈಡ್ರಾಮಾ ಮಾಡಿದ್ದೇ ಬಂತು, ಬಿಟ್ಟರೆ ಇಮ್ರಾನ್​ ಖಾನ್ ಸಂಸತ್ತು ಪ್ರವೇಶಿಸಲೇ ಇಲ್ಲ. ಅಂತೂ ಮಧ್ಯರಾತ್ರಿ ಹೊತ್ತಿಗೆ ಬಹುಮತ ಸಾಬೀತು ಪಡಿಸಲು ಸಿದ್ಧರಾದರು. ಆದರೆ ಒಟ್ಟಾರೆ 342 ಸದಸ್ಯ ಬಲವಿರುವ ಪಾಕಿಸ್ತಾನ ಸಂಸತ್ತಿನಲ್ಲಿ 174 ಮಂದಿ ಅವಿಶ್ವಾಸ ನಿರ್ಣಯದ ಪರ ಮತ ಹಾಕಿದರು. ಇದರಲ್ಲಿ ಇಮ್ರಾನ್ ಖಾನ್​ ಪಕ್ಷದ ಬಹುತೇಕ ಸದಸ್ಯರು ಹೊರನಡೆದಿದ್ದರು.

ಬಳಿಕ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಬಿಲಾವಾಲ್​  ಜರ್ದಾರಿ, ಏಪ್ರಿಲ್​ 10ರಂದು ಪಾಕಿಸ್ತಾನದಲ್ಲಿ ಏನೆಲ್ಲ ಮಹತ್ವದ ಘಟನೆಗಳು ನಡೆದವು ಎಂಬುದನ್ನು ನೆನಪಿಸಿಕೊಂಡರು. 1973ರ ಏಪ್ರಿಲ್​ 10ರಂದು ಪಾಕಿಸ್ತಾನದಲ್ಲಿ ಸಂವಿಧಾನ ಜಾರಿಬಂತು.  ಹಾಗೇ, 1986ರ ಏಪ್ರಿಲ್​ 10ರಂದು ಬೆನಜೀರ್​ ಬುಟ್ಟೋ ತಮಗೆ ತಾವೇ ವಿಧಿಸಿಕೊಂಡಿದ್ದ ಗಡೀಪಾರು ಶಿಕ್ಷೆಯನ್ನು ಕೊನೆಗೊಳಿಸಿಕೊಂಡು, ಅಂದಿನ ಅಧ್ಯಕ್ಷರಾಗಿದ್ದ ಮೊಹಮ್ಮದ್​ ಜಿಯಾ ಉಲ್​ ಹಕ್​ ವಿರುದ್ಧ ಹೋರಾಟ ಮಾಡಲು, ಮತ್ತೆ ಲಾಹೋರ್​ಗೆ ಬಂದರು. ಇನ್ನು 2022ರ ಏಪ್ರಿಲ್​ 10ರಂದು ಇಮ್ರಾನ್ ಖಾನ್​ ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿಯುವಂತಾಯಿತು. ಇಮ್ರಾನ್ ಖಾನ್​, ತಾವು ಪಾಕಿಸ್ತಾನಕ್ಕೆ ಹೊಸ ಸ್ವರೂಪ ಕೊಡುತ್ತೇನೆ, ಇಲ್ಲಿ ಭ್ರಷ್ಟಾಚಾರ ಮುಕ್ತ ಮಾಡಲಾಗುವುದು ಎಂದು ಹೇಳಿಕೊಂಡಿದ್ದರು. ಆದರೆ ಈಗ ಏನಾಯಿತು? ಹಳೇ ಪಾಕಿಸ್ತಾನಕ್ಕೆ (ಪುರಾನಾ ಪಾಕಿಸ್ತಾನ) ಸ್ವಾಗತ ಕೋರುವ ಸಮಯ ಬಂದಿದೆ ಎಂದು ಜರ್ದಾರಿ ಹೇಳಿದರು.

ಇದನ್ನೂ ಓದಿ: Key Players: ಕ್ಲೀನ್ ಬೋಲ್ಡ್; ಇಮ್ರಾನ್ ಖಾನ್​ ಪದಚ್ಯುತಿಗೆ ಪ್ಲಾನ್ ಮಾಡಿದ ಪಾಕ್ ರಾಜಕಾರಣಿಗಳಿವರು

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ