AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮಹಿಳಾ ಮನುಷ್ಯಾಕೃತಿಗಳ ತಲೆ ಕತ್ತರಿಸಲು ತಾಲಿಬಾನಿಗಳ ಆದೇಶ; ಅಂಗಡಿ ಮಾಲೀಕರಿಗೆ ಈಗ ಅದೇ ಕೆಲಸ !

2021ರ ಆಗಸ್ಟ್​​ನಲ್ಲಿ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಆಡಳಿತ ಹಿಡಿದಾಗಿನಿಂದಲೂ ಅಲ್ಲಿನ ಜನರ ಒಂದೊಂದೇ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಿದ್ದಾರೆ. ಅದರಲ್ಲೂ ಮಹಿಳೆ ಮತ್ತು ಹುಡುಗಿಯರ ಸ್ವಾತಂತ್ರ್ಯಕ್ಕೆ ಚ್ಯುತಿ ತರುತ್ತಿದ್ದಾರೆ. 

Video: ಮಹಿಳಾ ಮನುಷ್ಯಾಕೃತಿಗಳ ತಲೆ ಕತ್ತರಿಸಲು ತಾಲಿಬಾನಿಗಳ ಆದೇಶ; ಅಂಗಡಿ ಮಾಲೀಕರಿಗೆ ಈಗ ಅದೇ ಕೆಲಸ !
ಹೆಣ್ಣುಗೊಂಬೆಗಳ ತಲೆ ಕತ್ತರಿಸುತ್ತಿರುವ ದೃಶ್ಯ
TV9 Web
| Edited By: |

Updated on: Jan 05, 2022 | 6:08 PM

Share

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಬರುಬರುತ್ತ ಒಂದೊಂದೇ ಕಠಿಣ ಸಂಪ್ರದಾಯದ ಕಾನೂನು ಹೇರುತ್ತಿದ್ದಾರೆ. ಇಷ್ಟುದಿನ ಜೀವಂತ ಮಹಿಳೆಯರ ಮೇಲೆ ಬೀಳುತ್ತಿದ್ದ ಅವರ ಕಣ್ಣು ಈಗ ಸ್ತ್ರೀ ರೂಪದ ಗೊಂಬೆಗಳ ಮೇಲೆ ಕೂಡ ಬಿದ್ದಿದೆ. ಬಟ್ಟೆ ಅಂಗಡಿಗಳಲ್ಲೆಲ್ಲ ಪ್ಲಾಸ್ಟಿಕ್​ ಗೊಂಬೆಗಳನ್ನು ಇಟ್ಟು, ಅವುಗಳಿಗೆ ಸೀರೆ ಉಡಿಸಿಡುವುದು ಅಥವಾ ಚೂಡಿದಾರ್,  ಮತ್ತಿತರ ಡ್ರೆಸ್ ಹಾಕಿ ಇಡುವುದು ಸರ್ವೇಸಾಮಾನ್ಯ. ಅದು ಗ್ರಾಹಕರನ್ನು ಆಕರ್ಷಿಸುವ ಒಂದು ಮಾರ್ಗ. ಆದರೆ ಅಫ್ಘಾನ್​ನಲ್ಲಿ ತಾಲಿಬಾನಿಗಳು ಇದಕ್ಕೂ ಕಲ್ಲು ಹಾಕುತ್ತಿದ್ದಾರೆ. ಮಾನವ ಆಕೃತಿಗಳು ಅದರಲ್ಲೂ ಮಹಿಳೆಯರ ಮಾನವ ಆಕೃತಿಗಳು ಇಸ್ಲಾಂನಲ್ಲಿ ನಿಷೇಧಿಸಲ್ಪಟ್ಟಿವೆ. ಹಾಗಾಗಿ ನೀವಿಟ್ಟ ಸ್ತ್ರೀರೂಪದ ಗೊಂಬೆಗಳ ತಲೆ ಕತ್ತರಿಸಿ ಹಾಕಿ ಎಂದು ಬಟ್ಟೆ ಅಂಗಡಿ ಮಾಲೀಕರಿಗೆ ಆದೇಶ ನೀಡಿದ್ದಾರೆ. ಅದರಂತೆ ಅಫ್ಘಾನ್​​ನ ಪಶ್ಚಿಮ ಭಾಗದಲ್ಲಿರುವ ಕೆಲವು ಅಂಗಡಿ ಮಾಲೀಕರು ಪ್ಲಾಸ್ಟಿಕ್ ಗೊಂಬೆಗಳ ತಲೆಯನ್ನು ಕತ್ತರಿಸಿ ಬೀಸಾಡುತ್ತಿದ್ದಾರೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ.  

2021ರ ಆಗಸ್ಟ್​​ನಲ್ಲಿ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಆಡಳಿತ ಹಿಡಿದಾಗಿನಿಂದಲೂ ಅಲ್ಲಿನ ಜನರ ಒಂದೊಂದೇ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಿದ್ದಾರೆ. ಅದರಲ್ಲೂ ಮಹಿಳೆ ಮತ್ತು ಹುಡುಗಿಯರ ಸ್ವಾತಂತ್ರ್ಯಕ್ಕೆ ಚ್ಯುತಿ ತರುತ್ತಿದ್ದಾರೆ.  ಅವರಿಗೆ ಶಾಲೆ-ಕಾಲೇಜುಗಳಿಗೆ ಹೋಗುವುದನ್ನು ನಿರ್ಬಂಧಿಸಿದ್ದಾರೆ. ದೂರದ ಊರುಗಳಿಗೆ ಒಬ್ಬರೇ ಪ್ರಯಾಣ ಮಾಡುವುದಕ್ಕೆ ನಿರ್ಬಂಧ ವಿಧಿಸಿದ್ದಾರೆ. ಹಾಗೇ, ಗೊಂಬೆಗಳ ತಲೆ ಕತ್ತರಿಸಿ ಎಂದು ಆದೇಶ ನೀಡಿರುವ ಬಗ್ಗೆ ಹೆರಾತ್ ನಗರದಲ್ಲಿ ಸದ್ಗುಣ ಪ್ರಚಾರ ಇಲಾಖೆ ಮುಖ್ಯಸ್ಥ ಆಝಿಜ್​ ರೆಹ್​ಮಾನ್​ ತಿಳಿಸಿದ್ದಾರೆ. ಹೀಗೆ ಮನುಷ್ಯಾಕೃತಿಯ ಗೊಂಬೆಗಳನ್ನು ಇಟ್ಟುಕೊಳ್ಳುವುದು ಶರಿಯಾ ಕಾನೂನಿಗೆ ವಿರುದ್ಧ. ಅಂಥ ಅಂಗಡಿ, ಅಂಗಡಿ ಮಾಲೀಕರ ಮೇಲೆ ಅಲ್ಲಾನ ಕೃಪೆ ಬೀಳುವುದಿಲ್ಲ. ಹಾಗಂತ ಅವರು ಮನುಷ್ಯಾಕೃತಿಯ ತಲೆ, ದೇಹವನ್ನು ಮುಚ್ಚಿಟ್ಟಾಕ್ಷಣ ಅಲ್ಲಾನ ಧೂತನು ಅವರ ಅಂಗಡಿಗೆ ಪ್ರವೇಶಿಸಿ ಆಶೀರ್ವದಿಸುವುದಿಲ್ಲ ಹಾಗಾಗಿ ಗೊಂಬೆಯ ತಲೆಯನ್ನೇ ಕತ್ತರಿಸಬೇಕು ಎಂದು ಹೇಳಿದ್ದಾರೆ. ಹೀಗೆ ಇತ್ತೀಚೆಗೆ ತಾಲಿಬಾನಿಗಳ ಒಂದೊಂದೇ ಕೃತ್ಯ, ಕಾನೂನುಗಳು ಬೆಳಕಿಗೆ ಬರುತ್ತಿವೆ.

ಇದನ್ನೂ ಓದಿ: ಎಷ್ಟೆಲ್ಲ ಒಳ್ಳೆಯದಾಗುತ್ತಿದೆ ಎನ್ನುತ್ತ ಬರೋಬ್ಬರಿ 11 ಡೋಸ್ ಕೊರೊನಾ ಲಸಿಕೆ ಪಡೆದ 84ರ ವೃದ್ಧ !-ತನಿಖೆಗೆ ಆದೇಶ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?