AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮಹಿಳಾ ಮನುಷ್ಯಾಕೃತಿಗಳ ತಲೆ ಕತ್ತರಿಸಲು ತಾಲಿಬಾನಿಗಳ ಆದೇಶ; ಅಂಗಡಿ ಮಾಲೀಕರಿಗೆ ಈಗ ಅದೇ ಕೆಲಸ !

2021ರ ಆಗಸ್ಟ್​​ನಲ್ಲಿ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಆಡಳಿತ ಹಿಡಿದಾಗಿನಿಂದಲೂ ಅಲ್ಲಿನ ಜನರ ಒಂದೊಂದೇ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಿದ್ದಾರೆ. ಅದರಲ್ಲೂ ಮಹಿಳೆ ಮತ್ತು ಹುಡುಗಿಯರ ಸ್ವಾತಂತ್ರ್ಯಕ್ಕೆ ಚ್ಯುತಿ ತರುತ್ತಿದ್ದಾರೆ. 

Video: ಮಹಿಳಾ ಮನುಷ್ಯಾಕೃತಿಗಳ ತಲೆ ಕತ್ತರಿಸಲು ತಾಲಿಬಾನಿಗಳ ಆದೇಶ; ಅಂಗಡಿ ಮಾಲೀಕರಿಗೆ ಈಗ ಅದೇ ಕೆಲಸ !
ಹೆಣ್ಣುಗೊಂಬೆಗಳ ತಲೆ ಕತ್ತರಿಸುತ್ತಿರುವ ದೃಶ್ಯ
TV9 Web
| Updated By: Lakshmi Hegde|

Updated on: Jan 05, 2022 | 6:08 PM

Share

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಬರುಬರುತ್ತ ಒಂದೊಂದೇ ಕಠಿಣ ಸಂಪ್ರದಾಯದ ಕಾನೂನು ಹೇರುತ್ತಿದ್ದಾರೆ. ಇಷ್ಟುದಿನ ಜೀವಂತ ಮಹಿಳೆಯರ ಮೇಲೆ ಬೀಳುತ್ತಿದ್ದ ಅವರ ಕಣ್ಣು ಈಗ ಸ್ತ್ರೀ ರೂಪದ ಗೊಂಬೆಗಳ ಮೇಲೆ ಕೂಡ ಬಿದ್ದಿದೆ. ಬಟ್ಟೆ ಅಂಗಡಿಗಳಲ್ಲೆಲ್ಲ ಪ್ಲಾಸ್ಟಿಕ್​ ಗೊಂಬೆಗಳನ್ನು ಇಟ್ಟು, ಅವುಗಳಿಗೆ ಸೀರೆ ಉಡಿಸಿಡುವುದು ಅಥವಾ ಚೂಡಿದಾರ್,  ಮತ್ತಿತರ ಡ್ರೆಸ್ ಹಾಕಿ ಇಡುವುದು ಸರ್ವೇಸಾಮಾನ್ಯ. ಅದು ಗ್ರಾಹಕರನ್ನು ಆಕರ್ಷಿಸುವ ಒಂದು ಮಾರ್ಗ. ಆದರೆ ಅಫ್ಘಾನ್​ನಲ್ಲಿ ತಾಲಿಬಾನಿಗಳು ಇದಕ್ಕೂ ಕಲ್ಲು ಹಾಕುತ್ತಿದ್ದಾರೆ. ಮಾನವ ಆಕೃತಿಗಳು ಅದರಲ್ಲೂ ಮಹಿಳೆಯರ ಮಾನವ ಆಕೃತಿಗಳು ಇಸ್ಲಾಂನಲ್ಲಿ ನಿಷೇಧಿಸಲ್ಪಟ್ಟಿವೆ. ಹಾಗಾಗಿ ನೀವಿಟ್ಟ ಸ್ತ್ರೀರೂಪದ ಗೊಂಬೆಗಳ ತಲೆ ಕತ್ತರಿಸಿ ಹಾಕಿ ಎಂದು ಬಟ್ಟೆ ಅಂಗಡಿ ಮಾಲೀಕರಿಗೆ ಆದೇಶ ನೀಡಿದ್ದಾರೆ. ಅದರಂತೆ ಅಫ್ಘಾನ್​​ನ ಪಶ್ಚಿಮ ಭಾಗದಲ್ಲಿರುವ ಕೆಲವು ಅಂಗಡಿ ಮಾಲೀಕರು ಪ್ಲಾಸ್ಟಿಕ್ ಗೊಂಬೆಗಳ ತಲೆಯನ್ನು ಕತ್ತರಿಸಿ ಬೀಸಾಡುತ್ತಿದ್ದಾರೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ.  

2021ರ ಆಗಸ್ಟ್​​ನಲ್ಲಿ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಆಡಳಿತ ಹಿಡಿದಾಗಿನಿಂದಲೂ ಅಲ್ಲಿನ ಜನರ ಒಂದೊಂದೇ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಿದ್ದಾರೆ. ಅದರಲ್ಲೂ ಮಹಿಳೆ ಮತ್ತು ಹುಡುಗಿಯರ ಸ್ವಾತಂತ್ರ್ಯಕ್ಕೆ ಚ್ಯುತಿ ತರುತ್ತಿದ್ದಾರೆ.  ಅವರಿಗೆ ಶಾಲೆ-ಕಾಲೇಜುಗಳಿಗೆ ಹೋಗುವುದನ್ನು ನಿರ್ಬಂಧಿಸಿದ್ದಾರೆ. ದೂರದ ಊರುಗಳಿಗೆ ಒಬ್ಬರೇ ಪ್ರಯಾಣ ಮಾಡುವುದಕ್ಕೆ ನಿರ್ಬಂಧ ವಿಧಿಸಿದ್ದಾರೆ. ಹಾಗೇ, ಗೊಂಬೆಗಳ ತಲೆ ಕತ್ತರಿಸಿ ಎಂದು ಆದೇಶ ನೀಡಿರುವ ಬಗ್ಗೆ ಹೆರಾತ್ ನಗರದಲ್ಲಿ ಸದ್ಗುಣ ಪ್ರಚಾರ ಇಲಾಖೆ ಮುಖ್ಯಸ್ಥ ಆಝಿಜ್​ ರೆಹ್​ಮಾನ್​ ತಿಳಿಸಿದ್ದಾರೆ. ಹೀಗೆ ಮನುಷ್ಯಾಕೃತಿಯ ಗೊಂಬೆಗಳನ್ನು ಇಟ್ಟುಕೊಳ್ಳುವುದು ಶರಿಯಾ ಕಾನೂನಿಗೆ ವಿರುದ್ಧ. ಅಂಥ ಅಂಗಡಿ, ಅಂಗಡಿ ಮಾಲೀಕರ ಮೇಲೆ ಅಲ್ಲಾನ ಕೃಪೆ ಬೀಳುವುದಿಲ್ಲ. ಹಾಗಂತ ಅವರು ಮನುಷ್ಯಾಕೃತಿಯ ತಲೆ, ದೇಹವನ್ನು ಮುಚ್ಚಿಟ್ಟಾಕ್ಷಣ ಅಲ್ಲಾನ ಧೂತನು ಅವರ ಅಂಗಡಿಗೆ ಪ್ರವೇಶಿಸಿ ಆಶೀರ್ವದಿಸುವುದಿಲ್ಲ ಹಾಗಾಗಿ ಗೊಂಬೆಯ ತಲೆಯನ್ನೇ ಕತ್ತರಿಸಬೇಕು ಎಂದು ಹೇಳಿದ್ದಾರೆ. ಹೀಗೆ ಇತ್ತೀಚೆಗೆ ತಾಲಿಬಾನಿಗಳ ಒಂದೊಂದೇ ಕೃತ್ಯ, ಕಾನೂನುಗಳು ಬೆಳಕಿಗೆ ಬರುತ್ತಿವೆ.

ಇದನ್ನೂ ಓದಿ: ಎಷ್ಟೆಲ್ಲ ಒಳ್ಳೆಯದಾಗುತ್ತಿದೆ ಎನ್ನುತ್ತ ಬರೋಬ್ಬರಿ 11 ಡೋಸ್ ಕೊರೊನಾ ಲಸಿಕೆ ಪಡೆದ 84ರ ವೃದ್ಧ !-ತನಿಖೆಗೆ ಆದೇಶ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ