AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಸಿರು ನೀಡುವ ಮರಗಳ ಹನನ ಸರಿಯೇ? ಬದಲಾವಣೆ ಅಗತ್ಯ ಆದರೆ, ನಮ್ಮನ್ನೇ ನಾಶಗೊಳಿಸುವಷ್ಟಲ್ಲ

ಮರಗಳು ಇಲ್ಲವಾದರೆ ಮನುಷ್ಯ ಉಳಿಯುವುದು ಕಷ್ಟ. ಉಸಿರಾಡುವುದು ಕಷ್ಟ. ನಮಗೆ ಉಸಿರು ನೀಡುವ ಮರಗಳ ನಾಶ ಮಾಡುವುದು ಸರಿಯೇ? ಒಂದು ಬಾರಿ ನಾವು ಯೋಚಿಸಬೇಕಿದೆ.

ಉಸಿರು ನೀಡುವ ಮರಗಳ ಹನನ ಸರಿಯೇ? ಬದಲಾವಣೆ ಅಗತ್ಯ ಆದರೆ, ನಮ್ಮನ್ನೇ ನಾಶಗೊಳಿಸುವಷ್ಟಲ್ಲ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Mar 04, 2023 | 10:31 AM

Share

ಆಧುನಿಕ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳು ಅನೇಕ, ಆದರೆ ಹಲವಾರು ಅಭಿವೃದ್ಧಿಗಳು ಮನುಷ್ಯನ ಜೀವನವನ್ನು ರೂಪಿಸಲು ಸಹಕಾರಿಯಾಗಿದೆ. ಆದರೆ ಅತಿಯಾದ ಬದಲಾವಣೆಗಳು ಅಭಿವೃದ್ಧಿಗಳು ಉಂಟಾದಾಗ, ಪರಿಸರದ ಮೇಲೆ ಹಾನಿ ಆಗುವ ಸಂಭವ ಹೆಚ್ಚು. ಮುಖ್ಯವಾಗಿ ಅಭಿವೃದ್ಧಿ ಎಂದಾಗ ಕೂಡಲೇ ನೆನಪಾಗುವುದು ರಸ್ತೆಗಳು, ಕಟ್ಟಡಗಳು, ಡ್ಯಾಮ್​​ಗಳು ಮುಂತಾದ ವಿಚಾರಗಳು ಸರಿ. ಕಟ್ಟಡಗಳ ಹಾಗೂ ಡ್ಯಾಮ್​​ಗಳ ನಿರ್ಮಾಣಕ್ಕಾಗಿ ಹಲವಾರು ಮರಗಳ ನಾಶ ಉಂಟಾಗಿದೆ. ಇದರಿಂದ ಪ್ರಾಣಿಗಳಿಗೆ ನೆಲೆ ನಿಲ್ಲಲು ಜಾಗವಿಲ್ಲದೆ, ಆಹಾರವಿಲ್ಲದೆ ನಾಡಿಗೆ ಬರುತ್ತಿದೆ. ಮನುಷ್ಯನ ಅತಿಯಾದ ಆಸೆಯಿಂದ ಅರಣ್ಯ ನಾಶ ಆಗುತ್ತಿದೆ. ನಮ್ಮ ವನಸಂಪತ್ತು ನಾಶವಾಗಲು ಕಾರಣವಾಗುತ್ತಿದೆ. ಹಿಂದಿನ ಕಾಲದಲ್ಲಿ ಅಭಿವೃದ್ಧಿ ಪಥದಲ್ಲಿ ನಾವು ಇದ್ದಾಗ ಎಲ್ಲಾ ಹೊಸ ಕ್ರಮಗಳನ್ನು ಅನುಸರಿಸುತ್ತಿದ್ದೇವು. ಇದರಿಂದ ಮುಂದೆ ಪರಿಸರದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಮರೆತ್ತಿದ್ದೇವೆ. ದೊಡ್ಡ ಕಟ್ಟಡಗಳ ನಿರ್ಮಾಣವು ಅಭಿವೃದ್ಧಿಯ ಉದ್ದೇಶವನ್ನು ಹೊಂದಿದೆ, ಆದರೆ ಅದು ಮಾರಕವಾದ ಸಂದರ್ಭವನ್ನು ನಾವು ಈಗ ಎದುರಿಸುತ್ತಿದ್ದೇವೆ.

ವನ್ಯಜೀವಿಗಳು ಆಹಾರಕ್ಕಾಗಿ ನಾಡಿಗೆ ಲಗ್ಗೆಯಿಡುತ್ತಿವೆ. ಮರಗಳನ್ನು ನಾಶ ಮಾಡಿ. ನಮಗೆ ಬೇಕಾದ ರೀತಿಯಲ್ಲಿ ಆ ಸ್ಥಳವನ್ನು ಸಮತಟ್ಟುಗೊಳಿಸಿ, ಅದರ ಮೇಲೆ ಕಟ್ಟಡ ನಿರ್ಮಾಣ ಮಾಡುತ್ತಾರೆ. ಇದರ ಜತೆಗೆ ಮಣ್ಣಿ ಫಲವತೆಗಳು ನಾಶವಾಗಿ, ಅಡಿಪಾಯವು ಮೃದುವಾಗಿ ಎತ್ತರಕ್ಕೆ ನಿಂತ ಕಟ್ಟಡಗಳನ್ನು ನೆಲ ಉರುಳಿಸುವ ಸಾಧ್ಯಗಳು ಕೂಡ ಇದೆ. ಇನ್ನೂ ದೊಡ್ಡ ದೊಡ್ಡ ಕಟ್ಟಡಗಳು ಸಾಲು ಸಾಲು ಎತ್ತರಕ್ಕೆ ಎದ್ದು ನಿಂತಿರುತ್ತದೆ, ಇದರಿಂದ ಮಳೆಯ ನೀರು ಅಥವಾ ನಾವು ಉಪಯೋಗಿಸಿದ ನೀರುಗಳು ಹೋಗಲು ದಾರಿಯೇ ಅಥವಾ ವ್ಯವಸ್ಥೆಗಳು ಇರುವುದಿಲ್ಲ. ಇದರಿಂದ ಗುಡ್ಡಗಳು ಕುಸಿದು ಅಪಾಯವನ್ನು ಉಂಟು ಮಾಡುತ್ತದೆ.

ಇದನ್ನೂ ಓದಿ:ನೀವು ಪ್ರತಿದಿನ ಸಂತೋಷವಾಗಿರಲು ಈ ಸಲಹೆಗಳನ್ನು ಪಾಲಿಸಿ

ಮರಗಳು ಇಲ್ಲವಾದರೆ ಮನುಷ್ಯ ಉಳಿಯುವುದು ಕಷ್ಟ. ಉಸಿರಾಡುವುದು ಕಷ್ಟ. ನಮಗೆ ಉಸಿರು ನೀಡುವ ಮರಗಳ ನಾಶ ಮಾಡುವುದು ಸರಿಯೇ? ಒಂದು ಬಾರಿ ನಾವು ಯೋಚಿಸಬೇಕಿದೆ. ಮರಗಳನ್ನು ನಾಶ ಮಾಡಿದರೆ ಪ್ರಕೃತಿ ನಮಗೆ ಯಾವ ರೀತಿಯ ಹೊಡೆತ ನೀಡುತ್ತದೆ ಎಂಬದಕ್ಕೆ ಟರ್ಕಿ ಭೂಕಂಪ, ಇದು ಮಾತ್ರವಲ್ಲದೆ, ಭಾರತದ ಅಸ್ಸಾಂ, ಕರ್ನಾಟಕ, ಗುಜರಾತ್ ಇನ್ನೂ ಅನೇಕ ರಾಜ್ಯಗಳಲ್ಲಿ ಭೂಕಂಪ ಆಗಿರುವ ಸಾಕ್ಷಿಗಳು ನಮ್ಮ ಕಣ್ಮುಂದೆ ಇದೆ. ಈ ಮಧ್ಯೆ ನಮ್ಮ ಬದುಕನ್ನು ಕಟ್ಟಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆ ಮೂಡುವುದು ಸಹಜ, ಅದೊಂದು ಹಿರಿಯರ ಮಾತಿನಂತೆ ಮನಷ್ಯ ಆಸೆ ಎಂದಿಗೂ ಮುಗಿಯದು, ಆದರೆ ಆಸೆ ಇರಬೇಕು ಪ್ರಕೃತಿ ಜೊತೆಗೆ ನಮ್ಮ ಜೀವನವನ್ನು ನಾಶ ಮಾಡುವಷ್ಟಲ್ಲ, ಆಧುನಿಕ ಜಗತ್ತಿಗೆ ತೆರೆದುಕೊಳ್ಳವ ಭರದಲ್ಲಿ ಜಗತ್ತಿನ ನಾಶಕ್ಕೆ ಕಾರಣವಾಗಬಹುದು. ಮುಖ್ಯವಾಗಿ ನನ್ನ ಆಶಯ ಇಷ್ಟೇ .ನಾವು ಪರಿಸರವನ್ನು ಉಳಿಸೋಣ ಅದು ನಮ್ಮನ್ನು ಉಳಿಸುತ್ತದೆ. ಅಭಿವೃದ್ಧಿ ಆಗಬೇಕು ಎಂಬ ಮಾತ್ರಕ್ಕೆ ಮರಗಳ ನಾಶವಾಗುತ್ತಾ ಹೋದ ಹಾಗೆ ಭವಿಷ್ಯತ್ತಿನಲ್ಲಿ ಉಸಿರಾಟ ಮಾಡಲು ಗಾಳಿ ಸಿಗದೇ ಇರಬಹುದು.

ಲೇಖನ: ದೇವಿಶ್ರೀ ಶಂಕರಪುರ

Published On - 9:16 am, Sat, 4 March 23

ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​