AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ಮನಸುಗಳಿಂದ ಸರ್ಕಾರಿ ಶಾಲೆ ಉಳಿಸಿ ಅಭಿಯಾನ: ಕಾಸರಗೋಡಿನ ಕನ್ನಡ ಶಾಲೆಗೆ ಬಂತು ಹೊಸ ಕಳೆ

ಕರ್ನಾಟಕ ಮತ್ತು ಕೇರಳ ಗಡಿಯಲ್ಲಿರುವ ಕಾಸರಗೋಡಿನ ಬಂಗ್ರ ಮಂಜೇಶ್ವರದ ಸರ್ಕಾರಿ ಕನ್ನಡ ಶಾಲೆಯನ್ನು ಸುಣ್ಣ-ಬಣ್ಣ ಹೊಡೆದು, ಕರುನಾಡಿನ ಮೊದಲ ರಾಷ್ಟ್ರಕವಿ ಗೋವಿಂದ ಪೈ ಹಾಗೂ ಎರಡನೇ ರಾಷ್ಟ್ರಕವಿ ಕುವೆಂಪು ಮತ್ತು ಕಾಸರಗೋಡು ಕರ್ನಾಟಕಕ್ಕೆ ಸೇರಿಸುವುದಕ್ಕೆ ಹೋರಾಟ ಮಾಡಿದ ಕವಿ ಕೈಯರ ಕಿಂಞಣ್ಣ ರೈ ರವರ‌ ಚಿತ್ರಗಳನ್ನು ಬಹಳಷ್ಟು ಸೊಗಸಾಗಿ ಬಿಡಿಸಿದ್ದಾರೆ ಕನ್ನಡ ಮಸನುಸುಗಳ ಸಂಘ

ಕನ್ನಡ ಮನಸುಗಳಿಂದ ಸರ್ಕಾರಿ ಶಾಲೆ ಉಳಿಸಿ ಅಭಿಯಾನ: ಕಾಸರಗೋಡಿನ ಕನ್ನಡ ಶಾಲೆಗೆ ಬಂತು ಹೊಸ ಕಳೆ
ಕಾಸರಗೋಡು ಸರ್ಕಾರಿ ಶಾಲೆ ಜೀರ್ಣೋದ್ಧಾರ
ಆಯೇಷಾ ಬಾನು
| Edited By: |

Updated on: Mar 03, 2023 | 2:54 PM

Share

ಕನ್ನಡಿಗರಾದ ನಮ್ಗೆಲ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಚಲನಚಿತ್ರ ಗೊತ್ತೆ ಇದೆ. ಆದ್ರೆ ಇವತ್ತು ನಾವಿಲ್ಲಿ ಹೇಳ್ತಿರೋದು ಸರ್ಕಾರಿ ಶಾಲೆ ಉಳಿಸಿ ಅಭಿಯಾನ ಆ್ಯಟ್​​ ಕಾಸರಗೋಡು… ಹೌದು, ಇದು ಕನ್ನಡಕ್ಕಾಗಿ ಕನ್ನಡಮ್ಮನ ಸೇವೆಗಾಗಿ ಇರುವ ಕನ್ನಡ ಮನಸುಗಳು ಕರ್ನಾಟಕ ತಂಡದ ಜೀವಾಳ‌ವಾಗಿರುವ ಸರ್ಕಾರಿ ಶಾಲೆ ಉಳಿಸಿ ಅಭಿಯಾನ.

ಈಗಾಗಲೇ 15 ಅಭಿಯಾನಗಳನ್ನ ಯಶಸ್ವಿಯಾಗಿ ಮುಗಿಸಿ, 16ನೇ ಅಧ್ಯಾಯವನ್ನು ಬಾರೀ ವಿಭಿನ್ನವಾಗಿ ಸದ್ದಿಲ್ಲದೇ ಯಶಸ್ವಿ ಮಾಡಿದ್ದಾರೆ ತಂಡದ ಸ್ವಯಂಸೇವಕರು. ತಂಡದ ಅಧ್ಯಕ್ಷ ಪವನ್ ದರೇಗುಂಡಿಯವರ ನೇತೃತ್ವದಲ್ಲಿ ಕರ್ನಾಟಕ ಮತ್ತು ಕೇರಳದ ಗಡಿಯಲ್ಲಿರುವ ಕಾಸರಗೋಡಿನ ಬಂಗ್ರ ಮಂಜೇಶ್ವರದ ಸರ್ಕಾರಿ ಕನ್ನಡ ಶಾಲೆಯನ್ನು ಸುಣ್ಣ-ಬಣ್ಣ ಹೊಡೆದು, ಕರುನಾಡಿನ ಮೊದಲ ರಾಷ್ಟ್ರಕವಿ ಗೋವಿಂದ ಪೈ ಹಾಗೂ ಎರಡನೇ ರಾಷ್ಟ್ರಕವಿ ಕುವೆಂಪು ಮತ್ತು ಕಾಸರಗೋಡು ಕರ್ನಾಟಕಕ್ಕೆ ಸೇರಿಸುವುದಕ್ಕೆ ಹೋರಾಟ ಮಾಡಿದ ಕವಿ ಕೈಯರ ಕಿಂಞಣ್ಣ ರೈ ರವರ‌ ಚಿತ್ರಗಳನ್ನು ಬಹಳಷ್ಟು ಸೊಗಸಾಗಿ ಬಿಡಿಸಿದ್ದಾರೆ ತಂಡದ ಚಿತ್ರ ಕಲಾವಿದರಾದ ಯಲ್ಲಪ್ಪ ವೈ ಕುಂಬಾರ ಮತ್ತು ಶುಭೋದ್ … ಅಲ್ಲದೆ ಶಾಲೆ ಬೇಕಾದ ಫ್ಯಾನ್, ಟ್ಯೂಬ್ ಲೆಟ್ ಮನ್ನಿತ್ತರೆ ಸೌಕರ್ಯಗಳನ್ನು ತಂಡದ ವತಿಯಿಂದ ಶಾಲೆಗೆ ಕಲ್ಪಿಸಲಾಯಿತು. 50-60 ತಂಡದ ಯುವ ಕನ್ನಡ ಮನಸುಗಳು 30 ಕೊಠಡಿಗಳಿರುವ ಶಾಲೆಯನ್ನ ಕೇವಲ ಒಂದುವರೆ ದಿನದಲ್ಲಿ ಸಿಂಗರಿಸಿದ್ದು ಅದ್ಭುತವೇ ಸರಿ.

ಕರ್ನಾಟಕದ ಹವ್ಯಾಸಿ ತಂಡವೊಂದು ತಮ್ಮದೇ ಹಣಕಾಸು ವಿನಿಯೋಗಿಸಿ (Self Financing).. ಹೆಚ್ಚಿನವರು ಐಟಿ ಬಿಟಿ ಉದ್ಯೋಗಾರ್ತಿಗಳು ಬಂಗ್ರ ಮಂಜೇಶ್ವರ ಸರಕಾರಿ ಶಾಲೆ ಕಟ್ಟಡಗಳನ್ನು ಪೂರ್ಣವಾಗಿ ಶಾಸ್ತ್ರೀಯವಾಗಿ ಬಣ್ಣ ಬಳಿದು ಕೊಟ್ಟಿದ್ದಾರೆ. ಅವರ ಉದ್ದೇಶವೇ ಅಧಿಕ ಸಂಖ್ಯೆಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿರುವ ಶಾಲೆಯನ್ನು ಪ್ರೋತ್ಸಾಹಿಸುವುದು…. ನಿಜವಾದ ಅರ್ಥದಲ್ಲಿ ಇದೊಂದು ಅರ್ಥಪೂರ್ಣ ಕನ್ನಡ ಸೇವೆ.

ಈ ಅಭಿಯಾನದ ಮೂಲಕ ಮಕ್ಕಳ ಹಾಜರಾತಿ ಹೆಚ್ಚಳವಾಗುವ ಹಾಗೂ ಕನ್ನಡ ಮಾಧ್ಯಮಕ್ಕೆ ಸೇರುವ ಕುರಿತು ಮಕ್ಕಳ ಹಾಗೂ ಪೋಷಕರ ಆಸಕ್ತಿ ಹೆಚ್ಚಾಗುವ ನಿರೀಕ್ಷೆಯಲ್ಲಿದೆ ಕನ್ನಡ ಮನಸುಗಳು ಕರ್ನಾಟಕ ತಂಡ.

– ಕನ್ನಡ ಮನಸುಗಳು ಸಂಘ ಕರ್ನಾಟಕ

ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್