AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Love Story: ಬಿರುಸಿನ ಮಳೆಯಲ್ಲಿ ಹೃದಯಕ್ಕೆ ಪ್ರೇಮದ ಛಾವಣಿ ಹೊದೆಸಿ ಹೋದಳು ಚೆಲುವೆ

ನನ್ನ ಕಣ್ಣಿಗೆ ಕಂಡಳು  ಚೆಲುವೆ. ಆ ಕಾಲೇಜಿನಲ್ಲಿ ಬಹಳಷ್ಟು ವಿದ್ಯಾರ್ಥಿಗಳಲ್ಲಿ, ಅವಳ ಕಪ್ಪು ಬಣ್ಣದ ಉಡುಪು ಮತ್ತು ಮುತ್ತಿನಂತ ನಗು ನೋಡುತ್ತಾ ಮೌನಿಯಾದೆ ನಾ. ಊಟದ ನಂತರ ಅವಳ ಜೊತೆ ಮಾತಾಡೋಣ ಅನ್ಕೊಂಡೆ. ಆದರೆ ಅದೇ ಸಮಯಕ್ಕೆ ಮಧ್ಯಾಹ್ನದ ಉಪನ್ಯಾಸ ಕಾರ್ಯಕ್ರಮ ಶುರುವಾಯಿತು. ಕೊಠಡಿಯಲ್ಲಿ ಕುಳಿತಾಗ ನನಗೆ ಚಳಿಯ ಮಧ್ಯೆ ಚೆಲುವೆಯ ಆಗಮನ ಬೆಚ್ಚಗಿನ ಸ್ಪರ್ಶಾನುಭವಾಯಿತು.

Love Story: ಬಿರುಸಿನ ಮಳೆಯಲ್ಲಿ ಹೃದಯಕ್ಕೆ ಪ್ರೇಮದ ಛಾವಣಿ ಹೊದೆಸಿ ಹೋದಳು ಚೆಲುವೆ
Love Story
TV9 Web
| Edited By: |

Updated on: Sep 04, 2022 | 8:09 AM

Share

ಮಳೆಗಾಲದಲ್ಲಿ ವರುಣನ ಆರ್ಭಟ ಜೋರಾಗಿತ್ತು. ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾಗ “ಮಳೆಯಲಿ ಜೊತೆಯಲಿ” ಹಾಡು ಕೇಳುತ್ತಿದ್ದೆ. ಆ ದಿನ ಕಾಲೇಜಿನಲ್ಲಿ ನಡೆಯುತ್ತಿದ್ದ ವಿಶೇಷ ಉಪನ್ಯಾಸದ ಕಾರ್ಯಕ್ರಮದಲ್ಲಿ ನಾನು ಮತ್ತು ನನ್ನ ಸ್ನೇಹಿತರು ಭಾಗವಹಿಸಿದೆವು. ಈ ಕಾರ್ಯಕ್ರಮಕ್ಕೆ ಅನೇಕರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ತಿಂಡಿ ವ್ಯವಸ್ಥೆ ಮಾಡಿದ್ದರು ಬೆಳಿಗ್ಗಿನ ಉಪಹಾರಕ್ಕೆ ದೋಸೆ ಕೊಟ್ಟಿರು. ನಂತರ ಉಪನ್ಯಾಸ ಕಾರ್ಯಕ್ರಮ ಪ್ರಾರಂಭವಾಯಿತು, ಮೋಡ ಕವಿದ ವಾತಾವರಣದಿಂದ ನನಗೂ ಸ್ವಲ್ಪ ನಿದ್ದೆ ಬರುತ್ತಿತ್ತು. ನಮ್ಮ ಅದೃಷ್ಟಕ್ಕೆ ಬೆಳಗ್ಗೆಯ ಉಪನ್ಯಾಸ ಬೇಗ ಮುಗಿಯಿತು. ನಂತರ ಮಧ್ಯಾಹ್ನ ಬಿಸಿಬಿಸಿಯಾದ ವೆಜ್ ಮತ್ತು ನಾನ್ ವೆಜ್ ಊಟದ ವ್ಯವಸ್ಥೆ ಇತ್ತು.

ಊಟ ಮಾಡುವಾಗ, ನನ್ನ ಕಣ್ಣಿಗೆ ಕಂಡಳು  ಚೆಲುವೆ. ಆ ಕಾಲೇಜಿನಲ್ಲಿ ಬಹಳಷ್ಟು ವಿದ್ಯಾರ್ಥಿಗಳಲ್ಲಿ, ಅವಳ ಕಪ್ಪು ಬಣ್ಣದ ಉಡುಪು ಮತ್ತು ಮುತ್ತಿನಂತ ನಗು ನೋಡುತ್ತಾ ಮೌನಿಯಾದೆ ನಾ. ಊಟದ ನಂತರ ಅವಳ ಜೊತೆ ಮಾತಾಡೋಣ ಅನ್ಕೊಂಡೆ. ಆದರೆ ಅದೇ ಸಮಯಕ್ಕೆ ಮಧ್ಯಾಹ್ನದ ಉಪನ್ಯಾಸ ಕಾರ್ಯಕ್ರಮ ಶುರುವಾಯಿತು. ಕೊಠಡಿಯಲ್ಲಿ ಕುಳಿತಾಗ ನನಗೆ ಚಳಿಯ ಮಧ್ಯೆ ಚೆಲುವೆಯ ಆಗಮನ ಬೆಚ್ಚಗಿನ ಸ್ಪರ್ಶಾನುಭವಾಯಿತು. ನನ್ನ ಮನಸ್ಸಿನಲ್ಲಿ ಅವಳನ್ನು ಮಾತನಾಡಿಸುವ ತವಕ, ಎದೆ ಬಡಿತ ಹೆಚ್ಚಾಗುತ್ತಿತ್ತು. ಆದರೂ ಬುದ್ಧನಂತೆ ಮೌನಿಯಾಗಿ ತಪಸ್ಸಿನಿಂದ ಉಪನ್ಯಾಸ ಕೇಳುತ್ತಿದ್ದೆ.

ಉಪನ್ಯಾಸ ಮುಗಿಯೋ ಮುಂಚೆಯೇ ಚೆಲುವೆ ಅವಳ ಗೆಳತಿಯೊಂದಿಗೆ ಕೊಠಡಿಯಿಂದ ಹೊರಗೆ ಹೋದಳು. ನಾನು ಇನ್ನೇನು ಹೋಗೋಣ ಅನ್ನುವಷ್ಟರಲ್ಲಿ ನಮ್ಮ ಶಿಕ್ಷಕರೂ ಅಲ್ಲಿ ಉಪಸ್ಥಿತರಿದ್ದ ಕಾರಣ ಸುಮ್ಮನೆ ಕುಳಿತುಕೊಳ್ಳಬೇಕಾಯಿತು. ಸಂಜೆ ವೇಳೆ ಕಾಲೇಜಿನಲ್ಲಿ ಹುಡುಕಿದೆ ಚೆಲುವೆ ಸಿಗಲಿಲ್ಲ. ಜೋರಾದ ಮಳೆಯಂತೆ ಬಂದು ಪ್ರೇಮದ ನೀರನ್ನು ಹರಿಸಿ ಹೋದಳು ಚೆಲುವೆ.

ಆನಂದ ಜೇವೂರ್, ಕಲಬುರಗಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ