AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day 2023: ನಮ್ಮ ಈ ಪ್ರೀತಿಯ ಕಥೆಗೆ ಏನೆಂದು ಹೆಸರಿಡಲಿ? ಪ್ರೀತಿಯಲ್ಲಿ ಇವೆಲ್ಲ ಸಹಜ

ನಂಗೆ ಯಾಕೆ ಮೆಸೇಜ್ ಮಾಡಿದ್ದಿರಾ? ಎಂಬ ಪ್ರಶ್ನೆಯ ಮೂಲಕ ಆರಂಭವಾದ ಸಂಭಾಷಣೆ ಇಂದು ಯಾಕೋ ಮೆಸೇಜ್ ಮಾಡಿಲ್ಲಾ? ನನ್ನ ಮರೆತು ಹೊದ್ಯಾ? ಅನ್ನೋವಷ್ಟು ಸಲುಗೆ. ತಿಳಿ ನೀರಿನಂತಿದ್ದ ನನ್ನ ಮನದಲ್ಲಿ ಅಂದು ಪ್ರೀತಿಯ ಬೀಜ ಬಿತ್ತಿ ಹೃದಯದಾಳದಲ್ಲಿ ಪ್ರೀತಿಯ ಚಿಗುರು ಬೆಳೆದಿದ್ದು ನನಗೇ ಆಶ್ಚರ್ಯ.

Valentine's Day 2023: ನಮ್ಮ ಈ ಪ್ರೀತಿಯ ಕಥೆಗೆ ಏನೆಂದು ಹೆಸರಿಡಲಿ? ಪ್ರೀತಿಯಲ್ಲಿ ಇವೆಲ್ಲ ಸಹಜ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 14, 2023 | 5:58 PM

Share

ಎಂದಿನಂತೆ ಕಾಲೇಜು ಮುಗಿಸಿ ಮನೆಗೆ ಬಂದು ಮೊಬೈಲ್ ಹಿಡಿದುಕೊಂಡೆ. ಡಾಟಾ ಆನ್ ಮಾಡಿ ವಾಟ್ಸಾಪ್ ಓಪನ್ ಮಾಡಿದಾಗ ಪ್ರತೀ ದಿನ ಬರುತ್ತಿದ್ದ ಸಂದೇಶಗಳ ಜೊತೆಗೆ ಒಂದು ಅಪರಿಚಿತ ನಂಬರ್‌ನಿಂದ ‘ಹಾಯ್’ ಅನ್ನೋ ಸಂದೇಶ ಬಂದಿತ್ತು. ಯಾರಿದು? ನಂಗೆ ಯಾಕೆ ಮೆಸೇಜ್ ಮಾಡಿದ್ದಿರಾ? ಎಂಬ ಪ್ರಶ್ನೆಯ ಮೂಲಕ ಆರಂಭವಾದ ಸಂಭಾಷಣೆ ಇಂದು ಯಾಕೋ ಮೆಸೇಜ್ ಮಾಡಿಲ್ಲಾ? ನನ್ನ ಮರೆತು ಹೊದ್ಯಾ? ಅನ್ನೋವಷ್ಟು ಸಲುಗೆ. ತಿಳಿ ನೀರಿನಂತಿದ್ದ ನನ್ನ ಮನದಲ್ಲಿ ಅಂದು ಪ್ರೀತಿಯ ಬೀಜ ಬಿತ್ತಿ ಹೃದಯದಾಳದಲ್ಲಿ ಪ್ರೀತಿಯ ಚಿಗುರು ಬೆಳೆದಿದ್ದು ನನಗೇ ಆಶ್ಚರ್ಯ. ಲವ್ ಅಂದ್ರೆ ಹುಚ್ಚಾಟ, ಇನ್ನು ನಂಬಿಕೆ ಅಂತೂ ದೂರದ ಮಾತು. ಅರೆ, ನಾನು ಪ್ರೀತೀಲಿ ಬೀಳ್ತೀನಾ? ಸಾಧ್ಯಾನೇ ಇಲ್ಲಾ ಅಂತಿದ್ದೋಳು ಅವನ ಮುಖ ದರ್ಶನವೂ ಆಗದೇ, ಬರೀ ಮಾತಿನ ಶೈಲಿಗೇ ಮನಸೋತಿದ್ದೆ. ದಿನೇ ದಿನೇ ನನಗೆ ಅರಿವಿಲ್ಲದಂತೆಯೇ ಒಂದೊಂದೇ ಹೆಜ್ಜೆ ಎಂಬಂತೆ ಪ್ರೇಮಲೋಕಕ್ಕೆ ಪ್ರವೇಶ ಮಾಡಿದ್ದೆ.

ಆ ದಿನ ಇನ್ನೂ ನೆನಪಿದೆ ಒಂದು ಬಾರಿಯೂ ಮುಖವೇ ತೋರದ ಆತ ಪ್ರೀತಿಯ ಮೊದಲನೇ ಕಾಣಿಕೆಯೆಂಬಂತೆ ನಿಲ್ಲಿಸಿದ್ದ ನನ್ನ ಸ್ಕೂಟರ್‌ನ ಮೇಲೆ ಕೆಂಪು ಗುಲಾಬಿಯೊಂದನ್ನು ಇಟ್ಟು ಹೋಗಿದ್ದ. ಅದನ್ನು ಕಂಡ ನನ್ನ ಮನದಲ್ಲಿ ಆತಂಕದ ಜೊತೆಗೆ ಹೆಳಲಾಗದ ಅನುಭವ. ಅಂದ ಹಾಗೆ ಆತನನ್ನು ಕಂಡುಹಿಡಿಯಲು ದೊಡ್ಡ ಕಾರ್ಯಚರಣೆ ಮಾಡಲಾಗಿತ್ತು. ದಿನವಿಡೀ ಸಂದೇಶ ಕಳುಹಿಸುತ್ತಿದ್ದರೂ ನಿಮ್ಮ ಫೋಟೋ ಕಳಿಸಿ ಅಂದಾಗಲೆಲ್ಲ ಇಲ್ಲ ಎನ್ನುತ್ತಲೇ ಅದರ ವಿಷಯ ಮರೆಸಿ ಬೇರೆ ವಿಚಾರ ಮಾತನಾಡುತ್ತಿದ್ದ. ಏನೇ ಆಗಲಿ ಕಂಡು ಹಿಡಿಯಲೇಬೇಕು ಎಂದು ಪಣತೊಟ್ಟ ನಾನು ಆತ ಕಳುಹಿಸಿದ ಫೋಟೋಗಳೆಲ್ಲವನ್ನೂ ಸಂಗ್ರಹಿಸತೊಡಗಿದೆ. ಹೀಗೇ ಒಂದು ದಿನ ಕಾಲೇಜಿಗೆ ಹೋಗುತ್ತಿದ್ದ ನನಗೆ ಮಾರ್ಗ ಮಧ್ಯೆ ಗೆಳತಿಯ ಕರೆ ಬಂದ ಕಾರಣ ಸ್ಕೂಟರ್ ಬದಿಗೆ ನಿಲ್ಲಿಸಿ ಕರೆ ಸ್ವೀಕರಿದೆ.

ಇದನ್ನೂ ಓದಿ: ಕನಸನು ಗುಣಿಸುವಂಥಾ ನೆನಪನು ಎಣಿಸುವಂಥ ಹೃದಯದ ಗಣಿತ ನೀನು ನನ್ನ ಮನದ ಅರಸ

ಮಾತನಾಡುತ್ತಾ ಸುತ್ತ ಕಣ್ಣು ಹಾಯಿಸಿದ ಬದಿಯಲ್ಲಿದ್ದ ಆ ಜಾಗ ಎಲ್ಲೋ ನೋಡಿದ ನೆನಪು. ತಕ್ಷಣ ಮೊಬೈಲ್ ಗ್ಯಾಲರಿ ತೆರೆದು ನೋಡಿದರೆ ಅದೇ ಜಾಗ ಅಂತೂ ಒಂದು ಕ್ಲೂ ಸಿಕ್ಕಿತು. ಹೀಗೆ ಒಂದೊಂದೇ ಕ್ಲೂ ಸಂಗ್ರಹಿಸಿದ್ದ ನನಗೆ ಕೊನೆಗೂ ಎಡಿಟ್ ಮಾಡಿ ಕಳುಹಿಸಿದ್ದ ಆ ಫೋಟೋಗೆ ಸರಿ ಹೊಂದುವ ಮುಖ ಕಂಡು ಹಿಡಿದಿದ್ದೆ. ನಗುಮೊಗದ ಚೆಲುವ, ಮೆರುಗು ಹೆಚ್ಚಿಸುವ ಗುಂಗುರು ಕೂದಲು ಆತನಿಗೆ ಗೊತ್ತಿಲ್ಲದೇ ದೂರದಿಂದಲೇ ಮುಖ ನೋಡಿ ನಾಚಿದ್ದೆ. ಅಲ್ಲಿಯವರೆಗೂ ಹೇಳಿಕೊಂಡಿರದ ಮನದಾಳದ ಪ್ರೀತಿ ಇಂದೇ ಹೇಳಿಕೊಂಡುಬಿಡಲೇ? ಇಲ್ಲ! ಅಷ್ಟು ಸಲೀಸಾಗಿ ಹೇಳುವುದು ಬೇಡ ಇಷ್ಟು ದಿನ ನನ್ನ ಕಾಯಿಸಿದವನವನ ಮೇಲೆ ಅಂದು ಮೂಡಿದ್ದು ಪ್ರೀತಿಯ ತಿರಸ್ಕಾರದ ಭಾವನೆ.

ಅಲ್ಲಿಗೆ ಆತ ಆರಂಭಿಸಿದ್ದ ಕಣ್ಣಾ ಮುಚ್ಚಾಲೆ ಆಟದಲ್ಲಿ ಗೆಲುವು ಸಾಧಿಸಿದ್ದು ನಾನು. ದೊಡ್ಡ ಸುಳ್ಳಿನಿಂದಲೇ ಆರಂಭವಾದ ಪ್ರೀತಿಯಲ್ಲಿ ಆತ ಅಲ್ಪ ಸ್ವಲ್ಪ ಸುಳ್ಳು ಹೇಳಿದರೂ ನಿಜ ಗೊತ್ತಾಗುವ ಹೊತ್ತಿಗೆ ನನ್ನ ಸಿಟ್ಟು ಆತನ ಕುಡಿ ಮೀಸೆ ಹಿಂದಿನ ನಗುವಿಗೆ ಕರಗಿ ತುಟಿಯ ಮೇಲೆ ನಗುವಿನ ಬಣ್ಣ ಮೂಡುವುದಂತೂ ನಿಜ. ದಿನ ಕಳೆದಂತೆ ಮಾತು-ಕತೆ, ತಮಾಷೆ, ತುಂಟಾಟ, ಹುಚ್ಚಾಟ ಹೆಚ್ಚಾಗುವುದರ ಜೊತೆ ಜೊತೆಗೆ ಜಗಳವೂ ಹೊರತಾಗಿಲ್ಲವೆಂಬಂತೆ ಈ ಎಲ್ಲಾ ಅಂಶಗಳು ಮಿಶ್ರಿತವಾದ ಪರಿಪೂರ್ಣ ಪ್ರೀತಿ ನಮ್ಮದು. ಈ ನಮ್ಮ ಪ್ರೀತಿಯ ಕಥೆಗೆ ಏನೆಂದು ಹೆಸರಿಡಲಿ?

ಪ್ರೇಮ ಪತ್ರ: ಪ್ರೀತಿ ಹಡಪದ

Follow Us
Web contact
Web contact

TV9 Kannada

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ