AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day 2023: ಕನಸನು ಗುಣಿಸುವಂಥಾ ನೆನಪನು ಎಣಿಸುವಂಥ ಹೃದಯದ ಗಣಿತ ನೀನು ನನ್ನ ಮನದ ಅರಸ

ನನ್ನ ಬದುಕಿನ ಬಣ್ಣ ನೀನು! ಭರವಸೆ ನೀನು! ನನ್ನ ಪುಟ್ಟ ಕನಸಿನ ಲೋಕದ ರಾಜಕುಮಾರ ನೀನು. ನನ್ನ ಹೃದಯ ಸಾಮ್ರಾಜ್ಯದ ಸಾಮ್ರಾಟ ನೀನು. ಜಾದುಮಾಡಿದಂತೆ ನನ್ನ ಬದುಕಿಗೆ ವಿಸ್ಮಯದ ಒಲವನ್ನು ತಂದ ಜಾದುಗಾರ ನೀನು.

Valentine's Day 2023: ಕನಸನು ಗುಣಿಸುವಂಥಾ ನೆನಪನು ಎಣಿಸುವಂಥ ಹೃದಯದ ಗಣಿತ ನೀನು ನನ್ನ ಮನದ ಅರಸ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Feb 14, 2023 | 5:06 PM

Share

ನನ್ನ ಬದುಕಿನ ಬಣ್ಣ ನೀನು! ಭರವಸೆ ನೀನು! ನನ್ನ ಪುಟ್ಟ ಕನಸಿನ ಲೋಕದ ರಾಜಕುಮಾರ ನೀನು. ನನ್ನ ಹೃದಯ ಸಾಮ್ರಾಜ್ಯದ ಸಾಮ್ರಾಟ ನೀನು. ಜಾದುಮಾಡಿದಂತೆ ನನ್ನ ಬದುಕಿಗೆ ವಿಸ್ಮಯದ ಒಲವನ್ನು ತಂದ ಜಾದುಗಾರ ನೀನು. ಅದೇಕೋ ಕಾಣೆ, ನೀನು ನನ್ನ ಜೀವನಕ್ಕೆ ಬಂದ ಮೇಲೆ ಎಲ್ಲವೂ ರಂಗಾದಂತೆ ಭಾಸವಾಗುತ್ತಿದೆ. ಪ್ರತಿನಿತ್ಯವೂ ಹಬ್ಬದಂತೆ ಕಾಣುತ್ತಿದೆ. ಪ್ರೀತಿಯ ಮಳೆಹನಿ ಸುರಿದಂತಾಗುತ್ತಿದೆ. ನೀಲಿ ಆಗಸ ನೂರಾರು ಬಣ್ಣಗಳಿಂದ ಕಂಗೊಳಿಸುತ್ತಿರುವಂತಿದೆ. ನಾನು ಚಿಕ್ಕವಳಾಗಿದ್ದಾಗ.., ನಮ್ಮ ಮುದ್ದು ರಾಜಕುಮಾರಿನ, ಒಬ್ಬ ರಾಜಕುಮಾರ ಏಳು ಸಮುದ್ರ ದಾಟಿ, ಬಿಳಿ ಕುದುರೆ ಮೇಲೆ ಬಂದು ಕರೆದುಕೊಂಡು ಹೋಗ್ತಾನೆ ಅಂತ ಅಮ್ಮ ಹೇಳುತ್ತಿದ್ದ ಮಾತನ್ನು ಕಥೆಯೆಂದು ಭಾವಿಸಿದ್ದೆ. ಆದರೆ ಆ ಕನಸಿನ ಕಥೆಯನ್ನು ನನಸು ಮಾಡಿದ ನನ್ನ ಸ್ವಪ್ನಲೋಕದ ಕುವರ ನೀನು. ಬಿಳಿ ಕುದುರೆ ಅಲ್ಲದಿದ್ದರೂ, ಬಿಳಿ ಕಾರಿನಲ್ಲಿ ಬಂದು ನನ್ನ ಹೃದಯದ ಕೋಟೆಬಾಗಿಲು ತಟ್ಟಿದ ಚೆಲುವ ನೀನು.

ಅಂದ ಹಾಗೇ, ನನ್ನನ್ನು ನಿನ್ನ ಭಾವನಾವಲಯಕೆ ಸೇರಿಸಿಕೊಂಡ ಆ ದಿನ ನೆನಪಿದೆಯಾ!? ತಿಳಿ ನೀಲಿ ಆಕಾಶ, ತಂಗಾಳಿ, ಸಮುದ್ರದ ಅಲೆಯ ನಿನಾದ, ಸ್ವರ್ಗವೇ ಧರೆಗಿಳಿದಂತೆ ಭಾಸವಾಗಿದ್ದ ವಾತಾವರಣ, ಅಬ್ಬಬ್ಬಾ! ಆ ಚಿತ್ತಾರ ಲೋಕದ ಚಿತ್ರಣದ ಮಧ್ಯೆ ಬಿಳಿ ಸೂಟ್ ತೊಟ್ಟು ರೋಮ್ ದೇಶದ ಪ್ರಿನ್ಸ್​ನಂತೆ ನಿಂತಿದ್ದ ನಿನ್ನನ್ನು ಕಂಡು ಒಂದು ಕ್ಷಣ ನನ್ನನ್ನೇ ನಾನು ಮರೆತಿದ್ದೆ. ನೀನು ಪ್ರೀತಿಯಿಂದ ಕೊಟ್ಟ ಬಿಳಿ ಗೌನ್ ಧರಿಸಿ ನಿನ್ನ ಜೀವನಕ್ಕೆ ಬಲಗಾಲಿಟ್ಟು ಬರಲು ಕಾತುರದಿಂದ ಕಾಯುತ್ತಿದ್ದ ನನಗೆ, ಮಂಡಿಯೂರಿ ಕೈಗೆ ಉಂಗುರ ತೊಡಿಸಿ ಕೆಂಪು ಗುಲಾಬಿಯ ಹೂಮಳೆ ಸುರಿಸುತ್ತ , ಪ್ರೀತಿ ನಿವೇದನೆ ಮಾಡಿದ ಆ ಕ್ಷಣ ಇನ್ನೂ ಕಣ್ಣುಕಟ್ಟಿದಂತಿದೆ. ನಿನ್ನ ನಿಸ್ವಾರ್ಥ ಪ್ರೆಮಕ್ಕೆ ಇಲ್ಲ ಎನ್ನಲು ಸಾಧ್ಯವೇ ಗೆಳೆಯ, ನಿನ್ನನ್ನು ಒಪ್ಪಿ ಅಪ್ಪಿಕೊಂಡ ಆ ಘಳಿಗೆ ನನ್ನ ಬದುಕಿನ ಅತ್ಯಂತ ಸುಂದರ ಕ್ಷಣ’. ಅಂದು ನೀ ಕೊಟ್ಟ ಕನಸಿನ ರೆಕ್ಕೆಯನ್ನು ಕಟ್ಟಿಕೊಂಡು ಬಾನೆತ್ತರಕ್ಕೆ ಹಕ್ಕಿಯಂತೆ ಹಾರುತ್ತಿರುವೆ. ನಿನ್ನ ನಲುಮೆಯ ಲೋಕಕ್ಕೆ ನನ್ನನ್ನು ಪರಿಚಯಿಸಿದಕ್ಕೆ ಅದೆಷ್ಟು ಕೃತಜ್ಞತೆ ಸಲ್ಲಿಸಬೇಕೋ ನಾ ಅರಿಯೆ!

ಇದನ್ನೂ ಓದಿ:ವ್ಯಾಲೆಂಟೈನ್ಸ್​ ಡೇಗೆ ಜಿಯೋದಿಂದ ಧಮಕಾ ಆಫರ್ ಘೋಷಣೆ: ಕೂಡಲೇ ರಿಚಾರ್ಜ್ ಮಾಡಿರಿ

ಕೆಲಸದ ಕಾರಣದಿಂದ ದೂರದ ಅಮೇರಿಕ ದೇಶದಲ್ಲಿರುವ ನಿನ್ನನ್ನು ತುಂಬಾ ಮಿಸ್ ಮಾಡ್ಕೋತೀನಿ. ಸ್ಕೈಪ್, ವಿಡಿಯೋ ಕಾಲ್, ವಾಟ್ಸಾಪ್ ಅಂತಿರುವ ಈ ಕಾಲದಲ್ಲೂ ನಿನಗಾಗಿ ಪ್ರೇಮ ಪತ್ರ ಬರೆಯುತ್ತಿರುವ ನಿನ್ನ ಮನದರಸಿ ನಾನು. ದೂರದ ದೇಶಕ್ಕೆ ಈ ಪತ್ರ ತಲುಪದೇ ಇದ್ದರೂ ನನ್ನ ಪ್ರೇಮ ಸಂದೇಶ ನಿನ್ನನ್ನು ತಲುಪುತ್ತದೆ.

ಕನಸನು ಗುಣಿಸುವಂಥಾ ನೆನಪನು ಎಣಿಸುವಂಥ ಹೃದಯದ ಗಣಿತ ನೀನು. ಈ ಸಲ ನಿನ್ನೊಟ್ಟಿಗೆ ‘ವಾಲೆಂಟೈನ್ಸ್ ಡೇ’ ಆಚರಿಸಲು ಸಾಧ್ಯವಿಲ್ಲದಿದ್ದರೂ ಆಗಸದಷ್ಟು ಪ್ರೀತಿಯನ್ನು ನೀನಿದ್ದಲ್ಲಿಗೆ ಕಳುಹಿಸುತ್ತಿದ್ದೇನೆ. ನಿನ್ನ ಕಣ್ಣಲ್ಲಿ ನನ್ನ ಬಿಂಬ ಕಾಣಲು ನಿನ್ನ ದಾರಿಯನ್ನೇ ಎದುರು ನೋಡುತ್ತಿರುವೆ. ಜೀವದ ಗೆಳತಿಯನ್ನು ಕಾಣಲು ಆದಷ್ಟು ಬಂದುಬಿಡು ರೋಮಿಯೋ.

ಪ್ರೇಮ ಪತ್ರ: ತೇಜಶ್ವಿನಿ ಕಾಂತರಾಜ್

Published On - 5:00 pm, Tue, 14 February 23

Follow Us
Akshay Pallamajalu
Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ