AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day 2023: ಅವಳ ಜೊತೆಗೆ ಕಳೆದ ಆ ದಿನಗಳು ಶ್ವಾಶತ, ನನ್ನವಳು ಮಾಡಿದ ಸಹಾಯ ಯಾವತ್ತೂ ಮರೆಯಲು ಸಾಧ್ಯವಿಲ್ಲ

ದುಃಖಕ್ಕೆ ಪ್ರೀತಿಯನ್ನು ತುಂಬಿದ ದೇವತೆ ನೀನು, ಆ ಸಮಯದಲ್ಲಿ ಒಂದು ಬಾರಿ ನೀನು ಅಮ್ಮನಂತೆ ಕಂಡೆ, ನಿನ್ನ ಮುಖದಲ್ಲಿ ನನ್ನ ಅಮ್ಮನ್ನು ಕಾಣುತ್ತಿರುವೆ.

Valentine's Day 2023: ಅವಳ ಜೊತೆಗೆ ಕಳೆದ ಆ ದಿನಗಳು ಶ್ವಾಶತ, ನನ್ನವಳು ಮಾಡಿದ ಸಹಾಯ ಯಾವತ್ತೂ ಮರೆಯಲು ಸಾಧ್ಯವಿಲ್ಲ
Image Credit source: Vecteezy
TV9 Web
| Edited By: |

Updated on: Feb 14, 2023 | 3:58 PM

Share

ಪ್ರೀಯ ಗೆಳತಿ ‘ಪುಚ್ಚಿ’ ನಿನ್ನ ನೆನಪುಗಳ ಜೊತೆಯಲ್ಲೆ ನಾನು ಬದುಕುತ್ತಿರುವೆ. ನಿನ್ನ ಜೊತೆ ಕಳೆದ ದಿನಗಳ ಮೆಲುಕು ಹಾಕುತ್ತ ಈ ದಿನಗಳ ಕಳೆಯುತ್ತಿರುವೇ. ನಿನ್ನ ಮೊದಲ ಭಾರಿ ನೊಡಿದಾಗ ಮೊದಲು ಕೇಳಿದ ಮಾತು ನೆನಪಿದೆಯಾ ನಿಮ್ಮದ್ದು ಯಾವ ಊರು ಎಂದು. ನಿನ್ನಲ್ಲಿ ಭಯವಿದ್ದರು ನೀನು ತಡವರಿಸಿ ಯಾದಗಿರಿ ಎಂದೇ. ಅಲ್ಲಿಂದ ನಮ್ಮಿಬ್ಬರ ಸ್ನೇಹ ಶುರುವಾಗಿತ್ತು. ಅಂದು ನಾನು ಶಾಲೆ ಬಿಟ್ಟ ಮೇಲೆ ಹಾಸ್ಟೇಲ್‌ ಹೊಗದೆ ಒಬ್ಬನೇ ಡೆಸ್ಕ್ ಮೇಲೆ ಮಲಗಿರುವುದನ್ನು ನೋಡಿ, ಸನಿಹ ಬಂದು ಮಾತನಾಡಿಸಿ, ಮನೆಯ ನೆನಪಾಗುತ್ತಿದ್ದೀಯಾ ಎಂದು ಕೇಳಿದೆ. ನೀನು ನನ್ನ ಅಲ್ಲಿಂದ ಕರೆದುಕೊಂಡು ಹೋದೆ. ಅಂದು ನನ್ನ ದುಃಖಕ್ಕೆ ಪ್ರೀತಿಯನ್ನು ತುಂಬಿದ ದೇವತೆ ನೀನು, ಆ ಸಮಯದಲ್ಲಿ ಒಂದು ಬಾರಿ ನೀನು ಅಮ್ಮನಂತೆ ಕಂಡೆ, ನಿನ್ನ ಮುಖದಲ್ಲಿ ನನ್ನ ಅಮ್ಮನ್ನು ಕಾಣುತ್ತಿರುವೆ.

ಪುಚ್ಚಿ ನಿನಗೆ ಈ ವಿಚಾರ ನೆನಪಿರಬಹುದು, ಆ ಸಂಜೆ ಶಾಲೆ ಬಿಟ್ಟು ನಿಮ್ಮೂರಿಗೆ ಹೊಗಲು ಬಸ್ಸಿಲ್ಲದ ಕಾರಣ ನಾನೆ ನಿನ್ನ ಜೊತೆ ಬಂದು ನಿಮ್ಮ ಊರಿ ಬಿಟ್ಟು ಕ್ಷಣ ನೆನಪಿದಿಯಾ. ಆವತ್ತು ಮಾತನಾಡುತ್ತ ನಿನಗೆ ನಾನು ಎಂದರೆ ಇಷ್ಟನಾ ಎಂದು ಕೇಳಿದೆ. ಆಗಾ ನೀನು ನಾನು ಹೇಳುವ ಮುನ್ನವೇ ನೀನು ನನಗೆ ಇಷ್ಟ ಎಂದು ನನ್ನ ಹೃದಯ ಲಕ್ಷ್ಮೀಯಾಗಿ ಬಂದೆ. ನಾನು ನಿನ್ನ ಗುಣದಲ್ಲಿ ಆ ಪ್ರೀತಿ ಕಂಡೆ, ಹೌದು ನನಗೆ ಮನೆಯಿಂದ ಸರಿಯಾಗಿ ಹಣವನ್ನು ನೀಡುತ್ತಿರಲ್ಲಿ ನನ್ನ ಬಟ್ಟೆ, ಎಲ್ಲ ಖರ್ಚುಗಳನ್ನು ನೀನು ನೋಡುತ್ತಿದ್ದ ಆ ದಿಗಳನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ.

ಇದನ್ನೂ ಓದಿ: ಜಾಗಿಂಗ್​ನಲ್ಲಿ ಹುಟ್ಟಿದ ಪ್ರೀತಿ, ನನ್ನ ಪ್ರೀತಿಯ ಒಪ್ಪಿಗಾಗಿ ಕ್ಷಣ ಕ್ಷಣಕ್ಕೂ ಕಾಯುತ್ತಿದ್ದ ಅಣ್ಣ ಸ್ನೇಹಿತ

ನಾನು ಸಿದ್ಧಗಂಗಾ ಮಠದಲ್ಲಿ ಓದುತ್ತಿದ್ದೆ, ಅವಳು ಮನೆಯಿಂದ ಬರುತ್ತಿದ್ದಳು. ಈ ದಿನವನ್ನು ನಾನು ಯಾವತ್ತೂ ಮರೆಯುವುದಿಲ್ಲ ಪುಚ್ಚಿ, ಈ ತಿಂಗಳು ಬಂದರೆ ಗುಲಾಬಿ ಹಿಡಿದುಕೊಂಡು ನಿನಗಾಗಿ ಕಾಯುತ್ತಿದ್ದೆ, ನಿನಗೆ ಬರೆದ ಪ್ರೇಮ ಪತ್ರದಲ್ಲಿ ಬರೆದ ಸಾಲುಗಳೆಲ್ಲ ನನ್ನ ಮನದ ಮಾತುಗಳು. ಸಾಯುವಷ್ಟು ಇಷ್ಟ ಪಡುತ್ತಿದ್ದವಳು ಇವತ್ತು ನನ್ನೊಂದಿಗೆ ಇಲ್ಲ. ಅದು ಕೊಟ್ಟ ಮಾತು ಇವತ್ತು ನೆನಪಿಗೆ ಬರುತ್ತಿದೆ.

ಪ್ರೇಮ ಪತ್ರ: ಭೀಮಣ್ಣ ಹತ್ತಿಕುಣಿ

Follow Us
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್