AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nirmala Sitharaman Pressmeet: 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ನಾವು ಸಾಗುತ್ತಿದ್ದೇವೆ: ನಿರ್ಮಲಾ ಸೀತಾರಾಮನ್

FM Nirmala Sitharaman Budget Press Conference: ಈ ಬಜೆಟ್, ವ್ಯಕ್ತಿಗಳು ಮತ್ತು ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿಗಳನ್ನು ನೀಡುತ್ತದೆ. ಈ ದೇಶವು ನೇರ ತೆರಿಗೆಯನ್ನು ಸರಳೀಕರಿಸಲು ಕಾಯುತ್ತಿ

Nirmala Sitharaman Pressmeet: 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ನಾವು ಸಾಗುತ್ತಿದ್ದೇವೆ: ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
ರಶ್ಮಿ ಕಲ್ಲಕಟ್ಟ
|

Updated on:Feb 01, 2023 | 5:26 PM

Share

ಬಜೆಟ್2023 ಮಂಡನೆ ಮಾಡಿದ ನಂತರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)  ಬುಧವಾರ ಸಂಜೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದಾರೆ.  ಕೇಂದ್ರ ಬಜೆಟ್ 2023 (Union Budget 2023) ಬಂಡವಾಳ ಹೂಡಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ, ಇದು ಎಂಎಸ್‌ಎಂಇಗಳಿಗೆ ಬೆಳವಣಿಗೆಯ ಎಂಜಿನ್ ಆಗಿರುವುದರಿಂದ, ಇದು ಬಂಡವಾಳ ಹೂಡಿಕೆಯನ್ನು ಉಳಿಸಿಕೊಳ್ಳುತ್ತದೆ ಮತ್ತು ಖಾಸಗಿ ವಲಯಕ್ಕೆ ಉತ್ತೇಜನ ನೀಡುತ್ತದೆ. ಈ ಬಜೆಟ್, ವ್ಯಕ್ತಿಗಳು ಮತ್ತು ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿಗಳನ್ನು ನೀಡುತ್ತದೆ. ಈ ದೇಶವು ನೇರ ತೆರಿಗೆಯನ್ನು ಸರಳೀಕರಿಸಲು ಕಾಯುತ್ತಿದೆ. ಆದ್ದರಿಂದ ನಾವು ಎರಡು, ಮೂರು ವರ್ಷಗಳ ಹಿಂದೆ ನೇರ ತೆರಿಗೆಗಾಗಿ ತಂದ ಹೊಸ ತೆರಿಗೆ ವ್ಯವಸ್ಥೆಯು ಈಗ ಹೆಚ್ಚಿನ ಪ್ರೋತ್ಸಾಹ ಮತ್ತು ಹೆಚ್ಚಿನ ಆಕರ್ಷಣೆಯನ್ನು ಪಡೆದುಕೊಂಡಿದೆ, ಇದರಿಂದಾಗಿ ಜನರು ಹಿಂಜರಿಯದೆ ಹಳೆಯದರಿಂದ ಹೊಸತಿಗೆ ಬದಲಾಗಬಹುದು. ನಾವು ಯಾರನ್ನೂ ಬಲವಂತ ಮಾಡುತ್ತಿಲ್ಲ. ಹಳೇ ತೆರಿಗೆ ಪದ್ದತಿಯಲ್ಲಿ ಉಳಿಯಲು ಬಯಸುವವರು ಇನ್ನೂ ಅಲ್ಲೇ ಉಳಿಯಬಹುದು. ಆದರೆ ಹೊಸದು ಆಕರ್ಷಕವಾಗಿದೆ. ಇದು  ಅದು ಹೆಚ್ಚಿನ ರಿಯಾಯಿತಿಯನ್ನು ನೀಡುತ್ತದೆ.

ಗೋಧಿಯನ್ನು ಮಾರುಕಟ್ಟೆಗೆ ಬಿಡಲು ಸರ್ಕಾರ ನಿರ್ಧರಿಸಿದ್ದು, ಇದರಿಂದ ಗೋಧಿ ಬೆಲೆ ಇಳಿಕೆಯಾಗಲಿದೆ. ಬಜೆಟ್‌ಗೂ ಮುನ್ನವೇ ಗೋಧಿ ಬೆಲೆ ತಗ್ಗಿಸಲು ಕ್ರಮ ಕೈಗೊಂಡಿದ್ದೆವು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

  1. ಬಜೆಟ್ ಮೂಲಕ ಡಿಜಿಟಲ್ ಆರ್ಥಿಕತೆಗೆ ಹೊಸ ವೇಗ ಕೊಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ‘ಭವಿಷ್ಯದ ಬೆಳವಣಿಗೆಗಳಿಗೆ ಸ್ಪಂದಿಸಬಲ್ಲ ಹಣಕಾಸು ವಲಯವನ್ನು ರೂಪಿಸಲು ಉದ್ದೇಶಿಸುತ್ತಿದ್ದೇವೆ. ಕೈಗಾರಿಕಾ ಕ್ರಾಂತಿ 4.0 ಮೂಲಕ ಜನರಿಗೆ ತರಬೇತಿ ಸಿಗಲಿದೆ. ಬದುಕಿನ ಎಲ್ಲ ಆಯಾಮಗಳನ್ನು ಡಿಜಿಟಲ್ ಆರ್ಥಿಕತೆ ಒಳಗೊಳ್ಳುವಂತೆ ಮಾಡಲು ಯತ್ನಿಸುತ್ತಿದ್ದೇವೆ ಎಂದರು.
  2. 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ನಾವು ಸಾಗುತ್ತಿದ್ದೇವೆ.
  3. ಸಿಪಿಐ ಮತ್ತು ಡಬ್ಲ್ಯುಪಿಐ ಎರಡರಲ್ಲೂ ಹಣದುಬ್ಬರ ಇಳಿದಿರುವುದನ್ನು ನೀವು ನೋಡಿದ್ದೀರಿ. ಸರ್ಕಾರವು ಕ್ರಮ ಕೈಗೊಂಡಿದೆ.  ವಿಷಯಗಳು ಅಭಿವೃದ್ಧಿಗೊಂಡಾಗ ಅದಕ್ಕೆ ಪ್ರತಿಕ್ರಿಯೆಯಾಗಿ ನಾವು ಹಣದುಬ್ಬರ ಸಂಬಂಧಿತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಅದು ಫಲಿತಾಂಶಗಳನ್ನು ನೀಡಿದೆ.
  4. ಯಾವುದೇ ಪೆಟ್ರೋಲಿಯಂ ಉತ್ಪನ್ನದ ಮೇಲೆ ನೇರವಾಗಿ ಸಬ್ಸಿಡಿ ಕೊಡುತ್ತಿಲ್ಲ. ಹೀಗಾಗಿ ಪೆಟ್ರೋಲ್ ಸೇರಿದಂತೆ ಯಾವುದೇ ಇಂಧನದ ಬೆಲೆಯ ಮೇಲೆ ಏನೂ ಪರಿಣಾಮ ಆಗುವುದಿಲ್ಲ. ತೆರಿಗೆ ಪದ್ಧತಿಯಲ್ಲಿ ವ್ಯತ್ಯಯವಾದರೆ ಮಾತ್ರ ಪೆಟ್ರೋಲ್ ದರಗಳಲ್ಲಿ ಏರಿಳಿತವಾಗುತ್ತದೆ. ಈ ಬಾರಿಯ ಬಜೆಟ್ನಿಂದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ.
  5.  ಮಹಿಳಾ ಸಬಲೀಕರಣ, ಪ್ರವಾಸೋದ್ಯಮಕ್ಕೆ ಉತ್ತೇಜನ, ಕೌಶಲಾಭಿವೃದ್ಧಿ, ಪರಿಸರಸ್ನೇಹಿ ಪ್ರಗತಿ -ನಮ್ಮ ಬಜೆಟ್ ನಾಲ್ಕು ಮುಖ್ಯ ಅಂಶಗಳನ್ನು ಆಧರಿಸಿದೆ.
  6. ಈ ಬಾರಿಯ ಬಜೆಟ್ನಲ್ಲಿ ಬಂಡವಾಳ ಹಿಂಪಡೆಯುವುದು ಹಾಗೂ ಸರ್ಕಾರಿ ಉದ್ಯಮಗಳ ಖಾಸಗೀಕರಣದ ಬಗ್ಗೆ ಏಕೆ ಪ್ರಸ್ತಾಪಿಸಿಲ್ಲ ಎಂಬ ಪ್ರಶ್ನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪರವಾಗಿ ಉತ್ತರಿಸಿದ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿ, ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿ ಸರಿಯಿಲ್ಲ. ಹೀಗಾಗಿ ಈ ಪ್ರಸ್ತಾಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ವಾಣಿಜ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:41 pm, Wed, 1 February 23