ಗ್ಯಾರಂಟಿ ಯೋಜನೆಗಳಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ವಾರ್ಷಿಕ ₹ 233 ಕೋಟಿ ಖರ್ಚಾಗುತ್ತದೆ: ಸಿದ್ದರಾಮಯ್ಯ
ಬಜೆಟ್ ಅನ್ನು ಹಲಾಲ್ ಅಂತ ವಿರೋಧ ಪಕ್ಷ ಹೇಳಿದ್ದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಮ್ಮ ಬಜೆಟ್ ಗಾತ್ರ ₹4.09 ಲಕ್ಷ ಕೋಟಿ, ಅದರಲ್ಲಿ ಎಲ್ಲ ಅಲ್ಪಸಂಖ್ಯಾತರ ವರ್ಗಗಳಿಗೆ ₹ 4,500 ಕೋಟಿ ತೆಗೆದಿರಿಸಿದರೆ ಅದು ಹಲಾಲ್ ಬಜೆಟ್ ಹೇಗಾಗುತ್ತದೆ? ಇದು ಬಿಜೆಪಿಯವರ ಕೊಳಕು ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಬೆಂಗಳೂರು, ಮಾರ್ಚ್ 7: ಬಜೆಟ್ ಮಂಡಿಸಿದ ಬಳಿಕ ವಾಡಿಕೆಯಂತೆ ಸುದ್ದಿಗೋಷ್ಠಿ (presser) ನಡೆಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ವಾರ್ಷಿಕ ₹233 ಕೋಟಿ ಸರ್ಕಾರಕ್ಕೆ ಖರ್ಚು ಬರುತ್ತದೆ, ಜನರ ಕೈಗೆ ಹಣ ಸಿಗುವಂತೆ ಯೋಜನೆಗಳನ್ನು ರೂಪಿಸಿದ್ದು ಅಭಿವೃದ್ಧಿಯ ದ್ಯೋತಕ ಅನ್ನೋದು ವಿರೋಧ ಪಕ್ಷದ ನಾಯಕರಿಗೆ ಅರ್ಥವಾಗುತ್ತಿಲ್ಲ, ಜನರ ಕೈಗೆ ದುಡ್ಡು ಸಿಕ್ಕರೆ ಅವರ ಖರೀದಿ ಶಕ್ತಿ ಹೆಚ್ಚಿ ಆರ್ಥಿಕ ಚಟುವಟಿಕೆಗಳು ಜಾಸ್ತಿಯಾಗುತ್ತವೆ ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Budget 2025: ಕರ್ನಾಟಕ ಭದ್ರತೆಗೆ ಒತ್ತು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಲವು ಕ್ರಮ