AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tax Evasion: ತೆರಿಗೆ ಕಳ್ಳತನದಲ್ಲಿ ಎಚ್​ಡಿಎಫ್​ಸಿ ಲೈಫ್, ಬಜಾಜ್ ಅಲಾಯನ್ಸ್, ಆದಿತ್ಯ ಬಿರ್ಲಾ ಸನ್ ಲೈಫ್ ಸೇರಿ 15 ಕಂಪನಿಗಳು

15 Insurance Companies Face Heat: ನಕಲಿ ಜಿಎಸ್​ಟಿ ನೊಂದಣಿ ಮತ್ತು ನಕಲಿ ಐಟಿಸಿ ಮೂಲಕ ತೆರಿಗೆ ವಂಚನೆ ಎಸಗಿದ ಹಲವಾರು ಕಂಪನಿಗಳನ್ನು ಜಿಎಸ್​ಟಿಎನ್ ಪತ್ತೆ ಮಾಡಿದೆ. ಎಚ್​ಡಿಎಫ್​ಸಿ ಲೈಫ್ ಸೇರಿದಂತೆ 15 ವಿಮಾ ಸಂಸ್ಥೆಗಳಿಂದ 2,350 ಕೋಟಿ ರೂ ತೆರಿಗೆ ವಂಚನೆ ಆಗಿದೆಯಂತೆ.

Tax Evasion: ತೆರಿಗೆ ಕಳ್ಳತನದಲ್ಲಿ ಎಚ್​ಡಿಎಫ್​ಸಿ ಲೈಫ್, ಬಜಾಜ್ ಅಲಾಯನ್ಸ್, ಆದಿತ್ಯ ಬಿರ್ಲಾ ಸನ್ ಲೈಫ್ ಸೇರಿ 15 ಕಂಪನಿಗಳು
ಜಿಎಸ್​ಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 20, 2023 | 3:25 PM

Share

ನವದೆಹಲಿ, ಜುಲೈ 20: ದೇಶದ 15 ಇನ್ಷೂರೆನ್ಸ್ ಕಂಪನಿಗಳಿಂದ (Insurance Company) ಎರಡು ಸಾವಿರಕ್ಕೂ ಹೆಚ್ಚು ಮೊತ್ತದ ತೆರಿಗೆ ವಂಚನೆ ಆಗಿರುವ ಸಂಗತಿಯನ್ನು ಜಿಎಸ್​ಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಮನಿಕಂಟ್ರೋಲ್​ನಲ್ಲಿ ಬಂದಿರುವ ವರದಿ ಪ್ರಕಾರ ಎಚ್​ಡಿಎಫ್​ಸಿ ಲೈಫ್ ಇನ್ಷೂರೆನ್ಸ್, ಬಜಾಜ್ ಅಲೈಯನ್ಸ್, ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಷೂರೆನ್ಸ್ ಇತ್ಯಾದಿ 15 ಕಂಪನಿಗಳು 2,350 ಕೋಟಿ ರೂನಷ್ಟು ಜಿಎಸ್​ಟಿ ತೆರಿಗೆ ವಂಚನೆ (Tax Evasion) ಎಸಗಿವೆಯಂತೆ. ಇದರಲ್ಲಿ ಕೆಲ ಸರ್ಕಾರಿ ಬ್ಯಾಂಕುಗಳ ಇನ್ಷೂರೆನ್ಸ್ ಕಂಪನಿಗಳೂ ಕೂಡ ಸೇರಿವೆ. ಲೈಫ್ ಇನ್ಷೂರೆನ್ಸ್ ಮತ್ತು ಜನರಲ್ ಇನ್ಷೂರೆನ್ಸ್ ಎರಡೂ ರೀತಿಯ ಇನ್ಷೂರೆನ್ಸ್ ಕಂಪನಿಗಳು ಆರೋಪ ಎದುರಿಸುತ್ತಿವೆ. ಜಿಎಸ್​ಟಿ ಸಂಸ್ಥೆ ಈ 15 ಕಂಪನಿಗಳಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸುತ್ತಿದೆ.

‘ಮ್ಯೂಚುವಲ್ ಫಂಡ್, ಬ್ಯಾಂಕ್​ಗಳನ್ನೂ ಒಳಗೊಂಡಂತೆ 15 ಇನ್ಷೂರೆನ್ಸ್ ಕಂಪನಿಗಳ ಮೇಲಿನ ತನಿಖೆ ಪೂರ್ಣಗೊಂಡಿದೆ. ಈ ಸಂಸ್ಥೆಗಳಿಂದ ಒಟ್ಟು 2,350 ಕೋಟಿ ರೂ ತೆರಿಗೆ ವಂಚನೆ ಆಗಿರುವುದು ಕಂಡುಬಂದಿದೆ. 700 ಕೋಟಿ ರೂಗಳನ್ನು ಹಿಂಪಡೆಯಲಾಗಿದೆ. ಈ ಪಟ್ಟಿಯಲ್ಲಿ ಕೆಲ ಪಬ್ಲಿಕ್ ಸೆಕ್ಟರ್ ಇನ್ಷೂರೆನ್ಸ್ ಕಂಪನಿಗಳೂ ಸೇರಿವೆ. ಬಜಾಜ್ ಅಲೈಯನ್ಸ್, ಸನ್ ಲೈಫ್, ಎಚ್​ಡಿಎಫ್​ಸಿ ಲೈಫ್ ಇನ್ಸೂರೆನ್ಸ್, ಹೀಗೆ ಜನಪ್ರಿಯ ಇನ್ಷೂರೆನ್ಸ್ ಕಂಪನಿಗಳೂ ಇದರಲ್ಲಿವೆ’ ಎಂದು ಜಿಎಸ್​ಟಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ಮನಿಕಂಟ್ರೋಲ್​ನಲ್ಲಿ ವರದಿಯಾಗಿದೆ.

ಇದನ್ನೂ ಓದಿOnline Gaming: ಆನ್​ಲೈನ್ ಗೇಮಿಂಗ್​ಗೆ ಶೇ. 28ಜಿಎಸ್​ಟಿ; 2023-24ರಲ್ಲಿ 20,000 ಕೋಟಿ ರೂ ತೆರಿಗೆ ಸಂಗ್ರಹ ನಿರೀಕ್ಷೆ

ನಕಲಿ ಜಿಎಸ್​ಟಿ ನೊಂದಣಿಗಳ ವಿರುದ್ಧ ಕಾರ್ಯಾಚರಣೆ

ದೇಶಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ನಕಲಿ ಜಿಎಸ್​ಟಿ ನೊಂದಣಿ, ನಕಲಿ ಬಿಲ್, ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಇತ್ಯಾದಿ ಮೂಲಕ ತೆರಿಗೆ ವಂಚನೆ ನಡೆಯುತ್ತಿರುವ ಬಗ್ಗೆ ಇಲಾಖೆಗೆ ಮಾಹಿತಿ ಇದೆ. ಇದರ ವಿರುದ್ಧ ಜಿಎಸ್​ಟಿ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದು ತನಿಖೆ ನಡೆಸುತ್ತಿದ್ದಾರೆ. ಜೂನ್ ತಿಂಗಳಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಕಾರ್ಯಾಚರಣೆಯನ್ನು ಅವಲೋಕಿಸಲು ಸಭೆ ನಡೆಸಿದ್ದರು. ನಕಲಿ ರಿಜಿಸ್ಟ್ರೇಶನ್​ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿರುವ ಬಗ್ಗೆ ಅವರು ಸಭೆಯಲ್ಲಿ ಮಾಹಿತಿ ನೀಡಿದ್ದರು.

ಇದನ್ನೂ ಓದಿCess: ಎಸ್​ಯುವಿ ಕಾರುಗಳಿಗೆ 28ಪರ್ಸೆಂಟ್ ಜಿಎಸ್​ಟಿ ಜೊತೆಗೆ ಶೇ. 22 ಕಾಂಪೆನ್ಸೇಶನ್ ಸೆಸ್; ಯಾವ್ಯಾವುವು ಎಸ್​ಯುವಿ ಕಾರುಗಳು?

ನಕಲಿ ಜಿಎಸ್​ಟಿ ನೊಂಣಿ ಹೊಂದಿರುವ ಸಾಧ್ಯತೆಯ ಸುಮಾರು 60,000 ಸಂಸ್ಥೆಗಳನ್ನು ಜಿಎಸ್​ಟಿ ನೆಟ್ವರ್ಕ್ ಗುರುತಿಸಿದೆ. ಇಲ್ಲಿಯರೆಗೆ 43,000 ವೆರಿಫಿಕೇಶನ್​ಗಳಾಗಿವೆ. ಜಿಎಸ್​ಟಿ ಅಧಿಕಾರಿಗಳು ನಡೆಸುತ್ತಿರುವ ಕಾರ್ಯಾಚರಣೆಯ ವೇಳೆ 11,140 ನಕಲಿ ಜಿಎಸ್​ಟಿ ನೊಂದಣಿಗಳು ಪತ್ತೆಯಾಗಿವಂತೆ. ಜನರ ಗುರುತಿನ ದಾಖಲೆಗಳನ್ನು ಕದ್ದು ಫೇಕ್ ರಿಜಿಸ್ಟ್ರೇಶನ್ ಸೃಷ್ಟಿಸಿರುವ ಶಂಕೆ ಇದೆ. ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವ್ಯವಸ್ಥೆಯನ್ನು ದುರುಪಯೋಗಿಸಿ 15,000 ರೂನಷ್ಟು ತೆರಿಗೆ ವಂಚನೆ ನಡೆಸಲಾಗಿರುವ ಮಾಹಿತಿಯನ್ನು ಕಳೆದ ತಿಂಗಳು ಜಿಎಸ್​ಟಿ ಅಧಿಕಾರಿಗಳು ಹೊರಗೆಡವಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ