AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adani FPO: ಅದಾನಿ ಎಂಟರ್ಪ್ರೈಸಸ್ ಎಫ್​ಪಿಒ ರದ್ದು; ಹೂಡಿಕೆದಾರರಿಗೆ ಹಣ ಮರಳಿಸಲು ನಿರ್ಧಾರ

Gautam Adani Statement: ಇವತ್ತು ಮಾರುಕಟ್ಟೆ ಪರಿಸ್ಥಿತಿ ವಿಶೇಷವಾಗಿದ್ದು, ನಮ್ಮ ಏರು ಬೆಲೆಯಲ್ಲಿ ಬಹಳ ವ್ಯತ್ಯಯವಾಗಿದೆ. ಈ ಅಸಾಧಾರಣ ಸಂದರ್ಭದಲ್ಲಿ ಎಫ್​ಒಪಿ ಯೋಜನೆಯಲ್ಲಿ ಮುಂದುವರಿಯುವುದು ನೈತಿಕ ದೃಷ್ಟಿಯಿಂದ ಸರಿಯಲ್ಲ ಎಂದು ಗೌತಮ್ ಅದಾನಿ ಹೇಳಿಕೆ ನೀಡಿದ್ದಾರೆ.

Adani FPO: ಅದಾನಿ ಎಂಟರ್ಪ್ರೈಸಸ್ ಎಫ್​ಪಿಒ ರದ್ದು; ಹೂಡಿಕೆದಾರರಿಗೆ ಹಣ ಮರಳಿಸಲು ನಿರ್ಧಾರ
ಗೌತಮ್ ಅದಾನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 02, 2023 | 7:38 AM

Share

ನವದೆಹಲಿ: ಹಿಂಡನ್ಬರ್ಗ್ ವರದಿ (Hindenburg Research Report) ಬಳಿಕ ಬಹಳಷ್ಟು ವಿವಾದಕ್ಕೆ ಕಾರಣವಾಗಿರುವ ಗೌತಮ್ ಅದಾನಿ ಮಾಲಕತ್ವದ ಅದಾನಿ ಎಂಟರ್ಪ್ರೈಸಸ್ ತನ್ನ ಎಫ್​ಪಿಒ (Adani Enterprises FPO) ಯೋಜನೆಯನ್ನು ರದ್ದುಗೊಳಿಸಿದ್ದು, ಹೂಡಿಕೆದಾರರಿಗೆ ಅವರ ಹಣವನ್ನು ವಾಪಸ್ ನೀಡಲು ನಿರ್ಧರಿಸಿದೆ. ಈ ಸಂದರ್ಭದಲ್ಲಿ ಎಫ್​ಪಿಒ ಮುಂದುವರಿಸುವುದು ನೈತಿಕವಾಗಿ ಸರಿಯಲ್ಲ ಎಂದು ಅನಿಸುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅದಾನಿ ಎಂಟರ್ಪ್ರೈಸಸ್ ಕಂಪನಿ ಹೇಳಿದೆ.

ಅದಾನಿ ಎಂಟರ್ಪ್ರೈಸ್ ಜನವರಿ 27ರಿಂದ 31ರವರೆಗೆ ಎಫ್​ಪಿಒ ಆಫರ್ ಕೊಟ್ಟಿತ್ತು. ಹಿಂಡನ್ಬರ್ಗ್ ರೀಸರ್ಚ್ ವರದಿ ಪ್ರಕಟವಾಗಿ ವಿವಾದಕ್ಕೆ ಒಳಗಾದರೂ ಕಂಪನಿಯ ಎಫ್​ಒಒಗೆ ಉತ್ತಮ ಸ್ಪಂದನೆ ಸಿಕ್ಕು ಪೂರ್ಣವಾಗಿ ಭರ್ತಿಯಾಗಿತ್ತು. ಆದರೂ ಕೂಡ ನೈತಿಕ ದೃಷ್ಟಿಯಿಂದ ಈ ಯೋಜನೆಯನ್ನು ರದ್ದು ಮಾಡಿ ಹಣ ಹೂಡಿದವರಿಗೆ ಕಂಪನಿ ಹಣ ವಾಪಸ್ ಮಾಡುತ್ತಿದೆ. ಅದಾನಿ ಗ್ರೂಪ್​ನ ವಿವಿಧ ಕಂಪನಿಗಳ ಷೇರುಗಳು ಮಾತ್ರ ವಿಪರೀತವಾಗಿ ಬಿದ್ದಿವೆ. ಈ ಕಾರಣಕ್ಕೂ ಕಂಪನಿ ಎಫ್​ಪಿಒ ರದ್ದು ಮಾಡಿರಬಹುದು.

“ಇವತ್ತು ಮಾರುಕಟ್ಟೆ ಪರಿಸ್ಥಿತಿ ವಿಶೇಷವಾಗಿದ್ದು, ನಮ್ಮ ಏರು ಬೆಲೆಯಲ್ಲಿ ಬಹಳ ವ್ಯತ್ಯಯವಾಗಿದೆ. ಈ ಅಸಾಧಾರಣ ಸಂದರ್ಭದಲ್ಲಿ ಎಫ್​ಒಪಿ ಯೋಜನೆಯಲ್ಲಿ ಮುಂದುವರಿಯುವುದು ನೈತಿಕ ದೃಷ್ಟಿಯಿಂದ ಸರಿಯಲ್ಲ. ಹೂಡಿಕೆದಾರರ ಹಿತಾಸಕ್ತಿ ನಮಗೆ ಬಹಳ ಮುಖ್ಯವಾಗಿದ್ದು, ಅವರಿಗೆ ಯಾವುದೇ ರೀತಿಯ ಹಣಕಾಸು ನಷ್ಟದ ಸಾಧ್ಯತೆಯಿಂದ ರಕ್ಷಿಸುವುದು ಮುಖ್ಯ. ಆದ್ದರಿಂದ ಎಫ್​ಪಿಒ ಅನ್ನು ಮುಂದುವರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ” ಎಂದು ಅದಾನಿ ಎಂಟರ್ಪ್ರೈಸ್ ಛೇರ್ಮನ್ ಗೌತಮ್ ಅದಾನಿ ನಿನ್ನೆ ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Bloomberg Billionaires Index: ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಮತ್ತಷ್ಟು ಕುಸಿತ ಕಂಡ ಗೌತಮ್ ಅದಾನಿ, ಅಂಬಾನಿ ಆಸ್ತಿ ಮೌಲ್ಯದಲ್ಲೂ ಕುಸಿತ

ತನ್ನ ಸಂಸ್ಥೆಯ ಎಫ್​ಪಿಒಗೆ ಬೆಂಬಲ ನೀಡಿದ ಹೂಡಿಕೆದಾರರಿಗೆ ಅದಾನಿ ಇದೇ ವೇಳೆ ಧನ್ಯವಾದ ಹೇಳಿದ್ದಾರೆ.

ಕಳೆದ ವಾರದಲ್ಲಿ ಷೇರು ಬೆಲೆಯಲ್ಲಿ ಕುಸಿತವಾದರೂ ಕಂಪನಿಯಲ್ಲಿ ಮತ್ತು ಅದರ ಆಡಳಿತ ಮತ್ತು ವ್ಯವಹಾರಗಳಲ್ಲಿ ನೀವು ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ನಿಜಕ್ಕೂ ಋಣಿಯಾಗಿದ್ದೇವೆ ಎಂದು ಅದಾನಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಅದಾನಿ ಗ್ರೂಪ್​ಗೆ ಸೇರಿದ ವಿವಿಧ ಕಂಪನಿಗಳ ಷೇರುಗಳ ಬೆಲೆ ಕುಸಿತ ಮುಂದುವರಿಯುತ್ತಿದೆ. ಅದಾನಿ ಎಂಟರ್ಪ್ರೈಸಸ್ ಸಂಸ್ಥೆಯ ಷೇರುಗಳು ನಿನ್ನೆ ಬುಧವಾರ ಒಂದೇ ದಿನ ಶೇ. 28ರಷ್ಟು ಬಿದ್ದುಹೋಗಿವೆ. ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಕಂಪನಿ ಷೇರು ಶೇ. 19ರಷ್ಟು ಬೆಲೆ ಕಳೆದುಕೊಂಡಿವೆ.

ಇನ್ನು, ಪೂರ್ಣವಾಗಿ ಹೂಡಿಕೆಯಾಗಿದ್ದ ಎಫ್​ಪಿಒ ಅನ್ನು ರದ್ದು ಮಾಡಿದ ಕ್ರಮದಿಂದ ಕಂಪನಿಯ ಆರೋಗ್ಯಕ್ಕೆ ಏನೂ ತೊಂದರೆ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

“ಸುರಕ್ಷಿತ ಆಸ್ತಿ (Secure Asset), ಉತ್ತಮ ನಗದು ಹರಿವು (Cash Flow) ಇದ್ದು, ನಮ್ಮ ಬ್ಯಾಲೆನ್ಸ್ ಶೀಟ್ ಉತ್ತಮ ಸ್ಥಿತಿಯಲ್ಲಿದೆ. ನಮ್ಮ ಸಾಲ ಮರುಪಾವತಿಯ ಸ್ಥಿತಿ ಕೂಡ ಚೆನ್ನಾಗಿದೆ. ಎಫ್​ಪಿಒ ರದ್ದು ಮಾಡುವ ನಿರ್ಧಾರದಿಂದ ನಮ್ಮ ಈಗಿನ ಕಾರ್ಯಾಚರಣೆಗಳು ಮತ್ತು ಭವಿಷ್ಯದ ಯೋಜನೆಗಳ ಮೇಲೆ ಯಾವ ಪರಿಣಾಮ ಬೀರದು. ದೀರ್ಘಾವಧಿ ಮೌಲ್ಯ ವರ್ಧನೆ ಮತ್ತು ಅಭಿವೃದ್ಧಿಯತ್ತ ನಮ್ಮ ಗಮನ ಮುಂದುವರಿಯುತ್ತದೆ. ಮಾರುಕಟ್ಟೆಯು ಸ್ಥಿರತೆಗೆ ಬಂದ ಬಳಿಕ ಮುಂದಿನ ಹೆಜ್ಜೆಗಳ ಪರಿಶೀಲನೆ ಮಾಡುತ್ತೇವೆ. ನಿಮ್ಮ ಬೆಂಬಲ ಹೀಗೇ ಮುಂದುವರಿಯುತ್ತದೆ ಎನ್ನುವ ವಿಶ್ವಾಸ ನಮಗಿದೆ” ಎಂದು ಅದಾನಿ ಹೇಳಿದ್ದಾರೆ.

ಐಪಿಒ ಮತ್ತು ಎಫ್​ಪಿಒ ಮಧ್ಯೆ ವ್ಯತ್ಯಾಸ ಏನು?

ಎಫ್​ಪಿಒ ಎಂದರೆ ಫಾಲೋ ಆನ್ ಪಬ್ಲಿಕ್ ಆಫರ್. ಇದು ಈಗಾಗಲೇ ಷೇರುಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿ ಸಾರ್ವಜನಿಕರಿಗೆ ಷೇರುಗಳನ್ನು ಮಾರುವ ಯೋಜನೆಯಾಗಿದೆ. ಐಪಿಒ ಎಂದರೆ ಇನಿಷಿಯಲ್ ಪಬ್ಲಿಕ್ ಆಫರಿಂಗ್. ಇದು ಖಾಸಗಿ ಕಂಪನಿಯೊಂದು ಷೇರುಮಾರುಕಟ್ಟೆ ಪ್ರವೇಶಿಸಲು ಮತ್ತು ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಲು ಮಾಡುವ ಯೋಜನೆಯಾಗಿದೆ.

Published On - 7:38 am, Thu, 2 February 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ