AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷಯ ತೃತೀಯ: ಬೆಂಗಳೂರಿನ ಆಭರಣದಂಗಡಿಗಳಲ್ಲಿ ಜನರ ನೂಕುನುಗ್ಗಲು; ರಾಮನ ನಾಣ್ಯ ಟ್ರೆಂಡಿಂಗ್​ನಲ್ಲಿ

Bengaluru and Akshaya Tritiya: ಮೇ 10 ಅಕ್ಷಯ ತೃತೀಯ ದಿನವಾದ ಇಂದು ಬೆಂಗಳೂರಿನ ಆಭರಣ ಅಂಗಡಿಗಳ ಬಳಿ ಬೆಳಗ್ಗೆಯಿಂದಲೇ ಜನರು ಸೇರತೊಡಗಿದ್ದಾರೆ. ಚಿನ್ನದ ನಾಣ್ಯದ ಜೊತೆಗೆ ಈ ಬಾರಿ ಚಿನ್ನದ ಒಡವೆ ಖರೀದಿಗೆ ಬೇಡಿಕೆ ಹೆಚ್ಚಿದೆ. ಕಡಿಮೆ ಬಜೆಟ್ ಹೊಂದಿರುವವರು ಬೆಳ್ಳಿ ಖರೀದಿಸುತ್ತಿದ್ದಾರೆ. ವಜ್ರಾಭರಣ ಮತ್ತು ಪ್ಲಾಟಿನಂ ಆಭರಣಗಳೂ ಇವತ್ತು ಹೆಚ್ಚು ಮಾರಾಟ ಕಾಣುತ್ತವೆ.

ಅಕ್ಷಯ ತೃತೀಯ: ಬೆಂಗಳೂರಿನ ಆಭರಣದಂಗಡಿಗಳಲ್ಲಿ ಜನರ ನೂಕುನುಗ್ಗಲು; ರಾಮನ ನಾಣ್ಯ ಟ್ರೆಂಡಿಂಗ್​ನಲ್ಲಿ
ಆಭರಣದಂಗಡಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 10, 2024 | 12:53 PM

Share

ಬೆಂಗಳೂರು, ಮೇ 10: ಇವತ್ತು ಅಕ್ಷಯ ತೃತೀಯ (Akshaya Tritiya) ದಿನವಾಗಿದ್ದು ಚಿನ್ನ ಖರೀದಿಸುವುದು ಶುಭವೆಂದು ಭಾವಿಸಲಾಗಿದೆ. ಬೆಳಗ್ಗೆ 6:57ಕ್ಕೆ ಅಕ್ಷಯ ತೃತೀಯ ಶುಭ ಮುಹೂರ್ತ ಆರಂಭವಾಗಿದೆ. ಬೆಂಗಳೂರಿನಲ್ಲಿ ಆಭರಣ ಅಂಗಡಿಗಳಲ್ಲಿ ಬೆಳಗ್ಗೆಯಿಂದಲೇ ಜನರು ಸೇರುತ್ತಿದ್ದಾರೆ. ಬಸವನಗುಡಿಯಲ್ಲಿರುವ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್​ನಲ್ಲಿ ಹಬ್ಬದ ವಾತಾವರಣವೇ ಕಳೆಗಟ್ಟಿದೆ. ಹಲವು ಆಫರ್​ಗಳನ್ನು ಇಲ್ಲಿ ನೀಡಲಾಗುತ್ತಿದೆ. ಸಾಯಿ ಗೋಲ್ಡ್ ಪ್ಯಾಲೇಸ್ ಮಾತ್ರವಲ್ಲ, ಹೆಚ್ಚಿನ ಒಡವೆ ಅಂಗಡಿಗಳಲ್ಲಿ ಅಕ್ಷಯ ತೃತೀಯ ದಿನವಾದ ಇಂದು ಡಿಸ್ಕೌಂಟ್​ನಲ್ಲಿ ಚಿನ್ನ ಮಾರಲಾಗುತ್ತಿದೆ.

ಇದೇ ವೇಳೆ ಹಲವು ಆಭರಣ ಅಂಗಡಿಗಳು ಅಯೋಧ್ಯೆಯ ಬಾಲರಾಮನ ಚಿತ್ರ ಇರುವ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಮಾರುತ್ತಿವೆ. ಈ ನಾಣ್ಯಗಳಿಗೆ ಬೇಡಿಕೆ ಇದೆ. ಅಕ್ಷಯ ತೃತೀಯ ದಿನಕ್ಕಾಗಿ ಬುಧವಾರದಿಂದಲೇ ಬಹಳಷ್ಟು ಗ್ರಾಹಕರು ಆಭರಣ ಬುಕಿಂಗ್ ನಡೆಸಿದ್ದಾರೆ. ಈ ಶನಿವಾರ ಮತ್ತು ಭಾನುವಾರವೂ ಚಿನ್ನ, ಬೆಳ್ಳಿ ಖರೀದಿಯ ಭರಾಟೆ ಮುಂದುವರಿಯಬಹುದು ಎಂದು ಆಭರಣದಂಗಡಿ ಮಾಲೀಕರು ನಿರೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ: ಅಕ್ಷಯ ತೃತೀಯ ದಿನದಂದು ಚಿನ್ನವಲ್ಲದೇ ಈ ನಾಲ್ಕು ವಸ್ತುಗಳೂ ಕೂಡ ಶುಭಕರ; ಸಾಧ್ಯವಾದರೆ ಇವತ್ತೇ ಖರೀದಿಸಿ

‘ಅಕ್ಷಯ ತೃತೀಯ ದಿನದಂದು ಸಾಂಕೇತಿಕವಾಗಿ ಎಂಬಂತೆ ಚಿನ್ನದ ನಾಣ್ಯಗಳನ್ನು ಖರೀದಿಸುವ ಪರಿಪಾಟ ಇದೆ. ಆದರೆ ಈ ವರ್ಷ ಸಾಕಷ್ಟು ಜನರು ಚಿನ್ನದ ಒಡವೆಗಳನ್ನು ಖರೀದಿಸುತ್ತಿದ್ದಾರೆ,’ ಎಂದು ವಿಜಯನಗರದ ಶ್ರೀ ರಾಮ್ ಜ್ಯುವೆಲ್ಸ್ ಅಂಗಡಿಯರು ಹೇಳುತ್ತಾರೆ.

ಈ ಅಕ್ಷಯ ತೃತೀಯ ದಿನದಂದು ಚಿನ್ನ ಮಾತ್ರವಲ್ಲದೆ ಬೆಳ್ಳಿ, ವಜ್ರ, ಪ್ಲಾಟಿನಂ ವಸ್ತುಗಳಿಗೂ ಬೇಡಿಕೆ ಇದೆ. ಈ ದಿನದಂದು ಚಿನ್ನಾಭರಣದಷ್ಟೇ ಬೆಲೆ ಹೊಂದಿರುವ ವಜ್ರಾಭರಣವು ಗ್ರಾಹಕರಿಗೆ ಆಕರ್ಷಣೆ ಆಗಿದೆ. ಪ್ಲಾಟಿನಂ ಆಭರಣದ ಖರೀದಿಯೂ ಹೆಚ್ಚುತ್ತಿದೆಯಂತೆ.

ಇದನ್ನೂ ಓದಿ: ಭೌತಿಕ ಚಿನ್ನವಾ, ಬಾಂಡ್​ಗಳಾ? ಅಕ್ಷಯ ತೃತೀಯ ದಿನದಂದು ಬಂಗಾರದಂಥ ತೀರ್ಮಾನ ಕೈಗೊಳ್ಳಿ

ಇವತ್ತು ಬೆಂಗಳೂರಿನಲ್ಲಿ 22 ಕ್ಯಾರಟ್​ನ ಆಭರಣ ಚಿನ್ನದ ಬೆಲೆ ಗ್ರಾಮ್​ಗೆ 6,700 ರೂ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ ಗ್ರಾಮ್​ಗೆ 7,300 ರೂ ಇದೆ. ಬೆಳ್ಳಿ ಬೆಲೆ ಗ್ರಾಮ್​ಗೆ 84.75 ರೂ ಇದೆ. ಪ್ಲಾಟಿನಂ ಬೆಲೆ ಬೆಂಗಳೂರಿನಲ್ಲಿ ಗ್ರಾಮ್​ಗೆ 2,640 ರೂ ಆಗಿದೆ. ವಜ್ರದ ಬೆಲೆ ಪ್ರತೀ ಕ್ಯಾರಟ್​ಗೆ 67,000 ರೂನಿಂದ 1.12 ಲಕ್ಷ ರೂವರೆಗೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!