AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷಯ ತೃತೀಯ: ಬೆಂಗಳೂರಿನ ಆಭರಣದಂಗಡಿಗಳಲ್ಲಿ ಜನರ ನೂಕುನುಗ್ಗಲು; ರಾಮನ ನಾಣ್ಯ ಟ್ರೆಂಡಿಂಗ್​ನಲ್ಲಿ

Bengaluru and Akshaya Tritiya: ಮೇ 10 ಅಕ್ಷಯ ತೃತೀಯ ದಿನವಾದ ಇಂದು ಬೆಂಗಳೂರಿನ ಆಭರಣ ಅಂಗಡಿಗಳ ಬಳಿ ಬೆಳಗ್ಗೆಯಿಂದಲೇ ಜನರು ಸೇರತೊಡಗಿದ್ದಾರೆ. ಚಿನ್ನದ ನಾಣ್ಯದ ಜೊತೆಗೆ ಈ ಬಾರಿ ಚಿನ್ನದ ಒಡವೆ ಖರೀದಿಗೆ ಬೇಡಿಕೆ ಹೆಚ್ಚಿದೆ. ಕಡಿಮೆ ಬಜೆಟ್ ಹೊಂದಿರುವವರು ಬೆಳ್ಳಿ ಖರೀದಿಸುತ್ತಿದ್ದಾರೆ. ವಜ್ರಾಭರಣ ಮತ್ತು ಪ್ಲಾಟಿನಂ ಆಭರಣಗಳೂ ಇವತ್ತು ಹೆಚ್ಚು ಮಾರಾಟ ಕಾಣುತ್ತವೆ.

ಅಕ್ಷಯ ತೃತೀಯ: ಬೆಂಗಳೂರಿನ ಆಭರಣದಂಗಡಿಗಳಲ್ಲಿ ಜನರ ನೂಕುನುಗ್ಗಲು; ರಾಮನ ನಾಣ್ಯ ಟ್ರೆಂಡಿಂಗ್​ನಲ್ಲಿ
ಆಭರಣದಂಗಡಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 10, 2024 | 12:53 PM

ಬೆಂಗಳೂರು, ಮೇ 10: ಇವತ್ತು ಅಕ್ಷಯ ತೃತೀಯ (Akshaya Tritiya) ದಿನವಾಗಿದ್ದು ಚಿನ್ನ ಖರೀದಿಸುವುದು ಶುಭವೆಂದು ಭಾವಿಸಲಾಗಿದೆ. ಬೆಳಗ್ಗೆ 6:57ಕ್ಕೆ ಅಕ್ಷಯ ತೃತೀಯ ಶುಭ ಮುಹೂರ್ತ ಆರಂಭವಾಗಿದೆ. ಬೆಂಗಳೂರಿನಲ್ಲಿ ಆಭರಣ ಅಂಗಡಿಗಳಲ್ಲಿ ಬೆಳಗ್ಗೆಯಿಂದಲೇ ಜನರು ಸೇರುತ್ತಿದ್ದಾರೆ. ಬಸವನಗುಡಿಯಲ್ಲಿರುವ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್​ನಲ್ಲಿ ಹಬ್ಬದ ವಾತಾವರಣವೇ ಕಳೆಗಟ್ಟಿದೆ. ಹಲವು ಆಫರ್​ಗಳನ್ನು ಇಲ್ಲಿ ನೀಡಲಾಗುತ್ತಿದೆ. ಸಾಯಿ ಗೋಲ್ಡ್ ಪ್ಯಾಲೇಸ್ ಮಾತ್ರವಲ್ಲ, ಹೆಚ್ಚಿನ ಒಡವೆ ಅಂಗಡಿಗಳಲ್ಲಿ ಅಕ್ಷಯ ತೃತೀಯ ದಿನವಾದ ಇಂದು ಡಿಸ್ಕೌಂಟ್​ನಲ್ಲಿ ಚಿನ್ನ ಮಾರಲಾಗುತ್ತಿದೆ.

ಇದೇ ವೇಳೆ ಹಲವು ಆಭರಣ ಅಂಗಡಿಗಳು ಅಯೋಧ್ಯೆಯ ಬಾಲರಾಮನ ಚಿತ್ರ ಇರುವ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಮಾರುತ್ತಿವೆ. ಈ ನಾಣ್ಯಗಳಿಗೆ ಬೇಡಿಕೆ ಇದೆ. ಅಕ್ಷಯ ತೃತೀಯ ದಿನಕ್ಕಾಗಿ ಬುಧವಾರದಿಂದಲೇ ಬಹಳಷ್ಟು ಗ್ರಾಹಕರು ಆಭರಣ ಬುಕಿಂಗ್ ನಡೆಸಿದ್ದಾರೆ. ಈ ಶನಿವಾರ ಮತ್ತು ಭಾನುವಾರವೂ ಚಿನ್ನ, ಬೆಳ್ಳಿ ಖರೀದಿಯ ಭರಾಟೆ ಮುಂದುವರಿಯಬಹುದು ಎಂದು ಆಭರಣದಂಗಡಿ ಮಾಲೀಕರು ನಿರೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ: ಅಕ್ಷಯ ತೃತೀಯ ದಿನದಂದು ಚಿನ್ನವಲ್ಲದೇ ಈ ನಾಲ್ಕು ವಸ್ತುಗಳೂ ಕೂಡ ಶುಭಕರ; ಸಾಧ್ಯವಾದರೆ ಇವತ್ತೇ ಖರೀದಿಸಿ

‘ಅಕ್ಷಯ ತೃತೀಯ ದಿನದಂದು ಸಾಂಕೇತಿಕವಾಗಿ ಎಂಬಂತೆ ಚಿನ್ನದ ನಾಣ್ಯಗಳನ್ನು ಖರೀದಿಸುವ ಪರಿಪಾಟ ಇದೆ. ಆದರೆ ಈ ವರ್ಷ ಸಾಕಷ್ಟು ಜನರು ಚಿನ್ನದ ಒಡವೆಗಳನ್ನು ಖರೀದಿಸುತ್ತಿದ್ದಾರೆ,’ ಎಂದು ವಿಜಯನಗರದ ಶ್ರೀ ರಾಮ್ ಜ್ಯುವೆಲ್ಸ್ ಅಂಗಡಿಯರು ಹೇಳುತ್ತಾರೆ.

ಈ ಅಕ್ಷಯ ತೃತೀಯ ದಿನದಂದು ಚಿನ್ನ ಮಾತ್ರವಲ್ಲದೆ ಬೆಳ್ಳಿ, ವಜ್ರ, ಪ್ಲಾಟಿನಂ ವಸ್ತುಗಳಿಗೂ ಬೇಡಿಕೆ ಇದೆ. ಈ ದಿನದಂದು ಚಿನ್ನಾಭರಣದಷ್ಟೇ ಬೆಲೆ ಹೊಂದಿರುವ ವಜ್ರಾಭರಣವು ಗ್ರಾಹಕರಿಗೆ ಆಕರ್ಷಣೆ ಆಗಿದೆ. ಪ್ಲಾಟಿನಂ ಆಭರಣದ ಖರೀದಿಯೂ ಹೆಚ್ಚುತ್ತಿದೆಯಂತೆ.

ಇದನ್ನೂ ಓದಿ: ಭೌತಿಕ ಚಿನ್ನವಾ, ಬಾಂಡ್​ಗಳಾ? ಅಕ್ಷಯ ತೃತೀಯ ದಿನದಂದು ಬಂಗಾರದಂಥ ತೀರ್ಮಾನ ಕೈಗೊಳ್ಳಿ

ಇವತ್ತು ಬೆಂಗಳೂರಿನಲ್ಲಿ 22 ಕ್ಯಾರಟ್​ನ ಆಭರಣ ಚಿನ್ನದ ಬೆಲೆ ಗ್ರಾಮ್​ಗೆ 6,700 ರೂ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ ಗ್ರಾಮ್​ಗೆ 7,300 ರೂ ಇದೆ. ಬೆಳ್ಳಿ ಬೆಲೆ ಗ್ರಾಮ್​ಗೆ 84.75 ರೂ ಇದೆ. ಪ್ಲಾಟಿನಂ ಬೆಲೆ ಬೆಂಗಳೂರಿನಲ್ಲಿ ಗ್ರಾಮ್​ಗೆ 2,640 ರೂ ಆಗಿದೆ. ವಜ್ರದ ಬೆಲೆ ಪ್ರತೀ ಕ್ಯಾರಟ್​ಗೆ 67,000 ರೂನಿಂದ 1.12 ಲಕ್ಷ ರೂವರೆಗೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!
ರಾಜಕೀಯ ವೈಷಮ್ಯ ಮರೆತು ಒಂದಾದ ಬಿಎಸ್​ ವೈ-ಈಶ್ವರಪ್ಪ, ವಿಡಿಯೋ ನೋಡಿ
ರಾಜಕೀಯ ವೈಷಮ್ಯ ಮರೆತು ಒಂದಾದ ಬಿಎಸ್​ ವೈ-ಈಶ್ವರಪ್ಪ, ವಿಡಿಯೋ ನೋಡಿ
RCB ವಿಜಯೋತ್ಸವಕ್ಕೆ ರಾಜ್ಯಪಾಲರಿಗೆ ಆಹ್ವಾನ ನೀಡಿದ್ಯಾರು? ಸತ್ಯಾಂಶ ಬಯಲು
RCB ವಿಜಯೋತ್ಸವಕ್ಕೆ ರಾಜ್ಯಪಾಲರಿಗೆ ಆಹ್ವಾನ ನೀಡಿದ್ಯಾರು? ಸತ್ಯಾಂಶ ಬಯಲು
ನಮ್ಮ ಆಚರಣೆ ನಮ್ಮ ಹಕ್ಕು, ಎಲ್ಲಿದ್ದರೂ ಹಿಂದೂಗಳೇ ಎಂದ ಪಾಕ್​ ಹಿಂದೂಗಳು
ನಮ್ಮ ಆಚರಣೆ ನಮ್ಮ ಹಕ್ಕು, ಎಲ್ಲಿದ್ದರೂ ಹಿಂದೂಗಳೇ ಎಂದ ಪಾಕ್​ ಹಿಂದೂಗಳು