Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೌತಿಕ ಚಿನ್ನವಾ, ಬಾಂಡ್​ಗಳಾ? ಅಕ್ಷಯ ತೃತೀಯ ದಿನದಂದು ಬಂಗಾರದಂಥ ತೀರ್ಮಾನ ಕೈಗೊಳ್ಳಿ

Gold investments in Akshaya Tritiya: ಅಕ್ಷಯ ತೃತೀಯ ಈ ವರ್ಷ ಮೇ 10ರಂದು ಬಂದಿದೆ. ಕಳೆದ ವರ್ಷ ಏಪ್ರಿಲ್ 22ರಂದು ಇತ್ತು. ಆಗ ಚಿನ್ನದ ಬೆಲೆ 61,300 ರೂ ಇತ್ತು. ಈಗ ಅದು 72,000 ರೂ ದಾಟಿದೆ. ಒಂದು ವರ್ಷದಲ್ಲಿ ಹೆಚ್ಚೂಕಡಿಮೆ ಶೇ. 20ರಷ್ಟು ಬೆಲೆ ಹೆಚ್ಚಳವಾಗಿದೆ. ಹೀಗಾಗಿ, ಚಿನ್ನ ಯಾವತ್ತಿದ್ದರೂ ಅದನ್ನು ಖರೀದಿಸಿದರ ಕೈ ಬಿಡುವುದಿಲ್ಲ. ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ಸಂಪತ್ತು ಸಮೃದ್ಧಿ ತುಂಬಿ ತುಳುಕುತ್ತದೆ ಎನ್ನುವ ನಂಬಿಕೆಯೂ ಇದೆ. ಹೇರಳ ಸಂಪತ್ತು ಆಗಮಿಸದೇ ಹೋದರೂ ಒಳ್ಳೆಯ ಲಾಭವನ್ನಂತೂ ಚಿನ್ನ ನಿಮಗೆ ತಂದುಕೊಡುತ್ತದೆ.

ಭೌತಿಕ ಚಿನ್ನವಾ, ಬಾಂಡ್​ಗಳಾ? ಅಕ್ಷಯ ತೃತೀಯ ದಿನದಂದು ಬಂಗಾರದಂಥ ತೀರ್ಮಾನ ಕೈಗೊಳ್ಳಿ
ಒಡವೆ ಅಂಗಡಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 10, 2024 | 9:00 AM

ಅಕ್ಷಯ ತೃತೀಯ (Akshaya Tritiya) ಭಾರತದ ಸಂಸ್ಕೃತಿಯಲ್ಲಿ ವಿಶೇಷ ದಿನವಾಗಿದ್ದು ಅಂದು ಚಿನ್ನವನ್ನು ಖರೀದಿಸಿದರೆ (buying gold) ಸಂಪತ್ತು ವೃದ್ಧಿಸುತ್ತದೆ ಎನ್ನುವ ನಂಬಿಕೆ ಇದೆ. ಈ ನಂಬಿಕೆ ನಿಜವೋ ಇಲ್ಲವೋ ಗೊತ್ತಿಲ್ಲ, ಆದರೆ, ಚಿನ್ನವನ್ನು ಖರೀದಿಸಿದವರ ಬಾಳು ಒಂದಲ್ಲ ಒಂದು ರೀತಿಯಲ್ಲಿ ಬಂಗಾರವೇ ಆಗಿರುತ್ತದೆ. ಚಿನ್ನ ಆಪತ್ಕಾಲದ ನಿಧಿ ಎಂಬ ಹೆಗ್ಗಳಿಕೆ ಇವತ್ತಿನವರೆಗೂ ಮುಂದುವರಿದಿದೆ. ದೇಶ ದೇಶಗಳೇ ಇಂದು ಚಿನ್ನವನ್ನು ಖರೀದಿ ಮಾಡಲು ಮುಗಿಬೀಳುತ್ತಿವೆ. ಯಾವತ್ತಿದ್ದರೂ ಬೇಡಿಕೆ ಹೊಂದಿರುವುದರಿಂದ ಈ ಅಮೂಲ್ಯ ಲೋಹವು ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ ಎದುರು ರಕ್ಷಾ ಕವಚವಾಗಬಹುದು. ಚಿನ್ನದ ಬೆಲೆ ಒಂದು ವರ್ಷದಲ್ಲಿ ಶೇ. 10ರಿಂದ 20ರಷ್ಟು ಬೆಳೆಯಬಲ್ಲುದು. ಹೀಗಾಗಿ, ಇದು ಹೂಡಿಕೆಯಾಗಿಯೂ ಬಹಳ ಗಮನಾರ್ಹ ವಸ್ತುವಾಗಿದೆ.

ಕಳೆದ ವರ್ಷದ ಅಕ್ಷಯ ತೃತೀಯಾ ದಿನ 2023ರ ಏಪ್ರಿಲ್ 22ರಂದು ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 10 ಗ್ರಾಮ್​ಗೆ 61,300 ರೂ ಇತ್ತು. ಈ ಅಕ್ಷಯ ತೃತೀಯ ಆಸುಪಾಸು ದಿನದಲ್ಲಿ ಅದರ ಬೆಲೆ 72,000 ಗಡಿ ದಾಟಿ ಹೋಗಿದೆ. ಅಂದರೆ ಒಂದು ವರ್ಷದಲ್ಲಿ ಬೆಲೆ ಶೇ. 20ರ ಸಮೀಪದಷ್ಟು ಏರಿಕೆ ಆಗಿದೆ. ಹೀಗಾಗಿ, ನಿಮ್ಮ ಇನ್ವೆಸ್ಟ್​ಮೆಂಟ್ ಪೋರ್ಟ್​ಫೋಲಿಯೋದಲ್ಲಿ ಚಿನ್ನವೂ ಇರಲಿ. ಅಕ್ಷಯ ತೃತೀಯ ದಿನದಂದೇ ನಿಮ್ಮ ಚಿನ್ನ ಬೇಟೆ ಆರಂಭವಾಗಲಿ.

ಚಿನ್ನ ಖರೀದಿಸುವ ಬೇರೆ ಬೇರೆ ಆಯ್ಕೆಗಳು…

ಚಿನ್ನವನ್ನು ಭೌತಿಕ ರೂಪದಲ್ಲಿ ಖರೀದಿಸಬಹುದು. ಆದರೆ, ಅದೊಂದೇ ಆಯ್ಕೆ ಇಲ್ಲ. ಚಿನ್ನದ ಬೆಲೆ ಆಧಾರದ ಮೇಲೆ ಇರುವ ಹೂಡಿಕೆ ಯೋಜನೆಗಳಲ್ಲಿ ಹಣ ತೊಡಗಿಸಬಹುದು.

ಇದನ್ನೂ ಓದಿ: 22 ಕ್ಯಾರೆಟ್ ಅಥವಾ 24 ಕ್ಯಾರೆಟ್ ಚಿನ್ನ; ಹೆಚ್ಚು ಆದಾಯ ತರುವುದು ಯಾವುದು? ಇಲ್ಲಿದೆ ಉತ್ತರ

ಭೌತಿಕ ಚಿನ್ನವನ್ನೇ ಖರೀದಿಸುವುದಾದರೆ 22 ಕ್ಯಾರಟ್​ನ ಒಡವೆಗಳನ್ನು ಪಡೆಯಬಹುದು. ನಾಣ್ಯ, ಬಿಸ್ಕಟ್ ಇತ್ಯಾದಿ ಅಪರಂಜಿ ಚಿನ್ನದ ಗಟ್ಟಿಗಳನ್ನು ಪಡೆಯಬಹುದು. ನಿಮಗೆ ಆಭರಣ ತೀರಾ ಬೇಕಾಗಿದೆ ಎಂದರೆ ಮಾತ್ರವೇ ಖರೀದಿಸಿ. ಇಲ್ಲವಾದರೆ 24 ಕ್ಯಾರಟ್ ಚಿನ್ನವನ್ನೇ ಪಡೆಯಲು ಯತ್ನಿಸಿ. ಇದರ ಜೊತೆಗೆ ನೀವು ಪೇಟಿಎಂ, ಫೋನ್ ಪೇ ಇತ್ಯಾದಿ ಕಡೆ ಡಿಜಿಟಲ್ ರೂಪದಲ್ಲಿ ಚಿನ್ನವನ್ನು ಖರೀದಿಸಬಹುದು. ನಿಯಮಿತವಾಗಿ ಹಣ ಉಳಿಸಿ ಚಿನ್ನಕ್ಕಾಗಿ ಹೂಡಿಕೆ ಮಾಡಬಹುದು. ಕೊನೆಯಲ್ಲಿ ಭೌತಿಕ ರೂಪದಲ್ಲಿ ಚಿನ್ನ ಪಡೆಯಬಹುದು. ಅಥವಾ ಅದರ ಪ್ರಸಕ್ತ ಮೌಲ್ಯದ ಹಣವನ್ನೇ ಪಡೆಯಬಹುದು.

ಗೋಲ್ಡ್ ಫಂಡ್, ಇಟಿಎಫ್, ಎಸ್​ಜಿಬಿ

ಭೌತಿಕ ಚಿನ್ನ ಬೇಡವೆಂದರೆ ಬೇರೆ ರೂಪದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವ ಆಯ್ಕೆಗಳಿವೆ. ಅದರಲ್ಲಿ ಸಾವರೀನ್ ಗೋಲ್ಡ್ ಬಾಂಡ್, ಗೋಲ್ಡ್ ಇಟಿಎಫ್ ಮತ್ತು ಗೋಲ್ಡ್ ಫಂಡ್ ಪ್ರಮುಖವಾದುವು.

ಇದನ್ನೂ ಓದಿ: ಚಿನ್ನ, ನೀನೆಷ್ಟು ಚೆನ್ನ..! ಷೇರು ಮಾರುಕಟ್ಟೆಗಿಂತಲೂ ಭರ್ಜರಿ ರಿಟರ್ನ್ ಕೊಡುತ್ತಿದೆ ಸ್ವರ್ಣ

ಗೋಲ್ಡ್ ಇಟಿಎಫ್: ಇದಕ್ಕೆ ಡೀಮ್ಯಾಟ್ ಅಕೌಂಟ್ ಬೇಕು. ನಿರ್ದಿಷ್ಟ ಚಿನ್ನದ ಮೌಲ್ಯವನ್ನು ಖರೀದಿಸಬಹುದು. ಚಿನ್ನದ ಮೌಲ್ಯ ವೃದ್ಧಿಯಾದಷ್ಟೂ ನಿಮಗೆ ರಿಟರ್ನ್ ಸಿಗುತ್ತದೆ. ಫಂಡ್ ಮ್ಯಾನೇಜರ್ಸ್​ಗೆ ನಿರ್ದಿಷ್ಟ ಶುಲ್ಕ ತೆರಬೇಕಾಗುತ್ತದೆ.

ಗೋಲ್ಡ್ ಫಂಡ್: ಇದು ಮ್ಯೂಚುವಲ್ ಫಂಡ್ ಆಗಿರುತ್ತದೆ. ಈ ಫಂಡ್​ಗಳು ಚಿನ್ನವನ್ನು ಖರೀದಿಸುತ್ತವೆ. ಮತ್ತು ಚಿನ್ನದ ಗಣಿಗಾರಿಕೆಯಲ್ಲಿ ತೊಡಗಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ. ಇದರಿಂದ ಬರುವ ಆದಾಯವನ್ನು ಹೂಡಿಕೆದಾರರಿಗೆ ವರ್ಗಾಯಿಸುತ್ತವೆ.

ಎಸ್​ಜಿಬಿ: ಇದು ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್. ಕಳೆದ ಏಳೆಂಟು ವರ್ಷಗಳಿಂದ ಆರ್​ಬಿಐ ಈ ಸ್ಕೀಮ್ ನಡೆಸುತ್ತಾ ಬಂದಿದೆ. ಒಂದು ಗ್ರಾಮ್​ನಿಂದ ಹಿಡಿದು ನಾಲ್ಕು ಕಿಲೋವರೆಗೆ ಚಿನ್ನದ ಮೇಲೆ ಒಂದು ವರ್ಷದಲ್ಲಿ ಹೂಡಿಕೆ ಮಾಡಬಹುದು. ಎಂಟು ವರ್ಷಕ್ಕೆ ಇದು ಮೆಚ್ಯೂರ್ ಆಗುತ್ತದೆ. ಇವತ್ತು ಚಿನ್ನದ ಬೆಲೆ ಗ್ರಾಮ್​ಗೆ 7,200 ರೂ ಇದ್ದು ನಾವು 10 ಗ್ರಾಮ್ ಚಿನ್ನದ ಮೇಲೆ ಹೂಡಿಕೆ ಮಾಡಿರುತ್ತೇವೆ. ಎಂಟು ವರ್ಷದ ಬಳಿಕ ಚಿನ್ನದ ಬೆಲೆ 16,000 ರೂ ಆಗಬಹುದು. ಇವತ್ತು 72,000 ರೂ ಹೂಡಿಕೆ ಮಾಡಿದವರಿಗೆ ಎಂಟು ವರ್ಷದ ಬಳಿಕ ಸಿಗುವ ರಿಟರ್ನ್ 1,60,000 ರೂ ಆಗಿರುತ್ತದೆ. ಇದು ಸುಮ್ಮನೆ ಉದಾಹರಣೆಗೆ ಮಾತ್ರ.

ಈ ಮೇಲಿನಂತೆ ಚಿನ್ನದ ಮೇಲೆ ಹೂಡಿಕೆ ಮಾಡಲು ಹಲವು ಆಯ್ಕೆಗಳಿವೆ. ಎಲ್ಲವೂ ಕೂಡ ಲಾಭದಾಯವಾಗಿರುವಂಥವೇ. ಅಕ್ಷಯ ತೃತೀಯ ದಿನವಾದ ಮೇ 10ರಂದು ಚಿನ್ನ ಖರೀದಿಸಲು ಹಿಂದೇಟು ಹಾಕುವ ಅಗತ್ಯ ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !