AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akshaya Tritiya

Akshaya Tritiya

ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಅಂದರೆ ಈ ವರ್ಷ ಮೇ.10 ಶುಕ್ರವಾರದಂದು ಅಕ್ಷಯ ತೃತೀಯ ಆಚರಣೆ ಮಾಡಲಾಗುತ್ತದೆ. ಧಾರ್ಮಿಕ ಮತ್ತು ಪೌರಾಣಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯ ದಿನದಂದು, ಮದುವೆ, ನಿಶ್ಚಿತಾರ್ಥ, ಗೃಹಪ್ರವೇಶ ಸೇರಿದಂತೆ ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ಯಾವುದೇ ಶುಭ ಸಮಯವಿಲ್ಲದೆ ಮಾಡಬಹುದು. ಸತ್ಯಯುಗ ಮತ್ತು ತ್ರೇತಾಯುಗವು ಅಕ್ಷಯ ತೃತೀಯದಿಂದ ಪ್ರಾರಂಭವಾಯಿತು ಎಂದು ನಂಬಲಾಗಿದೆ. ದ್ವಾಪರಯುಗವು ಈ ದಿನದಂದು ಕೊನೆಗೊಂಡಿತು, ಅದರ ನಂತರ ಕಲಿಯುಗವು ಅಕ್ಷಯ ತೃತೀಯದಿಂದ ಪ್ರಾರಂಭವಾಯಿತು ಎಂಬ ನಂಬಿಕೆ ಇದೆ. ಹಾಗಾಗಿ ಅಕ್ಷಯ ತೃತೀಯ ಬಗ್ಗೆ ವಿಶೇಷತೆಗಳೇನು, ಇದರ ಹಿಂದೆ ಇರುವ ಇತಿಹಾಸ ಏನು ಎಂಬ ಸ್ಟೋರಿಗಳು ಇಲ್ಲಿದೆ.

ಇನ್ನೂ ಹೆಚ್ಚು ಓದಿ

ಅಕ್ಷಯ ತೃತೀಯ: ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇ. 25 ಏರಿಕೆ; 5 ವರ್ಷದಲ್ಲಿ ಬೆಲೆ ಹೆಚ್ಚಳ ಎಷ್ಟು?

Akshaya Tritiya, last 1 year gold rate comparison: 2024ರಲ್ಲಿ ಅಕ್ಷಯ ತೃತೀಯ ದಿನ ಇದ್ದ ಮೇ 10ರಂದು 22 ಕ್ಯಾರಟ್ ಚಿನ್ನದ ಬೆಲೆ 6,755 ರೂ ಇತ್ತು. 2025ರಲ್ಲಿ ಅಕ್ಷಯ ತೃತೀಯ ಇರುವ ಏಪ್ರಿಲ್ 30ರಂದು ಆಭರಣ ಚಿನ್ನದ ಬಲೆ 8,975 ರೂ ಇದೆ. ಒಂದು ವರ್ಷದಲ್ಲಿ ಶೇ. 24.7ರಷ್ಟು ಬೆಲೆ ಏರಿಕೆ ಆಗಿದೆ. ಕಳೆದ ಐದು ವರ್ಷದಲ್ಲಿ ಚಿನ್ನದ ಬೆಲೆ ಎರಡು ಪಟ್ಟು ಹೆಚ್ಚಾಗಿದೆ.

ಅಕ್ಷಯ ತೃತೀಯಕ್ಕೆ ಜಿಯೋ ಗೋಲ್ಡ್ ಧಮಾಕ; 21 ಸಾವಿರ ರೂವರೆಗೆ ಉಚಿತ ಚಿನ್ನದ ಕೊಡುಗೆ; ಮೇ 5ರವರೆಗೆ ಆಫರ್

Akshaya Tritiya Jio Gold 24K Days campaign: ಜಿಯೋ ಪ್ಲಾಟ್​​ಫಾರ್ಮ್​​ಗಳಲ್ಲಿ ಅಕ್ಷಯ ತೃತೀಯಕ್ಕೆ ಉತ್ತಮ ಗೋಲ್ಡ್ ಆಫರ್ ನೀಡಲಾಗುತ್ತಿದೆ. ಜಿಯೋ ಫೈನಾನ್ಸ್ ಮತ್ತು ಮೈ ಜಿಯೋ ಆ್ಯಪ್​​ಗಳಲ್ಲಿ ಡಿಜಿಟಲ್ ಗೋಲ್ಡ್ ಖರೀದಿಸಿದರೆ ಶೇ. 2ರಷ್ಟು ಉಚಿತ ಚಿನ್ನ ಪಡೆಯಲು ಅವಕಾಶ ಇದೆ. 1,000 ರೂನಿಂದ 9,999 ರೂವರೆಗಿನ ಚಿನ್ನದ ಖರೀದಿಗೆ ಶೇ. 1 ಉಚಿತ ಚಿನ್ನ ಪಡೆಯಬಹುದು. 10,000 ರೂ ಮೇಲ್ಪಟ್ಟ ಮೌಲ್ಯದ ಚಿನ್ನದ ಖರೀದಿಗೆ ಶೇ. 2ರಷ್ಟು ಉಚಿತ ಚಿನ್ನ ಪಡೆಯಬಹುದು. ಈ ಆಫರ್ ಮೇ 5ರವರೆಗೆ ಮಾತ್ರ ಇರುತ್ತದೆ.

Akshaya Tritiya: ಮನೆಯಲ್ಲಿ ಸದಾ ಸಂಪತ್ತು ನೆಲೆಸಲು ಅಕ್ಷಯ ತೃತೀಯದಂದು ಈ ರೀತಿ ಮಾಡಿ

ಅಕ್ಷಯ ತೃತೀಯದಂದು, ಲಕ್ಷ್ಮೀ ದೇವಿಯೊಂದಿಗೆ ಕುಬೇರನನ್ನು ಪೂಜಿಸುವುದು ಸಂಪತ್ತನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಉತ್ತರ ದಿಕ್ಕಿನಲ್ಲಿ ಕುಬೇರನ ವಿಗ್ರಹ ಅಥವಾ ಯಂತ್ರವನ್ನು ಇರಿಸುವುದು ಮತ್ತು ನೀಲಿ ಬಣ್ಣವನ್ನು ಬಳಸುವುದು ಆರ್ಥಿಕ ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಉತ್ತರ ದಿಕ್ಕನ್ನು ಸ್ವಚ್ಛವಾಗಿಡುವುದು ಮುಖ್ಯ. ಈ ಸರಳ ಕ್ರಮಗಳು ನಿಮ್ಮ ಜೀವನಕ್ಕೆ ಸಂಪತ್ತು ಮತ್ತು ಸಮೃದ್ಧಿಯನ್ನು ತರಬಹುದು.

Gold: 24 ಕ್ಯಾರಟ್ ಚಿನ್ನಗಳಲ್ಲೇ ಬೆಲೆಗಳಲ್ಲಿ ಹೇಗೆ ವ್ಯತ್ಯಾಸ? ಜಿಎಸ್​​ಟಿ ಸೇರಿ ವಿವಿಧ ಹೆಚ್ಚುವರಿ ಬೆಲೆ ಬಗ್ಗೆ ತಿಳಿದಿರಿ

Akshaya Tritiya gold details you should know: ಶುದ್ಧ ಚಿನ್ನ 24 ಕ್ಯಾರಟ್​​ನದ್ದಾಗಿರುತ್ತದೆ. ಇದರಲ್ಲಿ ಶೇ. 99.99 ಅಥವಾ ಶೇ. 99.5ರಷ್ಟು ಶುದ್ಧತೆ ಇರುತ್ತದೆ. ಆಭರಣ ಚಿನ್ನಗಳು 22 ಕ್ಯಾರಟ್, 18 ಕ್ಯಾರಟ್, 14 ಕ್ಯಾರಟ್, 10 ಕ್ಯಾರಟ್ ಹೀಗೆ ಇರುತ್ತವೆ. ಕ್ಯಾರಟ್ ಕಡಿಮೆ ಆದಷ್ಟೂ ಶುದ್ಧತೆ ಕಡಿಮೆ ಇರುತ್ತದೆ. ಚಿನ್ನಕ್ಕೆ ಜಿಎಸ್​​ಟಿ, ಮೇಕಿಂಗ್ ಚಾರ್ಜ್, ವೇಸ್ಟೇಜ್ ಚಾರ್ಜ್ ಇತ್ಯಾದಿ ಎಷ್ಟಿರುತ್ತದೆ ಎನ್ನುವ ವಿವರ ಇಲ್ಲಿದೆ.

Akshaya Tritiya: ಚಿನ್ನ ದುಬಾರಿಯಾದರೂ ಅಕ್ಷಯ ತೃತೀಯಕ್ಕೆ ಭರ್ಜರಿ ಡಿಸ್ಕೌಂಟ್ ಆಫರ್ಸ್

Akshaya Tritiya gold offers 2025: ಏಪ್ರಿಲ್ 30ರಂದು ಇರುವ ಅಕ್ಷಯ ತೃತೀಯ ದಿನಕ್ಕೆ ವಿವಿಧ ಒಡವೆ ಅಂಗಡಿಗಳು, ಡಿಜಿಟಲ್ ಪ್ಲಾಟ್​​ಫಾರ್ಮ್​​​ಗಳು ಆಕರ್ಷಕ ಆಫರ್ಸ್ ನೀಡುತ್ತಿವೆ. ಪ್ರೈಸ್ ಲಾಕಿಂಗ್, ಬೆಸ್​ಟ್ ಗೋಲ್ಡ್ ಪ್ರೊಟೆಕ್ಷನ್ ಮೂಲಕ ಅತ್ಯುತ್ತಮ ಬೆಲೆ ಆಫರ್ ಮಾಡಲಾಗಿದೆ. ಮೇಕಿಂಗ್ ಚಾರ್ಜಸ್ ಮೇಲೆ ಡಿಸ್ಕೌಂಟ್, ಗೋಲ್ಡ್ ಕಾಯಿನ್ ಕೊಡುಗೆ ಇತ್ಯಾದಿ ಮೂಲಕ ಗ್ರಾಹಕರನ್ನು ಆಕರ್ಷಿಸಲಾಗುತ್ತಿದೆ. ಡಿಜಿಟಲ್ ಪ್ಲಾಟ್​​ಫಾರ್ಮ್​​ಗಳು ಕ್ಯಾಷ್ ಬ್ಯಾಕ್ ಆಫರ್ ಮಾಡುತ್ತಿವೆ.

Akshaya Tritiya 2025: ಅಕ್ಷಯ ತೃತೀಯ ದಿನದಂದು ಈ ವಸ್ತುಗಳನ್ನು ಖರೀದಿಸಲು ಮರೆಯದಿರಿ

ಅಕ್ಷಯ ತೃತೀಯ: ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಅಕ್ಷಯ ತೃತೀಯವೂ ಒಂದು. ಈ ಹಬ್ಬದ ದಿನದಂದು ಶುಭದ ಸಂಕೇತವಾಗಿ ಚಿನ್ನ, ಬೆಳ್ಲಿ ಖರೀದಿಸುವ ವಾಡಿಕೆ ಇದೆ. ಈ ಶುಭ ದಿನ ಚಿನ್ನ ಖರೀದಿ ಮಾಡುವುದರಿಂದ ಸಮೃದ್ಧಿ ಹಾಗೂ ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆಯಿಂದ ಹೆಚ್ಚಿನ ಜನರು ಚಿನ್ನ ಖರೀದಿ ಮಾಡುತ್ತಾರೆ. ಚಿನ್ನ ಮಾತ್ರವಲ್ಲ ಅಕ್ಷಯ ತೃತೀಯ ಹಬ್ಬದಂದು ಪುಸ್ತಕ, ಬಟ್ಟೆ ಸೇರಿದಂತೆ ಈ ಕೆಲವೊಂದಷ್ಟು ವಸ್ತುಗಳನ್ನು ಖದೀರಿ ಮಾಡುವುದು ಕೂಡಾ ಶುಭದ ಸಂಕೇತವಾಗಿದೆ. ಈ ಶುಭ ದಿನದಂದು ಈ ವಸ್ತುಗಳನ್ನು ಮನೆಗೆ ತರುವುದರಿಂದ ಅದೃಷ್ಟ ಎಂದು ಕೂಡ ನಂಬಲಾಗಿದೆ.

Akshaya Tritiya: ಅಕ್ಷಯ ತೃತೀಯಕ್ಕೂ ಮುನ್ನ ನಿಮ್ಮ ಮನೆಯಿಂದ ಈ ವಸ್ತುಗಳನ್ನು ಹೊರ ಹಾಕಿ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಅಕ್ಷಯ ತೃತೀಯದ ಮುನ್ನ ಮುರಿದ ಪೊರಕೆ, ಹರಿದ ಬಟ್ಟೆಗಳು, ಮುರಿದ ವಸ್ತುಗಳು ಮತ್ತು ಬಿರುಕು ಬಿಟ್ಟ ದೇವರ ಪ್ರತಿಮೆಗಳನ್ನು ತೆಗೆದುಹಾಕುವುದು ಮುಖ್ಯ. ಇವುಗಳನ್ನು ತೆಗೆದುಹಾಕುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಬಹುದು ಮತ್ತು ಸಂಪತ್ತು ಹೆಚ್ಚಾಗುತ್ತದೆ. ಸ್ವಚ್ಛ ಮತ್ತು ಆರೋಗ್ಯಕರ ಪರಿಸರ ಲಕ್ಷ್ಮೀ ದೇವಿಯನ್ನು ಆಕರ್ಷಿಸುತ್ತದೆ.

Akshaya Tritiya 2025: ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಏಕೆ? ಪೌರಾಣಿಕ ಕಥೆ ಇಲ್ಲಿದೆ

ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಹಿಂದೂ ಧರ್ಮದಲ್ಲಿ ಪ್ರಮುಖ ಸಂಪ್ರದಾಯ. ಲಕ್ಷ್ಮಿ ದೇವಿಯ ಅನುಗ್ರಹ ಪಡೆಯಲು ಮತ್ತು ಸಮೃದ್ಧಿ, ಸಂತೋಷವನ್ನು ಆಹ್ವಾನಿಸಲು ಚಿನ್ನವನ್ನು ಖರೀದಿಸಲಾಗುತ್ತದೆ. ಪೌರಾಣಿಕ ಕಥೆಗಳ ಪ್ರಕಾರ, ಚಿನ್ನವು ಲಕ್ಷ್ಮಿಯ ರೂಪವಾಗಿದೆ. ಈ ದಿನ ಖರೀದಿಸಿದ ಆಸ್ತಿ ಶಾಶ್ವತವಾಗಿ ಉಳಿಯುತ್ತದೆ ಎಂಬ ನಂಬಿಕೆಯಿದೆ. ಚಿನ್ನ ಖರೀದಿಯ ಮಹತ್ವ ಮತ್ತು ಸಂಪ್ರದಾಯವನ್ನು ಈ ಲೇಖನ ವಿವರಿಸುತ್ತದೆ.

Akshaya Tritiya 2025: ಅಕ್ಷಯ ತೃತೀಯದಂದು ಏನು ಖರೀದಿಸಬೇಕು ಮತ್ತು ಏನು ಖರೀದಿಸಬಾರದು?

ಅಕ್ಷಯ ತೃತೀಯ ಚಿನ್ನ ಖರೀದಿಸಲು ಅತ್ಯಂತ ಶುಭದಿನ. ಆದರೆ ಚಿನ್ನದ ಬದಲಾಗಿ, ಮಣ್ಣಿನ ಪಾತ್ರೆಗಳು, ಹಿತ್ತಾಳೆ ಪಾತ್ರೆ, ಹಳದಿ ಸಾಸಿವೆ, ಇತ್ಯಾದಿಗಳನ್ನು ಖರೀದಿಸುವುದು ಶುಭ. ಆದರೆ ಅಲ್ಯೂಮಿನಿಯಂ, ಪ್ಲಾಸ್ಟಿಕ್ ವಸ್ತುಗಳು, ಕಪ್ಪು ಬಟ್ಟೆಗಳು, ಮುಳ್ಳಿನ ಗಿಡಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಈ ಲೇಖನದಲ್ಲಿ ಅಕ್ಷಯ ತೃತೀಯದಂದು ಏನು ಖರೀದಿಸಬೇಕು ಮತ್ತು ಏನು ಖರೀದಿಸಬಾರದು ಎಂಬುದರ ಸಂಪೂರ್ಣ ನೀಡಲಾಗಿದೆ.

ನೀವು ಅಕ್ಷಯ ತೃತೀಯಂದು ಗೃಹ ಪ್ರವೇಶ ಮಾಡುತ್ತಿದ್ದರೆ, ಶುಭ ಸಮಯ ಮತ್ತು ನಿಯಮಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ

ಏಪ್ರಿಲ್ 30 ರಂದು ಅಕ್ಷಯ ತೃತೀಯ. ಈ ದಿನ ಗೃಹಪ್ರವೇಶ ಮಾಡುವುದು ಅತ್ಯಂತ ಶುಭಕರ ಎಂದು ನಂಬಲಾಗಿದೆ. ಈ ದಿನವಿಡೀ ಶುಭ ಸಮಯವಿದ್ದರೂ ಬೆಳಿಗ್ಗೆ 5:41 ರಿಂದ ಮಧ್ಯಾಹ್ನ 12:18 ರವರೆಗೆ ಅತ್ಯಂತ ಶುಭ ಸಮಯ ಎಂದು ಪರಿಗಣಿಸಲಾಗಿದೆ. ಈ ದಿನ ಮನೆಯನ್ನು ಅಲಂಕರಿಸಿ, ಪೂಜೆ ಮಾಡಿ, ಬ್ರಾಹ್ಮಣರಿಗೆ ಭೋಜನ ಹಾಕಿ ಮತ್ತು ಚಿನ್ನ ಖರೀದಿಸಿ ಲಕ್ಷ್ಮೀ ದೇವಿಗೆ ಅರ್ಪಿಸಿ. ರಾತ್ರಿಯಲ್ಲಿ ಮುಖ್ಯ ದ್ವಾರದಲ್ಲಿ ದೀಪ ಹಚ್ಚಿ ಮತ್ತು ಮನೆಯನ್ನು ಖಾಲಿ ಬಿಡಬೇಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ