AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾಕ್ಸ್​ಕಾನ್​ನಿಂದ ಭಾರತದಲ್ಲಿ ಐಫೋನ್-16 ಪ್ರೋ ಫೋನ್ ತಯಾರಿಕೆ; ಇನ್ನಷ್ಟು ಫ್ಯಾಕ್ಟರಿ ಸ್ಥಾಪಿಸಲಿರುವ ಜೇಬಿಲ್

Foxconn and Jabil manufacturing units in India: ಫಾಕ್ಸ್​ಕಾನ್​ನ ತಮಿಳುನಾಡು ಫ್ಯಾಕ್ಟರಿಯಲ್ಲಿ ಐಫೋನ್-16 ಪ್ರೋ ಸರಣಿಯ ಫೋನ್​ಗಳ ಅಸೆಂಬ್ಲಿಂಗ್ ನಡೆಯುವುದು ಪಕ್ಕಾ ಆಗಿದೆ. ಅದಕ್ಕಾಗಿ ಆ್ಯಪಲ್ ಸಂಸ್ಥೆಯಿಂದ ವಿಶೇಷ ಉಪಕರಣವನ್ನು ಫಾಕ್ಸ್​ಕಾನ್ 267 ಕೋಟಿ ರೂಗೆ ಖರೀದಿಸಿದೆ. ಇನ್ನು, ಪುಣೆಯಲ್ಲಿ ಎರಡು ಫ್ಯಾಕ್ಟರಿ ಹೊಂದಿರುವ ಜೇಬಿಲ್ ಸಂಸ್ಥೆ ಇನ್ನೂ ಎರಡು ಯೂನಿಟ್ ಸ್ಥಾಪಿಸಲು ಹೊರಟಿದೆ.

ಫಾಕ್ಸ್​ಕಾನ್​ನಿಂದ ಭಾರತದಲ್ಲಿ ಐಫೋನ್-16 ಪ್ರೋ ಫೋನ್ ತಯಾರಿಕೆ; ಇನ್ನಷ್ಟು ಫ್ಯಾಕ್ಟರಿ ಸ್ಥಾಪಿಸಲಿರುವ ಜೇಬಿಲ್
ಜೇಬಿಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 25, 2024 | 2:55 PM

Share

ನವದೆಹಲಿ, ಅಕ್ಟೋಬರ್ 25: ಆ್ಯಪಲ್ ಸಂಸ್ಥೆಯ ಲೇಟೆಸ್ಟ್ ಹಾಗು ಅತ್ಯುನ್ನತ ಮಾಡಲ್ ಆದ ಐಫೋನ್ 16 ಪ್ರೋ ಸರಣಿಯ ಫೋನ್​ಗಳು ಭಾರತದಲ್ಲಿ ನಿರ್ಮಾಣವಾಗಲಿವೆ. ಈ ಹೈ ಎಂಡ್ ಫೋನ್​ಗಳು ಚೀನಾ ಬಿಟ್ಟರೆ ಬೇರೆಲ್ಲೂ ಅಸೆಂಬಲ್ ಆಗಿಲ್ಲ. ಭಾರತದಲ್ಲಿ ಆಗುತ್ತಿರುವುದು ಮಹತ್ವದ ಬೆಳವಣಿಗೆ. ಆ್ಯಪಲ್​ನ ಸಪ್ಲೈಯರ್ ಆಗಿರುವ ಫಾಕ್ಸ್​ಕಾನ್ ತನ್ನ ತಮಿಳುನಾಡು ಘಟಕದಲ್ಲಿ ಐಫೋನ್16 ಪ್ರೋ ಸೀರೀಸ್ ಫೋನ್ ಅನ್ನು ತಯಾರಿಸಲಿದೆ. ಅದಕ್ಕಾಗಿ ಆ್ಯಪಲ್ ಕಂಪನಿಯಿಂದ ಅಗತ್ಯವಾದ ಉಪಕರಣವನ್ನು 31.8 ಮಿಲಿಯನ್ ಡಾಲರ್ (267 ಕೋಟಿ ರೂ) ಕೊಟ್ಟು ಖರೀದಿಸಿದೆ.

ಕೆಲ ವರ್ಷಗಳ ಹಿಂದಿನವರೆಗೂ ಆ್ಯಪಲ್ ಸಂಸ್ಥೆಯ ಬಹುತೇಕ ಉತ್ಪನ್ನಗಳ ತಯಾರಿಕೆ ಚೀನಾದಲ್ಲೇ ಹೆಚ್ಚಾಗಿ ಆಗುತ್ತಿತ್ತು. ಕೋವಿಡ್ ಬಳಿಕ ಹಲವು ಅಮೆರಿಕನ್ ಕಂಪನಿಗಳು ಚೀನಾ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡುತ್ತಿವೆ. ವಿಯೆಟ್ನಾಂ, ಭಾರತ, ಇಂಡೋನೇಷ್ಯಾ, ಫಿಲಿಪ್ಪೈನ್ಸ್ ಮೊದಲಾದ ದೇಶಗಳಿಗೆ ಉತ್ಪಾದನೆಯನ್ನು ವಿಸ್ತರಿಸುತ್ತಿವೆ. ಭಾರತದಲ್ಲಿ ಫಾಕ್ಸ್​ಕಾನ್, ಟಾಟಾ ಎಲೆಕ್ಟ್ರಾನಿಕ್ಸ್, ಪೆಗಾಟ್ರಾನ್ ಮೊದಲಾದ ಕಂಪನಿಗಳು ಆ್ಯಪಲ್ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿವೆ.

ಇದನ್ನೂ ಓದಿ: ವಿಮಾನ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಭಾರತ ಯೋಜನೆ; ಏರ್​ಬಸ್ ನೆರವಿಗೆ ಯೋಚನೆ

ಜೇಬಿಲ್​ನಿಂದ ಇನ್ನಷ್ಟು ಫ್ಯಾಕ್ಟರಿಗಳ ಸ್ಥಾಪನೆ

ಆ್ಯಪಲ್​ನ ಸರಬರಾಜುದಾರ ಸಂಸ್ಥೆಗಳಲ್ಲಿ ಒಂದಾದ ಅಮೆರಿಕದ ಜೇಬಿಲ್ (Jabil) ಭಾರತದಲ್ಲಿ ಇನ್ನಷ್ಟು ಫ್ಯಾಕ್ಟರಿಗಳನ್ನು ಸ್ಥಾಪಿಸಲು ಯೋಜಿಸಿದೆ. ಪುಣೆಯಲ್ಲಿ ಜೇಬಿಲ್ ಎರಡು ಫ್ಯಾಕ್ಟರಿ ಹೊಂದಿದೆ. ವೈಫೈ, ಎನ್​ಎಫ್​ಸಿ, ಆರ್​ಎಫ್​ಐಡಿ, ಕ್ಯಾಮರಾ ಅಪ್ಟಿಕ್ಸ್, ಪ್ಲಾಸ್ಟಿಕ್ ಕೇಸಿಂಗ್ಸ್ ಮೊದಲಾದ ಬಿಡಿಭಾಗಗಳನ್ನು ಆ್ಯಪಲ್ ಉತ್ಪನ್ನಗಳಿಗಾಗಿ ತಯಾರಿಸಲಾಗುತ್ತಿದೆ.

ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಎರಡು ಅಥವಾ ಇನ್ನೂ ಹೆಚ್ಚು ಫ್ಯಾಕ್ಟರಿಗಳನ್ನು ಸ್ಥಾಪಿಸಲಿದೆ ಜೇಬಿಲ್. ತಮಿಳುನಾಡಿನ ತಿರುಚ್ಚಿಯಲ್ಲಿ ಒಂದು ಯೂನಿಟ್ ಸ್ಥಾಪನೆಯಾಗಬಹುದು ಎಂದು ಹೇಳಲಾಗುತ್ತಿದೆ. ಈ ಹೊಸ ಫ್ಯಾಕ್ಟರಿಗಳ ಸ್ಥಾಪನೆಗೆ ಎರಡು ಸಾವಿರ ಕೋಟಿ ರೂಗೂ ಅಧಿಕ ಹೂಡಿಕೆ ಮಾಡಲು ಜೆಬಿಲ್ ಯೋಜಿಸಿದೆ.

ಇದನ್ನೂ ಓದಿ: ಕಳೆದ ದೀಪಾವಳಿಯಿಂದ 82 ಐಪಿಒ; ಲಕ್ಷ ಕೋಟಿ ರೂ ಬಂಡವಾಳ; ಸಾಲಿನಲ್ಲಿವೆ ಇನ್ನೂ 63 ಕಂಪನಿಗಳು

ಆ್ಯಪಲ್​ನ ಸಪ್ಲೈಯರ್ ಕಂಪನಿಗಳಲ್ಲಿ ಫಾಕ್ಸ್​ಕಾನ್ ಸೇರಿದಂತೆ 13 ಕಂಪನಿಗಳು ಭಾರತದಲ್ಲಿ ಉಪಸ್ಥಿತಿ ಹೊಂದಿವೆ. ತಮಿಳುನಾಡು, ಕರ್ನಾಟಕ, ಉತ್ತರಪ್ರದೇಶ, ಹರ್ಯಾಣ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ಮ್ಯಾನುಫ್ಯಾಕ್ಚರಿಂಗ್ ಯೂನಿಟ್​​ಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!