AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays in April 2023: ಈ ತಿಂಗಳೇ ನಿಮ್ಮ ಬ್ಯಾಂಕ್ ವ್ಯವಹಾರ ಮುಗಿಸಿಕೊಳ್ಳಿ, ಏಪ್ರಿಲ್​​ನಲ್ಲಿ ಸಾಲು ಸಾಲು ರಜೆ

ಏಪ್ರಿಲ್​ನಲ್ಲಿ ಸಾಲು ಸಾಲು ಬ್ಯಾಂಕ್ ರಜೆಗಳು ಇದೆ. ಈ ತಿಂಗಳೇ ನಿಮ್ಮ ಎಲ್ಲ ಬ್ಯಾಂಕ್ ವ್ಯವಹಾರಗಳನ್ನು ಮುಗಿಸಿಕೊಳ್ಳುವುದು ಒಳ್ಳೆಯದು, ಹೌದು ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾ ಪಟ್ಟಿಯ ಪ್ರಕಾರ, ಹದಿನೈದು ದಿನಗಳ ಕಾಲ ಬ್ಯಾಂಕ್ ರಜಾದಿನಗಳು ಇರುತ್ತವೆ .

Bank Holidays in April 2023: ಈ ತಿಂಗಳೇ ನಿಮ್ಮ ಬ್ಯಾಂಕ್ ವ್ಯವಹಾರ ಮುಗಿಸಿಕೊಳ್ಳಿ, ಏಪ್ರಿಲ್​​ನಲ್ಲಿ ಸಾಲು ಸಾಲು ರಜೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Mar 28, 2023 | 3:38 PM

Share

ಮುಖ್ಯಾಂಶಗಳು

  • ಏಪ್ರಿಲ್‌ನಲ್ಲಿ ಬ್ಯಾಂಕ್​ಗೆ ಸಾಲು ಸಾಲು ರಜೆಗಳು (Bank Holidays) ಇದೆ. ಗ್ರಾಹಕರು ಈ ತಿಂಗಳೇ ತಮ್ಮ ಬ್ಯಾಂಕ್ ವ್ಯವಹಾರಗಳನ್ನು ಮುಗಿಸುವುದು ಒಳ್ಳೆಯದು.
  • ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾ ಪಟ್ಟಿಯ ಪ್ರಕಾರ, ಹದಿನೈದು ದಿನಗಳ ಕಾಲ ಬ್ಯಾಂಕ್ ರಜಾದಿನಗಳು ಇರುತ್ತವೆ .
  • ಹಬ್ಬಗಳು, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರದಂದು ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.

ಏಪ್ರಿಲ್‌ನಲ್ಲಿ ಬ್ಯಾಂಕ್ಗೆ ಸಾಲು ಸಾಲು ರಜೆಗಳು (Bank Holidays) ಇದೆ. ಗ್ರಾಹಕರು ಈ ತಿಂಗಳೇ ತಮ್ಮ ಬ್ಯಾಂಕ್ ವ್ಯವಹಾರಗಳನ್ನು ಮುಗಿಸುವುದು ಒಳ್ಳೆಯದು. ಏಪ್ರಿಲ್ ತಿಂಗಳಲ್ಲಿ ಅರ್ಧ ತಿಂಗಳು ಗ್ರಾಹಕರು ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಮುಂಬರುವ ತಿಂಗಳಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾ ಪಟ್ಟಿಯ ಪ್ರಕಾರ, ಹದಿನೈದು ದಿನಗಳ ಕಾಲ ಬ್ಯಾಂಕ್ ರಜಾದಿನಗಳು ಇರುತ್ತವೆ . ಹಬ್ಬಗಳು, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರದಂದು ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.

RBI ನೀಡಿರುವ ರಜಾದಿನಗಳ ಪಟ್ಟಿಯಲ್ಲಿ ‘ರಾಷ್ಟ್ರೀಯ’ ಮತ್ತು ‘ಪ್ರಾದೇಶಿಕ’ ಎಂದು ವರ್ಗೀಕರಿಸುತ್ತದೆ. ಈ ವರ್ಗೀಕರಣದಂತೆ ಮೊದಲ ವರ್ಗೀಕರಣ ರಾಷ್ಟ್ರೀಯ ಪಟ್ಟಿಯಂತೆ ದೇಶಾದ್ಯಂತ ಬ್ಯಾಂಕುಗಳನ್ನು ಮುಚ್ಚಲಾಗುವುದು, ಮತ್ತೊಂದು ಪ್ರಾದೇಶಿಕ ಪಟ್ಟಿ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಶಾಖೆಗಳು ಕಾರ್ಯನಿರ್ವಹಿಸುವುದಿಲ್ಲ. ಆದರೆ ಆನ್‌ಲೈನ್ ಹಣಕಾಸು ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

ಇದನ್ನೂ ಓದಿ:Central Bank of India Recruitment 2023: 5000 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಅಹ್ವಾನ

ಏಪ್ರಿಲ್‌ನಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ:

ಏಪ್ರಿಲ್ 1 (ಶನಿ): ಖಾತೆಗಳನ್ನು ಮುಚ್ಚುವುದು

ಏಪ್ರಿಲ್ 2: ಭಾನುವಾರ

ಏಪ್ರಿಲ್ 4 (ಮಂಗಳವಾರ): ಮಹಾವೀರ ಜಯಂತಿ (ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಬೆಂಗಳೂರು, ಭೋಪಾಲ್, ಚಂಡೀಗಢ, ಚೆನ್ನೈ, ಜೈಪುರ, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ರಾಯ್ಪುರ್ ಮತ್ತು ರಾಂಚಿ)

ಏಪ್ರಿಲ್ 5 (ಬುಧ): ಬಾಬು ಜಗಜೀವನ್ ರಾಮ್ ಅವರ ಜನ್ಮದಿನ (ಹೈದರಾಬಾದ್)

ಏಪ್ರಿಲ್ 7 (ಶುಕ್ರ): ಶುಭ ಶುಕ್ರವಾರ (ಅಗರ್ತಲಾ, ಅಹಮದಾಬಾದ್, ಗುವಾಹಟಿ, ಜೈಪುರ, ಜಮ್ಮು, ಶಿಮ್ಲಾ ಮತ್ತು ಶ್ರೀನಗರ ಹೊರತುಪಡಿಸಿ)

ಏಪ್ರಿಲ್ 8: ಎರಡನೇ ಶನಿವಾರ

ಏಪ್ರಿಲ್ 9: ಭಾನುವಾರ

ಎಪ್ರಿಲ್ 14 (ಶುಕ್ರ): ಅಂಬೇಡ್ಕರ್ ಜಯಂತಿ/ಬೋಹಾಗ್ ಬಿಹು/ಚೀರೋಬಾ/ವೈಶಾಖಿ/ಬೈಸಾಖಿ/ತಮಿಳು ಹೊಸ ವರ್ಷ/ಮಹಾ ಬಿಸುಭಾ ಸಂಕ್ರಾಂತಿ/ಬಿಜು/ಬುಯಿಸು (ಐಜ್ವಾಲ್, ಭೋಪಾಲ್, ನವದೆಹಲಿ, ರಾಯ್‌ಪುರ, ಶಿಲ್ಲಾಂಗ್ ಮತ್ತು ಶಿಮ್ಲಾ ಹೊರತುಪಡಿಸಿ ಎಲ್ಲೆಡೆ)

ಎಪ್ರಿಲ್ 15 (ಶನಿ): ವಿಷು/ಬೋಹಾಗ್ ಬಿಹು/ಹಿಮಾಚಲ ದಿನ/ ಬಂಗಾಳಿ ಹೊಸ ವರ್ಷ (ಅಗರ್ತಲಾ, ಗುವಾಹಟಿ, ಕೊಚ್ಚಿ, ಕೋಲ್ಕತ್ತಾ, ಶಿಮ್ಲಾ ಮತ್ತು ತಿರುವನಂತಪುರಂ)

ಎಪ್ರಿಲ್ 16: ಭಾನುವಾರ

ಎಪ್ರಿಲ್ 18 (ಮಂಗಳವಾರ): ಶಬ್-ಐ-ಖಾದರ್ (ಜಮ್ಮು, ಶ್ರೀನಗರ)

ಎಪ್ರಿಲ್ 21 (ಶುಕ್ರ): ಈದ್-ಉಲ್-ಫಿತರ್/ಗರಿಯಾ ಪೂಜೆ/ಜುಮಾತ್-ಉಲ್-ವಿದಾ (ಅಗರ್ತಲಾ, ಜಮ್ಮು, ಕೊಚ್ಚಿ, ಶ್ರೀನಗರ ಮತ್ತು ತಿರುವನಂತಪುರಂ)

ಎಪ್ರಿಲ್ 22 (ಶನಿ): ರಂಜಾನ್ ಈದ್ (ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಬೆಂಗಳೂರು, ಭುವನೇಶ್ವರ, ಚಂಡೀಗಢ, ಗ್ಯಾಂಗ್ಟಾಕ್, ಕೊಚ್ಚಿ, ಶಿಮ್ಲಾ ಮತ್ತು ತಿರುವನಂತಪುರಂ ಹೊರತುಪಡಿಸಿ ಎಲ್ಲೆಡೆ)

ಏಪ್ರಿಲ್ 23: ಭಾನುವಾರ

ಏಪ್ರಿಲ್ 30: ಭಾನುವಾರ

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Tue, 28 March 23

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ