AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays: ನಿಮ್ಮ ವ್ಯವಹಾರ ಮಾಡುವಾಗ ಈ ದಿನಗಳನ್ನು ಗಮನಿಸಿ; ಸೆಪ್ಟೆಂಬರ್​ ತಿಂಗಳಲ್ಲಿ 12 ದಿನ ಬ್ಯಾಂಕ್ ರಜಾ

2021ರ ಸೆಪ್ಟೆಂಬರ್​ನಲ್ಲಿ 12 ದಿನಗಳ ಕಾಲ ಬ್ಯಾಂಕ್​ಗಳಿಗೆ ರಜಾ ಇದೆ. ರಜಾ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಆ ಬಗ್ಗೆ ವಿವರ ಇಲ್ಲಿದೆ.

Bank Holidays: ನಿಮ್ಮ ವ್ಯವಹಾರ ಮಾಡುವಾಗ ಈ ದಿನಗಳನ್ನು ಗಮನಿಸಿ; ಸೆಪ್ಟೆಂಬರ್​ ತಿಂಗಳಲ್ಲಿ 12 ದಿನ ಬ್ಯಾಂಕ್ ರಜಾ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 01, 2021 | 12:33 PM

ವಿವಿಧ ರಾಜ್ಯಗಳಲ್ಲಿ ರಜಾದಿನಗಳ ಕಾರಣದಿಂದಾಗಿ 2021ರ ಸೆಪ್ಟೆಂಬರ್​ನಲ್ಲಿ 12 ದಿನಗಳವರೆಗೆ ಬ್ಯಾಂಕ್​ಗಳು ಕಾರ್ಯ ನಿರ್ವಹಿಸುವುದಿಲ್ಲ. ಈ ಪಟ್ಟಿಯಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರಗಳ ಅಧಿಕೃತ ರಜಾದಿನಗಳು ಒಳಗೊಂಡಿವೆ. ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಆದರೆ ಎಲ್ಲ ಬ್ಯಾಂಕ್​ಗಳು ಸಾರ್ವಜನಿಕ ರಜಾದಿನಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ದೇಶದಾದ್ಯಂತ ಬ್ಯಾಂಕ್​ಗಳು ಗೆಜೆಟೆಡ್ ರಜಾದಿನಗಳನ್ನು ಅನುರಿಸುತ್ತವೆ. ಮೂರು ಬ್ರಾಕೆಟ್​ ಅಡಿಯಲ್ಲಿ ಆರ್​ಬಿಐ ರಜಾದಿನಗಳನ್ನು ವಿಭಾಗ ಮಾಡಿದೆ – ನೆಗೋಷಿಯಬಲ್ ಇನ್​ಸ್ಟ್ರುಮೆಂಟ್ಸ್ ಕಾಯ್ದೆ ಅಡಿಯಲ್ಲಿ ರಜಾದಿನ; ನೆಗೋಷಿಯಬಲ್ ಇನ್​ಸ್ಟ್ರುಮೆಂಟ್ಸ್ ಕಾಯ್ದೆ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್​ಮೆಂಟ್ ರಜಾ ಅಡಿಯಲ್ಲಿ ರಜೆ; ಮತ್ತು ಬ್ಯಾಂಕ್​ಗಳ ಖಾತೆಗಳ ಮುಕ್ತಾಯ.

ಸೆಪ್ಟೆಂಬರ್ 8ನೇ ತಾರೀಕಿನಂದು ಶ್ರೀಮಂತ ಶಂಕರದೇವರ ತಿಥಿಯಂದು ಗುವಾಹತಿಯಲ್ಲಿ ಬ್ಯಾಂಕ್​ಗೆ ರಜಾ. ಸೆಪ್ಟೆಂಬರ್ 9 ಮತ್ತು ಸೆಪ್ಟೆಂಬರ್ 20ರಂದು ಕ್ರಮವಾಗಿ ಗ್ಯಾಂಗ್ಟಕ್‌ನಲ್ಲಿ ತೀಜ್ (ಹರಿತಾಳಿಕಾ) ಮತ್ತು ಇಂದ್ರಜಾತ್ರಾದಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುವುದು. ಈ ತಿಂಗಳ ಪ್ರಮುಖ ರಜಾದಿನವೆಂದರೆ ಗಣೇಶ ಚತುರ್ಥಿ ಸೆಪ್ಟೆಂಬರ್ 10ರಿಂದ ಆರಂಭವಾಗಲಿದ್ದು, ಅಹಮದಾಬಾದ್, ಬೇಲಾಪುರ, ಬೆಂಗಳೂರು, ಭುವನೇಶ್ವರ, ಚೆನ್ನೈ, ಹೈದರಾಬಾದ್, ಮುಂಬೈ, ನಾಗ್​ಪುರ ಮತ್ತು ಪಣಜಿಯಲ್ಲಿ ಬ್ಯಾಂಕ್​ಗಳು ಮುಚ್ಚಿರುತ್ತವೆ. ಗಣೇಶ ಚತುರ್ಥಿಯ ಎರಡನೇ ದಿನ ಪಣಜಿಯಲ್ಲಿ ಮತ್ತು ಇತರ ಸ್ಥಳಗಳಲ್ಲಿ ಎರಡನೇ ಶನಿವಾರದಂದು ಬ್ಯಾಂಕ್​ಗಳು ಮುಚುತ್ತವೆ. ಸೆಪ್ಟೆಂಬರ್ 17ರಂದು ರಾಂಚಿಯಲ್ಲಿ ಕರ್ಮ ಪೂಜೆಯ ಪ್ರಯುಕ್ತ ಬ್ಯಾಂಕ್​ಗಳು ಮುಚ್ಚುತ್ತವೆ. ಸೆಪ್ಟೆಂಬರ್ 21ರಂದು ಶ್ರೀ ನಾರಾಯಣ ಗುರು ಸಮಾಧಿ ದಿನದಂದು ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್​ಗಳು ಕಾರ್ಯ ನಿರ್ವಹಿಸಲ್ಲ. ಬ್ಯಾಂಕ್ ರಜಾ ದಿನಗಳ ಪಟ್ಟಿ ಇಲ್ಲಿದೆ.

ಸೆಪ್ಟೆಂಬರ್ 5: ಭಾನುವಾರ ಸೆಪ್ಟೆಂಬರ್ 8: ಶ್ರೀಮಂತ ಸಂಕರದೇವರ ತಿಥಿ ಸೆಪ್ಟೆಂಬರ್ 9: ತೀಜ್ (ಹರಿತಾಳಿಕ) ಸೆಪ್ಟೆಂಬರ್ 10: ಗಣೇಶ ಚತುರ್ಥಿ/ಸಂವತ್ಸರಿ (ಚತುರ್ಥಿ ಪಕ್ಷ)/ವಿನಾಯಕರ್ ಚತುರ್ಥಿ/ವರಸಿದ್ಧಿ ವಿನಾಯಕ ವ್ರತ ಸೆಪ್ಟೆಂಬರ್ 11: ಎರಡನೇ ಶನಿವಾರ/ಗಣೇಶ ಚತುರ್ಥಿ (2ನೇ ದಿನ) ಸೆಪ್ಟೆಂಬರ್ 12: ಭಾನುವಾರ ಸೆಪ್ಟೆಂಬರ್ 17: ಕರ್ಮ ಪೂಜೆ ಸೆಪ್ಟೆಂಬರ್ 19: ಭಾನುವಾರ ಸೆಪ್ಟೆಂಬರ್ 20: ಇಂದ್ರಜಾತ್ರೆ ಸೆಪ್ಟೆಂಬರ್ 21: ಶ್ರೀ ನಾರಾಯಣ ಗುರು ಸಮಾಧಿ ದಿನ ಸೆಪ್ಟೆಂಬರ್ 25: ನಾಲ್ಕನೇ ಶನಿವಾರ ಸೆಪ್ಟೆಂಬರ್ 26: ಭಾನುವಾರ

ಈ ದಿನಗಳಲ್ಲಿ ಬ್ಯಾಂಕ್ ಶಾಖೆಗಳು ಮುಚ್ಚಿರುತ್ತವೆ. ಮೊಬೈಲ್ ಮತ್ತು ಇಂಟರ್​ನೆಟ್ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಗ್ರಾಹಕರು ಆನ್‌ಲೈನ್ ಮೋಡ್‌ ಮೂಲಕ ವಹಿವಾಟು ನಡೆಸಬಹುದು.

ಇದನ್ನೂ ಓದಿ: Financial Changes: ಪಿಎಫ್​ನಿಂದ ಎಲ್​ಪಿಜಿ ದರದ ತನಕ ಸೆಪ್ಟೆಂಬರ್ 1ರಿಂದ 5 ಪ್ರಮುಖ ಬದಲಾವಣೆಗಳಿವು

(Bank Holidays In September 2021 Bank Will Shut For 12 Days Here Is The Details)

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್